ಕೊಪ್ಪಳ: ಕೇದಾರನಾಥ ದರ್ಶನಕ್ಕೆ ತೆರಳಿದ್ದ ಕೊಪ್ಪಳದ ಸಿದ್ದಯ್ಯ ಹಿರೇಮಠ ಎಂಬುವರು ಉತ್ತರಾಖಂಡದ ರಿಷಿಕೇಶದಲ್ಲಿ ಮೃತಪಟ್ಟ ಘಟನೆ ಗುರುವಾರ ಜರುಗಿದೆ. ಸಿದ್ದಯ್ಯ ಹಿರೇಮಠ ಅವರು ಕೊಪ್ಪಳದ ಶಿವರಾತ್ರೇಶ್ವರ ದೇವಸ್ಥಾನದ ಅರ್ಚಕರಾಗಿದ್ದರು.
ಸಿದ್ದಯ್ಯ ಅವರು ಕೊಪ್ಪಳ ಜಿಲ್ಲಾ ಕರ್ನಾಟಕ ವೀರಶೈವ ಅರ್ಚಕ ಪುರೋಹಿತ ನಿಸ್ವಾರ್ಥ ಸೇವಾ ಸಂಘದ ಅಧ್ಯಕ್ಷ ಮತ್ತು ಅವರ ಸಹಪಾಠಿ ವಿನಯ ಜೋಶಿ ಎಂಬುವರೊಂದಿಗೆ ಕೇದಾರನಾಥ ದರ್ಶನಕ್ಕೆ ತೆರಳಿದ್ದರು. ಕೇದಾರನಾಥ ದರ್ಶನದ ಬಳಿಕ ವಾಪಸ್ ಮರಳುವಾಗ ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಮೃತದೇಹವು ಶನಿವಾರ ಕೊಪ್ಪಳಕ್ಕೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ವೆಂಕಟಗಿರಿ ರಾವ್ ನಿಧನ - B Venkatagiri Rao Passed Away