ETV Bharat / state

ED ವಿಚಾರಣೆ ಮುಗಿಸಿ ತೆರಳಿದ ಬಸನಗೌಡ ದದ್ದಲ್; ನಾಳೆ ಮತ್ತೆ ಹಾಜರಾಗಲು ಸೂಚನೆ - MLA Basanagowda Daddal

author img

By ETV Bharat Karnataka Team

Published : Jul 18, 2024, 10:33 PM IST

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಇಡಿ ಅಧಿಕಾರಿಗಳ ವಿಚಾರಣೆ ಮುಗಿಸಿ, ವಾಪಸ್​​ ಮರಳಿದ್ದಾರೆ.

basanagowda daddal
ಶಾಸಕ ಬಸನಗೌಡ ದದ್ದಲ್ (ETV Bharat)

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ಮುಗಿಸಿ ನಿಗಮದ ಅಧ್ಯಕ್ಷ, ರಾಯಚೂರು ಶಾಸಕ ಬಸನಗೌಡ ದದ್ದಲ್ ವಾಪಸ್​ ಆಗಿದ್ದಾರೆ.

ಸುಮಾರು 7 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ದದ್ದಲ್, ''ಇ.ಡಿ ಅಧಿಕಾರಿಗಳ ನೋಟಿಸ್​​​ಗೆ ಪ್ರತಿಯಾಗಿ ಹಾಜರಾಗಿ ಹೇಳಿಕೆ ದಾಖಲಿಸಿದ್ದೇನೆ. ನಾಳೆ ಪುನಃ ವಿಚಾರಣೆಗೆ ಕರೆದಿದ್ದಾರೆ, ಬರುತ್ತೇನೆ'' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಪ್ರಕರಣ: ED ಎದುರು ವಿಚಾರಣೆಗೆ ಹಾಜರಾದ ಬಸನಗೌಡ ದದ್ದಲ್ - Valmiki Corporation Scam

ಮೂರು ಬಾರಿ ಇ.ಡಿ ನೋಟಿಸ್‌ ನೀಡಿದ್ದರೂ ಬಸನಗೌಡ ದದ್ದಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಬಂಧನದ ಬಳಿಕ ಸಂಪರ್ಕಕ್ಕೆ ಸಿಗದೇ ಉಳಿದಿದ್ದಾರೆ ಎಂದು ಸುದ್ದಿಯಾಗಿತ್ತು. ಬಸನಗೌಡ ದದ್ದಲ್ ಗುರುವಾರ ಮಧ್ಯಾಹ್ನ ಬೆಂಗಳೂರಿನ ಶಾಂತಿನಗರದ ಇ.ಡಿ ಕಚೇರಿಗೆ ಹಾಜರಾಗಿದ್ದರು.

ಪ್ರಕರಣದಲ್ಲಿ ಬಸನಗೌಡ ದದ್ದಲ್ ನಿವಾಸದಲ್ಲಿ ಶೋಧ ನಡೆಸಿದ್ದ ಇ.ಡಿ ಅಧಿಕಾರಿಗಳು ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ನೋಟಿಸ್​ ನೀಡಲಾಗಿತ್ತು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಮಾಜಿ ಸಚಿವ ಬಿ ನಾಗೇಂದ್ರ ಇಡಿ ಕಸ್ಟಡಿ ಮುಂದುವರಿಕೆ - B Nagendra ED custody continued

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ಮುಗಿಸಿ ನಿಗಮದ ಅಧ್ಯಕ್ಷ, ರಾಯಚೂರು ಶಾಸಕ ಬಸನಗೌಡ ದದ್ದಲ್ ವಾಪಸ್​ ಆಗಿದ್ದಾರೆ.

ಸುಮಾರು 7 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ದದ್ದಲ್, ''ಇ.ಡಿ ಅಧಿಕಾರಿಗಳ ನೋಟಿಸ್​​​ಗೆ ಪ್ರತಿಯಾಗಿ ಹಾಜರಾಗಿ ಹೇಳಿಕೆ ದಾಖಲಿಸಿದ್ದೇನೆ. ನಾಳೆ ಪುನಃ ವಿಚಾರಣೆಗೆ ಕರೆದಿದ್ದಾರೆ, ಬರುತ್ತೇನೆ'' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಪ್ರಕರಣ: ED ಎದುರು ವಿಚಾರಣೆಗೆ ಹಾಜರಾದ ಬಸನಗೌಡ ದದ್ದಲ್ - Valmiki Corporation Scam

ಮೂರು ಬಾರಿ ಇ.ಡಿ ನೋಟಿಸ್‌ ನೀಡಿದ್ದರೂ ಬಸನಗೌಡ ದದ್ದಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಬಂಧನದ ಬಳಿಕ ಸಂಪರ್ಕಕ್ಕೆ ಸಿಗದೇ ಉಳಿದಿದ್ದಾರೆ ಎಂದು ಸುದ್ದಿಯಾಗಿತ್ತು. ಬಸನಗೌಡ ದದ್ದಲ್ ಗುರುವಾರ ಮಧ್ಯಾಹ್ನ ಬೆಂಗಳೂರಿನ ಶಾಂತಿನಗರದ ಇ.ಡಿ ಕಚೇರಿಗೆ ಹಾಜರಾಗಿದ್ದರು.

ಪ್ರಕರಣದಲ್ಲಿ ಬಸನಗೌಡ ದದ್ದಲ್ ನಿವಾಸದಲ್ಲಿ ಶೋಧ ನಡೆಸಿದ್ದ ಇ.ಡಿ ಅಧಿಕಾರಿಗಳು ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ನೋಟಿಸ್​ ನೀಡಲಾಗಿತ್ತು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಮಾಜಿ ಸಚಿವ ಬಿ ನಾಗೇಂದ್ರ ಇಡಿ ಕಸ್ಟಡಿ ಮುಂದುವರಿಕೆ - B Nagendra ED custody continued

ETV Bharat Logo

Copyright © 2024 Ushodaya Enterprises Pvt. Ltd., All Rights Reserved.