ಬಂಡೀಪುರ: ಕೆರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯನ್ನು ಅಟ್ಟಾಡಿಸಿದ ಗಜರಾಜ- ವಿಡಿಯೋ - Elephant chased Tiger
Published : Jun 27, 2024, 3:52 PM IST
ಚಾಮರಾಜನಗರ: ಬಂಡೀಪುರ ಅಭಯಾರಣ್ಯದ ಕೆರೆಯಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಹುಲಿಯನ್ನು ಆನೆಯೊಂದು ಓಡಿಸಿದ ದೃಶ್ಯ ಸೆರೆಯಾಗಿದೆ. ಆನೆ ನೋಡಿ ಭಯಗೊಂಡ ಹುಲಿ ಕಂಗೆಟ್ಟು ಓಡಿದೆ. ಹುಲಿರಾಯ ಪೇರಿ ಕಿತ್ತಿರುವುದನ್ನು ಕಂಡ ಸಫಾರಿಗರು ಅರೆಕ್ಷಣ ರೋಮಾಂಚನಗೊಂಡಿದ್ದಾರೆ.
ಬಂಡೀಪುರ ಅರಣ್ಯದಲ್ಲಿರುವ ಜಲಾಗಾರಗಳಲ್ಲಿ ಬಿಸಿಲ ತಾಪ ಸಹಿಸಲಾರದೇ ಹುಲಿಯೊಂದು ಕೆರೆಗೆ ಇಳಿದು ವಿಶ್ರಾಂತಿ ಪಡೆಯುತ್ತಿತ್ತು. ಈ ಸಂದರ್ಭದಲ್ಲಿ ದಾಹ ತಣಿಸಿಕೊಳ್ಳಲು ಆನೆ ಕೂಡಾ ಅಲ್ಲಿಗೆ ಬಂದಿದೆ. ಈ ಸಂದರ್ಭದಲ್ಲಿ ಕೆರೆಯಲ್ಲಿ ಹುಲಿಯನ್ನು ಕಂಡ ಕೂಡಲೇ ದಾಳಿ ಮಾಡುವಂತೆ ಮುನ್ನುಗ್ಗಿ ಬಂದಿದೆ. ಹುಲಿಯನ್ನು ಅಟ್ಟಾಡಿಸಿದೆ.
ಪೇರಿ ಕಿತ್ತಿದ್ದ ಹುಲಿ, ಆನೆ ಹೋದ ಬಳಿಕ ತಾನೇ ರಾಜ ಎಂಬಂತೆ ಮತ್ತೆ ಕೆರೆಗೆ ಇಳಿದು ದಣಿವಾರಿಸಿಕೊಂಡಿತು. ಈ ದೃಶ್ಯವನ್ನು ಸಫಾರಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂತೂಹಲ ಮೂಡಿಸಿದೆ.
ಇದನ್ನೂ ನೋಡಿ: ಮದ್ಯದ ವಾಸನೆಗೆ ಹತ್ತಿರ ಬಂದ ವ್ಯಕ್ತಿಯನ್ನ ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಆನೆ! ವಿಡಿಯೋ - Elephant threw away a person