ETV Bharat / state

ಮಂಡ್ಯ: ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್​ಗೆ ಕಬ್ಬು ಬೆಳೆಗಾರರಿಂದ ಘೇರಾವ್ - Outrage against C D Gangadhar

author img

By ETV Bharat Karnataka Team

Published : Sep 10, 2024, 8:13 PM IST

Updated : Sep 10, 2024, 10:08 PM IST

ಕಬ್ಬು ಕಟಾವು​ ಮಾಡದ ಹಿನ್ನೆಲೆ ಮೈಶುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಡಿ. ಗಂಗಾಧರ್​ಗೆ ಕಬ್ಬು ಬೆಳಗಾರರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಲ ಗ್ರಾಮದಲ್ಲಿ ನಡೆದಿದೆ.

ಸಿ.ಡಿ.ಗಂಗಾಧರ್​ಗೆ ಕಬ್ಬು ಬೆಳೆಗಾರರಿಂದ ಘೇರಾವ್
ಸಿ.ಡಿ.ಗಂಗಾಧರ್​ಗೆ ಕಬ್ಬು ಬೆಳೆಗಾರರಿಂದ ಘೇರಾವ್ (ETV Bharat)
ಸಿ.ಡಿ.ಗಂಗಾಧರ್​ಗೆ ಕಬ್ಬು ಬೆಳೆಗಾರರಿಂದ ಘೇರಾವ್ (ETV Bharat)

ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಡಿ. ಗಂಗಾಧರ್​ಗೆ ಕಬ್ಬು ಬೆಳಗಾರರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆ ಜೊತೆಗೆ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಒಪ್ಪಂದ ಮಾಡಿಕೊಂಡು ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಆದರೆ 12 ತಿಂಗಳಿಗೇ ಕಟಾವು ಆಗಬೇಕಾಗಿದ್ದ ಕಬ್ಬು 15 ರಿಂದ 16 ತಿಂಗಳು ಕಳೆದರೂ ಕಟಾವು ಆಗಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆ ಮುಂದಿಟ್ಟುಕೊಂಡು ಕಾರ್ಖಾನೆಯ ಅಧಿಕಾರಿಗಳು ಕಬ್ಬು ಕಟಾವು ಮಾಡದೇ ಇರುವುದರಿಂದ ಬೆಳೆ ಹಾಳಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಕಬ್ಬು ಬೆಳೆಗಾರರು ಆರೋಪಿಸಿದ್ದಾರೆ.

ಹಲವು ಬಾರಿ ಈ ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮಕೈಗೊಂಡಿಲ್ಲ. ಇದರ ನಡುವೆ ಇಂದು ಮಂಗಲ ಗ್ರಾಮಕ್ಕೆ ಪತ್ನಿ ಜೊತೆ ಬಂದಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್​ಗೆ ಗ್ರಾಮದ ಕಬ್ಬು ಬೆಳೆಗಾರರು ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ತಳ್ಳಾಟ ನೂಕಾಟ ಉಂಟಾಯಿತು. ಹೀಗಾಗಿ ಪೊಲೀಸರ ರಕ್ಷಣೆಯೊಂದಿಗೆ ಕಾರಿನಲ್ಲಿ ತೆರಳುವಂತಹ ಪರಿಸ್ಥಿತಿ ಅಧ್ಯಕ್ಷ ಗಂಗಾಧರ್ ಎದುರಾಯಿತು.

ಇದನ್ನೂ ಓದಿ: ಕೃಷಿ ಪಂಪ್ ಸೆಟ್​ಗೆ ಆಧಾರ್ ಜೋಡಣೆ ಕೈಬಿಡಿ: ಸಿಎಂಗೆ ರೈತ ಒಕ್ಕೂಟಗಳ ಮನವಿ - Aadhar Agri Pump Set Link

ಸಿ.ಡಿ.ಗಂಗಾಧರ್​ಗೆ ಕಬ್ಬು ಬೆಳೆಗಾರರಿಂದ ಘೇರಾವ್ (ETV Bharat)

ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಡಿ. ಗಂಗಾಧರ್​ಗೆ ಕಬ್ಬು ಬೆಳಗಾರರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆ ಜೊತೆಗೆ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಒಪ್ಪಂದ ಮಾಡಿಕೊಂಡು ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಆದರೆ 12 ತಿಂಗಳಿಗೇ ಕಟಾವು ಆಗಬೇಕಾಗಿದ್ದ ಕಬ್ಬು 15 ರಿಂದ 16 ತಿಂಗಳು ಕಳೆದರೂ ಕಟಾವು ಆಗಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆ ಮುಂದಿಟ್ಟುಕೊಂಡು ಕಾರ್ಖಾನೆಯ ಅಧಿಕಾರಿಗಳು ಕಬ್ಬು ಕಟಾವು ಮಾಡದೇ ಇರುವುದರಿಂದ ಬೆಳೆ ಹಾಳಾಗುತ್ತಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಕಬ್ಬು ಬೆಳೆಗಾರರು ಆರೋಪಿಸಿದ್ದಾರೆ.

ಹಲವು ಬಾರಿ ಈ ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮಕೈಗೊಂಡಿಲ್ಲ. ಇದರ ನಡುವೆ ಇಂದು ಮಂಗಲ ಗ್ರಾಮಕ್ಕೆ ಪತ್ನಿ ಜೊತೆ ಬಂದಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್​ಗೆ ಗ್ರಾಮದ ಕಬ್ಬು ಬೆಳೆಗಾರರು ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ತಳ್ಳಾಟ ನೂಕಾಟ ಉಂಟಾಯಿತು. ಹೀಗಾಗಿ ಪೊಲೀಸರ ರಕ್ಷಣೆಯೊಂದಿಗೆ ಕಾರಿನಲ್ಲಿ ತೆರಳುವಂತಹ ಪರಿಸ್ಥಿತಿ ಅಧ್ಯಕ್ಷ ಗಂಗಾಧರ್ ಎದುರಾಯಿತು.

ಇದನ್ನೂ ಓದಿ: ಕೃಷಿ ಪಂಪ್ ಸೆಟ್​ಗೆ ಆಧಾರ್ ಜೋಡಣೆ ಕೈಬಿಡಿ: ಸಿಎಂಗೆ ರೈತ ಒಕ್ಕೂಟಗಳ ಮನವಿ - Aadhar Agri Pump Set Link

Last Updated : Sep 10, 2024, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.