ETV Bharat / sports

ಚಾಂಪಿಯನ್​ ಕ್ರಿಕೆಟಿಗರಿಗೆ ಫೋನ್​ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ - PM Modi Congratulates Cricketers

author img

By PTI

Published : Jun 30, 2024, 1:02 PM IST

ವಿಶ್ವ ಚಾಂಪಿಯನ್​ ಭಾರತ ಕ್ರಿಕೆಟ್‌ ತಂಡಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದ ಪ್ರಧಾನಿ ನರೇಂದ್ರ ಮೋದಿ, ಆಟಗಾರರಿಗೆ ಖುದ್ದಾಗಿ ಫೋನ್​​ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಚಾಂಪಿಯನ್​ ಕ್ರಿಕೆಟಿಗರಿಗೆ ಫೋನ್​ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ (X handle)

ನವದೆಹಲಿ: ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ಶನಿವಾರ (ಜೂನ್​ 29) ನಡೆದ ಐಸಿಸಿ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಬಗ್ಗುಬಡಿದು ಎರಡನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದ ಭಾರತ ಕ್ರಿಕೆಟ್​ ತಂಡಕ್ಕೆ ಮೋದಿ ಶುಭಾಶಯ ಕೋರಿದ್ದಲ್ಲದೇ, ಸ್ವತಃ ಫೋನ್​ ಕರೆ ಮಾಡಿ ಪ್ರತಿ ಆಟಗಾರರನ್ನು ಮಾತನಾಡಿಸಿದ್ದಾರೆ.

ಸಂಭಾಷಣೆಯ ವೇಳೆ ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ವಿಶ್ವಕಪ್​ ಗೆಲುವಿನ ಮೂಲಕ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದ್ದನ್ನೂ ಅವರು ಮೆಚ್ಚಿಕೊಂಡಿದ್ದಾರೆ. ಫೈನಲ್​ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್​​ ಮಾಡಿದ ವಿರಾಟ್ ಕೊಹ್ಲಿ ಆಟವನ್ನು ಮೋದಿ ಪ್ರಸ್ತಾಪಿಸಿದರು. ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ಕೊಡುಗೆಗಳನ್ನು ವಿಶೇಷವಾಗಿ ಹೊಗಳಿದರು.

ದ್ರೋಣ ದ್ರಾವಿಡ್​ಗೆ ಬಹುಪರಾಕ್​: ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ರ ಸಾಧನೆಯನ್ನು ಇದೇ ವೇಳೆ ಪ್ರಧಾನಿ ಬಣ್ಣಿಸಿ, ವಿಶ್ವಕಪ್​ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಕ್ಕೆ ಧನ್ಯವಾದ ಹೇಳಿದರು. ಜೊತೆಗೆ, ತಂಡವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ 'ದ್ರೋಣ'ರ ಕ್ರಿಕೆಟ್​ ಜೀವನವನ್ನೂ ಹೊಗಳಿದ್ದಾರೆ.

ಫೈನಲ್​ ಪಂದ್ಯದ ಹೀರೋಗಳಾದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್​ ಯಾದವ್​​, ಜಸ್ಪ್ರೀತ್​ ಬುಮ್ರಾರ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯ ಓವರ್​ನಲ್ಲಿ ಬೇಕಾಗಿದ್ದ 16 ರನ್‌ಗಳನ್ನು ಬಿಟ್ಟುಕೊಡದೆ ಬೌಲಿಂಗ್​ ಮಾಡಿದ ಪಾಂಡ್ಯ, ಬೌಂಡರಿ ಗೆರೆಯಲ್ಲಿ ಅತ್ಯದ್ಭುತವಾಗಿ ಕ್ಯಾಚ್​ ಹಿಡಿದು ಪಂದ್ಯವನ್ನೇ ತಿರುಗಿಸಿದ ಸೂರ್ಯಕುಮಾರ್​, 18ನೇ ಓವರ್​ ಎಸೆದು ತಂಡದ ಗೆಲುವಿನ ಆಸೆಯನ್ನು ಮರು ಚಿಗುರೊಡಿಸಿದ ಬುಮ್ರಾ ಬೌಲಿಂಗ್​ ಅನ್ನು ಮೋದಿ ಬಹುವಾಗಿ ಮೆಚ್ಚಿಕೊಂಡರು. ಅದರಲ್ಲೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬುಮ್ರಾಗೆ ವಿಶೇಷ ಹೊಗಳಿಕೆ ಸಿಕ್ಕಿತು.

ಸಾಧನೆ ಬಗ್ಗೆ ಹೆಮ್ಮೆ: ಇದಕ್ಕೂ ಮೊದಲು ಶನಿವಾರದಂದು ತಂಡ ಟಿ-20 ವಿಶ್ವಕಪ್​ ಗೆಲುವಿನ ಬಳಿಕ ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡು, ಇಡೀ ತಂಡವನ್ನು ಅಭಿನಂದಿಸಿದ್ದರು. ಚಾಂಪಿಯನ್ ಟೀಮ್​ ಇಂಡಿಯಾವು ಟಿ-20 ವಿಶ್ವಕಪ್ ಅನ್ನು ತನ್ನದೇ ಸ್ಟೈಲ್​ನಲ್ಲಿ ಮನೆಗೆ ತರುತ್ತಿದೆ. "ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ಹೆಮ್ಮೆಪಡುತ್ತೇವೆ" ಎಂದು ಹೇಳಿದ್ದರು.

"ನಮ್ಮ ತಂಡವು ವಿಶ್ವಕಪ್ ಗೆಲ್ಲುವ ಜೊತೆಗೆ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿತು. ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್​ ಗೆದ್ದಿದ್ದು ಸಣ್ಣ ಸಾಧನೆಯಲ್ಲ. ಈ ಅದ್ಭುತ ಗೆಲುವಿಗಾಗಿ ಭಾರತ ಕ್ರಿಕೆಟ್​ ತಂಡಕ್ಕೆ ಅಭಿನಂದನೆಗಳು" ಎಂದು ಪ್ರಧಾನಿ ಹೇಳಿದ್ದಾರೆ.

2007ರಲ್ಲಿ ನಡೆದ ಟಿ20 ವಿಶ್ವಕಪ್​​ನ ಚೊಚ್ಚಲ ಆವೃತ್ತಿಯನ್ನು ಭಾರತ ತಂಡ ಗೆದ್ದಿತ್ತು. ಅದಾದ ಬಳಿಕ 17 ವರ್ಷಗಳಲ್ಲಿ ಒಮ್ಮೆಯೂ ಫೈನಲ್​​ ಗೆಲುವು ಸಿಕ್ಕಿರಲಿಲ್ಲ. 2011ರಲ್ಲಿ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ನೇತೃತ್ವದಲ್ಲಿ ಏಕದಿನ ವಿಶ್ವಕಪ್​, 2013 ರಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆಲುವು ಸಿಕ್ಕಿತ್ತು. ಇದರ ಬಳಿಕ ಕಳೆದ 11 ವರ್ಷಗಳಲ್ಲಿ ತಂಡಕ್ಕೆ ಟ್ರೋಫಿ ಮರೀಚಿಕೆಯಾಗಿತ್ತು. 2023ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ನಲ್ಲಿ ತಂಡ ಫೈನಲ್​ಗೆ ಬಂದಿದ್ದರೂ, ಆಸ್ಟ್ರೇಲಿಯಾದ ಎದುರು ಸೋಲು ಕಂಡಿತ್ತು.

ಇದನ್ನೂ ಓದಿ: ಫೈನಲ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್; ದ್ರಾವಿಡ್​-ರೋಹಿತ್​ ನಂಬಿಕೆ ಉಳಿಸಿಕೊಂಡ ಕೊಹ್ಲಿ - Virat Kohli

ನವದೆಹಲಿ: ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ಶನಿವಾರ (ಜೂನ್​ 29) ನಡೆದ ಐಸಿಸಿ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಬಗ್ಗುಬಡಿದು ಎರಡನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದ ಭಾರತ ಕ್ರಿಕೆಟ್​ ತಂಡಕ್ಕೆ ಮೋದಿ ಶುಭಾಶಯ ಕೋರಿದ್ದಲ್ಲದೇ, ಸ್ವತಃ ಫೋನ್​ ಕರೆ ಮಾಡಿ ಪ್ರತಿ ಆಟಗಾರರನ್ನು ಮಾತನಾಡಿಸಿದ್ದಾರೆ.

ಸಂಭಾಷಣೆಯ ವೇಳೆ ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ವಿಶ್ವಕಪ್​ ಗೆಲುವಿನ ಮೂಲಕ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದ್ದನ್ನೂ ಅವರು ಮೆಚ್ಚಿಕೊಂಡಿದ್ದಾರೆ. ಫೈನಲ್​ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್​​ ಮಾಡಿದ ವಿರಾಟ್ ಕೊಹ್ಲಿ ಆಟವನ್ನು ಮೋದಿ ಪ್ರಸ್ತಾಪಿಸಿದರು. ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ಕೊಡುಗೆಗಳನ್ನು ವಿಶೇಷವಾಗಿ ಹೊಗಳಿದರು.

ದ್ರೋಣ ದ್ರಾವಿಡ್​ಗೆ ಬಹುಪರಾಕ್​: ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ರ ಸಾಧನೆಯನ್ನು ಇದೇ ವೇಳೆ ಪ್ರಧಾನಿ ಬಣ್ಣಿಸಿ, ವಿಶ್ವಕಪ್​ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಕ್ಕೆ ಧನ್ಯವಾದ ಹೇಳಿದರು. ಜೊತೆಗೆ, ತಂಡವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ 'ದ್ರೋಣ'ರ ಕ್ರಿಕೆಟ್​ ಜೀವನವನ್ನೂ ಹೊಗಳಿದ್ದಾರೆ.

ಫೈನಲ್​ ಪಂದ್ಯದ ಹೀರೋಗಳಾದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್​ ಯಾದವ್​​, ಜಸ್ಪ್ರೀತ್​ ಬುಮ್ರಾರ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯ ಓವರ್​ನಲ್ಲಿ ಬೇಕಾಗಿದ್ದ 16 ರನ್‌ಗಳನ್ನು ಬಿಟ್ಟುಕೊಡದೆ ಬೌಲಿಂಗ್​ ಮಾಡಿದ ಪಾಂಡ್ಯ, ಬೌಂಡರಿ ಗೆರೆಯಲ್ಲಿ ಅತ್ಯದ್ಭುತವಾಗಿ ಕ್ಯಾಚ್​ ಹಿಡಿದು ಪಂದ್ಯವನ್ನೇ ತಿರುಗಿಸಿದ ಸೂರ್ಯಕುಮಾರ್​, 18ನೇ ಓವರ್​ ಎಸೆದು ತಂಡದ ಗೆಲುವಿನ ಆಸೆಯನ್ನು ಮರು ಚಿಗುರೊಡಿಸಿದ ಬುಮ್ರಾ ಬೌಲಿಂಗ್​ ಅನ್ನು ಮೋದಿ ಬಹುವಾಗಿ ಮೆಚ್ಚಿಕೊಂಡರು. ಅದರಲ್ಲೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬುಮ್ರಾಗೆ ವಿಶೇಷ ಹೊಗಳಿಕೆ ಸಿಕ್ಕಿತು.

ಸಾಧನೆ ಬಗ್ಗೆ ಹೆಮ್ಮೆ: ಇದಕ್ಕೂ ಮೊದಲು ಶನಿವಾರದಂದು ತಂಡ ಟಿ-20 ವಿಶ್ವಕಪ್​ ಗೆಲುವಿನ ಬಳಿಕ ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡು, ಇಡೀ ತಂಡವನ್ನು ಅಭಿನಂದಿಸಿದ್ದರು. ಚಾಂಪಿಯನ್ ಟೀಮ್​ ಇಂಡಿಯಾವು ಟಿ-20 ವಿಶ್ವಕಪ್ ಅನ್ನು ತನ್ನದೇ ಸ್ಟೈಲ್​ನಲ್ಲಿ ಮನೆಗೆ ತರುತ್ತಿದೆ. "ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ಹೆಮ್ಮೆಪಡುತ್ತೇವೆ" ಎಂದು ಹೇಳಿದ್ದರು.

"ನಮ್ಮ ತಂಡವು ವಿಶ್ವಕಪ್ ಗೆಲ್ಲುವ ಜೊತೆಗೆ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿತು. ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್​ ಗೆದ್ದಿದ್ದು ಸಣ್ಣ ಸಾಧನೆಯಲ್ಲ. ಈ ಅದ್ಭುತ ಗೆಲುವಿಗಾಗಿ ಭಾರತ ಕ್ರಿಕೆಟ್​ ತಂಡಕ್ಕೆ ಅಭಿನಂದನೆಗಳು" ಎಂದು ಪ್ರಧಾನಿ ಹೇಳಿದ್ದಾರೆ.

2007ರಲ್ಲಿ ನಡೆದ ಟಿ20 ವಿಶ್ವಕಪ್​​ನ ಚೊಚ್ಚಲ ಆವೃತ್ತಿಯನ್ನು ಭಾರತ ತಂಡ ಗೆದ್ದಿತ್ತು. ಅದಾದ ಬಳಿಕ 17 ವರ್ಷಗಳಲ್ಲಿ ಒಮ್ಮೆಯೂ ಫೈನಲ್​​ ಗೆಲುವು ಸಿಕ್ಕಿರಲಿಲ್ಲ. 2011ರಲ್ಲಿ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ನೇತೃತ್ವದಲ್ಲಿ ಏಕದಿನ ವಿಶ್ವಕಪ್​, 2013 ರಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆಲುವು ಸಿಕ್ಕಿತ್ತು. ಇದರ ಬಳಿಕ ಕಳೆದ 11 ವರ್ಷಗಳಲ್ಲಿ ತಂಡಕ್ಕೆ ಟ್ರೋಫಿ ಮರೀಚಿಕೆಯಾಗಿತ್ತು. 2023ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ನಲ್ಲಿ ತಂಡ ಫೈನಲ್​ಗೆ ಬಂದಿದ್ದರೂ, ಆಸ್ಟ್ರೇಲಿಯಾದ ಎದುರು ಸೋಲು ಕಂಡಿತ್ತು.

ಇದನ್ನೂ ಓದಿ: ಫೈನಲ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್; ದ್ರಾವಿಡ್​-ರೋಹಿತ್​ ನಂಬಿಕೆ ಉಳಿಸಿಕೊಂಡ ಕೊಹ್ಲಿ - Virat Kohli

ETV Bharat Logo

Copyright © 2024 Ushodaya Enterprises Pvt. Ltd., All Rights Reserved.