ETV Bharat / state

ವಕ್ಫ್ ಆಸ್ತಿ ಸರಿಯಾಗಿ ಬಳಕೆ ಮಾಡಿಕೊಂಡರೆ ಸರ್ಕಾರದ ಅನುದಾನವೇ ಬೇಕಾಗಿಲ್ಲ: ಜಮೀರ್ ಅಹ್ಮದ್ - waqf board

author img

By ETV Bharat Karnataka Team

Published : Sep 3, 2024, 10:52 PM IST

Updated : Sep 3, 2024, 10:57 PM IST

ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ವಕ್ಫ್ ಬೋರ್ಡ್‍ಗೆ ಸರ್ಕಾರದ ಅನುದಾನವೇ ಬೇಕಾಗಿಲ್ಲ. ಸರ್ಕಾರಕ್ಕೆ ವಕ್ಫ್ ಬೋರ್ಡ್‍ನಿಂದಲೇ ಹಣ ಕೊಡಬಹುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಸಚಿವ ಜಮೀರ್ ಅಹ್ಮದ್
ಸಚಿವ ಜಮೀರ್ ಅಹ್ಮದ್ (ETV Bharat)
ಜಮೀರ್ ಅಹ್ಮದ್ (ETV Bharat)

ಹಾವೇರಿ: ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ವಕ್ಫ್ ಬೋರ್ಡ್‍ಗೆ ಸರ್ಕಾರದ ಅನುದಾನವೇ ಬೇಕಾಗಿಲ್ಲ. ಸರ್ಕಾರಕ್ಕೆ ವಕ್ಫ್ ಬೋರ್ಡ್‍ನಿಂದಲೇ ಹಣ ಕೊಡಬಹುದು. ಅಷ್ಟು ಆಸ್ತಿ ಇದೆ. ವಕ್ಫ್ ಬೋರ್ಡ್ ಆಸ್ತಿ ಅಲ್ಲಾನ ಆಸ್ತಿ. ಇದರಲ್ಲಿ ಮೋಸ ಬೇಡ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

ನಗರದಲ್ಲಿ ನಡೆದ ವಕ್ಫ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯದ ಜನರು ತೆಲೆ ಎತ್ತಿ ಮೆರೆಯೋ ಹಾಗೇ ಆಗಬೇಕು. ತಲೆ ತಗ್ಗಿಸಿ ನಡೆದುಕೊಳ್ಳುವ ಹಾಗೇ ಯಾರು ಕೆಲಸ ಮಾಡಬೇಡಿ. ನಾನು ನಿಮಗಾಗಿ ದುಡಿಯುತ್ತೇನೆ. ನಾವು ಮರಣ ಹೊಂದಿದಾಗ ಏನೂ ತೆಗೆದುಕೊಂಡು ಹೋಗಲು‌ ಸಾಧ್ಯವಿಲ್ಲ. ನನ್ನ ಕೈಯಲ್ಲಿ ಬೆಲೆ ಬಾಳುವ ಡೈಮಂಡ್ ಉಂಗುರ ಇದೆ. ಇದು ನನ್ನ ನೆಚ್ಚಿನ ಉಂಗುರ ಇದನ್ನು ನಾನು ಇಷ್ಟಪಟ್ಟು ತೊಗೊಂಡೆ. ನಾಳೆ ನಾನು ಸತ್ತಾಗ ತೆಗೆದುಕೊಂಡು ಹೋಗುತ್ತೇನಾ?. ಇದು ನನ್ನ ಪರಿವಾರದ ಸದಸ್ಯರು ನನ್ನ ನೆನಪಿಗಾಗಿ ತೆಗೆದು ಇಟ್ಟುಕೊಳ್ಳುತ್ತಾರೆ ಎಂದರು.

ಮತ್ತೊಂದೆಡೆ, ಸಿಎಂ ಆಗುವ ಆಸೆ ನಿಮಗೆ ಇಲ್ವಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಚಿವ ಜಮೀರ್ ಅಹ್ಮದ್, ಸಿಎಂ ಆಗುವ ಆಸೆ ಎಲ್ಲರಿಗೂ ಇರುತ್ತೆ. ನಮ್ಮಲ್ಲಿ ಕುರ್ಚಿ ಖಾಲಿ ಇಲ್ಲ. ಕುರ್ಚಿಯಲ್ಲಿ ನಮ್ಮ ಟಗರು ಕುಳಿತುಕೊಂಡಿದೆ. ಟಗರನ್ನು ಕುರ್ಚಿಯಿಂದ ಇಳಿಸುವುದು ಬಹಳ ಕಷ್ಟ. ಟಗರು‌ ಕೊಂಬು ಮುರಿಯೋದು ಸಾಧ್ಯವೇ ಇಲ್ಲ. ಟಗರು ಟಗರೇ ಅದು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು.

ಒಂದು ಮನೆ ಕೊಟ್ಟಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ: ಬಿಜೆಪಿಯವರು ಸಾಧನೆ ತೋರಿಸಿ ಅಧಿಕಾರಕ್ಕೆ ಬಂದೇ ಇಲ್ಲ. ಅವರು ಜನರನ್ನು ಯಾಮಾರಿಸುತ್ತಾರೆ. ಅವರಿಗೆ ಬೇಕಾಗಿರೋದು ಕುರ್ಚಿ ಅಷ್ಟೆ. ನಾನು ಬಿಜೆಪಿಯವರಿಗೆ ಸವಾಲು ಹಾಕುತ್ತಿದ್ದೇನೆ. ಸ್ಲಂ ಬೋರ್ಡ್​ನಲ್ಲಿ ರಾಜೀವ್ ಗಾಂಧಿ ಯೋಜನೆಯಡಿ ಒಂದು ಮನೆ ಕೊಟ್ಟಿದ್ದರೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.

ಒಂದು ಮನೆ ಕಟ್ಟಲು ಏಳೂವರೆ ಲಕ್ಷ ಬೇಕು. ಕೇಂದ್ರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಒಂದುವರೆ ಲಕ್ಷ ಕೊಡ್ತಾರೆ. ಬಡವರಿಗೆ ಜಿಎಸ್​ಟಿ ಹಾಕಿ ಹಿಂದಿನಿಂದ 1 ಲಕ್ಷ 35 ಸಾವಿರ ಕಿತ್ತುಕೊಳ್ಳುತ್ತಾರೆ ಎಂದು ದೂರಿದರು.

ಶಿಗ್ಗಾಂವಿ ಉಪಚುನಾವಣೆ ಟಿಕೆಟ್​ ವಿಚಾರವಾಗಿ ಮಾತನಾಡಿ, ಶಿಗ್ಗಾಂವಿ ಬೈ ಎಲೆಕ್ಷನ್ ಟಿಕೆಟ್​ ಮುಸಲ್ಮಾನರಿಗೆ ಕೊಡಿ ಎಂದು ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದೇವೆ. ಮುಂಚೆಯಿಂದಲೂ ಮುಸಲ್ಮಾನರಿಗೆ ಟಿಕೆಟ್​ ಕೊಡುತ್ತಾ ಬರಲಾಗಿದೆ. ಈ ಬಾರಿಯೂ ಮುಸಲ್ಮಾನರಿಗೆ ಟಿಕೆಟ್​ ಕೊಡಿ ಎಂದಿದ್ದೇವೆ. ಕಾಂಗ್ರೆಸ್​ ಪಕ್ಷದಿಂದ ಐದು ಬಾರಿ ಈಗಾಗಲೇ ಮುಸಲ್ಮಾನರಿಗೆ ಕೊಟ್ಟಿದ್ದೇವೆ. ಟಿಕೆಟ್​ ಕೊಡುವ ತೀರ್ಮಾನ ಹೈಕಮಾಂಡ್ ಮಾಡುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಚೇರ್ ಖಾಲಿ ಇಲ್ಲ, ಕಾಂಗ್ರೆಸ್​ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - Minister Lakshmi Hebbalkar

ಜಮೀರ್ ಅಹ್ಮದ್ (ETV Bharat)

ಹಾವೇರಿ: ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ವಕ್ಫ್ ಬೋರ್ಡ್‍ಗೆ ಸರ್ಕಾರದ ಅನುದಾನವೇ ಬೇಕಾಗಿಲ್ಲ. ಸರ್ಕಾರಕ್ಕೆ ವಕ್ಫ್ ಬೋರ್ಡ್‍ನಿಂದಲೇ ಹಣ ಕೊಡಬಹುದು. ಅಷ್ಟು ಆಸ್ತಿ ಇದೆ. ವಕ್ಫ್ ಬೋರ್ಡ್ ಆಸ್ತಿ ಅಲ್ಲಾನ ಆಸ್ತಿ. ಇದರಲ್ಲಿ ಮೋಸ ಬೇಡ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

ನಗರದಲ್ಲಿ ನಡೆದ ವಕ್ಫ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯದ ಜನರು ತೆಲೆ ಎತ್ತಿ ಮೆರೆಯೋ ಹಾಗೇ ಆಗಬೇಕು. ತಲೆ ತಗ್ಗಿಸಿ ನಡೆದುಕೊಳ್ಳುವ ಹಾಗೇ ಯಾರು ಕೆಲಸ ಮಾಡಬೇಡಿ. ನಾನು ನಿಮಗಾಗಿ ದುಡಿಯುತ್ತೇನೆ. ನಾವು ಮರಣ ಹೊಂದಿದಾಗ ಏನೂ ತೆಗೆದುಕೊಂಡು ಹೋಗಲು‌ ಸಾಧ್ಯವಿಲ್ಲ. ನನ್ನ ಕೈಯಲ್ಲಿ ಬೆಲೆ ಬಾಳುವ ಡೈಮಂಡ್ ಉಂಗುರ ಇದೆ. ಇದು ನನ್ನ ನೆಚ್ಚಿನ ಉಂಗುರ ಇದನ್ನು ನಾನು ಇಷ್ಟಪಟ್ಟು ತೊಗೊಂಡೆ. ನಾಳೆ ನಾನು ಸತ್ತಾಗ ತೆಗೆದುಕೊಂಡು ಹೋಗುತ್ತೇನಾ?. ಇದು ನನ್ನ ಪರಿವಾರದ ಸದಸ್ಯರು ನನ್ನ ನೆನಪಿಗಾಗಿ ತೆಗೆದು ಇಟ್ಟುಕೊಳ್ಳುತ್ತಾರೆ ಎಂದರು.

ಮತ್ತೊಂದೆಡೆ, ಸಿಎಂ ಆಗುವ ಆಸೆ ನಿಮಗೆ ಇಲ್ವಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಚಿವ ಜಮೀರ್ ಅಹ್ಮದ್, ಸಿಎಂ ಆಗುವ ಆಸೆ ಎಲ್ಲರಿಗೂ ಇರುತ್ತೆ. ನಮ್ಮಲ್ಲಿ ಕುರ್ಚಿ ಖಾಲಿ ಇಲ್ಲ. ಕುರ್ಚಿಯಲ್ಲಿ ನಮ್ಮ ಟಗರು ಕುಳಿತುಕೊಂಡಿದೆ. ಟಗರನ್ನು ಕುರ್ಚಿಯಿಂದ ಇಳಿಸುವುದು ಬಹಳ ಕಷ್ಟ. ಟಗರು‌ ಕೊಂಬು ಮುರಿಯೋದು ಸಾಧ್ಯವೇ ಇಲ್ಲ. ಟಗರು ಟಗರೇ ಅದು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು.

ಒಂದು ಮನೆ ಕೊಟ್ಟಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ: ಬಿಜೆಪಿಯವರು ಸಾಧನೆ ತೋರಿಸಿ ಅಧಿಕಾರಕ್ಕೆ ಬಂದೇ ಇಲ್ಲ. ಅವರು ಜನರನ್ನು ಯಾಮಾರಿಸುತ್ತಾರೆ. ಅವರಿಗೆ ಬೇಕಾಗಿರೋದು ಕುರ್ಚಿ ಅಷ್ಟೆ. ನಾನು ಬಿಜೆಪಿಯವರಿಗೆ ಸವಾಲು ಹಾಕುತ್ತಿದ್ದೇನೆ. ಸ್ಲಂ ಬೋರ್ಡ್​ನಲ್ಲಿ ರಾಜೀವ್ ಗಾಂಧಿ ಯೋಜನೆಯಡಿ ಒಂದು ಮನೆ ಕೊಟ್ಟಿದ್ದರೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು.

ಒಂದು ಮನೆ ಕಟ್ಟಲು ಏಳೂವರೆ ಲಕ್ಷ ಬೇಕು. ಕೇಂದ್ರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಒಂದುವರೆ ಲಕ್ಷ ಕೊಡ್ತಾರೆ. ಬಡವರಿಗೆ ಜಿಎಸ್​ಟಿ ಹಾಕಿ ಹಿಂದಿನಿಂದ 1 ಲಕ್ಷ 35 ಸಾವಿರ ಕಿತ್ತುಕೊಳ್ಳುತ್ತಾರೆ ಎಂದು ದೂರಿದರು.

ಶಿಗ್ಗಾಂವಿ ಉಪಚುನಾವಣೆ ಟಿಕೆಟ್​ ವಿಚಾರವಾಗಿ ಮಾತನಾಡಿ, ಶಿಗ್ಗಾಂವಿ ಬೈ ಎಲೆಕ್ಷನ್ ಟಿಕೆಟ್​ ಮುಸಲ್ಮಾನರಿಗೆ ಕೊಡಿ ಎಂದು ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದೇವೆ. ಮುಂಚೆಯಿಂದಲೂ ಮುಸಲ್ಮಾನರಿಗೆ ಟಿಕೆಟ್​ ಕೊಡುತ್ತಾ ಬರಲಾಗಿದೆ. ಈ ಬಾರಿಯೂ ಮುಸಲ್ಮಾನರಿಗೆ ಟಿಕೆಟ್​ ಕೊಡಿ ಎಂದಿದ್ದೇವೆ. ಕಾಂಗ್ರೆಸ್​ ಪಕ್ಷದಿಂದ ಐದು ಬಾರಿ ಈಗಾಗಲೇ ಮುಸಲ್ಮಾನರಿಗೆ ಕೊಟ್ಟಿದ್ದೇವೆ. ಟಿಕೆಟ್​ ಕೊಡುವ ತೀರ್ಮಾನ ಹೈಕಮಾಂಡ್ ಮಾಡುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಚೇರ್ ಖಾಲಿ ಇಲ್ಲ, ಕಾಂಗ್ರೆಸ್​ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - Minister Lakshmi Hebbalkar

Last Updated : Sep 3, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.