ETV Bharat / state

ಮೈಸೂರು: ಹಾಡಹಗಲೇ ಕಾರು ಕದ್ದೊಯ್ದ ದರೋಡೆಕೋರರು; ತನಿಖೆಗೆ 3 ಪೊಲೀಸ್ ತಂಡ ರಚನೆ - CAR STOLEN

ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಮುಸುಕುದಾರಿಗಳು ಹಾಡಹಗಲೇ ಕಾರನ್ನೇ ಕದ್ದೊಯ್ದಿರುವ ಘಟನೆ ನಡೆದಿದೆ.

the-robbers-stole-the-car-in-mysuru
ಹಾಡು ಹಗಲೇ ಕಾರನ್ನೇ ಕದ್ದೊಯ್ದ ದರೋಡೆಕೋರರು (ETV Bharat)
author img

By ETV Bharat Karnataka Team

Published : Jan 20, 2025, 12:18 PM IST

Updated : Jan 20, 2025, 12:56 PM IST

ಮೈಸೂರು : ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೀದರ್ ಮತ್ತು ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಗಳು ಜನರ ಮನಸಲ್ಲಿ ಹಸಿರಾಗಿರುವಾಗಲೇ, ಇದೀಗ ಮೈಸೂರಿನಲ್ಲೂ ಹಾಡಹಗಲೇ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ.

ಹೌದು, ರಾಜ್ಯದಲ್ಲಿ ಮತ್ತೊಂದು ಭಯಾನಕ ದರೋಡೆ ನಡೆದಿದ್ದು, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ರಸ್ತೆಯ ಹಾರೋಹಳ್ಳಿ ಬಳಿ ಮುಸುಕುಧಾರಿಗಳು ಹಾಡಹಗಲೇ ಕಾರನ್ನು ಅಡ್ಡಗಟ್ಟಿ, ಕದ್ದೊಯ್ದಿರುವ ಘಟನೆ ನಡೆದಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೇರಳ ಮೂಲದ ಅಡಿಕೆ ವ್ಯಾಪಾರಿ ಸೂಫಿ ಎಂಬುವರ ಮೇಲೆ ದಾಳಿ ನಡೆಸಿ, ಅವರ ಕಾರನ್ನು ಅಪಹರಿಸಿ ತೆಗೆದುಕೊಂಡು ಎಸ್ಕೇಪ್​ ಆಗಿದ್ದಾರೆ. ದರೋಡೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಕದ್ದೊಯ್ದ ದರೋಡೆಕೋರರು (ETV Bharat)

ಘಟನಾ ಸ್ಥಳಕ್ಕೆ ಡಿವೈಎಸ್​ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉದ್ಯಮಿಯು ಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಅವರಿಂದ ಮಾಹಿತಿ ಪಡೆದುಕೊಂಡು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಎಸ್​​ಪಿ ಮಾಹಿತಿ: ಘಟನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ''ಬೆಳಗ್ಗೆ ಸುಮಾರು 9 30ರ ವೇಳೆಗೆ ಕೇರಳ ಮೂಲದ ವ್ಯಕ್ತಿ ಇದ್ದ ಕಾರು ದರೋಡೆ ಆಗಿದೆ. ಮೈಸೂರು ಸುತ್ತಲೂ ಗಡಿಭಾಗದಲ್ಲಿರುವ ಚೆಕ್ ಪೋಸ್ಟ್​ಗಳಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಕೇರಳದ ವಯನಾಡು ಎಸ್​​ಪಿಗೂ ಕೂಡಾ ಮಾಹಿತಿ ನೀಡಲಾಗಿದೆ. ತಪಾಸಣೆ ನಡೆಯುತ್ತಿದೆ. ಅಲ್ಲದೆ, ಮೂರು ವಿಶೇಷ ತಂಡಗಳನ್ನು ರಚಿಸಿ, ತನಿಖೆ ಆರಂಭಿಸಲಾಗಿದೆ. ಉದ್ಯಮಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ತನಿಖೆ ಬಳಿಕ ಹೆಚ್ಚಿನ ವಿವರ ನೀಡುತ್ತೇವೆ. ಕಾರಿನಲ್ಲಿ ಇದ್ದ ಮೊತ್ತದ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಕಳೆದ ವಾರ ಬೀದರ್​ನಲ್ಲಿ ನಡೆದಿತ್ತು ರಕ್ತಸಿಕ್ತ ದರೋಡೆ: ಕಳೆದ ವಾರ ಬೀದರ್​ನ ಎಸ್​ಬಿಐ ಬ್ಯಾಂಕ್ ಮುಂದೆ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿಗೆ ಗುಂಡು ಹಾರಿಸಿ 1 ಕೋಟಿ ರೂ ದರೋಡೆ ಮಾಡಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಘಟನೆಯುಲ್ಲಿ ಒಬ್ಬ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಹೈದರಾಬಾದ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ 10 ವಿಶೇಷ ತಂಡಗಳನ್ನ ರಚಿಸಿ ಆರೋಪಿಗಳಿಗಾಗಿ ತಲಾಷ್​ ನಡೆಸಲಾಗುತ್ತಿದೆ . ಹೈದರಾಬಾದ್ ಸೇರಿದಂತೆ ರಾಯಪುರ ಹಾಗೂ ಬಿಹಾರದ ಶಂಕಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಬೀದರ್​ನಲ್ಲಿ ದರೋಡೆ ಮಾಡಿ ಹೈದರಾಬಾದ್​ ಗೆ ಬಂದಿದ್ದ ದುಷ್ಕರ್ಮಿಗಳು ಅಲ್ಲೂ ಗುಂಡಿನ ದಾಳಿ ನಡೆಸಿ ರಾಯಪುರ್​​ ಮೂಲಕ ಬಿಹಾರ ತಲುಪಿದ್ದಾರೆ ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ.

ಮಂಗಳೂರಿನ ಬ್ಯಾಂಕ್​​ನಲ್ಲಿ ಗನ್​ ತೋರಿಸಿ ₹4 ಕೋಟಿ ಲೂಟಿ : ಬೀದರ್ ಘಟನೆ ಮಾಸುವ ಮುನ್ನವೇ ಮುಸುಕುಧಾರಿಗಳ ತಂಡವೊಂದು ಪಿಸ್ತೂಲ್ ತೋರಿಸಿ ಉಳ್ಳಾಲದ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ನಡೆಸಿ ಪರಾರಿಯಾಗಿತ್ತು. "ಅಪರಾಧಿಗಳು ಕಪ್ಪು ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ" ಎಂದು‌ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದರು.

ಇದನ್ನೂ ಓದಿ : ಬೀದರ್ ​ದರೋಡೆ ಪ್ರಕರಣದಲ್ಲಿ ​ಅಮಿತ್ ಕುಮಾರ್ ಕೈವಾಡ ಶಂಕೆ: ತೆಲಂಗಾಣ ಪೊಲೀಸ್​ - BIDAR ROBBERY

ಮೈಸೂರು : ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೀದರ್ ಮತ್ತು ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಗಳು ಜನರ ಮನಸಲ್ಲಿ ಹಸಿರಾಗಿರುವಾಗಲೇ, ಇದೀಗ ಮೈಸೂರಿನಲ್ಲೂ ಹಾಡಹಗಲೇ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ.

ಹೌದು, ರಾಜ್ಯದಲ್ಲಿ ಮತ್ತೊಂದು ಭಯಾನಕ ದರೋಡೆ ನಡೆದಿದ್ದು, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ರಸ್ತೆಯ ಹಾರೋಹಳ್ಳಿ ಬಳಿ ಮುಸುಕುಧಾರಿಗಳು ಹಾಡಹಗಲೇ ಕಾರನ್ನು ಅಡ್ಡಗಟ್ಟಿ, ಕದ್ದೊಯ್ದಿರುವ ಘಟನೆ ನಡೆದಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೇರಳ ಮೂಲದ ಅಡಿಕೆ ವ್ಯಾಪಾರಿ ಸೂಫಿ ಎಂಬುವರ ಮೇಲೆ ದಾಳಿ ನಡೆಸಿ, ಅವರ ಕಾರನ್ನು ಅಪಹರಿಸಿ ತೆಗೆದುಕೊಂಡು ಎಸ್ಕೇಪ್​ ಆಗಿದ್ದಾರೆ. ದರೋಡೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಕದ್ದೊಯ್ದ ದರೋಡೆಕೋರರು (ETV Bharat)

ಘಟನಾ ಸ್ಥಳಕ್ಕೆ ಡಿವೈಎಸ್​ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉದ್ಯಮಿಯು ಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಅವರಿಂದ ಮಾಹಿತಿ ಪಡೆದುಕೊಂಡು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಎಸ್​​ಪಿ ಮಾಹಿತಿ: ಘಟನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ''ಬೆಳಗ್ಗೆ ಸುಮಾರು 9 30ರ ವೇಳೆಗೆ ಕೇರಳ ಮೂಲದ ವ್ಯಕ್ತಿ ಇದ್ದ ಕಾರು ದರೋಡೆ ಆಗಿದೆ. ಮೈಸೂರು ಸುತ್ತಲೂ ಗಡಿಭಾಗದಲ್ಲಿರುವ ಚೆಕ್ ಪೋಸ್ಟ್​ಗಳಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಕೇರಳದ ವಯನಾಡು ಎಸ್​​ಪಿಗೂ ಕೂಡಾ ಮಾಹಿತಿ ನೀಡಲಾಗಿದೆ. ತಪಾಸಣೆ ನಡೆಯುತ್ತಿದೆ. ಅಲ್ಲದೆ, ಮೂರು ವಿಶೇಷ ತಂಡಗಳನ್ನು ರಚಿಸಿ, ತನಿಖೆ ಆರಂಭಿಸಲಾಗಿದೆ. ಉದ್ಯಮಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ತನಿಖೆ ಬಳಿಕ ಹೆಚ್ಚಿನ ವಿವರ ನೀಡುತ್ತೇವೆ. ಕಾರಿನಲ್ಲಿ ಇದ್ದ ಮೊತ್ತದ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಕಳೆದ ವಾರ ಬೀದರ್​ನಲ್ಲಿ ನಡೆದಿತ್ತು ರಕ್ತಸಿಕ್ತ ದರೋಡೆ: ಕಳೆದ ವಾರ ಬೀದರ್​ನ ಎಸ್​ಬಿಐ ಬ್ಯಾಂಕ್ ಮುಂದೆ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿಗೆ ಗುಂಡು ಹಾರಿಸಿ 1 ಕೋಟಿ ರೂ ದರೋಡೆ ಮಾಡಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಘಟನೆಯುಲ್ಲಿ ಒಬ್ಬ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಹೈದರಾಬಾದ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ 10 ವಿಶೇಷ ತಂಡಗಳನ್ನ ರಚಿಸಿ ಆರೋಪಿಗಳಿಗಾಗಿ ತಲಾಷ್​ ನಡೆಸಲಾಗುತ್ತಿದೆ . ಹೈದರಾಬಾದ್ ಸೇರಿದಂತೆ ರಾಯಪುರ ಹಾಗೂ ಬಿಹಾರದ ಶಂಕಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಬೀದರ್​ನಲ್ಲಿ ದರೋಡೆ ಮಾಡಿ ಹೈದರಾಬಾದ್​ ಗೆ ಬಂದಿದ್ದ ದುಷ್ಕರ್ಮಿಗಳು ಅಲ್ಲೂ ಗುಂಡಿನ ದಾಳಿ ನಡೆಸಿ ರಾಯಪುರ್​​ ಮೂಲಕ ಬಿಹಾರ ತಲುಪಿದ್ದಾರೆ ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ.

ಮಂಗಳೂರಿನ ಬ್ಯಾಂಕ್​​ನಲ್ಲಿ ಗನ್​ ತೋರಿಸಿ ₹4 ಕೋಟಿ ಲೂಟಿ : ಬೀದರ್ ಘಟನೆ ಮಾಸುವ ಮುನ್ನವೇ ಮುಸುಕುಧಾರಿಗಳ ತಂಡವೊಂದು ಪಿಸ್ತೂಲ್ ತೋರಿಸಿ ಉಳ್ಳಾಲದ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ನಡೆಸಿ ಪರಾರಿಯಾಗಿತ್ತು. "ಅಪರಾಧಿಗಳು ಕಪ್ಪು ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ" ಎಂದು‌ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದರು.

ಇದನ್ನೂ ಓದಿ : ಬೀದರ್ ​ದರೋಡೆ ಪ್ರಕರಣದಲ್ಲಿ ​ಅಮಿತ್ ಕುಮಾರ್ ಕೈವಾಡ ಶಂಕೆ: ತೆಲಂಗಾಣ ಪೊಲೀಸ್​ - BIDAR ROBBERY

Last Updated : Jan 20, 2025, 12:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.