ETV Bharat / state

ಶೆಡ್​ಗೆ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು: ತಾಯಿ - ಮಗಳು ಸಜೀವ ದಹನ - Fire Incident

author img

By ETV Bharat Karnataka Team

Published : Jul 16, 2024, 11:48 AM IST

Updated : Jul 16, 2024, 12:40 PM IST

ಬಾಗಲಕೋಟೆ ಜಿಲ್ಲೆಯ ಬೆಳಗಲಿ ಗ್ರಾಮದಲ್ಲಿ ಬೆಂಕಿಯಿಂದ ತಾಯಿ - ಮಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ.

FIRE INCIDENT
ಸುಟ್ಟು ಕರಕಲಾದ ಗುಡಿಸಲು (ETV Bharat)

ಬಾಗಲಕೋಟೆ: ಸಿಂಟೆಕ್ಸ್​​ನಲ್ಲಿ ಪೆಟ್ರೋಲ್ ಹಾಕಿ ಬಳಿಕ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ - ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ‌ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ. ಜೈಬಾನ ಪೆಂಡಾರಿ (60) ಮತ್ತು ಶಬಾನ ಪೆಂಡಾರಿ (20) ಸಜೀವ ದಹನಗೊಂಡ ತಾಯಿ - ಮಗಳು.

Mother and Daughter Burnt Alive In Bagalkote
ಪರಿಶೀಲನೆಯಲ್ಲಿ ಪೊಲೀಸ್​ ಸಿಬ್ಬಂದಿ (ETV Bharat)

ಅವಘಡದಲ್ಲಿ ಸಿದ್ದಿಕ್ಕಿ ಎಂಬಾತ ಬಚಾವಾಗಿದ್ದು, ದಸ್ತಗಿರಿಸಾಬ್ ಪೆಂಡಾರಿ ಎಂಬಾತ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ವೇಳೆ‌ ದಸ್ತಗಿರಸಾಬ್​ ಪೆಂಡಾರಿ ಅವರ ಕುಟುಂಬಸ್ಥರು ತೋಟದ ಶೆಡ್​​ನಲ್ಲಿ ಮಲಗಿದ್ದಾಗ ಯಾರೋ ದುಷ್ಕರ್ಮಿಗಳು ಸಿಂಟೆಕ್ಸ್​​ನಲ್ಲಿ‌ ಪೆಟ್ರೋಲ್‌ ತುಂಬಿ ಅದನ್ನು ಎರಡು ಹೆಚ್​​ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ‌ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲನ್ನು ಲಾಕ್ ಮಾಡಿದ್ದಾರೆ.

Mother and Daughter Burnt Alive In Bagalkote
ಸುಟ್ಟು ಕರಕಲಾದ ಗುಡಿಸಲು (ETV Bharat)

ಪೆಟ್ರೋಲ್ ವಾಸನೆ ಬರುತ್ತಿದ್ದಂತೆ ಸಿದ್ದಿಕ್ಕಿ ಹೊರ ಬಂದು ಪ್ರಾಣಾಪಾಯದಿಂದ ಬಚಾವ್ ಆದರೆ, ತಾಯಿ - ಮಗಳು ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ‌ ಪರಿಶೀಲಿಸಿದ್ದಾರೆ. ಎಸ್ಪಿ ಅಮರಮಾಥರೆಡ್ಡಿ ಭೇಟಿ‌ ನೀಡಿ ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನೆರವು ಪಡೆದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ, 8ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ - Fire Accident

ಬಾಗಲಕೋಟೆ: ಸಿಂಟೆಕ್ಸ್​​ನಲ್ಲಿ ಪೆಟ್ರೋಲ್ ಹಾಕಿ ಬಳಿಕ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ - ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ‌ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ. ಜೈಬಾನ ಪೆಂಡಾರಿ (60) ಮತ್ತು ಶಬಾನ ಪೆಂಡಾರಿ (20) ಸಜೀವ ದಹನಗೊಂಡ ತಾಯಿ - ಮಗಳು.

Mother and Daughter Burnt Alive In Bagalkote
ಪರಿಶೀಲನೆಯಲ್ಲಿ ಪೊಲೀಸ್​ ಸಿಬ್ಬಂದಿ (ETV Bharat)

ಅವಘಡದಲ್ಲಿ ಸಿದ್ದಿಕ್ಕಿ ಎಂಬಾತ ಬಚಾವಾಗಿದ್ದು, ದಸ್ತಗಿರಿಸಾಬ್ ಪೆಂಡಾರಿ ಎಂಬಾತ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ವೇಳೆ‌ ದಸ್ತಗಿರಸಾಬ್​ ಪೆಂಡಾರಿ ಅವರ ಕುಟುಂಬಸ್ಥರು ತೋಟದ ಶೆಡ್​​ನಲ್ಲಿ ಮಲಗಿದ್ದಾಗ ಯಾರೋ ದುಷ್ಕರ್ಮಿಗಳು ಸಿಂಟೆಕ್ಸ್​​ನಲ್ಲಿ‌ ಪೆಟ್ರೋಲ್‌ ತುಂಬಿ ಅದನ್ನು ಎರಡು ಹೆಚ್​​ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ‌ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲನ್ನು ಲಾಕ್ ಮಾಡಿದ್ದಾರೆ.

Mother and Daughter Burnt Alive In Bagalkote
ಸುಟ್ಟು ಕರಕಲಾದ ಗುಡಿಸಲು (ETV Bharat)

ಪೆಟ್ರೋಲ್ ವಾಸನೆ ಬರುತ್ತಿದ್ದಂತೆ ಸಿದ್ದಿಕ್ಕಿ ಹೊರ ಬಂದು ಪ್ರಾಣಾಪಾಯದಿಂದ ಬಚಾವ್ ಆದರೆ, ತಾಯಿ - ಮಗಳು ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ‌ ಪರಿಶೀಲಿಸಿದ್ದಾರೆ. ಎಸ್ಪಿ ಅಮರಮಾಥರೆಡ್ಡಿ ಭೇಟಿ‌ ನೀಡಿ ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನೆರವು ಪಡೆದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ, 8ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ - Fire Accident

Last Updated : Jul 16, 2024, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.