ETV Bharat / state

ಹೊನ್ನಾವರ: ಸ್ಕೂಟಿಗೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್; ತಾಯಿ- ಮಗಳು ಸಾವು

author img

By ETV Bharat Karnataka Team

Published : Mar 1, 2024, 7:08 AM IST

ಬಸ್​ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ತಾಯಿ - ಮಗಳು ಅಸುನೀಗಿದ್ದಾರೆ.

KSRTC bus hit the scooty
ಸ್ಕೂಟಿಗೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್

ಕಾರವಾರ: ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ತಾಯಿ ಮಗಳಿಗೆ ಕೆಎಸ್​ಆರ್​ಟಿಸಿ ಬಸ್ ಹಿಂದಿನಿಂದ ಗುದ್ದಿದ ಪರಿಣಾಮ ಇಬ್ಬರೂ ಮೃತಪಟ್ಟ ಹೃದಯವಿದ್ರಾಹಕ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಸಾರಸ್ವತ ಕೇರಿಯ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದೆ. ಮೃತರನ್ನು ಸವಿತಾ ರಾಜು ಆಚಾರಿ (44) ಹಾಗೂ ಮಗಳು ಅಂಕಿತಾ ರಾಜು ಆಚಾರಿ (18) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಳಗಾವಿಗೆ ಹೊರಟ ಕೆಎಸ್​ಆರ್​ಟಿಸಿ ಬಸ್ ಹಾಗೂ ಸ್ಕೂಟಿ ನಡುವೆ ಈ ಅಪಘಾತ ನಡೆದಿದೆ.

ಮುರುಡೇಶ್ವರದಿಂದ ಮಂಕಿಯ ತಾಯಿ ಮನೆಗೆ ಮಗಳೊಂದಿಗೆ ಬಂದಿದ್ದ ಸವಿತಾ ವಾಪಸ್​ ಮನೆಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಘಟನೆ ನಡೆದ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾದೆ ತಾಯಿ- ಮಗಳು ಮೃತಪಟ್ಟಿದ್ದಾರೆ. ಬಸ್​ ಚಾಲಕ ಬೆಳಗಾವಿ ಜಿಲ್ಲೆಯ ಚೊಳಕಿಯ ಫಕೀರಪ್ಪ ಬೀರಪ್ಪ ಅರಗೊಡು ವಿರುದ್ಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್​ಐ ಶ್ರೀಕಾಂತ್ ರಾಥೋಡ್ ತನಿಖೆ ಕೈಗೊಂಡಿದ್ದಾರೆ.

"ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯಾಗಿ ವಿಸ್ತರಿಸುವಾಗ ಹೆದ್ದಾರಿ ಗುತ್ತಿಗೆ ಕಂಪನಿಯು ಜನರ ಜೀವನದ ಕುರಿತು ಕಾಳಜಿ ವಹಿಸದೆ ರಸ್ತೆ ಮಾಡಿದೆ. ಅವಶ್ಯಕವಿದ್ದಲ್ಲಿ ಸೇತುವೆ, ಫುಟ್​ಪಾತ್ ಹಾಗೂ ಅಂಡರ್​ ಕ್ರಾಸ್ ನಿರ್ಮಿಸದೆ ಸರಿಯಾಗಿ ಸೂಚನಾ ಫಲಕ ಅಳವಡಿಸದೇ ಇರುವುದರಿಂದ ಇಂತಹ ಅಪಘಾತಗಳು ಇಲ್ಲಿ ನಿತ್ಯವೂ ಸಂಭವಿಸುತ್ತಿದೆ. ಆದ್ದರಿಂದ, ಸೂಕ್ಷ್ಮ ಪ್ರದೇಶದಲ್ಲಿ ರಸ್ತೆಯನ್ನು ವೈಜ್ಞಾನಿಕವಾಗಿ ತಿದ್ದಬೇಕು" ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಿಕಪ್ ವಾಹನ ಪಲ್ಟಿ: ಸೀಮಂತ ಕಾರ್ಯ ಮುಗಿಸಿ ಬರುತ್ತಿದ್ದ 14 ಜನರು ಸಾವು

ಕಾರವಾರ: ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ತಾಯಿ ಮಗಳಿಗೆ ಕೆಎಸ್​ಆರ್​ಟಿಸಿ ಬಸ್ ಹಿಂದಿನಿಂದ ಗುದ್ದಿದ ಪರಿಣಾಮ ಇಬ್ಬರೂ ಮೃತಪಟ್ಟ ಹೃದಯವಿದ್ರಾಹಕ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಸಾರಸ್ವತ ಕೇರಿಯ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದೆ. ಮೃತರನ್ನು ಸವಿತಾ ರಾಜು ಆಚಾರಿ (44) ಹಾಗೂ ಮಗಳು ಅಂಕಿತಾ ರಾಜು ಆಚಾರಿ (18) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಳಗಾವಿಗೆ ಹೊರಟ ಕೆಎಸ್​ಆರ್​ಟಿಸಿ ಬಸ್ ಹಾಗೂ ಸ್ಕೂಟಿ ನಡುವೆ ಈ ಅಪಘಾತ ನಡೆದಿದೆ.

ಮುರುಡೇಶ್ವರದಿಂದ ಮಂಕಿಯ ತಾಯಿ ಮನೆಗೆ ಮಗಳೊಂದಿಗೆ ಬಂದಿದ್ದ ಸವಿತಾ ವಾಪಸ್​ ಮನೆಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಘಟನೆ ನಡೆದ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾದೆ ತಾಯಿ- ಮಗಳು ಮೃತಪಟ್ಟಿದ್ದಾರೆ. ಬಸ್​ ಚಾಲಕ ಬೆಳಗಾವಿ ಜಿಲ್ಲೆಯ ಚೊಳಕಿಯ ಫಕೀರಪ್ಪ ಬೀರಪ್ಪ ಅರಗೊಡು ವಿರುದ್ಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್​ಐ ಶ್ರೀಕಾಂತ್ ರಾಥೋಡ್ ತನಿಖೆ ಕೈಗೊಂಡಿದ್ದಾರೆ.

"ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯಾಗಿ ವಿಸ್ತರಿಸುವಾಗ ಹೆದ್ದಾರಿ ಗುತ್ತಿಗೆ ಕಂಪನಿಯು ಜನರ ಜೀವನದ ಕುರಿತು ಕಾಳಜಿ ವಹಿಸದೆ ರಸ್ತೆ ಮಾಡಿದೆ. ಅವಶ್ಯಕವಿದ್ದಲ್ಲಿ ಸೇತುವೆ, ಫುಟ್​ಪಾತ್ ಹಾಗೂ ಅಂಡರ್​ ಕ್ರಾಸ್ ನಿರ್ಮಿಸದೆ ಸರಿಯಾಗಿ ಸೂಚನಾ ಫಲಕ ಅಳವಡಿಸದೇ ಇರುವುದರಿಂದ ಇಂತಹ ಅಪಘಾತಗಳು ಇಲ್ಲಿ ನಿತ್ಯವೂ ಸಂಭವಿಸುತ್ತಿದೆ. ಆದ್ದರಿಂದ, ಸೂಕ್ಷ್ಮ ಪ್ರದೇಶದಲ್ಲಿ ರಸ್ತೆಯನ್ನು ವೈಜ್ಞಾನಿಕವಾಗಿ ತಿದ್ದಬೇಕು" ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಿಕಪ್ ವಾಹನ ಪಲ್ಟಿ: ಸೀಮಂತ ಕಾರ್ಯ ಮುಗಿಸಿ ಬರುತ್ತಿದ್ದ 14 ಜನರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.