ಧಾರವಾಡ: ತೆಲುಗು ನಟ ಶ್ರೀಕಾಂತ್ ಅವರು ಭಾನುವಾರ ಧಾರವಾಡದ ಉಪವನ ಹೋಟೆಲ್ಗೆ ಭೇಟಿ ನೀಡಿದ್ದರು. ಗೆಳೆಯರ ಭೇಟಿಗೆಂದು ಪೇಡಾ ನಗರಿಗೆ ಬಂದು ಹೋಗಿದ್ದಾರೆ. ಧಾರವಾಡದ ಸಿಎಸ್ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಓದಿದ್ದ ಶ್ರೀಕಾಂತ್, ಧಾರವಾಡದೊಂದಿಗೆ ಮೊದಲಿನಿಂದಲೂ ನಂಟು ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಆಗಾಗ ಧಾರವಾಡಕ್ಕೆ ಬರುವ ಶ್ರೀಕಾಂತ್, ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿದ್ದರು. ಸ್ವಂತ ಊರು ಗಂಗಾವತಿಗೆ ತೆರಳಲು ಆಗಮಿಸಿದ್ದು, ಈ ವೇಳೆ ಧಾರವಾಡಕ್ಕೆ ಆಗಮಿಸಿ ಉಪಹಾರ ಸೇವನೆ ಮಾಡಿದರು.
![actor srikanth](https://etvbharatimages.akamaized.net/etvbharat/prod-images/15-09-2024/kn-dwd-3-telugu-actor-visit-ka10001_15092024115700_1509f_1726381620_444.jpg)
ಧಾರವಾಡದ ಗೆಳೆಯ ಹಾಗೂ ಉಪವನ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ ಮನೆಯಲ್ಲಿ ಉಪಹಾರ ಸೇವಿಸಿದರು. ಕಾಲೇಜು ದಿನಗಳಲ್ಲಿ ಉಪವನ ಹೋಟೆಲ್ನಲ್ಲಿ ಶ್ರೀಕಾಂತ್ ಉಪಹಾರ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬಂದಾಗಲೆಲ್ಲ ಈ ಹೋಟೆಲ್ಗೆ ಮತ್ತು ಮಾಲೀಕರನ್ನು ಭೇಟಿ ಮಾಡಿ ತೆರಳುತ್ತಾರೆ. ನಟ ಶ್ರೀಕಾಂತ್ ಕೊಪ್ಪಳ ಜಿಲ್ಲೆಯ ಗಂಗಾವತಿಯ ಮೂಲ ನಿವಾಸಿಯಾಗಿದ್ದಾರೆ.
![actor srikanth](https://etvbharatimages.akamaized.net/etvbharat/prod-images/15-09-2024/kn-dwd-3-telugu-actor-visit-ka10001_15092024115700_1509f_1726381620_249.jpg)
ಶ್ರೀಕಾಂತ್ ತೆಲುಗು ಚಿತ್ರರಂಗ ಮಾತ್ರವಲ್ಲದೆ, ಕನ್ನಡದಲ್ಲಿಯೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಯುಗಾದಿ', 'ದಿ ವಿಲನ್' ಹಾಗೂ ಪುನೀತ್ ರಾಜ್ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದಲ್ಲಿಯೂ ಕೂಡ ಶ್ರೀಕಾಂತ್ ನಟಿಸಿದ್ದರು.
ಇದನ್ನೂ ಓದಿ: ಸೈಮಾ ಅವಾರ್ಡ್ 2024: ಸ್ಯಾಂಡಲ್ವುಡ್ಗೆ ಸಾಲು ಸಾಲು ಪ್ರಶಸ್ತಿ - SIIMA 2024