ETV Bharat / state

'ಅಮ್ಮನಿಂದ ನಿತ್ಯ ಹಲ್ಲೆ': ಅಕ್ಕಪಕ್ಕದ ಮನೆಯವರಲ್ಲಿ ಪುಟ್ಟ ಕಂದನ ಅಳಲು

ತಾಯಿಯಿಂದ ಮಗುವಿನ ಮೇಲೆ ನಿತ್ಯ ಹಲ್ಲೆ ಆರೋಪ ಕೇಳಿಬಂದಿದೆ. ಅಕ್ಕಪಕ್ಕದ ಮನೆಯವರ ಬಳಿ ಪುಟ್ಟ ಕಂದ ತನ್ನ ನೋವು ತೋಡಿಕೊಂಡಿದೆ.

author img

By ETV Bharat Karnataka Team

Published : Mar 3, 2024, 2:23 PM IST

Updated : Mar 3, 2024, 3:00 PM IST

assault by mother on child  Bengaluru  ತಾಯಿಯಿಂದ ಮಗುವಿನ ಮೇಲೆ ನಿತ್ಯ ಹಲ್ಲೆ  ಬೆಂಗಳೂರು
ತಾಯಿಯಿಂದ ಮಗುವಿನ ಮೇಲೆ ನಿತ್ಯ ಹಲ್ಲೆ ಆರೋಪ

ಬೆಂಗಳೂರು: ಪ್ರಪಂಚದಲ್ಲಿ ತಾಯಿಗಿಂತ ಬೇರೆ ದೇವರಿಲ್ಲ. ತಾಯಿ ಮಡಿಲು ಸ್ವರ್ಗಕ್ಕೆ ಸಮಾನ ಅಂತಾರೆ. ಆದರೆ ಇಲ್ಲೊಂದೆಡೆ ಮಗುವಿಗೆ ತಾಯಿಯ ಮಡಿಲೇ ನರಕಸದೃಶವಾಗಿದೆ. ಸ್ನೇಹಿತನ ಜೊತೆ ಸೇರಿ ಹೆತ್ತ ಮಗುವಿಗೆ ಕಿರುಕುಳ ನೀಡುತ್ತಿದ್ದ ನಿಷ್ಕರುಣಿ ತಾಯಿಗೆ ಸ್ಥಳೀಯರೇ ತರಾಟೆಗೆ ತೆಗೆದುಕೊಂಡಿರುವ ಘಟನೆ ಗಿರಿನಗರದ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ. ವಾರದ ಹಿಂದೆ ನಡೆದಿರುವ ಘಟನೆ ಎನ್ನಲಾಗಿದ್ದು, ಪುಟ್ಟ ಮಗುವಿನ ದಯನೀಯ ಸ್ಥಿತಿ ಮನಕಲಕುವಂತಿದೆ.

ಪತಿಯಿಂದ ಅಂತರ ಕಾಪಾಡಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆಯ ವಿರುದ್ಧ, ಅಂದಾಜು 2-3 ವರ್ಷ ವಯಸ್ಸಿನ ಗಂಡು ಮಗುವಿಗೆ ನಿತ್ಯ ದೈಹಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಮಗುವಿದ್ದರೂ ಸಹ ಬಹುತೇಕ ಮನೆಯಿಂದ ಹೊರಗಡೆಯೇ ಸಮಯ ಕಳೆಯುತ್ತಿದ್ದ ಆಕೆಯ ಕುರಿತು ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ಮಗುವಿನ ಅಸಹಾಯಕ ಸ್ಥಿತಿ ಕಂಡುಬಂದಿದೆ.

ತಾಯಿ ಹಾಗೂ ಆಕೆಯ ಸ್ನೇಹಿತ ನೀಡುವ ಕಿರುಕುಳವನ್ನು ಅಕ್ಕಪಕ್ಕದವರ ಬಳಿ ಆ ಪುಟ್ಟ ಕಂದ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಸಿಟ್ಟಿಗೆದ್ದ ಜನರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಆಕೆ, ತನಗೆ ಇತ್ತೀಚೆಗೆ ಕೆಲಸ ಸಿಕ್ಕಿದೆ. ಮಗುವಿನ ಮೇಲೆ ನಾನು ಹಲ್ಲೆ ಮಾಡಿಲ್ಲ. ಅದು ಬಿದ್ದು ಗಾಯ ಮಾಡಿಕೊಂಡಿದೆ ಎಂದು ಹೇಳಿದ್ದಾಳೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಮಹಿಳೆಯನ್ನು ಠಾಣೆಗೆ ಕರೆಸಿ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿರುವ ಮಕ್ಕಳ ಆಯೋಗ ತನಿಖೆ ನಡೆಸುತ್ತಿದೆ ಎಂದು ತಿಳಿದು‌ಬಂದಿದೆ.

ಇದನ್ನೂ ಓದಿ: ಐಟಿ ದಾಳಿ: ತಂಬಾಕು ಉದ್ಯಮಿ ಮನೆಯಲ್ಲಿ ₹60 ಕೋಟಿ ಮೌಲ್ಯದ ಕಾರು, ನಗದು ಪತ್ತೆ

ಬೆಂಗಳೂರು: ಪ್ರಪಂಚದಲ್ಲಿ ತಾಯಿಗಿಂತ ಬೇರೆ ದೇವರಿಲ್ಲ. ತಾಯಿ ಮಡಿಲು ಸ್ವರ್ಗಕ್ಕೆ ಸಮಾನ ಅಂತಾರೆ. ಆದರೆ ಇಲ್ಲೊಂದೆಡೆ ಮಗುವಿಗೆ ತಾಯಿಯ ಮಡಿಲೇ ನರಕಸದೃಶವಾಗಿದೆ. ಸ್ನೇಹಿತನ ಜೊತೆ ಸೇರಿ ಹೆತ್ತ ಮಗುವಿಗೆ ಕಿರುಕುಳ ನೀಡುತ್ತಿದ್ದ ನಿಷ್ಕರುಣಿ ತಾಯಿಗೆ ಸ್ಥಳೀಯರೇ ತರಾಟೆಗೆ ತೆಗೆದುಕೊಂಡಿರುವ ಘಟನೆ ಗಿರಿನಗರದ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ. ವಾರದ ಹಿಂದೆ ನಡೆದಿರುವ ಘಟನೆ ಎನ್ನಲಾಗಿದ್ದು, ಪುಟ್ಟ ಮಗುವಿನ ದಯನೀಯ ಸ್ಥಿತಿ ಮನಕಲಕುವಂತಿದೆ.

ಪತಿಯಿಂದ ಅಂತರ ಕಾಪಾಡಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆಯ ವಿರುದ್ಧ, ಅಂದಾಜು 2-3 ವರ್ಷ ವಯಸ್ಸಿನ ಗಂಡು ಮಗುವಿಗೆ ನಿತ್ಯ ದೈಹಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಮಗುವಿದ್ದರೂ ಸಹ ಬಹುತೇಕ ಮನೆಯಿಂದ ಹೊರಗಡೆಯೇ ಸಮಯ ಕಳೆಯುತ್ತಿದ್ದ ಆಕೆಯ ಕುರಿತು ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ಮಗುವಿನ ಅಸಹಾಯಕ ಸ್ಥಿತಿ ಕಂಡುಬಂದಿದೆ.

ತಾಯಿ ಹಾಗೂ ಆಕೆಯ ಸ್ನೇಹಿತ ನೀಡುವ ಕಿರುಕುಳವನ್ನು ಅಕ್ಕಪಕ್ಕದವರ ಬಳಿ ಆ ಪುಟ್ಟ ಕಂದ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಸಿಟ್ಟಿಗೆದ್ದ ಜನರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಆಕೆ, ತನಗೆ ಇತ್ತೀಚೆಗೆ ಕೆಲಸ ಸಿಕ್ಕಿದೆ. ಮಗುವಿನ ಮೇಲೆ ನಾನು ಹಲ್ಲೆ ಮಾಡಿಲ್ಲ. ಅದು ಬಿದ್ದು ಗಾಯ ಮಾಡಿಕೊಂಡಿದೆ ಎಂದು ಹೇಳಿದ್ದಾಳೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಮಹಿಳೆಯನ್ನು ಠಾಣೆಗೆ ಕರೆಸಿ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿರುವ ಮಕ್ಕಳ ಆಯೋಗ ತನಿಖೆ ನಡೆಸುತ್ತಿದೆ ಎಂದು ತಿಳಿದು‌ಬಂದಿದೆ.

ಇದನ್ನೂ ಓದಿ: ಐಟಿ ದಾಳಿ: ತಂಬಾಕು ಉದ್ಯಮಿ ಮನೆಯಲ್ಲಿ ₹60 ಕೋಟಿ ಮೌಲ್ಯದ ಕಾರು, ನಗದು ಪತ್ತೆ

Last Updated : Mar 3, 2024, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.