ETV Bharat / state

ದಾವಣಗೆರೆ: ಹಳ್ಳದಂತಾದ ಅಂಡರ್​​ಪಾಸ್​ನಲ್ಲಿ ಸಿಲುಕಿದ ಶಾಲಾ ಮಕ್ಕಳಿದ್ದ ವಾಹನ, ಗ್ರಾಮಸ್ಥರಿಂದ ರಕ್ಷಣೆ

ರೈಲ್ವೆ ಅಂಡರ್​ಪಾಸ್​ ಅಡಿಯಲ್ಲಿ ಸಿಲುಕಿಕೊಂಡ ವಾಹನದಲ್ಲಿದ್ದ ಶಾಲಾ ಮಕ್ಕಳನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ದಾವಣಗೆರೆಯ ಕುರ್ಕಿ ಗ್ರಾಮದಲ್ಲಿ ನಡೆದಿದೆ.

author img

By ETV Bharat Karnataka Team

Published : 2 hours ago

ಅಂಡರ್​​ಪಾಸ್​ನಲ್ಲಿ ಸಿಲುಕಿದ ಶಾಲಾ ಮಕ್ಕಳಿದ್ದ ವಾಹನ
ಅಂಡರ್​​ಪಾಸ್​ನಲ್ಲಿ ಸಿಲುಕಿದ ಶಾಲಾ ಮಕ್ಕಳಿದ್ದ ವಾಹನ (ETV Bharat)

ದಾವಣಗೆರೆ: ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ ಮುಂದುವರೆದಿದೆ. ಪರಿಣಾಮ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ರೈಲ್ವೆ ಅಂಡರ್​ಪಾಸ್​ನಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಅಂಡರ್​ಪಾಸ್​ನಲ್ಲಿ ಅರ್ಧದಷ್ಟು ಮುಳುಗಿತ್ತು. ಇದನ್ನು ಗಮನಿಸಿದ ಕುರ್ಕಿ ಗ್ರಾಮಸ್ಥರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ನೀರಿನಲ್ಲಿ ಸಿಲುಕಿದ್ದ ವಾಹನವನ್ನು ಟ್ರ್ಯಾಕ್ಟರ್ ಸಹಾಯದಿಂದ ಹೊರ ತರಲಾಗಿದೆ. ವಾಹನ ನೀರಿನಲ್ಲಿ ಮುಳುಗಿದ್ದ ಪರಿಣಾಮ ಮಕ್ಕಳ ಮಾರ್ಕ್ಸ್​ ಕಾರ್ಡ್​, ಜಾತಿ - ಆದಾಯ ಪ್ರಮಾಣ ಪತ್ರ, ಪುಸ್ತಕಗಳು ಮತ್ತು ಬಟ್ಟೆಗಳು ಒದ್ದೆಯಾಗಿವೆ. ಗ್ರಾಮಸ್ಥರಾದ ರಾಜಶೇಖರ್ ಮಕ್ಕಳಿಗೆ ಆಶ್ರಯ ನೀಡಿ ಅವರು ಬಾಳೇಹೊನ್ನೂರಿನ ಬಸರೀಕಟ್ಟೆ ಗ್ರಾಮದ ಶಾಲೆಗೆ ತೆರಳಲು ಸಹಾಯ ಮಾಡಿದ್ದಾರೆ. ಮಕ್ಕಳು ಜಗಳೂರು ತಾಲೂಕಿನ ಪಲ್ಲಾಗಟ್ಟೆಯ ಉಚ್ಚಂಗಿಪುರ ಗ್ರಾಮದವರು ಎಂದು ತಿಳಿದು ಬಂದಿದೆ.

ಅಂಡರ್​​ಪಾಸ್​ನಲ್ಲಿ ಸಿಲುಕಿದ ಶಾಲಾ ಮಕ್ಕಳಿದ್ದ ವಾಹನ (ETV Bharat)

ಅಂಡರ್​ಪಾಸ್​ನಲ್ಲಿ ಸಿಲುಕಿದ 18 ಜನರಿದ್ದ ಟೆಂಪೋ: ಮತ್ತೊಂದೆಡೆ, ನಿನ್ನೆ ತಡರಾತ್ರಿ ಹಾವೇರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ನದಿಯಂತಾದ ರೈಲ್ವೆ ಅಂಡರ್ ಪಾಸ್​ನಲ್ಲಿ 18 ಜನರಿದ್ದ ಟೆಂಪೋ ಸಿಲುಕಿದ ಘಟನೆ ರಾಣೇಬೆನ್ನೂರು ಹೊರವಲಯದಲ್ಲಿ ನಡೆದಿದೆ. ಸುಮಾರು ಒಂದು ಗಂಟೆ ನೀರಿನಲ್ಲೇ ಇದ್ದ ಟೆಂಪೋವನ್ನು ರೈಲ್ವೆ ಇಲಾಖೆ ಸಿಬ್ಬಂದಿ ಜೆಸಿಬಿ ಸಹಾಯದಿಂದ ಹೊರಗೆಳೆದು ತಂದಿದ್ದಾರೆ. ಗುತ್ತಲದಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಅಂಡರ್​ಪಾಸ್​ನಲ್ಲಿ ಸಿಲುಕಿದ 18 ಜನರಿದ್ದ ಟೆಂಪೋ (ETV Bharat)

ಇದನ್ನೂ ಓದಿ: VIDEO; ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿಢೀರ್ ಮಳೆ: ಅಬ್ಬರಿಸಿದ ದರ್ಪಣತೀರ್ಥ ನದಿ

ದಾವಣಗೆರೆ: ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರ ಮುಂದುವರೆದಿದೆ. ಪರಿಣಾಮ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ರೈಲ್ವೆ ಅಂಡರ್​ಪಾಸ್​ನಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಅಂಡರ್​ಪಾಸ್​ನಲ್ಲಿ ಅರ್ಧದಷ್ಟು ಮುಳುಗಿತ್ತು. ಇದನ್ನು ಗಮನಿಸಿದ ಕುರ್ಕಿ ಗ್ರಾಮಸ್ಥರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ನೀರಿನಲ್ಲಿ ಸಿಲುಕಿದ್ದ ವಾಹನವನ್ನು ಟ್ರ್ಯಾಕ್ಟರ್ ಸಹಾಯದಿಂದ ಹೊರ ತರಲಾಗಿದೆ. ವಾಹನ ನೀರಿನಲ್ಲಿ ಮುಳುಗಿದ್ದ ಪರಿಣಾಮ ಮಕ್ಕಳ ಮಾರ್ಕ್ಸ್​ ಕಾರ್ಡ್​, ಜಾತಿ - ಆದಾಯ ಪ್ರಮಾಣ ಪತ್ರ, ಪುಸ್ತಕಗಳು ಮತ್ತು ಬಟ್ಟೆಗಳು ಒದ್ದೆಯಾಗಿವೆ. ಗ್ರಾಮಸ್ಥರಾದ ರಾಜಶೇಖರ್ ಮಕ್ಕಳಿಗೆ ಆಶ್ರಯ ನೀಡಿ ಅವರು ಬಾಳೇಹೊನ್ನೂರಿನ ಬಸರೀಕಟ್ಟೆ ಗ್ರಾಮದ ಶಾಲೆಗೆ ತೆರಳಲು ಸಹಾಯ ಮಾಡಿದ್ದಾರೆ. ಮಕ್ಕಳು ಜಗಳೂರು ತಾಲೂಕಿನ ಪಲ್ಲಾಗಟ್ಟೆಯ ಉಚ್ಚಂಗಿಪುರ ಗ್ರಾಮದವರು ಎಂದು ತಿಳಿದು ಬಂದಿದೆ.

ಅಂಡರ್​​ಪಾಸ್​ನಲ್ಲಿ ಸಿಲುಕಿದ ಶಾಲಾ ಮಕ್ಕಳಿದ್ದ ವಾಹನ (ETV Bharat)

ಅಂಡರ್​ಪಾಸ್​ನಲ್ಲಿ ಸಿಲುಕಿದ 18 ಜನರಿದ್ದ ಟೆಂಪೋ: ಮತ್ತೊಂದೆಡೆ, ನಿನ್ನೆ ತಡರಾತ್ರಿ ಹಾವೇರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ನದಿಯಂತಾದ ರೈಲ್ವೆ ಅಂಡರ್ ಪಾಸ್​ನಲ್ಲಿ 18 ಜನರಿದ್ದ ಟೆಂಪೋ ಸಿಲುಕಿದ ಘಟನೆ ರಾಣೇಬೆನ್ನೂರು ಹೊರವಲಯದಲ್ಲಿ ನಡೆದಿದೆ. ಸುಮಾರು ಒಂದು ಗಂಟೆ ನೀರಿನಲ್ಲೇ ಇದ್ದ ಟೆಂಪೋವನ್ನು ರೈಲ್ವೆ ಇಲಾಖೆ ಸಿಬ್ಬಂದಿ ಜೆಸಿಬಿ ಸಹಾಯದಿಂದ ಹೊರಗೆಳೆದು ತಂದಿದ್ದಾರೆ. ಗುತ್ತಲದಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಅಂಡರ್​ಪಾಸ್​ನಲ್ಲಿ ಸಿಲುಕಿದ 18 ಜನರಿದ್ದ ಟೆಂಪೋ (ETV Bharat)

ಇದನ್ನೂ ಓದಿ: VIDEO; ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿಢೀರ್ ಮಳೆ: ಅಬ್ಬರಿಸಿದ ದರ್ಪಣತೀರ್ಥ ನದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.