ETV Bharat / state

ಪ್ರಜ್ವಲ್ ಪ್ರಕರಣದಲ್ಲಿ ಮುಜುಗರ ಆಗುವುದಾದರೆ ಮೈತ್ರಿ ಬಗ್ಗೆ ಅವರೇ ತೀರ್ಮಾನ ಮಾಡಲಿ : ಹೆಚ್ ಡಿ ಕುಮಾರಸ್ವಾಮಿ - Former CM HD Kumaraswamy

author img

By ETV Bharat Karnataka Team

Published : May 7, 2024, 6:24 PM IST

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣದ ಬಗ್ಗೆ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ಮಾತನಾಡಿದರು.

former-cm-hd-kumaraswamy
ಹೆಚ್ ಡಿ ಕುಮಾರಸ್ವಾಮಿ (ETV Bharat)

ಬೆಂಗಳೂರು : ಪೆನ್​ಡ್ರೈವ್ ವಿಚಾರ ನನಗೆ ಮೊದಲೇ ಗೊತ್ತಿದ್ದರೆ ಯಾವುದೇ ಕಾರಣಕ್ಕೂ ಪ್ರಜ್ವಲ್​ಗೆ ಟಿಕೆಟ್ ಕೊಡುತ್ತಿರಲಿಲ್ಲ. ಬಿಜೆಪಿ ಜೊತೆಗೆ ನಾವು ಸುದೀರ್ಘ ಅವಧಿ ಇರಲು ಮೈತ್ರಿ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಬಿಜೆಪಿಯವರಿಗೆ ಮುಜುಗರ ಆಗುವುದಾದರೆ ಅವರೇ ತೀರ್ಮಾನ ಮಾಡಲಿ. ನಮ್ಮದೇನು ವಿರೋಧವಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ಮುಂದುವರಿಸುವ ಕುರಿತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರದ್ದು ರಾಷ್ಟ್ರೀಯ ಪಕ್ಷ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೈತ್ರಿ ಇರುತ್ತದೆಯೋ, ಇರುವುದಿಲ್ಲವೋ ಮುಂದೆ ನೋಡೋಣ ಎಂದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್​ಗೆ ತಡೆಯಲು ಆಗಲಿಲ್ಲ. ಅದಕ್ಕಾಗಿ ಹೀಗೆಲ್ಲಾ ಅವರು ಮಾತನಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಹೆಸರನ್ನು ಪದೇ ಪದೇ ಬಳಕೆ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ನಾನೇ ಸ್ಟೇ ತಂದಿದ್ದೆ ಎಂದು ಪ್ರಶ್ನೆಯೊಂದಕ್ಕೆ ಹೆಚ್​ಡಿಕೆ ಉತ್ತರಿಸಿದರು.

ರಾಜ್ಯಪಾಲರಿಗೂ ದೂರು : ನಮ್ಮ ಒತ್ತಾಯ ಪಾರದರ್ಶಕ ತನಿಖೆ ಆಗಬೇಕಷ್ಟೆ. ಈ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಾಗಾಗಿ, ಸರ್ಕಾರದ ವಿರುದ್ಧ ಇನ್ನು ಎರಡು ದಿನಗಳಲ್ಲಿ ರಾಜ್ಯಪಾಲರಿಗೂ ದೂರು ಕೊಡುತ್ತೇವೆ ಎಂದು ಹೇಳಿದರು.

ಡಿ. ಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್‌ ಅನ್ನೋದು ಎಲ್ಲರಿಗೆ ಗೊತ್ತಿದೆ. ಡಿ. ಕೆ ಶಿವಕುಮಾರ್ ಯಾವ ತರಹ ಬಂದಿದ್ದೀರಾ? ನಿನ್ನೆಯ ಮೊದಲು ಹೇಳಿಕೆ, ಆಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದಾರೆ. ಅವರ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿ ಕೆ ಶಿವಕುಮಾರ್ ಮುಖ ಆಗಿತ್ತು ಎಂದು ಹೆಚ್​ಡಿಕೆ ವ್ಯಂಗ್ಯವಾಡಿದರು.

ಬೆಳಗಾವಿ ಸಾಹುಕಾರ್ ಮೇಲೆ ಇವರೇ ವಿಡಿಯೋ ರಿಲೀಸ್‌ ಮಾಡಿದ್ದರು. ಇದಕ್ಕೆ 30-40 ಕೋಟಿ ರೂ. ಖರ್ಚು ಮಾಡಿದ್ದೇನೆ ಅಂತ ಸಹ ಡಿ.ಕೆ ಶಿವಕುಮಾರ್ ಹೇಳಿರುವ ಆಡಿಯೋವಿದೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಕೇಸ್‌ ಹೊರಬರಲು ಡಿಕೆಶಿ ಕಾರಣ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೈ ಹಿಡಿಯುವುದಿಲ್ಲವೆಂದು ಗೊತ್ತಾಗಿದೆ. ಈಗ ಈ ವಿಷಯದಲ್ಲಿ ಕಾಂಗ್ರೆಸ್​ನವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಎಳೆದುತಂದು ದೇಶವ್ಯಾಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಭಾರತ ಮಾತ್ರವಲ್ಲ ಸಿಂಗಾಪುರ್ ಸೇರಿದಂತೆ ವಿದೇಶದ ವಾಹಿನಿಗಳಲ್ಲೂ ಸುದ್ದಿ ಬಂದಿದೆ. ಪೆನ್ ಡ್ರೈವ್​ನಲ್ಲಿ ಫೋಟೋ ಹಾಕಿ ಸೃಷ್ಟಿ ಮಾಡಿ ಬೀದಿ ಬೀದಿಯಲ್ಲಿ ಹರಾಜು ಹಾಕಿದ್ದೀರಿ.

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್‌, ಲುಕ್ ಔಟ್ ನೋಟಿಸ್‌ ಏನೋ ಮಾತನಾಡುತ್ತೀರಿ ಅಲ್ವಾ? ಅದೇ ರೀತಿ ರಾಜ್ಯಾದ್ಯಂತ ಪೆನ್‌ ಡ್ರೈವ್‌ ರಿಲೀಸ್‌ ಮಾಡಿ ಮಹಿಳೆಯರ ಮಾನ ಹರಾಜು ಹಾಕಿದ ವ್ಯಕ್ತಿಗಳ ಬಂಧನಕ್ಕೆ ಯಾವ ಬಣ್ಣದಲ್ಲಿ ನೋಟಿಸ್‌ ನೀಡಿದ್ದೀರಿ?. ಯಾಕೆ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಹೆಚ್​ಡಿಕೆ ಪ್ರಶ್ನಿಸಿದರು.

ದೇವೇಗೌಡ ಕುಟುಂಬ ಒಡೆದಿದ್ದು, ರೇವಣ್ಣ ಕುಟುಂಬವನ್ನು ಕುಮಾರಸ್ವಾಮಿ ಅವರು ನಾಶ ಮಾಡಲು ಹೊರಟಿದ್ದಾರೆ ಎನ್ನುವಂತಹ ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿಹಾಕಿದ ಹೆಚ್​ಡಿಕೆ, ಪ್ರಜ್ವಲ್ ಅವರನ್ನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದು ಬೇಡವೆಂದು ತಾವು ತೆಗೆದುಕೊಂಡಿದ್ದ ನಿಲುವಿಗೆ ಸ್ಪಷ್ಟನೆ ನೀಡಿದರು.

ಪ್ರಜ್ವಲ್ ದೊಡ್ಡವರಿಗೆ ಗೌರವ ಕೊಡುವುದಿಲ್ಲ. ಕಾರ್ಯಕರ್ತರ ಜೊತೆ ಸರಿಯಾಗಿ ನಡೆದುಕೊಳ್ಳುವುದಿಲ್ಲ. ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಎಂದು ಕಾರ್ಯಕರ್ತರು ಕೇಳಿದ್ದರು. ಹಾಗಾಗಿ, ಪ್ರಜ್ವಲ್​ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ನಾನು ಹೇಳಿದ್ದು ನಿಜ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಮತ್ತೆ ಡಿ. ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಹೆಚ್​ಡಿಕೆ, ಮನುಷ್ಯತ್ವ ಇವರಿಗೆ ಇದೆಯಾ?, ಪಾಪ ಯೋಗೇಶ್ವರ್ ಮಗಳನ್ನು ಕಾಂಗ್ರೆಸ್​ಗೆ ತಂದು ಉದ್ಧಾರ ಮಾಡುತ್ತಾರಂತೆ. 2002ರಲ್ಲೂ ಬಂದಿತ್ತು ಒಂದು ವಿಷಯ. ಅದು ಈಗ ಬೇಡ ಎಂದು ಕುಮಾರಸ್ವಾಮಿ ಹೇಳಿದ್ರು.

ಇದನ್ನೂ ಓದಿ : 25 ಸಾವಿರ ಪೆನ್​ಡ್ರೈವ್​ ಹಂಚಿಕೆ: ಸಿಬಿಐ ತನಿಖೆಗೆ ಹೆಚ್​ ಡಿಕೆ ಆಗ್ರಹ - HDK Press Meet

ಬೆಂಗಳೂರು : ಪೆನ್​ಡ್ರೈವ್ ವಿಚಾರ ನನಗೆ ಮೊದಲೇ ಗೊತ್ತಿದ್ದರೆ ಯಾವುದೇ ಕಾರಣಕ್ಕೂ ಪ್ರಜ್ವಲ್​ಗೆ ಟಿಕೆಟ್ ಕೊಡುತ್ತಿರಲಿಲ್ಲ. ಬಿಜೆಪಿ ಜೊತೆಗೆ ನಾವು ಸುದೀರ್ಘ ಅವಧಿ ಇರಲು ಮೈತ್ರಿ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಬಿಜೆಪಿಯವರಿಗೆ ಮುಜುಗರ ಆಗುವುದಾದರೆ ಅವರೇ ತೀರ್ಮಾನ ಮಾಡಲಿ. ನಮ್ಮದೇನು ವಿರೋಧವಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ಮುಂದುವರಿಸುವ ಕುರಿತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರದ್ದು ರಾಷ್ಟ್ರೀಯ ಪಕ್ಷ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೈತ್ರಿ ಇರುತ್ತದೆಯೋ, ಇರುವುದಿಲ್ಲವೋ ಮುಂದೆ ನೋಡೋಣ ಎಂದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್​ಗೆ ತಡೆಯಲು ಆಗಲಿಲ್ಲ. ಅದಕ್ಕಾಗಿ ಹೀಗೆಲ್ಲಾ ಅವರು ಮಾತನಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಹೆಸರನ್ನು ಪದೇ ಪದೇ ಬಳಕೆ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ನಾನೇ ಸ್ಟೇ ತಂದಿದ್ದೆ ಎಂದು ಪ್ರಶ್ನೆಯೊಂದಕ್ಕೆ ಹೆಚ್​ಡಿಕೆ ಉತ್ತರಿಸಿದರು.

ರಾಜ್ಯಪಾಲರಿಗೂ ದೂರು : ನಮ್ಮ ಒತ್ತಾಯ ಪಾರದರ್ಶಕ ತನಿಖೆ ಆಗಬೇಕಷ್ಟೆ. ಈ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಾಗಾಗಿ, ಸರ್ಕಾರದ ವಿರುದ್ಧ ಇನ್ನು ಎರಡು ದಿನಗಳಲ್ಲಿ ರಾಜ್ಯಪಾಲರಿಗೂ ದೂರು ಕೊಡುತ್ತೇವೆ ಎಂದು ಹೇಳಿದರು.

ಡಿ. ಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್‌ ಅನ್ನೋದು ಎಲ್ಲರಿಗೆ ಗೊತ್ತಿದೆ. ಡಿ. ಕೆ ಶಿವಕುಮಾರ್ ಯಾವ ತರಹ ಬಂದಿದ್ದೀರಾ? ನಿನ್ನೆಯ ಮೊದಲು ಹೇಳಿಕೆ, ಆಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದಾರೆ. ಅವರ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿ ಕೆ ಶಿವಕುಮಾರ್ ಮುಖ ಆಗಿತ್ತು ಎಂದು ಹೆಚ್​ಡಿಕೆ ವ್ಯಂಗ್ಯವಾಡಿದರು.

ಬೆಳಗಾವಿ ಸಾಹುಕಾರ್ ಮೇಲೆ ಇವರೇ ವಿಡಿಯೋ ರಿಲೀಸ್‌ ಮಾಡಿದ್ದರು. ಇದಕ್ಕೆ 30-40 ಕೋಟಿ ರೂ. ಖರ್ಚು ಮಾಡಿದ್ದೇನೆ ಅಂತ ಸಹ ಡಿ.ಕೆ ಶಿವಕುಮಾರ್ ಹೇಳಿರುವ ಆಡಿಯೋವಿದೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಕೇಸ್‌ ಹೊರಬರಲು ಡಿಕೆಶಿ ಕಾರಣ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೈ ಹಿಡಿಯುವುದಿಲ್ಲವೆಂದು ಗೊತ್ತಾಗಿದೆ. ಈಗ ಈ ವಿಷಯದಲ್ಲಿ ಕಾಂಗ್ರೆಸ್​ನವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಎಳೆದುತಂದು ದೇಶವ್ಯಾಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಭಾರತ ಮಾತ್ರವಲ್ಲ ಸಿಂಗಾಪುರ್ ಸೇರಿದಂತೆ ವಿದೇಶದ ವಾಹಿನಿಗಳಲ್ಲೂ ಸುದ್ದಿ ಬಂದಿದೆ. ಪೆನ್ ಡ್ರೈವ್​ನಲ್ಲಿ ಫೋಟೋ ಹಾಕಿ ಸೃಷ್ಟಿ ಮಾಡಿ ಬೀದಿ ಬೀದಿಯಲ್ಲಿ ಹರಾಜು ಹಾಕಿದ್ದೀರಿ.

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್‌, ಲುಕ್ ಔಟ್ ನೋಟಿಸ್‌ ಏನೋ ಮಾತನಾಡುತ್ತೀರಿ ಅಲ್ವಾ? ಅದೇ ರೀತಿ ರಾಜ್ಯಾದ್ಯಂತ ಪೆನ್‌ ಡ್ರೈವ್‌ ರಿಲೀಸ್‌ ಮಾಡಿ ಮಹಿಳೆಯರ ಮಾನ ಹರಾಜು ಹಾಕಿದ ವ್ಯಕ್ತಿಗಳ ಬಂಧನಕ್ಕೆ ಯಾವ ಬಣ್ಣದಲ್ಲಿ ನೋಟಿಸ್‌ ನೀಡಿದ್ದೀರಿ?. ಯಾಕೆ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಹೆಚ್​ಡಿಕೆ ಪ್ರಶ್ನಿಸಿದರು.

ದೇವೇಗೌಡ ಕುಟುಂಬ ಒಡೆದಿದ್ದು, ರೇವಣ್ಣ ಕುಟುಂಬವನ್ನು ಕುಮಾರಸ್ವಾಮಿ ಅವರು ನಾಶ ಮಾಡಲು ಹೊರಟಿದ್ದಾರೆ ಎನ್ನುವಂತಹ ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿಹಾಕಿದ ಹೆಚ್​ಡಿಕೆ, ಪ್ರಜ್ವಲ್ ಅವರನ್ನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದು ಬೇಡವೆಂದು ತಾವು ತೆಗೆದುಕೊಂಡಿದ್ದ ನಿಲುವಿಗೆ ಸ್ಪಷ್ಟನೆ ನೀಡಿದರು.

ಪ್ರಜ್ವಲ್ ದೊಡ್ಡವರಿಗೆ ಗೌರವ ಕೊಡುವುದಿಲ್ಲ. ಕಾರ್ಯಕರ್ತರ ಜೊತೆ ಸರಿಯಾಗಿ ನಡೆದುಕೊಳ್ಳುವುದಿಲ್ಲ. ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಎಂದು ಕಾರ್ಯಕರ್ತರು ಕೇಳಿದ್ದರು. ಹಾಗಾಗಿ, ಪ್ರಜ್ವಲ್​ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ನಾನು ಹೇಳಿದ್ದು ನಿಜ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಮತ್ತೆ ಡಿ. ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಹೆಚ್​ಡಿಕೆ, ಮನುಷ್ಯತ್ವ ಇವರಿಗೆ ಇದೆಯಾ?, ಪಾಪ ಯೋಗೇಶ್ವರ್ ಮಗಳನ್ನು ಕಾಂಗ್ರೆಸ್​ಗೆ ತಂದು ಉದ್ಧಾರ ಮಾಡುತ್ತಾರಂತೆ. 2002ರಲ್ಲೂ ಬಂದಿತ್ತು ಒಂದು ವಿಷಯ. ಅದು ಈಗ ಬೇಡ ಎಂದು ಕುಮಾರಸ್ವಾಮಿ ಹೇಳಿದ್ರು.

ಇದನ್ನೂ ಓದಿ : 25 ಸಾವಿರ ಪೆನ್​ಡ್ರೈವ್​ ಹಂಚಿಕೆ: ಸಿಬಿಐ ತನಿಖೆಗೆ ಹೆಚ್​ ಡಿಕೆ ಆಗ್ರಹ - HDK Press Meet

ETV Bharat Logo

Copyright © 2024 Ushodaya Enterprises Pvt. Ltd., All Rights Reserved.