ETV Bharat / state

ನಟ ದರ್ಶನ್​ಗೆ ಜೈಲಿನಲ್ಲಿ ಯಾವುದೇ ವಿಶೇಷ ಸತ್ಕಾರ ಕೊಡುತ್ತಿಲ್ಲ : ಸಚಿವ ಜಿ. ಪರಮೇಶ್ವರ್ - Minister G Parameshwar

author img

By ETV Bharat Karnataka Team

Published : Jul 2, 2024, 3:42 PM IST

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಸಹಚರರು ಜೈಲು ಸೇರಿದ್ದಾರೆ. ಜೈಲಿನಲ್ಲಿರುವ ದರ್ಶನ್​ಗೆ ಯಾವುದೇ ವಿಶೇಷ ಸತ್ಕಾರ ನೀಡುತ್ತಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಬಿರಿಯಾನಿ ಅವೆಲ್ಲ ಏನೂ ಕೊಡ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

minister-g-parameshwar
ಸಚಿವ ಜಿ. ಪರಮೇಶ್ವರ್ (ETV Bharat)

ಸಚಿವ ಜಿ. ಪರಮೇಶ್ವರ್ (ETV Bharat)

ಬೆಂಗಳೂರು : ನಟ ದರ್ಶನ್​ಗೆ ಜೈಲಿನಲ್ಲಿ ಯಾವುದೇ ವಿಶೇಷ ಸತ್ಕಾರ ಕೊಡುತ್ತಿಲ್ಲ, ಎಲ್ಲ ಕೈದಿಗಳಿಗಳಂತೆ ಅವರನ್ನು ನೋಡಿಕೊಳ್ಳಲಾಗ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ದರ್ಶನ್​ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕೊಡ್ತಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ಅವತ್ತೇ ಹೇಳಿದ್ದೇನೆ ನಾನು. ಬಿರಿಯಾನಿ ಅವೆಲ್ಲ ಏನೂ ಕೊಡ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡ್ತಿಲ್ಲ. ಬೇಕಾದರೆ ಬನ್ನಿ ನನ್ನ ಜತೆ, ಕರೆದುಕೊಂಡು ಹೋಗಿ ತೋರಿಸ್ತೇನೆ ಎಂದರು.

ಹೊಸ ಕಾನೂನಿನಡಿ 66 ಕೇಸು ದಾಖಲು : ಹೊಸ ಮೂರು ಅಪರಾಧ ಕಾನೂನುಗಳಲ್ಲಿ ಕೆಲವು ಗೊಂದಲಗಳಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಲ್ಲಿ ನಿನ್ನೆ ರಾತ್ರಿ (ಜುಲೈ 1)ವರೆಗೂ ಸುಮಾರು 66 ಹೊಸ ಕೇಸ್​ಗಳು ದಾಖಲಾಗಿವೆ. ಬೆಂಗಳೂರಿನಲ್ಲೂ 20 ಕೇಸ್​ಗಳು ದಾಖಲಾಗಿವೆ. ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ, ಕೆಲವು ಸರಿಯಾಗಿಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ಕೇಸ್‌ಗಳನ್ನು ದಾಖಲು ಮಾಡುವಂಥದ್ದಿತ್ತು. ಈಗ ಹೊಸ ಕಾನೂನುಗಳಲ್ಲಿ ಅವುಗಳನ್ನು ದಾಖಲು ಮಾಡುವ ಹಾಗಿಲ್ಲ. ಹೀಗೆ ಕೆಲವು ಗೊಂದಲಗಳಿವೆ. ಅವುಗಳ ಬಗ್ಗೆ ಚರ್ಚೆ ಮಾಡಿ ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಈ ಹೊಸ ಕಾನೂನುಗಳು ಇಡೀ ದೇಶಕ್ಕೆ ಸಂಬಂಧಪಟ್ಟಿವೆ. ಲಕ್ಷಾಂತರ ಕೇಸ್​ಗಳು ಹೊಸ ಕಾನೂನಿನಡಿ ದಾಖಲಾಗುತ್ತವೆ. ಆದರೆ, ಈ ಹೊಸ ಕಾನೂನುಗಳ ಬಗ್ಗೆ ಚರ್ಚೆ ಆಗಬೇಕಿದೆ. ಕೆಲವು ಉತ್ತಮವಾದ ಅಂಶಗಳಿವೆ, ಎಲ್ಲವನ್ನೂ ತೆಗೆದುಹಾಕಲು ಆಗಲ್ಲ. ಆದರೆ, ಕೆಲವೊಂದು ಅಂಶಗಳಲ್ಲಿ ಕಾನೂನಿನ ಬಳಕೆಗೆ ಅವಕಾಶ ಸರಿಯಿಲ್ಲ. ಈಗಲೇ ಅವುಗಳ ಬಗ್ಗೆ ಹೇಳಲು ಹೋಗಲ್ಲ ನಾನು. ಕೆಲವು ಕೇಸ್​ಗಳಲ್ಲಿ ದೂರು ದಾಖಲು‌ ಮಾಡುವ ಅವಕಾಶ ಇಲ್ಲ. ಅಂಥದ್ದರ ಬಗ್ಗೆ ಚರ್ಚಿಸಿ ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ಪರಮೇಶ್ವರ್​ ಹೇಳಿದರು.

ಸಿಎಂ, ಡಿಸಿಎಂ ಕುರಿತು ಚರ್ಚೆ ಮಾಡುವವರಿಗೆ ಡಿಕೆಶಿ ವಾರ್ನಿಂಗ್ ವಿಚಾರವಾಗಿ ಮಾತನಾಡಿ, ಅದು ಕೆಪಿಸಿಸಿ ಅಧ್ಯಕ್ಷರಿಗೆ ಸಂಬಂಧಿಸಿದ ವಿಚಾರ. ನೋಟಿಸ್ ಕೊಡೋದು ಅಧ್ಯಕ್ಷರು ಮಾಡುವ ಕೆಲಸ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಂತ ಅಧ್ಯಕ್ಷರು ಯಾರಿಗೆ ಆದರೂ ಹೇಳಬೇಕಾಗುತ್ತದೆ. ಈಗಲೂ ಅದೇ ರೀತಿ ಅಧ್ಯಕ್ಷರು ಹೇಳಿದ್ದಾರೆ ಅನ್ನಿಸುತ್ತೆ. ಅಧ್ಯಕ್ಷರು ಏನೇ ತೀರ್ಮಾನ ತಗೊಂಡ್ರೂ, ಏನೇ ಹೇಳಿದರೂ ಕೇಳ್ತೇವೆ. ಯಾರಿಂದ ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಆ ವ್ಯಕ್ತಿಯನ್ನು ಕರೆದು ಸ್ಪಷ್ಟವಾಗಿ ಹೇಳಬೇಕು. ಆನಂತರ ಮುಂದಿನ‌ ಬೆಳವಣಿಗೆ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದರು.

ಮುಡಾ ಅಕ್ರಮ ಸಂಬಂಧ ತನಿಖೆ ಆಗುತ್ತೆ: ಮುಡಾದಲ್ಲಿ ಗೋಲ್ ಮಾಲ್ ವಿಚಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ವರ್ಗಾವಣೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರನ್ನು ಅಲ್ಲಿಂದ ಸ್ಥಳಾಂತರ ಮಾಡಿದ್ದು, ಅಲ್ಲೇ ಇದ್ದರೆ ಸಾಕ್ಷ್ಯನಾಶ ಆಗಬಹುದು ಅಂತ. ಮುಂದೆ ಯಾವ ತನಿಖೆ ನಡೆಸಬೇಕು ಅಂತ ತೀರ್ಮಾನ ಆಗುತ್ತದೆ ಎಂದು ತಿಳಿಸಿದರು.

ಸಚಿವ ಜಿ. ಪರಮೇಶ್ವರ್ (ETV Bharat)

ಪ್ರಕರಣದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಪಾತ್ರ ಇದೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವರು ಹೇಳಿದ್ದನ್ನು ಒಪ್ಪಿಕೊಳ್ಳಲು ಆಗಲ್ಲ. ಮುಂದೆ ತನಿಖೆ ಆಗುತ್ತೆ, ಅದರಿಂದ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಚುನಾವಣೆ ಸೋಲಿನ ಬಗ್ಗೆ ಸತ್ಯಶೋಧನ ಸಮಿತಿ ರಚನೆ ಮಾಡುವ ವಿಚಾರವಾಗಿ ಮಾತನಾಡಿ, ರಾಜ್ಯಮಟ್ಟದಲ್ಲಿ ಸಮಿತಿ ಮಾಡೋದು ಸಾಮಾನ್ಯ. ಅಧ್ಯಕ್ಷರು ಈ ಸಮಿತಿ ಮಾಡ್ತಾರೆ, ಅವರಿಗೂ ಜವಾಬ್ದಾರಿ ಇದೆಯಲ್ಲ. ಎಐಸಿಸಿನವರು ಮಾಡುವ ಸತ್ಯ ಶೋಧನ ಸಮಿತಿ ಬೇರೆ. ಎಐಸಿಸಿ ಸತ್ಯ ಶೋಧನೆ ಸಮಿತಿ ರಾಜ್ಯಕ್ಕೆ 10 ಅಥವಾ 12 ರಂದು ಭೇಟಿ ಕೊಡಲಿದೆ. ಎಐಸಿಸಿನವರು ಇಡೀ ದೇಶದ ರಾಜ್ಯಗಳಲ್ಲಿ ಸಮಿತಿ‌ ಮಾಡಿದ್ದಾರೆ ಎಂದರು.

ರಾಹುಲ್ ಗಾಂಧಿ ಭಾಷಣ ಬಿಜೆಪಿಗೆ ಅರ್ಥ ಆಗಿಲ್ಲ: ರಾಹುಲ್ ಗಾಂಧಿ ವಿವಾದಾತ್ಮಕ ಭಾಷಣ, ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡ್ಕೊಂಡಿಲ್ಲ‌ ಅಂತ ಸ್ಪಷ್ಟ ಆಯ್ತು. ಎಲ್ಲಿಯವರೆಗೆ ಬಿಜೆಪಿಯವರು ರಾಹುಲ್ ಅವರ ಮಾತು, ಮನಸು ಅರ್ಥ ಮಾಡ್ಕೊಳ್ಳಲ್ವೋ ಅಲ್ಲಿವರೆಗೂ ಗೊಂದಲ ಇರುತ್ತೆ.

ರಾಹುಲ್ ಗಾಂಧಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲರನ್ನೂ, ಎಲ್ಲ ವರ್ಗದವರನ್ನೂ ಸಮಾನವಾಗಿ ಕರೆದೊಯ್ಯಬೇಕು ಅನ್ನೋದು ಹಿಂದೂ ಧರ್ಮದ ಸಾರಾಂಶ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದೂಗಳಲ್ಲ ಅನ್ನೋದನ್ನು ಹೇಳಿದ್ದಾರೆ. ಇದು ಯಾರಿಗೆ ಅನ್ವಯ ಆಗಬೇಕೋ ಅವರಿಗೆ ಅನ್ವಯ ಆಗುತ್ತೆ. ಬಿಜೆಪಿಯವರಿಗೆ ಅನ್ವಯ ಆಗೋದಾದರೆ ಅವರಿಗೂ ಆಗುತ್ತೆ. ಆ ಅರ್ಥದಲ್ಲಿ ರಾಹುಲ್ ಗಾಂಧಿ ಮಾತಾಡಿದ್ದಾರೆ ಎಂದರು.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಪ್ರಕರಣ: ಇತರ ನಟರ ಪಾತ್ರ ಇದ್ದರೆ ತನಿಖೆ ನಡೆಯುತ್ತೆ: ಸಚಿವ ಜಿ.ಪರಮೇಶ್ವರ್ - G PARAMESHWAR

ಸಚಿವ ಜಿ. ಪರಮೇಶ್ವರ್ (ETV Bharat)

ಬೆಂಗಳೂರು : ನಟ ದರ್ಶನ್​ಗೆ ಜೈಲಿನಲ್ಲಿ ಯಾವುದೇ ವಿಶೇಷ ಸತ್ಕಾರ ಕೊಡುತ್ತಿಲ್ಲ, ಎಲ್ಲ ಕೈದಿಗಳಿಗಳಂತೆ ಅವರನ್ನು ನೋಡಿಕೊಳ್ಳಲಾಗ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ದರ್ಶನ್​ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕೊಡ್ತಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ಅವತ್ತೇ ಹೇಳಿದ್ದೇನೆ ನಾನು. ಬಿರಿಯಾನಿ ಅವೆಲ್ಲ ಏನೂ ಕೊಡ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡ್ತಿಲ್ಲ. ಬೇಕಾದರೆ ಬನ್ನಿ ನನ್ನ ಜತೆ, ಕರೆದುಕೊಂಡು ಹೋಗಿ ತೋರಿಸ್ತೇನೆ ಎಂದರು.

ಹೊಸ ಕಾನೂನಿನಡಿ 66 ಕೇಸು ದಾಖಲು : ಹೊಸ ಮೂರು ಅಪರಾಧ ಕಾನೂನುಗಳಲ್ಲಿ ಕೆಲವು ಗೊಂದಲಗಳಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಲ್ಲಿ ನಿನ್ನೆ ರಾತ್ರಿ (ಜುಲೈ 1)ವರೆಗೂ ಸುಮಾರು 66 ಹೊಸ ಕೇಸ್​ಗಳು ದಾಖಲಾಗಿವೆ. ಬೆಂಗಳೂರಿನಲ್ಲೂ 20 ಕೇಸ್​ಗಳು ದಾಖಲಾಗಿವೆ. ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ, ಕೆಲವು ಸರಿಯಾಗಿಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ಕೇಸ್‌ಗಳನ್ನು ದಾಖಲು ಮಾಡುವಂಥದ್ದಿತ್ತು. ಈಗ ಹೊಸ ಕಾನೂನುಗಳಲ್ಲಿ ಅವುಗಳನ್ನು ದಾಖಲು ಮಾಡುವ ಹಾಗಿಲ್ಲ. ಹೀಗೆ ಕೆಲವು ಗೊಂದಲಗಳಿವೆ. ಅವುಗಳ ಬಗ್ಗೆ ಚರ್ಚೆ ಮಾಡಿ ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಈ ಹೊಸ ಕಾನೂನುಗಳು ಇಡೀ ದೇಶಕ್ಕೆ ಸಂಬಂಧಪಟ್ಟಿವೆ. ಲಕ್ಷಾಂತರ ಕೇಸ್​ಗಳು ಹೊಸ ಕಾನೂನಿನಡಿ ದಾಖಲಾಗುತ್ತವೆ. ಆದರೆ, ಈ ಹೊಸ ಕಾನೂನುಗಳ ಬಗ್ಗೆ ಚರ್ಚೆ ಆಗಬೇಕಿದೆ. ಕೆಲವು ಉತ್ತಮವಾದ ಅಂಶಗಳಿವೆ, ಎಲ್ಲವನ್ನೂ ತೆಗೆದುಹಾಕಲು ಆಗಲ್ಲ. ಆದರೆ, ಕೆಲವೊಂದು ಅಂಶಗಳಲ್ಲಿ ಕಾನೂನಿನ ಬಳಕೆಗೆ ಅವಕಾಶ ಸರಿಯಿಲ್ಲ. ಈಗಲೇ ಅವುಗಳ ಬಗ್ಗೆ ಹೇಳಲು ಹೋಗಲ್ಲ ನಾನು. ಕೆಲವು ಕೇಸ್​ಗಳಲ್ಲಿ ದೂರು ದಾಖಲು‌ ಮಾಡುವ ಅವಕಾಶ ಇಲ್ಲ. ಅಂಥದ್ದರ ಬಗ್ಗೆ ಚರ್ಚಿಸಿ ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ಪರಮೇಶ್ವರ್​ ಹೇಳಿದರು.

ಸಿಎಂ, ಡಿಸಿಎಂ ಕುರಿತು ಚರ್ಚೆ ಮಾಡುವವರಿಗೆ ಡಿಕೆಶಿ ವಾರ್ನಿಂಗ್ ವಿಚಾರವಾಗಿ ಮಾತನಾಡಿ, ಅದು ಕೆಪಿಸಿಸಿ ಅಧ್ಯಕ್ಷರಿಗೆ ಸಂಬಂಧಿಸಿದ ವಿಚಾರ. ನೋಟಿಸ್ ಕೊಡೋದು ಅಧ್ಯಕ್ಷರು ಮಾಡುವ ಕೆಲಸ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಂತ ಅಧ್ಯಕ್ಷರು ಯಾರಿಗೆ ಆದರೂ ಹೇಳಬೇಕಾಗುತ್ತದೆ. ಈಗಲೂ ಅದೇ ರೀತಿ ಅಧ್ಯಕ್ಷರು ಹೇಳಿದ್ದಾರೆ ಅನ್ನಿಸುತ್ತೆ. ಅಧ್ಯಕ್ಷರು ಏನೇ ತೀರ್ಮಾನ ತಗೊಂಡ್ರೂ, ಏನೇ ಹೇಳಿದರೂ ಕೇಳ್ತೇವೆ. ಯಾರಿಂದ ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಆ ವ್ಯಕ್ತಿಯನ್ನು ಕರೆದು ಸ್ಪಷ್ಟವಾಗಿ ಹೇಳಬೇಕು. ಆನಂತರ ಮುಂದಿನ‌ ಬೆಳವಣಿಗೆ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದರು.

ಮುಡಾ ಅಕ್ರಮ ಸಂಬಂಧ ತನಿಖೆ ಆಗುತ್ತೆ: ಮುಡಾದಲ್ಲಿ ಗೋಲ್ ಮಾಲ್ ವಿಚಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ವರ್ಗಾವಣೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರನ್ನು ಅಲ್ಲಿಂದ ಸ್ಥಳಾಂತರ ಮಾಡಿದ್ದು, ಅಲ್ಲೇ ಇದ್ದರೆ ಸಾಕ್ಷ್ಯನಾಶ ಆಗಬಹುದು ಅಂತ. ಮುಂದೆ ಯಾವ ತನಿಖೆ ನಡೆಸಬೇಕು ಅಂತ ತೀರ್ಮಾನ ಆಗುತ್ತದೆ ಎಂದು ತಿಳಿಸಿದರು.

ಸಚಿವ ಜಿ. ಪರಮೇಶ್ವರ್ (ETV Bharat)

ಪ್ರಕರಣದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಪಾತ್ರ ಇದೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವರು ಹೇಳಿದ್ದನ್ನು ಒಪ್ಪಿಕೊಳ್ಳಲು ಆಗಲ್ಲ. ಮುಂದೆ ತನಿಖೆ ಆಗುತ್ತೆ, ಅದರಿಂದ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಚುನಾವಣೆ ಸೋಲಿನ ಬಗ್ಗೆ ಸತ್ಯಶೋಧನ ಸಮಿತಿ ರಚನೆ ಮಾಡುವ ವಿಚಾರವಾಗಿ ಮಾತನಾಡಿ, ರಾಜ್ಯಮಟ್ಟದಲ್ಲಿ ಸಮಿತಿ ಮಾಡೋದು ಸಾಮಾನ್ಯ. ಅಧ್ಯಕ್ಷರು ಈ ಸಮಿತಿ ಮಾಡ್ತಾರೆ, ಅವರಿಗೂ ಜವಾಬ್ದಾರಿ ಇದೆಯಲ್ಲ. ಎಐಸಿಸಿನವರು ಮಾಡುವ ಸತ್ಯ ಶೋಧನ ಸಮಿತಿ ಬೇರೆ. ಎಐಸಿಸಿ ಸತ್ಯ ಶೋಧನೆ ಸಮಿತಿ ರಾಜ್ಯಕ್ಕೆ 10 ಅಥವಾ 12 ರಂದು ಭೇಟಿ ಕೊಡಲಿದೆ. ಎಐಸಿಸಿನವರು ಇಡೀ ದೇಶದ ರಾಜ್ಯಗಳಲ್ಲಿ ಸಮಿತಿ‌ ಮಾಡಿದ್ದಾರೆ ಎಂದರು.

ರಾಹುಲ್ ಗಾಂಧಿ ಭಾಷಣ ಬಿಜೆಪಿಗೆ ಅರ್ಥ ಆಗಿಲ್ಲ: ರಾಹುಲ್ ಗಾಂಧಿ ವಿವಾದಾತ್ಮಕ ಭಾಷಣ, ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡ್ಕೊಂಡಿಲ್ಲ‌ ಅಂತ ಸ್ಪಷ್ಟ ಆಯ್ತು. ಎಲ್ಲಿಯವರೆಗೆ ಬಿಜೆಪಿಯವರು ರಾಹುಲ್ ಅವರ ಮಾತು, ಮನಸು ಅರ್ಥ ಮಾಡ್ಕೊಳ್ಳಲ್ವೋ ಅಲ್ಲಿವರೆಗೂ ಗೊಂದಲ ಇರುತ್ತೆ.

ರಾಹುಲ್ ಗಾಂಧಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲರನ್ನೂ, ಎಲ್ಲ ವರ್ಗದವರನ್ನೂ ಸಮಾನವಾಗಿ ಕರೆದೊಯ್ಯಬೇಕು ಅನ್ನೋದು ಹಿಂದೂ ಧರ್ಮದ ಸಾರಾಂಶ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದೂಗಳಲ್ಲ ಅನ್ನೋದನ್ನು ಹೇಳಿದ್ದಾರೆ. ಇದು ಯಾರಿಗೆ ಅನ್ವಯ ಆಗಬೇಕೋ ಅವರಿಗೆ ಅನ್ವಯ ಆಗುತ್ತೆ. ಬಿಜೆಪಿಯವರಿಗೆ ಅನ್ವಯ ಆಗೋದಾದರೆ ಅವರಿಗೂ ಆಗುತ್ತೆ. ಆ ಅರ್ಥದಲ್ಲಿ ರಾಹುಲ್ ಗಾಂಧಿ ಮಾತಾಡಿದ್ದಾರೆ ಎಂದರು.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಪ್ರಕರಣ: ಇತರ ನಟರ ಪಾತ್ರ ಇದ್ದರೆ ತನಿಖೆ ನಡೆಯುತ್ತೆ: ಸಚಿವ ಜಿ.ಪರಮೇಶ್ವರ್ - G PARAMESHWAR

ETV Bharat Logo

Copyright © 2024 Ushodaya Enterprises Pvt. Ltd., All Rights Reserved.