ETV Bharat / state

'ಕೊಹ್ಲಿ ಕಾಕ ಸೆಮಿ ಫೈನಲ್‌ನಲ್ಲಿ ಸೆಂಚುರಿ ಹೊಡೆಯಲಿ': ದಾವಣಗೆರೆ ಕ್ರಿಕೆಟ್‌ ಅಭಿಮಾನಿಗಳ ಅಪೇಕ್ಷೆ - T20 World Cup Semi Final

author img

By ETV Bharat Karnataka Team

Published : Jun 27, 2024, 6:35 PM IST

Updated : Jun 27, 2024, 6:59 PM IST

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಭಾರತ ಗೆದ್ದು ಬರಲೆಂದು ದಾವಣಗೆರೆ ಕ್ರಿಕೆಟ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

fans-who-wished-india-to-win-the-t20-world-cup-semi-final-match
ಭಾರತ ಗೆದ್ದು ಬರಲೆಂದು ಹಾರೈಸಿದ ಕ್ರಿಕೆಟ್‌ಪ್ರೇಮಿಗಳು (ETV Bharat)
ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ (ETV Bharat)

ದಾವಣಗೆರೆ: ಭಾರತ-ಇಂಗ್ಲೆಂಡ್‌ ನಡುವಿನ ಟಿ20 ವಿಶ್ವಕಪ್‌ ಸೆಮಿ ಫೈನಲ್‌ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕ್ರೀಡಾಭಿಮಾನಿಗಳು ಟೀಂ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ.

"ಭಾರತ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್​ಗೆ ಬಂದಿದೆ. ಇಲ್ಲಿಯೂ ಗೆದ್ದು ಫೈನಲ್‌ಗೇರಲಿದೆ. ತಂಡದ ಬ್ಯಾಟಿಂಗ್, ಬೌಲಿಂಗ್ ಲೈನಪ್ ಚೆನ್ನಾಗಿದೆ. ರೋಹಿತ್ ಶರ್ಮಾ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಕೂಡಾ ಚೆನ್ನಾಗಿದೆ‌. ಹಾಗಾಗಿ ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ" ಎಂದು ಶೃತಿ ರಾಯ್ಕರ್ ಎಂಬವರು ಅಭಿಮಾನ ವ್ಯಕ್ತಪಡಿಸಿದರು.

ಮತ್ತೋರ್ವ ಅಭಿಮಾನಿ ಮಧುಶ್ರೀ ಮಾತನಾಡಿ, "ಭಾರತ ಫೈನಲ್‌ಗೇರಿ ಕಪ್ ಗೆಲ್ಲಲಿ" ಎಂದು ಆಶಿಸಿದರು.

"ಕೊಹ್ಲಿ ಕಾಕ ಕಳೆದ ಪಂದ್ಯಗಳಲ್ಲಿ ಚೆನ್ನಾಗಿ ಆಡಿಲ್ಲ. ಸೆಮಿಫೈನಲ್​ನಲ್ಲಿ ಹಾಫ್‌ ಸೆಂಚುರಿ ಅಥವಾ ಸೆೆಂಚುರಿ ಹೊಡೆಯುವ ನಿರೀಕ್ಷೆ ಇದೆ. ಇಂದಿನ ಮ್ಯಾಚ್ ಗೆದ್ದು ಭಾರತ ಫೈನಲ್‌ಗೇರಲಿದೆ" ಎಂದು ನಿತಿನ್ ಹೇಳಿದರು. "ಈ ಬಾರಿ ಗೆದ್ದು ಸೇಡು ತೀರಿಸಿಕೊಳ್ಳುತ್ತೇವೆ'' ಎಂದು ವಿನಯ್ ಎಂಬವರು ತಿಳಿಸಿದರು.

ಇದನ್ನೂ ಓದಿ: T20 World cup: ಇಂದು ವಿಶ್ವಕಪ್ ಸೆಮಿಸ್​ನಲ್ಲಿ ಭಾರತ Vs ಇಂಗ್ಲೆಂಡ್​​ ಫೈಟ್​: ಹವಾಮಾನ ವರದಿ ಹೀಗಿದೆ! - IND Vs ENG Semi Final

ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ (ETV Bharat)

ದಾವಣಗೆರೆ: ಭಾರತ-ಇಂಗ್ಲೆಂಡ್‌ ನಡುವಿನ ಟಿ20 ವಿಶ್ವಕಪ್‌ ಸೆಮಿ ಫೈನಲ್‌ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕ್ರೀಡಾಭಿಮಾನಿಗಳು ಟೀಂ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ.

"ಭಾರತ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್​ಗೆ ಬಂದಿದೆ. ಇಲ್ಲಿಯೂ ಗೆದ್ದು ಫೈನಲ್‌ಗೇರಲಿದೆ. ತಂಡದ ಬ್ಯಾಟಿಂಗ್, ಬೌಲಿಂಗ್ ಲೈನಪ್ ಚೆನ್ನಾಗಿದೆ. ರೋಹಿತ್ ಶರ್ಮಾ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಕೂಡಾ ಚೆನ್ನಾಗಿದೆ‌. ಹಾಗಾಗಿ ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ" ಎಂದು ಶೃತಿ ರಾಯ್ಕರ್ ಎಂಬವರು ಅಭಿಮಾನ ವ್ಯಕ್ತಪಡಿಸಿದರು.

ಮತ್ತೋರ್ವ ಅಭಿಮಾನಿ ಮಧುಶ್ರೀ ಮಾತನಾಡಿ, "ಭಾರತ ಫೈನಲ್‌ಗೇರಿ ಕಪ್ ಗೆಲ್ಲಲಿ" ಎಂದು ಆಶಿಸಿದರು.

"ಕೊಹ್ಲಿ ಕಾಕ ಕಳೆದ ಪಂದ್ಯಗಳಲ್ಲಿ ಚೆನ್ನಾಗಿ ಆಡಿಲ್ಲ. ಸೆಮಿಫೈನಲ್​ನಲ್ಲಿ ಹಾಫ್‌ ಸೆಂಚುರಿ ಅಥವಾ ಸೆೆಂಚುರಿ ಹೊಡೆಯುವ ನಿರೀಕ್ಷೆ ಇದೆ. ಇಂದಿನ ಮ್ಯಾಚ್ ಗೆದ್ದು ಭಾರತ ಫೈನಲ್‌ಗೇರಲಿದೆ" ಎಂದು ನಿತಿನ್ ಹೇಳಿದರು. "ಈ ಬಾರಿ ಗೆದ್ದು ಸೇಡು ತೀರಿಸಿಕೊಳ್ಳುತ್ತೇವೆ'' ಎಂದು ವಿನಯ್ ಎಂಬವರು ತಿಳಿಸಿದರು.

ಇದನ್ನೂ ಓದಿ: T20 World cup: ಇಂದು ವಿಶ್ವಕಪ್ ಸೆಮಿಸ್​ನಲ್ಲಿ ಭಾರತ Vs ಇಂಗ್ಲೆಂಡ್​​ ಫೈಟ್​: ಹವಾಮಾನ ವರದಿ ಹೀಗಿದೆ! - IND Vs ENG Semi Final

Last Updated : Jun 27, 2024, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.