ETV Bharat / state

ಸ್ಫೋಟಗೊಂಡಿದ್ದ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ದೋಸೆ ಸವಿದ ಸಿಂಗಾಪೂರದ ರಾಯಭಾರಿ

ಪುನಾರಂಭಗೊಂಡಿರುವ ರಾಮೇಶ್ವರಂ ಕೆಫೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಕ್ಕೆ ಸಂತೋಷವಾಯಿತು. ಭಾರತದಲ್ಲಿನ ನಮ್ಮ ಸ್ನೇಹಿತರ ಪರವಾಗಿ ನಿಲ್ಲುತ್ತೇವೆ

author img

By ETV Bharat Karnataka Team

Published : Mar 15, 2024, 4:38 PM IST

Singapore High Commissioner to India visited the Rameshwaram Cafe
Singapore High Commissioner to India visited the Rameshwaram Cafe

ಬೆಂಗಳೂರು: ಇತ್ತೀಚೆಗಷ್ಟೇ ಐಇಡಿ ಬಾಂಬ್​ ಸ್ಟೋಟ ಪ್ರಕರಣದಿಂದ ದೇಶಾದ್ಯಂತ ಸುದ್ದಿಯಾಗಿರುವ ರಾಮೇಶ್ವರಂ​​ ಕೆಫೆಗೆ ಭಾರತದ ಸಿಂಗಾಪೂರದ ಹೈ ಕಮಿಷನರ್​ ಸೈಮನ್​ ವಾಂಗ್​​ ಭೇಟಿ ನೀಡಿದ್ದು, ದೋಸೆ ರುಚಿ ಸವಿದಿದ್ದಾರೆ.

ಇಂಟರ್​ನ್ಯಾಷನಲ್​ ಟೆಕ್ನಾಲಾಜಿ ಪಾರ್​ ಲಿಮಿಟೆಡ್​ನ ಬ್ರೂಕ್​ಫೀಲ್ಡ್​​ನಲ್ಲಿರುವ ಕೆಫೆಗೆ ಭೇಟಿ ನೀಡಿರುವ ಅವರು ಕೆಫೆಗೆ ಭೇಟಿ ನೀಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುನಾರಂಭಗೊಂಡಿರುವ ರಾಮೇಶ್ವರಂ ಕೆಫೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಕ್ಕೆ ಸಂತೋಷವಾಯಿತು. ಭಾರತದಲ್ಲಿನ ನಮ್ಮ ಸ್ನೇಹಿತರ ಪರವಾಗಿ ನಿಲ್ಲುತ್ತೇವೆ ಎಂದು ಅಡಿಬರಹ ಕೂಡಾ ಹಾಕಿದ್ದಾರೆ. ಇದರಲ್ಲಿ ಅವರು ದೋಸೆ, ಫಿಲ್ಟರ್​ ಕಾಫಿಯ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಸಿಂಗಾಪೂರ್​ ಎಂದು ಬರೆದಿರುವ ಕೆಂಪು ಬಣ್ಣದ ಟೀಶರ್ಟ್​ ತೊಟ್ಟು ಸೈಮನ್​ ಫೋಟೋಗೆ ಫೋಸ್​ ನೀಡಿದ್ದಾರೆ.

ಮಾರ್ಚ್​ 1ರಿಂದು ಕೆಫೆಗೆ ಬಂದಿದ್ದ ಶಂಕಿತ ಆರೋಪಿ ಸ್ಫೋಟಕದ ಬ್ಯಾಂಗ್​ ಇರಿಸಿ, ಹೋಗಿದ್ದ. ಈ ಬ್ಯಾಗ್​ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸ್ಫೋಟಗೊಂಡಿತು. ಈ ಪ್ರಕರಣ ಕುರಿತು ಇದೀಗ ಎನ್​ಐಎ ತನಿಖೆ ನಡೆಸುತ್ತಿದೆ. ಘಟನೆ ನಡೆದ ವಾರದ ಬಳಿಕ ಅಂದರೆ, ಮಾರ್ಚ್​ 9ರಿಂದ ಕೆಫೆ ಪುನಾರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಗ್ರಾಹಕರು ಪ್ರವೇಶಿಸುವ ಕಡೆಗಳಲ್ಲೆಲ್ಲಾ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನೂ ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದ ಬಳಿಕವೇ ಪ್ರವೇಶಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.

ಸೈಮನ್​ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ ಸಾಟ್ಸ್​ (sats) ಸೆಂಟ್ರಲ್​ ಕಿಚ್​​ನ ಉದ್ಘಾಟನೆಗೆ ಸಿಲಿಕಾನ್​ ಸಿಟಿಗೆ ಭೇಟಿ ನೀಡಿದ್ದಾರೆ. ಈ ಕಿಚನ್​ ಮೂಲಕ ಸುಸ್ಥಿರ ಸೌಲಭ್ಯದೊಂದಿಗೆ 1,75,000 ರುಚಿಕರ ರೆಡಿ ಟೂ ಈಟ್​​ ಊಟವನ್ನು ನಿತ್ಯ ತಯಾರಿಸಲಾಗುವುದು. ಭಾರತದಲ್ಲಿ ಅಭಿವೃದ್ಧಿ ಪ್ರಯಾಣದಲ್ಲಿ ಸಿಂಗಾಪೂರ ನಂಬಿಕೆ ಹೊಂದಿದ್ದು, ಭವಿಷ್ಯದಲ್ಲಿ ಹೂಡಿಕೆ ಮುಂದುವರೆಸಲಿದೆ ಎಂದು ವಾಂಗ್​ ಟ್ವೀಟ್​ ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕೂಡ ಸೈಮನ್​ ಭಾರತದ ಚಂದ್ರಯಾನ -3ರ ಯಶಸ್ವಿ ಲ್ಯಾಂಡಿಂಗ್​ಗೆ ಪ್ರಾರ್ಥಿಸಿದ್ದರು. ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸುತ್ತಿರುವ ಬಿಲಿಯಾಂತರ ಜನರೊಂದಿಗೆ ನನ್ನ ಪ್ರಾರ್ಥನೆ ಕೂಡ ಸೇರಿದೆ ಎಂಬ ಅಡಿ ಬರಹದೊಂದಿಗೆ ದೇವರಿಗೆ ಪ್ರಾರ್ಥಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಡಾರ್ಜಿಲಿಂಗ್​ನಲ್ಲಿ ನಡೆದ ಜಿ20 ಪ್ರವಾಸೋದ್ಯಮ ವರ್ಕಿಂಗ್​ ಗ್ರೂಪ್​ ಸಭೆಯಲ್ಲಿ ​ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡುವುದರ ಜೊತೆಗೆ ಚಹಾದ ಎಲೆಯನ್ನು ಕಿತ್ತು ಗಮನ ಸೆಳೆದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಜೈಲಿನಲ್ಲಿದ್ದ ಮಾಜ್ ಮುನೀರ್​ ವಶಕ್ಕೆ ಪಡೆದ ಎನ್ಐಎ

ಬೆಂಗಳೂರು: ಇತ್ತೀಚೆಗಷ್ಟೇ ಐಇಡಿ ಬಾಂಬ್​ ಸ್ಟೋಟ ಪ್ರಕರಣದಿಂದ ದೇಶಾದ್ಯಂತ ಸುದ್ದಿಯಾಗಿರುವ ರಾಮೇಶ್ವರಂ​​ ಕೆಫೆಗೆ ಭಾರತದ ಸಿಂಗಾಪೂರದ ಹೈ ಕಮಿಷನರ್​ ಸೈಮನ್​ ವಾಂಗ್​​ ಭೇಟಿ ನೀಡಿದ್ದು, ದೋಸೆ ರುಚಿ ಸವಿದಿದ್ದಾರೆ.

ಇಂಟರ್​ನ್ಯಾಷನಲ್​ ಟೆಕ್ನಾಲಾಜಿ ಪಾರ್​ ಲಿಮಿಟೆಡ್​ನ ಬ್ರೂಕ್​ಫೀಲ್ಡ್​​ನಲ್ಲಿರುವ ಕೆಫೆಗೆ ಭೇಟಿ ನೀಡಿರುವ ಅವರು ಕೆಫೆಗೆ ಭೇಟಿ ನೀಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುನಾರಂಭಗೊಂಡಿರುವ ರಾಮೇಶ್ವರಂ ಕೆಫೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಕ್ಕೆ ಸಂತೋಷವಾಯಿತು. ಭಾರತದಲ್ಲಿನ ನಮ್ಮ ಸ್ನೇಹಿತರ ಪರವಾಗಿ ನಿಲ್ಲುತ್ತೇವೆ ಎಂದು ಅಡಿಬರಹ ಕೂಡಾ ಹಾಕಿದ್ದಾರೆ. ಇದರಲ್ಲಿ ಅವರು ದೋಸೆ, ಫಿಲ್ಟರ್​ ಕಾಫಿಯ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಸಿಂಗಾಪೂರ್​ ಎಂದು ಬರೆದಿರುವ ಕೆಂಪು ಬಣ್ಣದ ಟೀಶರ್ಟ್​ ತೊಟ್ಟು ಸೈಮನ್​ ಫೋಟೋಗೆ ಫೋಸ್​ ನೀಡಿದ್ದಾರೆ.

ಮಾರ್ಚ್​ 1ರಿಂದು ಕೆಫೆಗೆ ಬಂದಿದ್ದ ಶಂಕಿತ ಆರೋಪಿ ಸ್ಫೋಟಕದ ಬ್ಯಾಂಗ್​ ಇರಿಸಿ, ಹೋಗಿದ್ದ. ಈ ಬ್ಯಾಗ್​ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸ್ಫೋಟಗೊಂಡಿತು. ಈ ಪ್ರಕರಣ ಕುರಿತು ಇದೀಗ ಎನ್​ಐಎ ತನಿಖೆ ನಡೆಸುತ್ತಿದೆ. ಘಟನೆ ನಡೆದ ವಾರದ ಬಳಿಕ ಅಂದರೆ, ಮಾರ್ಚ್​ 9ರಿಂದ ಕೆಫೆ ಪುನಾರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಗ್ರಾಹಕರು ಪ್ರವೇಶಿಸುವ ಕಡೆಗಳಲ್ಲೆಲ್ಲಾ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನೂ ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದ ಬಳಿಕವೇ ಪ್ರವೇಶಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.

ಸೈಮನ್​ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ ಸಾಟ್ಸ್​ (sats) ಸೆಂಟ್ರಲ್​ ಕಿಚ್​​ನ ಉದ್ಘಾಟನೆಗೆ ಸಿಲಿಕಾನ್​ ಸಿಟಿಗೆ ಭೇಟಿ ನೀಡಿದ್ದಾರೆ. ಈ ಕಿಚನ್​ ಮೂಲಕ ಸುಸ್ಥಿರ ಸೌಲಭ್ಯದೊಂದಿಗೆ 1,75,000 ರುಚಿಕರ ರೆಡಿ ಟೂ ಈಟ್​​ ಊಟವನ್ನು ನಿತ್ಯ ತಯಾರಿಸಲಾಗುವುದು. ಭಾರತದಲ್ಲಿ ಅಭಿವೃದ್ಧಿ ಪ್ರಯಾಣದಲ್ಲಿ ಸಿಂಗಾಪೂರ ನಂಬಿಕೆ ಹೊಂದಿದ್ದು, ಭವಿಷ್ಯದಲ್ಲಿ ಹೂಡಿಕೆ ಮುಂದುವರೆಸಲಿದೆ ಎಂದು ವಾಂಗ್​ ಟ್ವೀಟ್​ ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕೂಡ ಸೈಮನ್​ ಭಾರತದ ಚಂದ್ರಯಾನ -3ರ ಯಶಸ್ವಿ ಲ್ಯಾಂಡಿಂಗ್​ಗೆ ಪ್ರಾರ್ಥಿಸಿದ್ದರು. ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸುತ್ತಿರುವ ಬಿಲಿಯಾಂತರ ಜನರೊಂದಿಗೆ ನನ್ನ ಪ್ರಾರ್ಥನೆ ಕೂಡ ಸೇರಿದೆ ಎಂಬ ಅಡಿ ಬರಹದೊಂದಿಗೆ ದೇವರಿಗೆ ಪ್ರಾರ್ಥಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಡಾರ್ಜಿಲಿಂಗ್​ನಲ್ಲಿ ನಡೆದ ಜಿ20 ಪ್ರವಾಸೋದ್ಯಮ ವರ್ಕಿಂಗ್​ ಗ್ರೂಪ್​ ಸಭೆಯಲ್ಲಿ ​ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡುವುದರ ಜೊತೆಗೆ ಚಹಾದ ಎಲೆಯನ್ನು ಕಿತ್ತು ಗಮನ ಸೆಳೆದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಜೈಲಿನಲ್ಲಿದ್ದ ಮಾಜ್ ಮುನೀರ್​ ವಶಕ್ಕೆ ಪಡೆದ ಎನ್ಐಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.