ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಚಿಕ್ಕನರ್ತಿಯಲ್ಲಿ ಮನೆಯೊಂದರ ಮೇಲ್ಛಾವಣಿ ಕುಸಿದು, ನಾಲ್ವರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಮುತ್ತಣ್ಣ ಗೋಣಿ ಎಂಬವರ ಮನೆಯ ಮೇಲ್ಛಾವಣಿ ಕುಸಿದಿದ್ದು, 16 ಅಂಕಣದ ಮನೆಯಲ್ಲಿ 8 ಅಂಕಣ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಮುತ್ತಣ್ಣ ಗೋಣಿ, ಇವರ ತಂದೆ-ತಾಯಿ ಹಾಗೂ ಪತ್ನಿ ಯಾವುದೇ ಅಪಾಯ ಇಲ್ಲದೇ ಪಾರಾಗಿದ್ದಾರೆ. ಹಳೇ ಮನೆಯಾಗಿದ್ದರಿಂದ ಕುಸಿದು ಬಿದ್ದಿದೆ.
ಮನೆಯ ಮಾಲೀಕ ಮುತ್ತಣ್ಣ ಗೋಣಿ ಪ್ರತಿಕ್ರಿಯೆ ನೀಡಿದ್ದು, ನಾವೆಲ್ಲರೂ ಅಡುಗೆ ಮನೆಯಲ್ಲಿದ್ದಾಗ ಪಡಸಾಲೆ ಮೇಲಿನ ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಸ್ವಲ್ಪದರಲ್ಲೇ ಅಪಾಯದಿಂದ ಪಾರಾದೆವು. ಇದರಿಂದ ನಮಗೆ ಬಹಳ ನಷ್ಟವಾಗಿದೆ. ಹೀಗಾಗಿ ಸರ್ಕಾರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕಡಬ: ಸರ್ಕಾರಿ ಶಾಲಾ ಕಟ್ಟಡ ಕುಸಿತ, ನಾಲ್ಕು ಮಕ್ಕಳಿಗೆ ಗಾಯ - Kadab School Collapse