ETV Bharat / state

ಸಂಡೂರು ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ

ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಇಂದು ನಾಮಪತ್ರ ಸಲ್ಲಿಸಿದರು.

Bangaru hanumantu filing nomination
ನಾಮಪತ್ರ ಸಲ್ಲಿಸಿದ ಬಂಗಾರು ಹನುಮಂತು (ETV Bharat)
author img

By ETV Bharat Karnataka Team

Published : 6 hours ago

ಬಳ್ಳಾರಿ: ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಇಂದು ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 2.30ಕ್ಕೆ ಚುನಾವಣಾಧಿಕಾರಿ‌ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,‌ ಶಾಸಕ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು, ಕೇಂದ್ರದ ಮಾಜಿ ‌ಸಚಿವ ಭಗವಂತ ಖೂಬ ಹಾಗು ಎಂಎಲ್​ಸಿ ನವೀನ್ ಸೇರಿ ಇತರರು ಇದ್ದರು.

ಇದಕ್ಕೂ ಮುನ್ನ ಬಂಗಾರು ಹನುಮಂತು ರೋಡ್ ಶೋ ಪ್ರದರ್ಶನ ನಡೆಸಿದರು. ಸಂಡೂರಿನ ಎಪಿಎಂಸಿ ಗೇಟ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಜಾನಪದ‌ ಮೇಳ, ಡೊಳ್ಳು, ಭಾಜ-ಭಜಂತ್ರಿ ಗಮನ ಸೆಳೆಯಿತು.

ಸಂಡೂರು ಉಪಚುನಾವಣೆ: ಬಿಜೆಪಿ ನಾಯಕರ ಪ್ರತಿಕ್ರಿಯೆಗಳು (ETV Bharat)

ಸಂಡೂರು ಪಟ್ಟಣದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿ, "ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನೀವೆಲ್ಲರೂ ಸಂಕಲ್ಪ ಮಾಡಿ ಬಂದಿದ್ದೀರಿ. ಇದೇ ಉತ್ಸಾಹ ಮತದಾನದ ದಿನದವರೆಗೂ ಇರಲಿ. ದೊಡ್ಡ ಬಹುಮತದೊಂದಿಗೆ ಹನುಮಂತು ಅವರನ್ನು ಗೆಲ್ಲಿಸಿ. 13ರಂದು ನಡೆಯುವ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಸಂಡೂರಿನಲ್ಲಿ ಕಮಲ ಅರಳಿಸುವ ಸಂಕಲ್ಪ ಮಾಡಿ" ಎಂದು ಕರೆ ನೀಡಿದರು.

ಜನಾರ್ದನ ರೆಡ್ಡಿ ಮಾತನಾಡಿ, "44 ಬೂತ್​ಗಳಲ್ಲಿ ಜನ ಸ್ವಯಂಪ್ರೇರಿತರಾಗಿ ಬಂದಿರೋದನ್ನು ನೋಡಿದ್ದೀರಿ. ಕಾಂಗ್ರೆಸ್​ನ ಎಷ್ಟೋ ಹೇಳಿಕೆಗಳು ಹುಸಿಯಾಗಿವೆ. ಕರುಣಾಕರ ರೆಡ್ಡಿ ಪರ ಬಳ್ಳಾರಿಯಲ್ಲಿ ಪ್ರಚಾರ ಮಾಡಿದ್ದೇನೆ. 250 ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಕಾಂಗ್ರೆಸ್‌ನವರು ಹಾಕಿದ ರಸ್ತೆ ಕಿತ್ತು ಹೋಗ್ತಿವೆ. ಡಿಎಂಎಫ್, ಸಿಎಸ್​ಆರ್ ಫಂಡ್ ದುರುಪಯೋಗವಾಗಿದೆ ಅಂತ ಹೇಳ್ತಾರೆ. ನಾನು ನನ್ನ ಗೆಳೆಯ ಶ್ರೀರಾಮುಲು ಇಬ್ಬರೂ ಪ್ರಚಾರ ಮಾಡ್ತೀವಿ" ಎಂದರು.

ಇದನ್ನೂ ಓದಿ: ಕೋಟಿ ಒಡೆಯರಾದರೂ ಸಾಲಗಾರರು, ಅಫಿಡವಿಟ್‌ನಲ್ಲಿ ಬಹಿರಂಗ; ಸಂಡೂರಿನ ಕೈ ಅಭ್ಯರ್ಥಿಗಿಂತ ಕಮಲ ಅಭ್ಯರ್ಥಿ ಅತ್ಯಧಿಕ ಶ್ರೀಮಂತ!

ಬಳ್ಳಾರಿ: ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಇಂದು ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 2.30ಕ್ಕೆ ಚುನಾವಣಾಧಿಕಾರಿ‌ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,‌ ಶಾಸಕ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು, ಕೇಂದ್ರದ ಮಾಜಿ ‌ಸಚಿವ ಭಗವಂತ ಖೂಬ ಹಾಗು ಎಂಎಲ್​ಸಿ ನವೀನ್ ಸೇರಿ ಇತರರು ಇದ್ದರು.

ಇದಕ್ಕೂ ಮುನ್ನ ಬಂಗಾರು ಹನುಮಂತು ರೋಡ್ ಶೋ ಪ್ರದರ್ಶನ ನಡೆಸಿದರು. ಸಂಡೂರಿನ ಎಪಿಎಂಸಿ ಗೇಟ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಜಾನಪದ‌ ಮೇಳ, ಡೊಳ್ಳು, ಭಾಜ-ಭಜಂತ್ರಿ ಗಮನ ಸೆಳೆಯಿತು.

ಸಂಡೂರು ಉಪಚುನಾವಣೆ: ಬಿಜೆಪಿ ನಾಯಕರ ಪ್ರತಿಕ್ರಿಯೆಗಳು (ETV Bharat)

ಸಂಡೂರು ಪಟ್ಟಣದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿ, "ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನೀವೆಲ್ಲರೂ ಸಂಕಲ್ಪ ಮಾಡಿ ಬಂದಿದ್ದೀರಿ. ಇದೇ ಉತ್ಸಾಹ ಮತದಾನದ ದಿನದವರೆಗೂ ಇರಲಿ. ದೊಡ್ಡ ಬಹುಮತದೊಂದಿಗೆ ಹನುಮಂತು ಅವರನ್ನು ಗೆಲ್ಲಿಸಿ. 13ರಂದು ನಡೆಯುವ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಸಂಡೂರಿನಲ್ಲಿ ಕಮಲ ಅರಳಿಸುವ ಸಂಕಲ್ಪ ಮಾಡಿ" ಎಂದು ಕರೆ ನೀಡಿದರು.

ಜನಾರ್ದನ ರೆಡ್ಡಿ ಮಾತನಾಡಿ, "44 ಬೂತ್​ಗಳಲ್ಲಿ ಜನ ಸ್ವಯಂಪ್ರೇರಿತರಾಗಿ ಬಂದಿರೋದನ್ನು ನೋಡಿದ್ದೀರಿ. ಕಾಂಗ್ರೆಸ್​ನ ಎಷ್ಟೋ ಹೇಳಿಕೆಗಳು ಹುಸಿಯಾಗಿವೆ. ಕರುಣಾಕರ ರೆಡ್ಡಿ ಪರ ಬಳ್ಳಾರಿಯಲ್ಲಿ ಪ್ರಚಾರ ಮಾಡಿದ್ದೇನೆ. 250 ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಕಾಂಗ್ರೆಸ್‌ನವರು ಹಾಕಿದ ರಸ್ತೆ ಕಿತ್ತು ಹೋಗ್ತಿವೆ. ಡಿಎಂಎಫ್, ಸಿಎಸ್​ಆರ್ ಫಂಡ್ ದುರುಪಯೋಗವಾಗಿದೆ ಅಂತ ಹೇಳ್ತಾರೆ. ನಾನು ನನ್ನ ಗೆಳೆಯ ಶ್ರೀರಾಮುಲು ಇಬ್ಬರೂ ಪ್ರಚಾರ ಮಾಡ್ತೀವಿ" ಎಂದರು.

ಇದನ್ನೂ ಓದಿ: ಕೋಟಿ ಒಡೆಯರಾದರೂ ಸಾಲಗಾರರು, ಅಫಿಡವಿಟ್‌ನಲ್ಲಿ ಬಹಿರಂಗ; ಸಂಡೂರಿನ ಕೈ ಅಭ್ಯರ್ಥಿಗಿಂತ ಕಮಲ ಅಭ್ಯರ್ಥಿ ಅತ್ಯಧಿಕ ಶ್ರೀಮಂತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.