ಚಾಮರಾಜನಗರ: ಕಳೆದ 15 ದಿನಗಳಿಂದ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಶ್ರಮ ಕೊನೆಗೂ ಫಲ ಕೊಟ್ಟಿದೆ. ರೇಡಿಯೋ ಕಾಲರ್ ಅಳವಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ.
ಕೊಳ್ಳೇಗಾಲ ತಾಲೂಕಿನ ಬಿಆರ್ಟಿ ವ್ಯಾಪ್ತಿಗೆ ಒಳಪಡುವ ಗುಂಡಾಲ್ ಜಲಾಶಯದ ಸಮೀಪ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಮೈಸೂರು ಚಿರತೆ ಕಾರ್ಯಪಡೆಗೆ ಚಿರತೆಯನ್ನು ಹಸ್ತಾಂತರಿಸಲಾಗಿದೆ.
ಕಳೆದ ತಿಂಗಳು ರೇಡಿಯೋ ಕಾಲರ್ ಅಳವಡಿಸಿರುವ ಈ ಚಿರತೆ ರೈತರ ಜಮೀನುಗಳ ಮೇಲೆ ದಾಳಿ ಮಾಡಿ, ಮೇಕೆ ಮತ್ತು ಕೋಳಿಗಳನ್ನು ತಿಂದು ಹಾಕಿತ್ತು.
ನಂತರ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ 5 ಫೈಬರ್ ಬೋನ್, 2 ತುಮಕೂರು ಕೇಜ್, 35 ಕ್ಯಾಮರಾ ಅಳವಡಿಸಿ, 50ಕ್ಕೂ ಅಧಿಕ ಸಿಬ್ಬಂದಿ ಕಳೆದ 15 ದಿನಗಳಿಂದ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದರು.
ಇದನ್ನೂ ಓದಿ: ನಾಯಿ ಬೇಟೆಯಾಡಲು ಬಂದು ಸೆರೆಯಾದ ಚಿರತೆ! - Leopard Capture In Hassan