ETV Bharat / state

ಧಾರವಾಡಕ್ಕೆ ಟಾಲಿವುಡ್​ ನಟ, ಕನ್ನಡಿಗ ಶ್ರೀಕಾಂತ್ ಭೇಟಿ: ಸ್ನೇಹಿತನ ಮನೆಯಲ್ಲಿ ಉಪಹಾರ ಸೇವನೆ - Srikanth Visits Dharwad

author img

By ETV Bharat Karnataka Team

Published : Sep 15, 2024, 5:01 PM IST

ತೆಲುಗು ಖ್ಯಾತ ನಟ ಶ್ರೀಕಾಂತ್ ಪೇಡಾ ನಗರಿ ಧಾರವಾಡಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಗೆಳೆಯನ ಮನೆಗೆ ಭೇಟಿ ನೀಡಿ, ಉಪಹಾರ ಸೇವಿಸಿದರು.

actor srikanth
ಧಾರವಾಡಕ್ಕೆ ತೆಲುಗು ನಟ ಶ್ರೀಕಾಂತ್ ಭೇಟಿ (ETV Bharat)

ಧಾರವಾಡ: ತೆಲುಗು ನಟ ಶ್ರೀಕಾಂತ್ ಅವರು ಭಾನುವಾರ ಧಾರವಾಡದ ಉಪವನ ಹೋಟೆಲ್​ಗೆ ಭೇಟಿ ನೀಡಿದ್ದರು. ಗೆಳೆಯರ ಭೇಟಿಗೆಂದು ಪೇಡಾ ನಗರಿಗೆ ಬಂದು ಹೋಗಿದ್ದಾರೆ. ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಓದಿದ್ದ ಶ್ರೀಕಾಂತ್, ಧಾರವಾಡದೊಂದಿಗೆ ಮೊದಲಿನಿಂದಲೂ ನಂಟು ಹೊಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಆಗಾಗ ಧಾರವಾಡಕ್ಕೆ ಬರುವ ಶ್ರೀಕಾಂತ್​, ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿದ್ದರು. ಸ್ವಂತ ಊರು ಗಂಗಾವತಿಗೆ ತೆರಳಲು ಆಗಮಿಸಿದ್ದು, ಈ ವೇಳೆ ಧಾರವಾಡಕ್ಕೆ ಆಗಮಿಸಿ ಉಪಹಾರ ಸೇವನೆ ಮಾಡಿದರು.

actor srikanth
ಧಾರವಾಡಕ್ಕೆ ತೆಲುಗು ನಟ ಶ್ರೀಕಾಂತ್ ಭೇಟಿ (ETV Bharat)

ಧಾರವಾಡದ ಗೆಳೆಯ ಹಾಗೂ ಉಪವನ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ ಮನೆಯಲ್ಲಿ ಉಪಹಾರ ಸೇವಿಸಿದರು. ಕಾಲೇಜು ದಿನಗಳಲ್ಲಿ ಉಪವನ ಹೋಟೆಲ್​ನಲ್ಲಿ ಶ್ರೀಕಾಂತ್ ಉಪಹಾರ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬಂದಾಗಲೆಲ್ಲ ಈ ಹೋಟೆಲ್​ಗೆ ಮತ್ತು ಮಾಲೀಕರನ್ನು ಭೇಟಿ ಮಾಡಿ ತೆರಳುತ್ತಾರೆ. ನಟ ಶ್ರೀಕಾಂತ್ ಕೊಪ್ಪಳ ಜಿಲ್ಲೆಯ ಗಂಗಾವತಿಯ ಮೂಲ ನಿವಾಸಿಯಾಗಿದ್ದಾರೆ.

actor srikanth
ಧಾರವಾಡಕ್ಕೆ ತೆಲುಗು ನಟ ಶ್ರೀಕಾಂತ್ ಭೇಟಿ (ETV Bharat)

ಶ್ರೀಕಾಂತ್​ ತೆಲುಗು ಚಿತ್ರರಂಗ ಮಾತ್ರವಲ್ಲದೆ, ಕನ್ನಡದಲ್ಲಿಯೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಯುಗಾದಿ', 'ದಿ ವಿಲನ್' ಹಾಗೂ ಪುನೀತ್​ ರಾಜ್​ಕುಮಾರ್​ ಅಭಿನಯದ 'ಜೇಮ್ಸ್'​ ಚಿತ್ರದಲ್ಲಿಯೂ ಕೂಡ ಶ್ರೀಕಾಂತ್​ ನಟಿಸಿದ್ದರು.

ಇದನ್ನೂ ಓದಿ: ಸೈಮಾ ಅವಾರ್ಡ್​ 2024: ಸ್ಯಾಂಡಲ್​ವುಡ್​ಗೆ ಸಾಲು ಸಾಲು ಪ್ರಶಸ್ತಿ - SIIMA 2024

ಧಾರವಾಡ: ತೆಲುಗು ನಟ ಶ್ರೀಕಾಂತ್ ಅವರು ಭಾನುವಾರ ಧಾರವಾಡದ ಉಪವನ ಹೋಟೆಲ್​ಗೆ ಭೇಟಿ ನೀಡಿದ್ದರು. ಗೆಳೆಯರ ಭೇಟಿಗೆಂದು ಪೇಡಾ ನಗರಿಗೆ ಬಂದು ಹೋಗಿದ್ದಾರೆ. ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಓದಿದ್ದ ಶ್ರೀಕಾಂತ್, ಧಾರವಾಡದೊಂದಿಗೆ ಮೊದಲಿನಿಂದಲೂ ನಂಟು ಹೊಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಆಗಾಗ ಧಾರವಾಡಕ್ಕೆ ಬರುವ ಶ್ರೀಕಾಂತ್​, ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿದ್ದರು. ಸ್ವಂತ ಊರು ಗಂಗಾವತಿಗೆ ತೆರಳಲು ಆಗಮಿಸಿದ್ದು, ಈ ವೇಳೆ ಧಾರವಾಡಕ್ಕೆ ಆಗಮಿಸಿ ಉಪಹಾರ ಸೇವನೆ ಮಾಡಿದರು.

actor srikanth
ಧಾರವಾಡಕ್ಕೆ ತೆಲುಗು ನಟ ಶ್ರೀಕಾಂತ್ ಭೇಟಿ (ETV Bharat)

ಧಾರವಾಡದ ಗೆಳೆಯ ಹಾಗೂ ಉಪವನ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ ಮನೆಯಲ್ಲಿ ಉಪಹಾರ ಸೇವಿಸಿದರು. ಕಾಲೇಜು ದಿನಗಳಲ್ಲಿ ಉಪವನ ಹೋಟೆಲ್​ನಲ್ಲಿ ಶ್ರೀಕಾಂತ್ ಉಪಹಾರ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬಂದಾಗಲೆಲ್ಲ ಈ ಹೋಟೆಲ್​ಗೆ ಮತ್ತು ಮಾಲೀಕರನ್ನು ಭೇಟಿ ಮಾಡಿ ತೆರಳುತ್ತಾರೆ. ನಟ ಶ್ರೀಕಾಂತ್ ಕೊಪ್ಪಳ ಜಿಲ್ಲೆಯ ಗಂಗಾವತಿಯ ಮೂಲ ನಿವಾಸಿಯಾಗಿದ್ದಾರೆ.

actor srikanth
ಧಾರವಾಡಕ್ಕೆ ತೆಲುಗು ನಟ ಶ್ರೀಕಾಂತ್ ಭೇಟಿ (ETV Bharat)

ಶ್ರೀಕಾಂತ್​ ತೆಲುಗು ಚಿತ್ರರಂಗ ಮಾತ್ರವಲ್ಲದೆ, ಕನ್ನಡದಲ್ಲಿಯೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಯುಗಾದಿ', 'ದಿ ವಿಲನ್' ಹಾಗೂ ಪುನೀತ್​ ರಾಜ್​ಕುಮಾರ್​ ಅಭಿನಯದ 'ಜೇಮ್ಸ್'​ ಚಿತ್ರದಲ್ಲಿಯೂ ಕೂಡ ಶ್ರೀಕಾಂತ್​ ನಟಿಸಿದ್ದರು.

ಇದನ್ನೂ ಓದಿ: ಸೈಮಾ ಅವಾರ್ಡ್​ 2024: ಸ್ಯಾಂಡಲ್​ವುಡ್​ಗೆ ಸಾಲು ಸಾಲು ಪ್ರಶಸ್ತಿ - SIIMA 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.