ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ: ಸದ್ಯದ ಮಟ್ಟಿಗೆ ಸಿಬಿಐ ಎಂಟ್ರಿ ಅನುಮಾನ - Valmiki Corporation scam

author img

By ETV Bharat Karnataka Team

Published : Jun 1, 2024, 6:17 PM IST

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿರುವ ಹೊತ್ತಲ್ಲೇ, ಪ್ರಕರಣವನ್ನು ಸಿಬಿಐಗೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

Vidhana Soudha
ವಿಧಾನ ಸೌಧ (ETV Bharat Kannada)

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂಪಾಯಿ ಅವ್ಯವಹಾರ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ, ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ಎಸ್ಐಟಿ ತಂಡ, ನಿಗಮದಲ್ಲಿ ಕಾರ್ಯನಿರ್ವಹಿಸಿ ಅಮಾನತುಗೊಂಡ ಇಬ್ಬರು ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ಚುರುಕುಗೊಳಿಸಿದೆ. ಒಂದೆಡೆ ಬಹುಕೋಟಿ ಅವ್ಯವಹಾರ ಇದಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಇನ್ನೊಂದೆಡೆ ತನಿಖೆ ನಡೆಸಲು ಎಸ್ಐಟಿ ಸಮರ್ಥವೆನಿಸಿದ್ದು ಸದ್ಯದ ಮಟ್ಟಿಗೆ ಸಿಬಿಐಗೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

ಬ್ಯಾಂಕ್​ಗಳಲ್ಲಿ 3 ಕೋಟಿ ಆಥವಾ ಅದಕ್ಕಿಂತ ಹೆಚ್ಚು ಅವ್ಯವಹಾರ ಅಥವಾ ದುರ್ಬಳಕೆ ಆಗಿರುವುದು ಕಂಡು ಬಂದರೆ ಆರ್​ಬಿಐ ಮಾನದಂಡದ ಪ್ರಕಾರ ಸಿಬಿಐ ತನಿಖೆಗೆ ವರ್ಗಾಯಿಸಬೇಕಾದ ಆದೇಶವಿದೆ.‌ ಅಲ್ಲದೆ 50 ಕೋಟಿಗಿಂತ ಹೆಚ್ಚು ವಂಚನೆಯಾದರೆ ಬ್ಯಾಂಕ್​ನ ವಿಚಕ್ಷಣಾ ಅಧಿಕಾರಿಯೇ ಸಿಬಿಐಗೆ ದೂರು ನೀಡಬಹುದಾಗಿದೆ. ಇದಕ್ಕೆ‌ ಪೂರಕ ಎಂಬಂತೆ ಯೂನಿಯನ್ ಬ್ಯಾಂಕ್​ನ ಆಡಳಿತ ಮಂಡಳಿ ಸಹ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು.

3 ಕೋಟಿಗಿಂತ ಹೆಚ್ಚು ವಂಚನೆ ಕಂಡು ಬಂದರೆ ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂಬ ಆರ್​ಬಿಐ ಆದೇಶವಿದೆ. ಹಣಕಾಸು ಸಂಸ್ಥೆಗಳಲ್ಲಿ ಬಹುಕೋಟಿ ಅವ್ಯವಹಾರ ನಡೆದಾಗ ಸಿಬಿಐ ಎಂಟ್ರಿಯಾಗಲಿದೆ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ತನಿಖೆಗೆ ಸರ್ಕಾರವೇ ಎಸ್ಐಟಿ ರಚಿಸಿರುವಾಗ ಆರ್​ಬಿಐ ಆದೇಶ ಇಲ್ಲಿ ಅನ್ವಯವಾಗುವುದಿಲ್ಲ.‌ ಎಸ್ಐಟಿ ರಚನೆ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಸಿಬಿಐ ತನಿಖೆ ನೀಡುವುದಿಲ್ಲ ಎಂದು ಸರ್ಕಾರವೇ ಹೇಳಿರುವಾಗ ಕೇಂದ್ರ ತನಿಖಾ ಸಂಸ್ಥೆ ತನಿಖೆ ನಡೆಸುವುದು ಸದ್ಯದ ಮಟ್ಟಿಗೆ ಅಸಾಧ್ಯ. ಅವ್ಯವಹಾರವನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್​ಗೆ ಹೋಗಿ ವಕಾಲತ್ತು ಹೂಡಿ ಅಲ್ಲಿಂದ ಆದೇಶವಾದಾಗ ಮಾತ್ರ ಅಧಿಕೃತವಾಗಿ ಸಿಬಿಐ ತನಿಖೆ ನಡೆಸಬಹುದಾಗಿದೆ ಎಂದು‌ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ‌ ನಿಗಮದ ಅಕ್ರಮ ತನಿಖೆಗೆ ಎಸ್ಐಟಿ ರಚನೆ: ಒಂದೇ ವರ್ಷದಲ್ಲಿ ಮೂರನೇ ತನಿಖಾ ತಂಡ ಅಸ್ತಿತ್ವಕ್ಕೆ! - Valmiki tribal corporation scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂಪಾಯಿ ಅವ್ಯವಹಾರ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ, ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ಎಸ್ಐಟಿ ತಂಡ, ನಿಗಮದಲ್ಲಿ ಕಾರ್ಯನಿರ್ವಹಿಸಿ ಅಮಾನತುಗೊಂಡ ಇಬ್ಬರು ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ಚುರುಕುಗೊಳಿಸಿದೆ. ಒಂದೆಡೆ ಬಹುಕೋಟಿ ಅವ್ಯವಹಾರ ಇದಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಇನ್ನೊಂದೆಡೆ ತನಿಖೆ ನಡೆಸಲು ಎಸ್ಐಟಿ ಸಮರ್ಥವೆನಿಸಿದ್ದು ಸದ್ಯದ ಮಟ್ಟಿಗೆ ಸಿಬಿಐಗೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

ಬ್ಯಾಂಕ್​ಗಳಲ್ಲಿ 3 ಕೋಟಿ ಆಥವಾ ಅದಕ್ಕಿಂತ ಹೆಚ್ಚು ಅವ್ಯವಹಾರ ಅಥವಾ ದುರ್ಬಳಕೆ ಆಗಿರುವುದು ಕಂಡು ಬಂದರೆ ಆರ್​ಬಿಐ ಮಾನದಂಡದ ಪ್ರಕಾರ ಸಿಬಿಐ ತನಿಖೆಗೆ ವರ್ಗಾಯಿಸಬೇಕಾದ ಆದೇಶವಿದೆ.‌ ಅಲ್ಲದೆ 50 ಕೋಟಿಗಿಂತ ಹೆಚ್ಚು ವಂಚನೆಯಾದರೆ ಬ್ಯಾಂಕ್​ನ ವಿಚಕ್ಷಣಾ ಅಧಿಕಾರಿಯೇ ಸಿಬಿಐಗೆ ದೂರು ನೀಡಬಹುದಾಗಿದೆ. ಇದಕ್ಕೆ‌ ಪೂರಕ ಎಂಬಂತೆ ಯೂನಿಯನ್ ಬ್ಯಾಂಕ್​ನ ಆಡಳಿತ ಮಂಡಳಿ ಸಹ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು.

3 ಕೋಟಿಗಿಂತ ಹೆಚ್ಚು ವಂಚನೆ ಕಂಡು ಬಂದರೆ ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂಬ ಆರ್​ಬಿಐ ಆದೇಶವಿದೆ. ಹಣಕಾಸು ಸಂಸ್ಥೆಗಳಲ್ಲಿ ಬಹುಕೋಟಿ ಅವ್ಯವಹಾರ ನಡೆದಾಗ ಸಿಬಿಐ ಎಂಟ್ರಿಯಾಗಲಿದೆ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ತನಿಖೆಗೆ ಸರ್ಕಾರವೇ ಎಸ್ಐಟಿ ರಚಿಸಿರುವಾಗ ಆರ್​ಬಿಐ ಆದೇಶ ಇಲ್ಲಿ ಅನ್ವಯವಾಗುವುದಿಲ್ಲ.‌ ಎಸ್ಐಟಿ ರಚನೆ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಸಿಬಿಐ ತನಿಖೆ ನೀಡುವುದಿಲ್ಲ ಎಂದು ಸರ್ಕಾರವೇ ಹೇಳಿರುವಾಗ ಕೇಂದ್ರ ತನಿಖಾ ಸಂಸ್ಥೆ ತನಿಖೆ ನಡೆಸುವುದು ಸದ್ಯದ ಮಟ್ಟಿಗೆ ಅಸಾಧ್ಯ. ಅವ್ಯವಹಾರವನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್​ಗೆ ಹೋಗಿ ವಕಾಲತ್ತು ಹೂಡಿ ಅಲ್ಲಿಂದ ಆದೇಶವಾದಾಗ ಮಾತ್ರ ಅಧಿಕೃತವಾಗಿ ಸಿಬಿಐ ತನಿಖೆ ನಡೆಸಬಹುದಾಗಿದೆ ಎಂದು‌ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ‌ ನಿಗಮದ ಅಕ್ರಮ ತನಿಖೆಗೆ ಎಸ್ಐಟಿ ರಚನೆ: ಒಂದೇ ವರ್ಷದಲ್ಲಿ ಮೂರನೇ ತನಿಖಾ ತಂಡ ಅಸ್ತಿತ್ವಕ್ಕೆ! - Valmiki tribal corporation scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.