ETV Bharat / state

ರಾಮನಗರ ಕೆಂಕೇರಮ್ಮ ಕೆರೆಯಲ್ಲಿ ಸಮುದಾಯ ಭವನ, ಸರ್ಕಾರಿ ಶಾಲೆ: ಹೈಕೋರ್ಟ್​ಗೆ ವರದಿ

author img

By ETV Bharat Karnataka Team

Published : Jan 24, 2024, 10:08 AM IST

ರಾಮನಗರ ಜಿಲ್ಲೆಯ ಕನಕರಪುರ ಗ್ರಾಮದಲ್ಲಿರುವ ಕೆಂಕೇರಮ್ಮ ಕೆರೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹೈಕೋರ್ಟ್‌ಗೆ ವರದಿ ನೀಡಿದ್ದಾರೆ.

hc
ಹೈಕೋರ್ಟ್

ಬೆಂಗಳೂರು: ರಾಮನಗರ ಜಿಲ್ಲೆ ಕನಕರಪುರ ಗ್ರಾಮದಲ್ಲಿ 10.33 ಗುಂಟೆ ವಿಸ್ತೀರ್ಣದ ಕೆಂಕೇರಮ್ಮ ಕೆರೆ ಪ್ರದೇಶದಲ್ಲಿ ಒಟ್ಟು 4 ಎಕರೆ 37 ಗುಂಟೆ ಜಾಗ ಒತ್ತುವರಿ ಮಾಡಿ, ನಿವೇಶನ ರಚಿಸಿ ಹಂಚಲಾಗಿದ್ದು, ಸಮುದಾಯ ಭವನ, ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ ಎಂದು ಕನಕಪುರ ತಾಲೂಕು ತಹಶೀಲ್ದಾರ್​ ಹೈಕೋರ್ಟ್‌ಗೆ ವರದಿ ಸಲ್ಲಿಸಿದರು.

ಕೆಂಕೇರಮ್ಮ ಕೆರೆ ಜಾಗದಲ್ಲಿ ಒತ್ತುವರಿ ಮಾಡಲಾಗಿದೆ ಮತ್ತು ಸಂಸದ ಡಿ.ಕೆ.ಸುರೇಶ್​ ಬರೆದ ಪತ್ರದ ಮೇರೆಗೆ ಕನಕಪುರ ನಗರಸಭೆ ಕೆರೆ ಜಾಗವನ್ನು ಸಮುದಾಯ ಭವನ ನಿರ್ಮಿಸಲು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಸ್‌ಡಿಬಿ) ಸ್ವಾಧೀನಕ್ಕೆ ನೀಡಿದೆ ಎಂದು ಆಕ್ಷೇಪಿಸಿ ರವಿ ಕುಮಾರ್‌ ಕಂಚನಹಳ್ಳಿ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.

ಈ ಅರ್ಜಿ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್​.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠಕ್ಕೆ ತಹಶೀಲ್ದಾರ್​ ವರದಿ ಒಪ್ಪಿಸಿದರು. ಸರ್ಕಾರಿ ವಕೀಲರು ಹಾಜರಾಗಿ, ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕನಕಪುರ ತಾಲೂಕು ತಹಸೀಲ್ದಾರ್​ ಡಾ.ಸ್ಮಿತಾ ರಾಮು ಅವರು ಕೆರೆ ಜಾಗಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಪ್ರಮಾಣ ಪತ್ರ ರೂಪದಲ್ಲಿ ವಸ್ತುಸ್ಥಿತಿ ವರದಿಯನ್ನು 2023ರ ಡಿ.19ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಪ್ರಮಾಣ ಪತ್ರ ಪರಿಶೀಲಿಸಿ ಅಭಿಪ್ರಾಯ ತಿಳಿಸಲು ಅರ್ಜಿದಾರಿಗೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿತು.

ಪ್ರಮಾಣ ಪತ್ರದಲ್ಲಿರುವ ಅಂಶಗಳು: ಹೈಕೋರ್ಟ್​​ ಸೂಚನೆಯ ಮೇರೆಗೆ ಕನಕಪುರ ಗ್ರಾಮದ ಸರ್ವೇ ನಂ.21 ರಲ್ಲಿನ 10 ಎಕರೆ 33 ಗುಂಟೆ ವಿಸ್ತೀರ್ಣದಲ್ಲಿರುವ ಕೆಂಕೆರಮ್ಮ ಕೆರೆ ಜಾಗದ ಸರ್ವೇ ನಡೆಸಲಾಗಿದೆ. 10.33 ಎಕರೆ ಕೆರೆ ಜಾಗದ ಪೈಕಿ ಸದ್ಯ 5.36 ಎಕರೆ ಜಾಗ ಖಾಲಿಯಿದೆ. ಉಳಿದ ಜಾಗದ ಪೈಕಿ 1.17 ಎಕರೆ ವಿಸ್ತೀರ್ಣದಲ್ಲಿ ಎಸ್‌ಡಿಬಿ ನಿವೇಶನ ರಚಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗಿದೆ. 8 ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿದೆ. ಈ ನಿವೇಶನದಲ್ಲಿ ವಸತಿ ಮನೆ ನಿರ್ಮಿಸಿ, ಜನ ವಾಸವಾಗಿದ್ದಾರೆ.

3.5 ಗುಂಟೆ ಜಾಗದಲ್ಲಿ ಕೊಲ್ಲಾಪುರದಮ್ಮ ದೇವಸ್ಥಾನದ ತಳಹದಿಯಿದೆ. 28.5 ಗುಂಟೆ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ. 2.10 ಎಕರೆ ಜಾಗದಲ್ಲಿ ಕೆಂಕೇರಮ್ಮ ದೇವಸ್ಥಾನವಿದೆ. 8.5 ಗುಂಟೆಯಲ್ಲಿ ಧರ್ಮರಾಯ ಸ್ವಾಮಿ ಹಾಗೂ ಪಾರ್ವತಮ್ಮ ದೇವಸ್ಥಾನವಿದೆ. 1.5 ಗುಂಟೆ ಜಾಗದಲ್ಲಿ ಶನೈಶ್ವರ ದೇವಸ್ಥಾನವಿದೆ. ಜಾತ್ರೆ ಆಚರಣೆ ವೇಳೆ ಖಾಲಿದ ಜಾಗವನ್ನು ತೇರು ಎಳೆಯಲು ಭಕ್ತರು ಬಳುಸುತ್ತಾರೆ. ಉಳಿದ ಸಮಯದಲ್ಲಿ ಶಾಲಾ ಮಕ್ಕಳು ಮೈದಾನವಾಗಿ ಉಪಯೋಗಿಸುತ್ತಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಹಲವು ವರ್ಷಗಳ ಹಿಂದಿನಿಂದಲೇ ಈ 10 ಎಕರೆ 33 ಗುಂಟೆ ಜಾಗವು ಜಲಾನಯನ ಪ್ರದೇಶವಾಗಿ ಉಳಿದಿಲ್ಲ ಹಾಗೂ ಕೆರೆಯ ಗುಣಲಕ್ಷಣ ಕಳೆದುಕೊಂಡಿದೆ. ಇನ್ನೂ ನಿವೇಶನ ರಚಿಸಲು ಹಾಗೂ ಸಮುದಾಯ ಭವನ ನಿರ್ಮಿಸಲು ಎಸ್‌ಡಿಬಿಗೆ, ಶಾಲೆ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಮತ್ತು ಸಂಬಂಧಪಟ್ಟ ದೇವಾಲಯಗಳಿಗೆ ಕೆರೆ ಜಾಗ ಮಂಜೂರು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಒಟ್ಟಾರೆ ಕೆರೆಗೆ ಸೇರಿದ 4.37 ಎಕರೆ ಜಾಗ ಒತ್ತುವರಿಯಾಗಿದೆ.

ಸ್ಥಳದ ಹಿರಿಯ ನಾಗರಿಕರು ಹಾಗೂ ಅರ್ಚಕರ ಹೇಳುವಂತೆ ಕೆಂಕೇರಮ್ಮ ದೇವಸ್ಥಾನವು ಅನಾದಿ ಕಾಲದಿಂದಲೂ ಕೆರೆ ಪ್ರದೇಶದಲ್ಲಿದೆ. ಕನಕಪುರ ನಗರಸಭೆಯು 2023ರ ನ.10 ಮತ್ತು 27ರಂದು ತಮಗೆ ಬರೆದ ಪತ್ರದಲ್ಲಿ, ಕೆರೆ ಅದರ ಗುಣಲಕ್ಷಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಆ ಜಾಗವನ್ನು ಸುದೀರ್ಘ ಸಮಯದಿಂದಲೂ ಸಾರ್ವಜನಿಕರ ಉಪಯೋಗಕ್ಕೆ ಬಳಸಲಾಗಿದೆ ಎಂಬುದಾಗಿ ತಿಳಿಸಿದೆ. ಕೆರೆ ಜಾಗದ ಒತ್ತುವರಿ ವಿಚಾರದಲ್ಲಿ ಸರ್ಕಾರ ಮುಂದಿನ ಕ್ರಮ ಜರುಗಿಸಬೇಕಿದೆ ಎಂದು ಪ್ರಮಾಣ ಪತ್ರದಲ್ಲಿ ತಹಸೀಲ್ದಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಚಾಲಕ ಪರವಾನಗಿ ಹೊಂದಿಲ್ಲದ ವೇಳೆ ಪಾವತಿ & ವಸೂಲಾತಿ ನೀತಿ ಬಳಸಿ: ಹೈಕೋರ್ಟ್‌

ಬೆಂಗಳೂರು: ರಾಮನಗರ ಜಿಲ್ಲೆ ಕನಕರಪುರ ಗ್ರಾಮದಲ್ಲಿ 10.33 ಗುಂಟೆ ವಿಸ್ತೀರ್ಣದ ಕೆಂಕೇರಮ್ಮ ಕೆರೆ ಪ್ರದೇಶದಲ್ಲಿ ಒಟ್ಟು 4 ಎಕರೆ 37 ಗುಂಟೆ ಜಾಗ ಒತ್ತುವರಿ ಮಾಡಿ, ನಿವೇಶನ ರಚಿಸಿ ಹಂಚಲಾಗಿದ್ದು, ಸಮುದಾಯ ಭವನ, ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ ಎಂದು ಕನಕಪುರ ತಾಲೂಕು ತಹಶೀಲ್ದಾರ್​ ಹೈಕೋರ್ಟ್‌ಗೆ ವರದಿ ಸಲ್ಲಿಸಿದರು.

ಕೆಂಕೇರಮ್ಮ ಕೆರೆ ಜಾಗದಲ್ಲಿ ಒತ್ತುವರಿ ಮಾಡಲಾಗಿದೆ ಮತ್ತು ಸಂಸದ ಡಿ.ಕೆ.ಸುರೇಶ್​ ಬರೆದ ಪತ್ರದ ಮೇರೆಗೆ ಕನಕಪುರ ನಗರಸಭೆ ಕೆರೆ ಜಾಗವನ್ನು ಸಮುದಾಯ ಭವನ ನಿರ್ಮಿಸಲು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಸ್‌ಡಿಬಿ) ಸ್ವಾಧೀನಕ್ಕೆ ನೀಡಿದೆ ಎಂದು ಆಕ್ಷೇಪಿಸಿ ರವಿ ಕುಮಾರ್‌ ಕಂಚನಹಳ್ಳಿ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.

ಈ ಅರ್ಜಿ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್​.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠಕ್ಕೆ ತಹಶೀಲ್ದಾರ್​ ವರದಿ ಒಪ್ಪಿಸಿದರು. ಸರ್ಕಾರಿ ವಕೀಲರು ಹಾಜರಾಗಿ, ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕನಕಪುರ ತಾಲೂಕು ತಹಸೀಲ್ದಾರ್​ ಡಾ.ಸ್ಮಿತಾ ರಾಮು ಅವರು ಕೆರೆ ಜಾಗಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಪ್ರಮಾಣ ಪತ್ರ ರೂಪದಲ್ಲಿ ವಸ್ತುಸ್ಥಿತಿ ವರದಿಯನ್ನು 2023ರ ಡಿ.19ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಪ್ರಮಾಣ ಪತ್ರ ಪರಿಶೀಲಿಸಿ ಅಭಿಪ್ರಾಯ ತಿಳಿಸಲು ಅರ್ಜಿದಾರಿಗೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿತು.

ಪ್ರಮಾಣ ಪತ್ರದಲ್ಲಿರುವ ಅಂಶಗಳು: ಹೈಕೋರ್ಟ್​​ ಸೂಚನೆಯ ಮೇರೆಗೆ ಕನಕಪುರ ಗ್ರಾಮದ ಸರ್ವೇ ನಂ.21 ರಲ್ಲಿನ 10 ಎಕರೆ 33 ಗುಂಟೆ ವಿಸ್ತೀರ್ಣದಲ್ಲಿರುವ ಕೆಂಕೆರಮ್ಮ ಕೆರೆ ಜಾಗದ ಸರ್ವೇ ನಡೆಸಲಾಗಿದೆ. 10.33 ಎಕರೆ ಕೆರೆ ಜಾಗದ ಪೈಕಿ ಸದ್ಯ 5.36 ಎಕರೆ ಜಾಗ ಖಾಲಿಯಿದೆ. ಉಳಿದ ಜಾಗದ ಪೈಕಿ 1.17 ಎಕರೆ ವಿಸ್ತೀರ್ಣದಲ್ಲಿ ಎಸ್‌ಡಿಬಿ ನಿವೇಶನ ರಚಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗಿದೆ. 8 ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿದೆ. ಈ ನಿವೇಶನದಲ್ಲಿ ವಸತಿ ಮನೆ ನಿರ್ಮಿಸಿ, ಜನ ವಾಸವಾಗಿದ್ದಾರೆ.

3.5 ಗುಂಟೆ ಜಾಗದಲ್ಲಿ ಕೊಲ್ಲಾಪುರದಮ್ಮ ದೇವಸ್ಥಾನದ ತಳಹದಿಯಿದೆ. 28.5 ಗುಂಟೆ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ. 2.10 ಎಕರೆ ಜಾಗದಲ್ಲಿ ಕೆಂಕೇರಮ್ಮ ದೇವಸ್ಥಾನವಿದೆ. 8.5 ಗುಂಟೆಯಲ್ಲಿ ಧರ್ಮರಾಯ ಸ್ವಾಮಿ ಹಾಗೂ ಪಾರ್ವತಮ್ಮ ದೇವಸ್ಥಾನವಿದೆ. 1.5 ಗುಂಟೆ ಜಾಗದಲ್ಲಿ ಶನೈಶ್ವರ ದೇವಸ್ಥಾನವಿದೆ. ಜಾತ್ರೆ ಆಚರಣೆ ವೇಳೆ ಖಾಲಿದ ಜಾಗವನ್ನು ತೇರು ಎಳೆಯಲು ಭಕ್ತರು ಬಳುಸುತ್ತಾರೆ. ಉಳಿದ ಸಮಯದಲ್ಲಿ ಶಾಲಾ ಮಕ್ಕಳು ಮೈದಾನವಾಗಿ ಉಪಯೋಗಿಸುತ್ತಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಹಲವು ವರ್ಷಗಳ ಹಿಂದಿನಿಂದಲೇ ಈ 10 ಎಕರೆ 33 ಗುಂಟೆ ಜಾಗವು ಜಲಾನಯನ ಪ್ರದೇಶವಾಗಿ ಉಳಿದಿಲ್ಲ ಹಾಗೂ ಕೆರೆಯ ಗುಣಲಕ್ಷಣ ಕಳೆದುಕೊಂಡಿದೆ. ಇನ್ನೂ ನಿವೇಶನ ರಚಿಸಲು ಹಾಗೂ ಸಮುದಾಯ ಭವನ ನಿರ್ಮಿಸಲು ಎಸ್‌ಡಿಬಿಗೆ, ಶಾಲೆ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಮತ್ತು ಸಂಬಂಧಪಟ್ಟ ದೇವಾಲಯಗಳಿಗೆ ಕೆರೆ ಜಾಗ ಮಂಜೂರು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಒಟ್ಟಾರೆ ಕೆರೆಗೆ ಸೇರಿದ 4.37 ಎಕರೆ ಜಾಗ ಒತ್ತುವರಿಯಾಗಿದೆ.

ಸ್ಥಳದ ಹಿರಿಯ ನಾಗರಿಕರು ಹಾಗೂ ಅರ್ಚಕರ ಹೇಳುವಂತೆ ಕೆಂಕೇರಮ್ಮ ದೇವಸ್ಥಾನವು ಅನಾದಿ ಕಾಲದಿಂದಲೂ ಕೆರೆ ಪ್ರದೇಶದಲ್ಲಿದೆ. ಕನಕಪುರ ನಗರಸಭೆಯು 2023ರ ನ.10 ಮತ್ತು 27ರಂದು ತಮಗೆ ಬರೆದ ಪತ್ರದಲ್ಲಿ, ಕೆರೆ ಅದರ ಗುಣಲಕ್ಷಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಆ ಜಾಗವನ್ನು ಸುದೀರ್ಘ ಸಮಯದಿಂದಲೂ ಸಾರ್ವಜನಿಕರ ಉಪಯೋಗಕ್ಕೆ ಬಳಸಲಾಗಿದೆ ಎಂಬುದಾಗಿ ತಿಳಿಸಿದೆ. ಕೆರೆ ಜಾಗದ ಒತ್ತುವರಿ ವಿಚಾರದಲ್ಲಿ ಸರ್ಕಾರ ಮುಂದಿನ ಕ್ರಮ ಜರುಗಿಸಬೇಕಿದೆ ಎಂದು ಪ್ರಮಾಣ ಪತ್ರದಲ್ಲಿ ತಹಸೀಲ್ದಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಚಾಲಕ ಪರವಾನಗಿ ಹೊಂದಿಲ್ಲದ ವೇಳೆ ಪಾವತಿ & ವಸೂಲಾತಿ ನೀತಿ ಬಳಸಿ: ಹೈಕೋರ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.