ETV Bharat / state

ಅಡಕೆ ತೋಟದ ಮಾಲೀಕರೇ ಹುಷಾರ್​​​!: ದಾವಣಗೆರೆಯಲ್ಲಿ ಐದಾರು ಕ್ವಿಂಟಾಲ್​ ಹಸಿ ಅಡಕೆ ಕಳ್ಳತನ

ದಾವಣಗೆರೆ ತಾಲೂಕಿನಲ್ಲಿ ಅಡಕೆ ತೋಟದಿಂದ 5-6 ಕ್ವಿಂಟಾಲ್​ ಹಸಿ ಅಡಕೆ ಕಳ್ಳತನವಾಗಿದ್ದು, ಮಾಯಕೊಂಡ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

author img

By ETV Bharat Karnataka Team

Published : 2 hours ago

ದಾವಣಗೆರೆಯಲ್ಲಿ ಐದಾರು ಕ್ವಿಂಟಾಲ್​ ಹಸಿ ಅಡಿಕೆ ಕಳ್ಳತನ
ದಾವಣಗೆರೆಯಲ್ಲಿ ಐದಾರು ಕ್ವಿಂಟಾಲ್​ ಹಸಿ ಅಡಕೆ ಕಳ್ಳತನ (ETV Bharat)

ದಾವಣಗೆರೆ: ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಅಡಕೆ ತೋಟಕ್ಕೆ ನುಗ್ಗಿರುವ ಕಳ್ಳರು ಐದಾರು ಕ್ವಿಂಟಾಲ್ ಹಸಿ ಅಡಕೆಯನ್ನು ಅಡಕೆ ಮರದಲ್ಲೇ ಕೊಯ್ದು ಹೊತ್ತೊಯ್ದಿದ್ದಾರೆ.

ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಗುರುವಾರ ರಾತ್ರಿ ತೋಟಕ್ಕೆ ನುಗ್ಗಿರುವ ಅಡಕೆ ಕಳ್ಳರು ಐದಾರು ಕ್ವಿಂಟಾಲ್​ ಹಸಿ ಅಡಕೆ ಕಳುವು ಮಾಡಿದ್ದಾರೆ. ಮಾಯಕೊಂಡದ ರೈತ ಬಸವರಾಜಯ್ಯ ಅವರ ತೋಟಕ್ಕೆ ಕಳ್ಳರು ಕನ್ನ ಹಾಕಿದ್ದು, ಫಸಲಿಗೆ ಬಂದಿದ್ದ ಹಸಿ ಅಡಕೆಯನ್ನು ಮರವೇರಿ ಕೊಯ್ದುಕೊಂಡು ಹೋಗಿದ್ದಾರೆ.

ಅಡಕೆ ಕಳ್ಳತನ ಮಾಡುವ ಅವಸರದಲ್ಲಿ ಕುಡುಗೋಲು, ಐವತ್ತು ಕೆಜಿಯಷ್ಟು ಅಡಕೆಯನ್ನು ತೋಟದಲ್ಲಿ ಬಿಟ್ಟು ಹೋಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೈತ ಬಸವರಾಜಯ್ಯ ಕಷ್ಟಪಟ್ಟು ಸಾಲ ಸೋಲ ಮಾಡಿ ಅಡಕೆ ಬೆಳೆದಿದ್ದರು. ಅಡಕೆ ಕೂಡ ಫಸಲಿಗೆ ಬಂದಿತ್ತು. ಇದನ್ನು ಮೊದಲೇ ಗಮನಿಸಿದ ಕಳ್ಳರು ಅಡಕೆ ಕದ್ದಿದ್ದಾರೆ.

ಈ ಘಟನೆ ಸಂಬಂಧ ಮಾಯಕೊಂಡ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. "ಬೆಳಗ್ಗೆ ವಾಕ್​ಗೆ ಬರುವ ಜನ ನನ್ನ ಗಮನಕ್ಕೆ ತಂದಿದ್ದರು. ಈ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಐದಾರು ಕ್ವಿಂಟಾಲ್ ಅಡಕೆ ಕಳ್ಳತನ ಆಗಿದೆ. ಐವತ್ತು ಕೆಜಿ ಅಡಕೆ ತೋಟದಲ್ಲಿ ಬಿಟ್ಟು ಹೋಗಿದ್ದಾರೆ. ಈ ಹಿಂದೆ ತೋಟದಲ್ಲಿ ಎರಡು ಬಾರಿ ಕಳ್ಳತ ಆಗಿತ್ತು. ಇದೀಗ ದೂರು ದಾಖಲು ಮಾಡಿದ್ದೇನೆ" ಎಂದು ಅಡಕೆ ಮಾಲೀಕ ಬಸವರಾಜಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಚ್ಚಿನಿಂದ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಬಂಧನ

ದಾವಣಗೆರೆ: ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಅಡಕೆ ತೋಟಕ್ಕೆ ನುಗ್ಗಿರುವ ಕಳ್ಳರು ಐದಾರು ಕ್ವಿಂಟಾಲ್ ಹಸಿ ಅಡಕೆಯನ್ನು ಅಡಕೆ ಮರದಲ್ಲೇ ಕೊಯ್ದು ಹೊತ್ತೊಯ್ದಿದ್ದಾರೆ.

ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಗುರುವಾರ ರಾತ್ರಿ ತೋಟಕ್ಕೆ ನುಗ್ಗಿರುವ ಅಡಕೆ ಕಳ್ಳರು ಐದಾರು ಕ್ವಿಂಟಾಲ್​ ಹಸಿ ಅಡಕೆ ಕಳುವು ಮಾಡಿದ್ದಾರೆ. ಮಾಯಕೊಂಡದ ರೈತ ಬಸವರಾಜಯ್ಯ ಅವರ ತೋಟಕ್ಕೆ ಕಳ್ಳರು ಕನ್ನ ಹಾಕಿದ್ದು, ಫಸಲಿಗೆ ಬಂದಿದ್ದ ಹಸಿ ಅಡಕೆಯನ್ನು ಮರವೇರಿ ಕೊಯ್ದುಕೊಂಡು ಹೋಗಿದ್ದಾರೆ.

ಅಡಕೆ ಕಳ್ಳತನ ಮಾಡುವ ಅವಸರದಲ್ಲಿ ಕುಡುಗೋಲು, ಐವತ್ತು ಕೆಜಿಯಷ್ಟು ಅಡಕೆಯನ್ನು ತೋಟದಲ್ಲಿ ಬಿಟ್ಟು ಹೋಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೈತ ಬಸವರಾಜಯ್ಯ ಕಷ್ಟಪಟ್ಟು ಸಾಲ ಸೋಲ ಮಾಡಿ ಅಡಕೆ ಬೆಳೆದಿದ್ದರು. ಅಡಕೆ ಕೂಡ ಫಸಲಿಗೆ ಬಂದಿತ್ತು. ಇದನ್ನು ಮೊದಲೇ ಗಮನಿಸಿದ ಕಳ್ಳರು ಅಡಕೆ ಕದ್ದಿದ್ದಾರೆ.

ಈ ಘಟನೆ ಸಂಬಂಧ ಮಾಯಕೊಂಡ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. "ಬೆಳಗ್ಗೆ ವಾಕ್​ಗೆ ಬರುವ ಜನ ನನ್ನ ಗಮನಕ್ಕೆ ತಂದಿದ್ದರು. ಈ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಐದಾರು ಕ್ವಿಂಟಾಲ್ ಅಡಕೆ ಕಳ್ಳತನ ಆಗಿದೆ. ಐವತ್ತು ಕೆಜಿ ಅಡಕೆ ತೋಟದಲ್ಲಿ ಬಿಟ್ಟು ಹೋಗಿದ್ದಾರೆ. ಈ ಹಿಂದೆ ತೋಟದಲ್ಲಿ ಎರಡು ಬಾರಿ ಕಳ್ಳತ ಆಗಿತ್ತು. ಇದೀಗ ದೂರು ದಾಖಲು ಮಾಡಿದ್ದೇನೆ" ಎಂದು ಅಡಕೆ ಮಾಲೀಕ ಬಸವರಾಜಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಚ್ಚಿನಿಂದ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.