ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ ಆಚರಣೆ - ಜೊತೆಗೆ ತೆನೆ ಹಬ್ಬ ಆಚರಣೆ - Ganesha Chaturth in DK

author img

By ETV Bharat Karnataka Team

Published : Sep 7, 2024, 11:48 AM IST

Updated : Sep 7, 2024, 12:09 PM IST

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಗಣೇಶ ಚತುರ್ಥಿಯನ್ನು ಎಲ್ಲ ಕಡೆಯಂತೆ ಮನೆ-ಮನೆಗಳಲ್ಲಿ ಮೂರ್ತಿಯನ್ನು ಇಟ್ಟು ಆಚರಣೆ ಮಾಡುವುದಿಲ್ಲ. ಇಲ್ಲಿ ಸಾರ್ವಜನಿಕವಾಗಿ ಅದ್ಧೂರಿ ಜತೆಗೆ ತುಳುವರ ವಿಶಿಷ್ಟ ಆಚರಣೆಯೂ ನಡೆಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ (ETV Bharat)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ (ETV Bharat)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಘ್ನ‌ವಿನಾಶಕನ ಆರಾಧನೆಯ ಹಬ್ಬದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಸಂಭ್ರಮ ಮನೆ ಮಾಡಿದೆ.

ಕರಾವಳಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಬೇರೆ ಪ್ರದೇಶಗಳಿಗಿಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇತರೆಡೆಗಳಂತೆ ಮನೆ ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕ್ರಮ ಇಲ್ಲ. ಇಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆದರೆ ಕೆಲವೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವರ ವಿಶಿಷ್ಟ ಆಚರಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವರ ವಿಶಿಷ್ಟ ಆಚರಣೆ (ETV Bharat)

ಮಂಗಳೂರಿನ ನೆಹರು ಮೈದಾನದಲ್ಲಿ, ಸಂಘನಿಕೇತನದಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಬಂಟರ ಭವನದಲ್ಲಿ, ಫರಂಗಿಪೇಟೆ, ಜೆಪ್ಪಿನಮೊಗರು ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ನಿನ್ನೆ ಸಂಜೆಯ ವೇಳೆಗೆ , ಕೆಲವೆಡೆ ಇಂದು ಬೆಳಗ್ಗೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮುಂಜಾನೆಯಿಂದಲೇ ಪೂಜೆ ಪುನಸ್ಕಾರ ಆರಂಭವಾಗಿದ್ದು, ಕೆಲವೆಡೆ ಇಂದು ರಾತ್ರಿ, ಕೆಲವೆಡೆ ಮೂರ‌ನೇ ದಿನಕ್ಕೆ ಗಣೇಶ ಮೂರ್ತಿಯ ಜಲಸ್ತಂಭನ ಮಾಡಲಾಗುತ್ತದೆ.

ಸಾರ್ವಜನಿಕರು ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವಗಳಿಗೆ, ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ದೇವರ ಫೋಟೋಗಳನ್ನು ಹೂವುಗಳಿಂದ ಸಿಂಗರಿಸಿ ಕಬ್ಬನ್ನು ಕಟ್ಟಿ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಸಾರ್ವಜನಿಕ ಗಣೇಶೋತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕುಟುಂಬ ಸಮೇತರಾಗಿ ಬಂದು ಪೂಜೆಯಲ್ಲಿ ಭಾಗವಹಿಸಿದರು. ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ (ETV Bharat)

ತೆನೆ ಹಬ್ಬ: ಗಣೇಶ ಚತುರ್ಥಿ ಕೆಲವೆಡೆ ತೆನೆ ಹಬ್ಬ ಆಚರಿಸುತ್ತಾರೆ. ಈ ಋತುವಿನ ಹೊಸ ತೆನೆಯಲ್ಲಿ ಊಟ ಮಾಡುವ ಈ ಹಬ್ಬವನ್ನು ಆಚರಿಸಲು ಪುದ್ದರ್ ಎಂಬ ಹಬ್ಬ ಇದ್ದರೂ ಹೆಚ್ಚಿನವರು ಗಣೇಶ ಚತುರ್ಥಿ ದಿನವೆ ತೆನೆ‌ಹಬ್ಬ ಆಚರಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಮತ್ತು ದೇವಸ್ಥಾನಗಳಲ್ಲಿ ಭಕ್ತರಿಗೆ ತೆನೆಯನ್ನು ವಿತರಿಸಲಾಗುತ್ತದೆ.

ತೆನೆ ಹಬ್ಬದ ಕ್ರಮ: ತೆನೆ ಹಬ್ಬ ('ಕುರಲ್‌ಪರ್ಬ')ದ ದಿನ ಬೆಳಿಗ್ಗೆಯೇ ಮಹಿಳೆಯರು ಮನೆಯನ್ನು ಸಾರಿಸಿ ಶುದ್ಧಗೊಳಿಸುತ್ತಾರೆ. ಮನೆಯ ಯಜಮಾನ ಸ್ನಾನಮಾಡಿ ಮಡಿಯುಟ್ಟು ಗದ್ದೆಗೆ ಹೋಗಿ ತೆನೆಯನ್ನು ಒಂದು 'ಸೂಡಿ'ಯಷ್ಟು ಕಿತ್ತು ತುದಿ ಬಾಳೆಎಲೆಯಲ್ಲಿಟ್ಟು ತಲೆಯಲ್ಲಿ ಹೊತ್ತು ತರುತ್ತಾನೆ. ಕೆಲವೊಮ್ಮೆ ತೆನೆಯನ್ನು ಮುಂಚಿನ ದಿನ ಸಾಯಂಕಾಲವೇ ತರುವುದು ಉಂಟು. ಹಾಗೆ ತಂದು ಬಾವಿಯ ದಂಡೆಯಲ್ಲಿಯೋ, ಇಲ್ಲವೆ ತುಳಸಿ ಕಟ್ಟೆಯ ಬಳಿಯಲ್ಲಿಯೋ ಇಡಲಾಗುತ್ತದೆ. ಹಾಲು ಬರುವ ಮರದಡಿಯಲ್ಲಿ ತೆನೆಯನ್ನು ಇಡಬೇಕೆಂಬ ನಂಬಿಕೆಯೂ ಇದೆ. ಅದರಂತೆ ಮನೆಯ ಆವರಣದೊಳಗಿರುವ ಹಲಸಿನ ಮರದಡಿಯಲ್ಲಿ ಸಂಗ್ರಹಿಸಿಡುತ್ತಾರೆ.

ಅದರೊಂದಿಗೆ ಮಾವಿನತುದಿ, ಹಲಸಿನತುದಿ, ಗರಿಕೆಹುಲ್ಲು, 'ಪಚ್ಚೆಕುರಲ್​', 'ದಡ್ಡಲ್​ ಮರದ ಎಲೆ', 'ಇಟ್ಟೆವು', ಅಶ್ವತ್ಥ, ಅತ್ತಿ, ಇತ್ತಿ, 'ಬಲಿಪಬಳ್ಳಿ', 'ಗೋಳಿ', ಹೂವು ಸಹಿತವಾದ ಸೌತೆ ಮಿಡಿ, ಬಿದಿರುಸೊಪ್ಪು, ತುಳಸಿ, ಗೌರಿಹೂವು, ಗಂಧ, ಕುಂಕುಮ ಇತ್ಯಾದಿಗಳನ್ನು ಸಂಗ್ರಹಿಸಿ ಇಡುತ್ತಾರೆ. ಹೀಗೆ ಎಲ್ಲಾ ವಸ್ತುಗಳನ್ನು ಜೋಡಿಸಿಯಿಡುತ್ತಾರೆ. ಯಜಮಾನ ಆ ವಸ್ತುಗಳಿಗೆ ಧೂಪ ಆರತಿ ಮಾಡಿ ಅವುಗಳನ್ನು ಶುದ್ಧಗೊಳಿಸುತ್ತಾನೆ. ನಂತರ ಅವುಗಳನ್ನೆಲ್ಲ ಮನೆಯೊಳಗೆ ತರುತ್ತಾರೆ. ಹೀಗೆ ತರುವಾಗ ಮನೆಯ ಯಜಮಾನ ತೆನೆಗಳನ್ನು ಹಿಡಿದು ಮುಂದುಗಡೆಯಿಂದಲೂ, ಉಳಿದವರು ಉಳಿದ ವಸ್ತುಗಳನ್ನು ಹಿಡಿದುಕೊಂಡು ಆತನನ್ನು ಹಿಂಬಾಲಿಸಿ ಮನೆಯೊಳಗೆ ತೆನೆ ತರುತ್ತಾರೆ. ಆಗ ಎಲ್ಲರೂ 'ಪೊಲಿ ಪೊಲಿ ಪೊಲಿ' ಎಂದು ಹೇಳುತ್ತಾ ತುಳಸಿಕಟ್ಟೆಗೆ ಒಂದುಸುತ್ತು ಪ್ರದಕ್ಷಿಣೆ ಬಂದು ಮನೆಯೊಳಗೆ ಪ್ರವೇಶಿಸುತ್ತಾರೆ.

ಹೀಗೆ ಮನೆಯೊಳಗೆ ಪ್ರವೇಶಿಸುವ ಮೊದಲು ಮನೆಯ ಹೆಂಗಸರು ಯಜಮಾನನ ಪಾದವನ್ನು ತೊಳೆಯುತ್ತಾರೆ. ನಂತರ ದೇವರಮಣೆಯ ಕೆಳಗೆ ಶುಚಿಗೊಳಿಸಿಟ್ಟ ಮಣೆಯ ಮೇಲೆ ಹೊತ್ತುತಂದ ತೆನೆಗಳನ್ನು ಯಜಮಾನ ಇಡುತ್ತಾನೆ. ಮಣೆಯ ಪಕ್ಕದಲ್ಲಿ ದೀಪ ಉರಿಸುತ್ತಾರೆ. ತೆನೆಗಳನ್ನು 'ಕಳಸ' ಇಲ್ಲವೆ ಅಥವಾ ಹೊಸ 'ಬುಟ್ಟಿ'ಯಲ್ಲಿ ಇಡುತ್ತಾರೆ.

ಅಲ್ಲಿಯೇ 'ಮಂತು' (ಕಡೆಗೋಲು), ಒಂದು 'ಪರ್ದತ್ತಿ' (ಪೈರು ಕೊಯ್ಯುವ ಹಲ್ಲುಗಳಿರುವ ಕತ್ತಿ) ಒಂದು 'ಸೇರು' (ಅಕ್ಕಿ, ಭತ್ತ ಮೊದಲಾದವುಗಳನ್ನು ಅಳೆಯುವ ಸಾಧನ) - ಇತ್ಯಾದಿಗಳನ್ನು ಗಂಧ ಹಚ್ಚಿ ಇಡುತ್ತಾರೆ. ಅವುಗಳಲ್ಲಿಯೇ ಐದು ವೀಳ್ಯದೆಲೆ, ಒಂದು ಅಡಕೆ ಇಡುತ್ತಾರೆ. ಒಂದು 'ತುದಿ ಬಾಳೆಎಲೆಯಲ್ಲಿ ಒಂದು 'ಪಾವು' ಬೆಳ್ತಿಗೆ ಅಕ್ಕಿ, ಅದರ ಮೇಲೆ, ಸೌತೆ ಇಡುತ್ತಾರೆ. ಅದರಲ್ಲಿಯೂ ಐದು ವೀಳ್ಯದೆಲೆ, ಒಂದು ಅಡಿಕೆ ಇಡುತ್ತಾರೆ. ಒಂದು ಹರಿವೆ, ಒಂದು 'ಕರಿಕೆಸುವಿನ ದಂಟು ಅಕ್ಕಿಯ ಬದಿಯಲ್ಲಿಡುತ್ತಾರೆ, ಈ ಹರಿವೆ, ಕೆಸು, ಸೌತೆಗಳನ್ನು ನಂತರ ನಡೆಯುವ 'ಪುದ್ವಾರ್‌'ಗೆ ಪದಾರ್ಥಕ್ಕೆ ಬಳಸಿಕೊಳ್ಳುತ್ತಾರೆ.

ಮನೆಯೊಳಗೆ ಇಟ್ಟ 'ಕುರಲ್'ಗೆ ತೆಂಗಿನಕಾಯಿ ಒಂದನ್ನು ಒಡೆಯುತ್ತಾರೆ. ನಂತರ 'ಕುರಲ್‌'ಗೆಲ್ಲ ಗಂಧ ಪ್ರಸಾದ ಮುಟ್ಟಿಸಲಾಗುತ್ತದೆ. ತೆಂಗಿನ ಕಾಯಿಯ ಗಡಿಗಳಿಗೆ ಭತ್ತ ಇಲ್ಲವೆ ಗಂಧ ಹಾಕುತ್ತಾರೆ. ನಂತರ ಎಲ್ಲರೂ ಸೇರಿ ಮನೆಯೊಳಗೆ ಮತ್ತೆ ತೆನೆಗಳಿಗೆ ಧೂಪ, ಆರತಿ ಬೆಳಗಿ ಈ ರೀತಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಭತ್ತದ ತೆನೆಯಿಂದ ಮೂರು ಇಲ್ಲವೇ ಐದು ಭತ್ತ ತೆಗೆದು ಅದರ ಸಿಪ್ಪೆ ಸುಲಿದು ಅಕ್ಕಿಯನ್ನು ಉರಿಸಿಟ್ಟ ದೀಪಕ್ಕೆ ಹಾಕುತ್ತಾರೆ. ಬಳಿಕ ಭತ್ತದಿಂದ ಅಕ್ಕಿ ಕಾಳು ತೆಗೆದು ಹಾಲಿಗೆ ಸೇರಿಸಿ ಮನೆಮಂದಿ ಕುಡಿಯುವ ಕ್ರಮವಿದೆ.

ಬಳಿಕ ಮೂರು ಮೂರು 'ತೆನೆ'ಗಳನ್ನು ಈಗಾಗಲೇ ತಿಳಿಸಿದ ವಸ್ತುಗಳ ಸಹಿತ 'ದಡ್ಡಲ್‌ನಾರಿ'ನಿಂದ ಕಟ್ಟುಗಳನ್ನಾಗಿ ಕಟ್ಟಿ ವಿಂಗಡಿಸುತ್ತಾರೆ. ಮುಖ್ಯವಾಗಿ ದೇವರ ಮಣೆಗೆ, ಬಾಗಿಲಿಗೆ, ಭೂತದ ಕೋಣೆಗೆ, ತುಳಸಿ ಕಟ್ಟೆಗೆ, ಬಾವಿ, ದಂಡೆಗೆ, ಹಟ್ಟಿಗೆ, ತೆಂಗಿನ ಮರಕ್ಕೆ, ಹಲಸಿನ ಮರಕ್ಕೆ, ಅಕ್ಕಿ ಶೇಖರಿಸಿಡುವ ಡ್ರಮ್, ನೊಗನೇಗಿಲುಗಳಿಗೆ ಇತ್ಯಾದಿಗಳಿಗೆಲ್ಲ ಕಟ್ಟುತ್ತಾರೆ. ಹೀಗೆ ತೆನೆ ಕಟ್ಟುವ ಕೆಲಸ ಆದ ಮೇಲೆ ಮಧ್ಯಾಹ್ನ ಮನೆಯ ಹೆಂಗಸರು ರುಚಿಕರವಾದ ತರಕಾರಿ ಅಡುಗೆ ಮಾಡಿರುತ್ತಾರೆ. ಎಲ್ಲರೂ ಸೇರಿ ಊಟ ಮಾಡುತ್ತಾರೆ.

ತುಳುವರ ಆಚರಣೆ ವಿಶಿಷ್ಟ: ತುಳುನಾಡಿನಲ್ಲಿ ಗಣೇಶ ಚೌತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಈ ಆಚರಣೆಯಲ್ಲಿ ಗಣೇಶನ ಮೂರ್ತಿಯ ಪೂಜೆ ಇಲ್ಲ. ಇಲ್ಲಿ ಗಣೇಶನು ‘ಬಾಮಕುಮಾರ’ನಾಗಿ ಪ್ರಕೃತಿಯ ರೂಪದಲ್ಲಿ ಅವತರಿಸುತ್ತಾನೆ. ಕಬ್ಬುಗಳನ್ನು ಇಟ್ಟು ಅದರಲ್ಲಿ ಗಣೇಶನನ್ನು ಆವಾಹಿಸುವುದು ತುಳುನಾಡಿನ ಕ್ರಮ.

ಕಬ್ಬನ್ನು ತುಂಡು ಮಾಡಿ ಚೌಕಾಕಾರದಲ್ಲಿ ಜೋಡಿಸಿ, ಅದಕ್ಕೆ ದೀಪವಿಟ್ಟು, ಬಾಳೆ ಎಲೆಯ ಮೇಲೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, 1 ರೂ. ನಾಣ್ಯದ ಗಣಪತಿ ಸ್ವಸ್ತಿಕ ಇರಿಸಿ, ಬೆಲ್ಲ, ಬಾಳೆಹಣ್ಣು, ಉದ್ದಿನದೋಸೆ (ತೆಳ್ಳವು) ಬಡಿಸಿ ಪೂಜಿಸುತ್ತಾರೆ. ಹೆಸರು, ಹುರುಳಿ ಮೊದಲಾದ ಕಾಳುಗಳ ಚಿಗುರುಗಳೇ ಗಣಪನಿಗೆ ಹೂವುಗಳು. ವಾರದ ಮೊದಲು ಹಬ್ಬದ ಸಿದ್ಧತೆಗಳು ಶುರುವಾಗುತ್ತವೆ. ತುಳಸಿಕಟ್ಟೆಯ ಬಳಿ ಮಣ್ಣು ಹದಗೊಳಿಸಿ, ಕಾಳುಗಳನ್ನು ಬಿತ್ತಿ, ಅವು ಮೊಳಕೆಯೊಡೆದು ಚಿಗುರುಗಳಾಗಬೇಕು. ನಳನಳಿಸುವ ಚಿಗುರುಗಳು ಬಾಮಕುಮಾರನಿಗೆ ಅರ್ಪಣೆ ಮಾಡಲಾಗುತ್ತದೆ. ಮಣ್ಣಿನ ಸಂಬಂಧದೊಂದಿಗೆ ಪ್ರಕೃತಿ ಸಹಜವಾಗಿ ದೊರೆಯುವ ವಸ್ತುಗಳನ್ನು ಬಳಸಿ ಆಚರಿಸುವ ಹಬ್ಬ ಕೃಷಿ ಸಂಸ್ಕೃತಿಯನ್ನು ಪ್ರತಿಫಲಿಸುತ್ತದೆ.

ಇದನ್ನೂ ಓದಿ: ಬೆಂಗಳೂರು: ಗಣೇಶೋತ್ಸವಕ್ಕೆ ಬಿಗಿ ಭದ್ರತೆ, CCTV ಡ್ರೋನ್ ಕ್ಯಾಮರಾ ಕಣ್ಗಾವಲು - Bengaluru Ganeshotsav

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ (ETV Bharat)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಘ್ನ‌ವಿನಾಶಕನ ಆರಾಧನೆಯ ಹಬ್ಬದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಸಂಭ್ರಮ ಮನೆ ಮಾಡಿದೆ.

ಕರಾವಳಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಬೇರೆ ಪ್ರದೇಶಗಳಿಗಿಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇತರೆಡೆಗಳಂತೆ ಮನೆ ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕ್ರಮ ಇಲ್ಲ. ಇಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆದರೆ ಕೆಲವೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವರ ವಿಶಿಷ್ಟ ಆಚರಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವರ ವಿಶಿಷ್ಟ ಆಚರಣೆ (ETV Bharat)

ಮಂಗಳೂರಿನ ನೆಹರು ಮೈದಾನದಲ್ಲಿ, ಸಂಘನಿಕೇತನದಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಬಂಟರ ಭವನದಲ್ಲಿ, ಫರಂಗಿಪೇಟೆ, ಜೆಪ್ಪಿನಮೊಗರು ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ನಿನ್ನೆ ಸಂಜೆಯ ವೇಳೆಗೆ , ಕೆಲವೆಡೆ ಇಂದು ಬೆಳಗ್ಗೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮುಂಜಾನೆಯಿಂದಲೇ ಪೂಜೆ ಪುನಸ್ಕಾರ ಆರಂಭವಾಗಿದ್ದು, ಕೆಲವೆಡೆ ಇಂದು ರಾತ್ರಿ, ಕೆಲವೆಡೆ ಮೂರ‌ನೇ ದಿನಕ್ಕೆ ಗಣೇಶ ಮೂರ್ತಿಯ ಜಲಸ್ತಂಭನ ಮಾಡಲಾಗುತ್ತದೆ.

ಸಾರ್ವಜನಿಕರು ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವಗಳಿಗೆ, ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ದೇವರ ಫೋಟೋಗಳನ್ನು ಹೂವುಗಳಿಂದ ಸಿಂಗರಿಸಿ ಕಬ್ಬನ್ನು ಕಟ್ಟಿ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಸಾರ್ವಜನಿಕ ಗಣೇಶೋತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕುಟುಂಬ ಸಮೇತರಾಗಿ ಬಂದು ಪೂಜೆಯಲ್ಲಿ ಭಾಗವಹಿಸಿದರು. ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ (ETV Bharat)

ತೆನೆ ಹಬ್ಬ: ಗಣೇಶ ಚತುರ್ಥಿ ಕೆಲವೆಡೆ ತೆನೆ ಹಬ್ಬ ಆಚರಿಸುತ್ತಾರೆ. ಈ ಋತುವಿನ ಹೊಸ ತೆನೆಯಲ್ಲಿ ಊಟ ಮಾಡುವ ಈ ಹಬ್ಬವನ್ನು ಆಚರಿಸಲು ಪುದ್ದರ್ ಎಂಬ ಹಬ್ಬ ಇದ್ದರೂ ಹೆಚ್ಚಿನವರು ಗಣೇಶ ಚತುರ್ಥಿ ದಿನವೆ ತೆನೆ‌ಹಬ್ಬ ಆಚರಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಮತ್ತು ದೇವಸ್ಥಾನಗಳಲ್ಲಿ ಭಕ್ತರಿಗೆ ತೆನೆಯನ್ನು ವಿತರಿಸಲಾಗುತ್ತದೆ.

ತೆನೆ ಹಬ್ಬದ ಕ್ರಮ: ತೆನೆ ಹಬ್ಬ ('ಕುರಲ್‌ಪರ್ಬ')ದ ದಿನ ಬೆಳಿಗ್ಗೆಯೇ ಮಹಿಳೆಯರು ಮನೆಯನ್ನು ಸಾರಿಸಿ ಶುದ್ಧಗೊಳಿಸುತ್ತಾರೆ. ಮನೆಯ ಯಜಮಾನ ಸ್ನಾನಮಾಡಿ ಮಡಿಯುಟ್ಟು ಗದ್ದೆಗೆ ಹೋಗಿ ತೆನೆಯನ್ನು ಒಂದು 'ಸೂಡಿ'ಯಷ್ಟು ಕಿತ್ತು ತುದಿ ಬಾಳೆಎಲೆಯಲ್ಲಿಟ್ಟು ತಲೆಯಲ್ಲಿ ಹೊತ್ತು ತರುತ್ತಾನೆ. ಕೆಲವೊಮ್ಮೆ ತೆನೆಯನ್ನು ಮುಂಚಿನ ದಿನ ಸಾಯಂಕಾಲವೇ ತರುವುದು ಉಂಟು. ಹಾಗೆ ತಂದು ಬಾವಿಯ ದಂಡೆಯಲ್ಲಿಯೋ, ಇಲ್ಲವೆ ತುಳಸಿ ಕಟ್ಟೆಯ ಬಳಿಯಲ್ಲಿಯೋ ಇಡಲಾಗುತ್ತದೆ. ಹಾಲು ಬರುವ ಮರದಡಿಯಲ್ಲಿ ತೆನೆಯನ್ನು ಇಡಬೇಕೆಂಬ ನಂಬಿಕೆಯೂ ಇದೆ. ಅದರಂತೆ ಮನೆಯ ಆವರಣದೊಳಗಿರುವ ಹಲಸಿನ ಮರದಡಿಯಲ್ಲಿ ಸಂಗ್ರಹಿಸಿಡುತ್ತಾರೆ.

ಅದರೊಂದಿಗೆ ಮಾವಿನತುದಿ, ಹಲಸಿನತುದಿ, ಗರಿಕೆಹುಲ್ಲು, 'ಪಚ್ಚೆಕುರಲ್​', 'ದಡ್ಡಲ್​ ಮರದ ಎಲೆ', 'ಇಟ್ಟೆವು', ಅಶ್ವತ್ಥ, ಅತ್ತಿ, ಇತ್ತಿ, 'ಬಲಿಪಬಳ್ಳಿ', 'ಗೋಳಿ', ಹೂವು ಸಹಿತವಾದ ಸೌತೆ ಮಿಡಿ, ಬಿದಿರುಸೊಪ್ಪು, ತುಳಸಿ, ಗೌರಿಹೂವು, ಗಂಧ, ಕುಂಕುಮ ಇತ್ಯಾದಿಗಳನ್ನು ಸಂಗ್ರಹಿಸಿ ಇಡುತ್ತಾರೆ. ಹೀಗೆ ಎಲ್ಲಾ ವಸ್ತುಗಳನ್ನು ಜೋಡಿಸಿಯಿಡುತ್ತಾರೆ. ಯಜಮಾನ ಆ ವಸ್ತುಗಳಿಗೆ ಧೂಪ ಆರತಿ ಮಾಡಿ ಅವುಗಳನ್ನು ಶುದ್ಧಗೊಳಿಸುತ್ತಾನೆ. ನಂತರ ಅವುಗಳನ್ನೆಲ್ಲ ಮನೆಯೊಳಗೆ ತರುತ್ತಾರೆ. ಹೀಗೆ ತರುವಾಗ ಮನೆಯ ಯಜಮಾನ ತೆನೆಗಳನ್ನು ಹಿಡಿದು ಮುಂದುಗಡೆಯಿಂದಲೂ, ಉಳಿದವರು ಉಳಿದ ವಸ್ತುಗಳನ್ನು ಹಿಡಿದುಕೊಂಡು ಆತನನ್ನು ಹಿಂಬಾಲಿಸಿ ಮನೆಯೊಳಗೆ ತೆನೆ ತರುತ್ತಾರೆ. ಆಗ ಎಲ್ಲರೂ 'ಪೊಲಿ ಪೊಲಿ ಪೊಲಿ' ಎಂದು ಹೇಳುತ್ತಾ ತುಳಸಿಕಟ್ಟೆಗೆ ಒಂದುಸುತ್ತು ಪ್ರದಕ್ಷಿಣೆ ಬಂದು ಮನೆಯೊಳಗೆ ಪ್ರವೇಶಿಸುತ್ತಾರೆ.

ಹೀಗೆ ಮನೆಯೊಳಗೆ ಪ್ರವೇಶಿಸುವ ಮೊದಲು ಮನೆಯ ಹೆಂಗಸರು ಯಜಮಾನನ ಪಾದವನ್ನು ತೊಳೆಯುತ್ತಾರೆ. ನಂತರ ದೇವರಮಣೆಯ ಕೆಳಗೆ ಶುಚಿಗೊಳಿಸಿಟ್ಟ ಮಣೆಯ ಮೇಲೆ ಹೊತ್ತುತಂದ ತೆನೆಗಳನ್ನು ಯಜಮಾನ ಇಡುತ್ತಾನೆ. ಮಣೆಯ ಪಕ್ಕದಲ್ಲಿ ದೀಪ ಉರಿಸುತ್ತಾರೆ. ತೆನೆಗಳನ್ನು 'ಕಳಸ' ಇಲ್ಲವೆ ಅಥವಾ ಹೊಸ 'ಬುಟ್ಟಿ'ಯಲ್ಲಿ ಇಡುತ್ತಾರೆ.

ಅಲ್ಲಿಯೇ 'ಮಂತು' (ಕಡೆಗೋಲು), ಒಂದು 'ಪರ್ದತ್ತಿ' (ಪೈರು ಕೊಯ್ಯುವ ಹಲ್ಲುಗಳಿರುವ ಕತ್ತಿ) ಒಂದು 'ಸೇರು' (ಅಕ್ಕಿ, ಭತ್ತ ಮೊದಲಾದವುಗಳನ್ನು ಅಳೆಯುವ ಸಾಧನ) - ಇತ್ಯಾದಿಗಳನ್ನು ಗಂಧ ಹಚ್ಚಿ ಇಡುತ್ತಾರೆ. ಅವುಗಳಲ್ಲಿಯೇ ಐದು ವೀಳ್ಯದೆಲೆ, ಒಂದು ಅಡಕೆ ಇಡುತ್ತಾರೆ. ಒಂದು 'ತುದಿ ಬಾಳೆಎಲೆಯಲ್ಲಿ ಒಂದು 'ಪಾವು' ಬೆಳ್ತಿಗೆ ಅಕ್ಕಿ, ಅದರ ಮೇಲೆ, ಸೌತೆ ಇಡುತ್ತಾರೆ. ಅದರಲ್ಲಿಯೂ ಐದು ವೀಳ್ಯದೆಲೆ, ಒಂದು ಅಡಿಕೆ ಇಡುತ್ತಾರೆ. ಒಂದು ಹರಿವೆ, ಒಂದು 'ಕರಿಕೆಸುವಿನ ದಂಟು ಅಕ್ಕಿಯ ಬದಿಯಲ್ಲಿಡುತ್ತಾರೆ, ಈ ಹರಿವೆ, ಕೆಸು, ಸೌತೆಗಳನ್ನು ನಂತರ ನಡೆಯುವ 'ಪುದ್ವಾರ್‌'ಗೆ ಪದಾರ್ಥಕ್ಕೆ ಬಳಸಿಕೊಳ್ಳುತ್ತಾರೆ.

ಮನೆಯೊಳಗೆ ಇಟ್ಟ 'ಕುರಲ್'ಗೆ ತೆಂಗಿನಕಾಯಿ ಒಂದನ್ನು ಒಡೆಯುತ್ತಾರೆ. ನಂತರ 'ಕುರಲ್‌'ಗೆಲ್ಲ ಗಂಧ ಪ್ರಸಾದ ಮುಟ್ಟಿಸಲಾಗುತ್ತದೆ. ತೆಂಗಿನ ಕಾಯಿಯ ಗಡಿಗಳಿಗೆ ಭತ್ತ ಇಲ್ಲವೆ ಗಂಧ ಹಾಕುತ್ತಾರೆ. ನಂತರ ಎಲ್ಲರೂ ಸೇರಿ ಮನೆಯೊಳಗೆ ಮತ್ತೆ ತೆನೆಗಳಿಗೆ ಧೂಪ, ಆರತಿ ಬೆಳಗಿ ಈ ರೀತಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಭತ್ತದ ತೆನೆಯಿಂದ ಮೂರು ಇಲ್ಲವೇ ಐದು ಭತ್ತ ತೆಗೆದು ಅದರ ಸಿಪ್ಪೆ ಸುಲಿದು ಅಕ್ಕಿಯನ್ನು ಉರಿಸಿಟ್ಟ ದೀಪಕ್ಕೆ ಹಾಕುತ್ತಾರೆ. ಬಳಿಕ ಭತ್ತದಿಂದ ಅಕ್ಕಿ ಕಾಳು ತೆಗೆದು ಹಾಲಿಗೆ ಸೇರಿಸಿ ಮನೆಮಂದಿ ಕುಡಿಯುವ ಕ್ರಮವಿದೆ.

ಬಳಿಕ ಮೂರು ಮೂರು 'ತೆನೆ'ಗಳನ್ನು ಈಗಾಗಲೇ ತಿಳಿಸಿದ ವಸ್ತುಗಳ ಸಹಿತ 'ದಡ್ಡಲ್‌ನಾರಿ'ನಿಂದ ಕಟ್ಟುಗಳನ್ನಾಗಿ ಕಟ್ಟಿ ವಿಂಗಡಿಸುತ್ತಾರೆ. ಮುಖ್ಯವಾಗಿ ದೇವರ ಮಣೆಗೆ, ಬಾಗಿಲಿಗೆ, ಭೂತದ ಕೋಣೆಗೆ, ತುಳಸಿ ಕಟ್ಟೆಗೆ, ಬಾವಿ, ದಂಡೆಗೆ, ಹಟ್ಟಿಗೆ, ತೆಂಗಿನ ಮರಕ್ಕೆ, ಹಲಸಿನ ಮರಕ್ಕೆ, ಅಕ್ಕಿ ಶೇಖರಿಸಿಡುವ ಡ್ರಮ್, ನೊಗನೇಗಿಲುಗಳಿಗೆ ಇತ್ಯಾದಿಗಳಿಗೆಲ್ಲ ಕಟ್ಟುತ್ತಾರೆ. ಹೀಗೆ ತೆನೆ ಕಟ್ಟುವ ಕೆಲಸ ಆದ ಮೇಲೆ ಮಧ್ಯಾಹ್ನ ಮನೆಯ ಹೆಂಗಸರು ರುಚಿಕರವಾದ ತರಕಾರಿ ಅಡುಗೆ ಮಾಡಿರುತ್ತಾರೆ. ಎಲ್ಲರೂ ಸೇರಿ ಊಟ ಮಾಡುತ್ತಾರೆ.

ತುಳುವರ ಆಚರಣೆ ವಿಶಿಷ್ಟ: ತುಳುನಾಡಿನಲ್ಲಿ ಗಣೇಶ ಚೌತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಈ ಆಚರಣೆಯಲ್ಲಿ ಗಣೇಶನ ಮೂರ್ತಿಯ ಪೂಜೆ ಇಲ್ಲ. ಇಲ್ಲಿ ಗಣೇಶನು ‘ಬಾಮಕುಮಾರ’ನಾಗಿ ಪ್ರಕೃತಿಯ ರೂಪದಲ್ಲಿ ಅವತರಿಸುತ್ತಾನೆ. ಕಬ್ಬುಗಳನ್ನು ಇಟ್ಟು ಅದರಲ್ಲಿ ಗಣೇಶನನ್ನು ಆವಾಹಿಸುವುದು ತುಳುನಾಡಿನ ಕ್ರಮ.

ಕಬ್ಬನ್ನು ತುಂಡು ಮಾಡಿ ಚೌಕಾಕಾರದಲ್ಲಿ ಜೋಡಿಸಿ, ಅದಕ್ಕೆ ದೀಪವಿಟ್ಟು, ಬಾಳೆ ಎಲೆಯ ಮೇಲೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, 1 ರೂ. ನಾಣ್ಯದ ಗಣಪತಿ ಸ್ವಸ್ತಿಕ ಇರಿಸಿ, ಬೆಲ್ಲ, ಬಾಳೆಹಣ್ಣು, ಉದ್ದಿನದೋಸೆ (ತೆಳ್ಳವು) ಬಡಿಸಿ ಪೂಜಿಸುತ್ತಾರೆ. ಹೆಸರು, ಹುರುಳಿ ಮೊದಲಾದ ಕಾಳುಗಳ ಚಿಗುರುಗಳೇ ಗಣಪನಿಗೆ ಹೂವುಗಳು. ವಾರದ ಮೊದಲು ಹಬ್ಬದ ಸಿದ್ಧತೆಗಳು ಶುರುವಾಗುತ್ತವೆ. ತುಳಸಿಕಟ್ಟೆಯ ಬಳಿ ಮಣ್ಣು ಹದಗೊಳಿಸಿ, ಕಾಳುಗಳನ್ನು ಬಿತ್ತಿ, ಅವು ಮೊಳಕೆಯೊಡೆದು ಚಿಗುರುಗಳಾಗಬೇಕು. ನಳನಳಿಸುವ ಚಿಗುರುಗಳು ಬಾಮಕುಮಾರನಿಗೆ ಅರ್ಪಣೆ ಮಾಡಲಾಗುತ್ತದೆ. ಮಣ್ಣಿನ ಸಂಬಂಧದೊಂದಿಗೆ ಪ್ರಕೃತಿ ಸಹಜವಾಗಿ ದೊರೆಯುವ ವಸ್ತುಗಳನ್ನು ಬಳಸಿ ಆಚರಿಸುವ ಹಬ್ಬ ಕೃಷಿ ಸಂಸ್ಕೃತಿಯನ್ನು ಪ್ರತಿಫಲಿಸುತ್ತದೆ.

ಇದನ್ನೂ ಓದಿ: ಬೆಂಗಳೂರು: ಗಣೇಶೋತ್ಸವಕ್ಕೆ ಬಿಗಿ ಭದ್ರತೆ, CCTV ಡ್ರೋನ್ ಕ್ಯಾಮರಾ ಕಣ್ಗಾವಲು - Bengaluru Ganeshotsav

Last Updated : Sep 7, 2024, 12:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.