ETV Bharat / sports

ಒಲಿಂಪಿಕ್​​ನಲ್ಲಿ ಕಂಚು ಗೆದ್ದ ಹಾಕಿ ತಂಡದ ಆಟಗಾರರಿಗೆ ಒಡಿಶಾ ಸರ್ಕಾರದಿಂದ ಭರ್ಜರಿ ಗಿಫ್ಟ್​ - cash prizes for Indian hockey team

author img

By ETV Bharat Sports Team

Published : Aug 22, 2024, 1:17 PM IST

ಪ್ಯಾರಿಸ್​​ ಒಲಿಂಪಿಕ್​​​ನಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡದ ಆಟಗಾರರನ್ನು ಭುವನೇಶ್ವರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದ್ದು, ಅವರಿಗೆ ಬಹುಮಾನವನ್ನೂ ಘೋಷಿಸಲಾಗಿದೆ.

ಭಾರತ ಹಾಕಿ ತಂಡ
ಭಾರತ ಹಾಕಿ ತಂಡ (AP Photos)

ಭುವನೇಶ್ವರ್​​: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್​​​ನಲ್ಲಿ ಅತ್ಯದ್ಬುತ ಪ್ರದರ್ಶನ ತೋರಿ ಕಂಚಿನ ಪದಕ ಗೆದ್ದು ಬಂದಿರುವ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರಕ್ಕೆ ಮರಳಿದೆ. ತವರಿಗೆ ಬಂದ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ರೋಡ್​ ಶೋ ಕೂಡ ನಡೆಸಲಾಗಿದೆ.

ಆಟಗಾರರನ್ನು ಅಭಿನಂದಿಸಿದ ಸಿಎಂ ಮಾಝಿ; ಇಲ್ಲಿಯ ಬಿಜು ಪಟ್ನಾಯಕ್​ ವಿಮಾನ ನಿಲ್ದಾಣದಿಂದ ಕಳಿಂಗ ಕ್ರೀಡಾಂಗಣದವರೆಗೆ ನಡೆದ ರೋಡ್‌ಶೋನಲ್ಲಿ ಇಡೀ ಹಾಕಿ ತಂಡ ಭಾಗವಹಿಸಿತು. ನಂತರ ಕಳಿಂಗ ಕ್ರೀಡಾಂಗಣದಲ್ಲಿ ತಂಡವನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಆಟಗಾರರನ್ನು ಅಭಿನಂದಿಸಿದರು.

ಗಮನಾರ್ಹವೆಂದರೆ, ಇಂಡಿಯಾ ಹಾಕಿ ತಂಡ ಒಲಿಂಪಿಕ್​​ನಲ್ಲಿ ಕಂಚು ಗೆಲ್ಲಲು ಸಹಾಯ ಮಾಡಿದ್ದ ಒಡಿಶಾದ ಸ್ಟಾರ್​ ಡಿಫೆಂಡರ್​ ಆದ ಅಮಿತ್​ ರೋಹಿದಾಸ್​ ಅವರಿಗೂ ವಿಶೇಷವಾಗಿ ಸನ್ಮಾನಿಸಲಾಯಿತು. ಜತೆಗೆ ಸಿಎಂ ಮಾಝಿ ಅವರು 4 ಕೋಟಿ ರೂಪಾಯಿಗಳ ವಿಶೇಷ ನಗದು ಬಹುಮಾನ ಘೋಷಿಸಿದರು. ಉಳಿದಂತೆ ತಂಡದ ಎಲ್ಲಾ ಆಟಗಾರರಿಗೂ ತಲಾ 15 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗಳಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು.

1972ರ ಮ್ಯೂನಿಚ್​ ಒಲಿಂಪಿಕ್​​​ ನಂತರ ಅಂದರೆ 52 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸತತ 2 ಒಲಿಂಪಿಕ್​​​ ಪದಕಗಳನ್ನು ಗೆದ್ದುಕೊಂಡಿದೆ. ಒಡಿಶಾ ಸರ್ಕಾರವು ಕಳೆದ 2018 ರಿಂದ ರಾಷ್ಟ್ರೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳನ್ನು ಪ್ರಾಯೋಜಿಸುತ್ತಿದೆ. ಒಡಿಶಾದ ಹಿಂದಿನ ಸರ್ಕಾರವು 2033ರ ವರೆಗೆ ಹಾಕಿ ಇಂಡಿಯಾದ ಪ್ರಾಯೋಜಕತ್ವ ವಹಿಸಿಕೊಳ್ಳುವುದಾಗಿ ತಿಳಿಸಿತ್ತು. ಈ ವರ್ಷದ ಜೂನ್‌ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಮಾಝಿ ಅವರು ಹಿಂದಿನ ಸರ್ಕಾರದ ಆದೇಶದಂತೆ ಎರಡೂ ರಾಷ್ಟ್ರೀಯ ಹಾಕಿ ತಂಡಗಳ ರಾಜ್ಯದ ಪ್ರಾಯೋಜಕತ್ವ ಬೆಂಬಲವನ್ನು ಇನ್ನೂ ಹೆಚ್ಚುವರಿ ಮೂರು ವರ್ಷಗಳವರೆಗೆ ಅಂದರೆ 2036ರ ವರೆಗೆ ವಿಸ್ತರಿಸಿ ಘೋಷಿಸಿದ್ದಾರೆ.

ಪ್ಯಾರಿಸ್​ ಒಲಿಂಪಿಕ್​​​ನ ಹಾಕಿ ಕಂಚಿನ ಪದಕ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ಅನ್ನು 2-1 ಅಂತರ ಗೋಲುಗಳಿಂದ ಸೋಲಿಸುವ ಮೂಲಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಗಳಿಸಿತು. ಇದರೊಂದಿಗೆ ಭಾರತ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಬಂಗಾಳ ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆಗೆ ಮುಂದಾದ ಸೌರವ್ ಗಂಗೂಲಿ - Sourav Ganguly

ಭುವನೇಶ್ವರ್​​: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್​​​ನಲ್ಲಿ ಅತ್ಯದ್ಬುತ ಪ್ರದರ್ಶನ ತೋರಿ ಕಂಚಿನ ಪದಕ ಗೆದ್ದು ಬಂದಿರುವ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರಕ್ಕೆ ಮರಳಿದೆ. ತವರಿಗೆ ಬಂದ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ರೋಡ್​ ಶೋ ಕೂಡ ನಡೆಸಲಾಗಿದೆ.

ಆಟಗಾರರನ್ನು ಅಭಿನಂದಿಸಿದ ಸಿಎಂ ಮಾಝಿ; ಇಲ್ಲಿಯ ಬಿಜು ಪಟ್ನಾಯಕ್​ ವಿಮಾನ ನಿಲ್ದಾಣದಿಂದ ಕಳಿಂಗ ಕ್ರೀಡಾಂಗಣದವರೆಗೆ ನಡೆದ ರೋಡ್‌ಶೋನಲ್ಲಿ ಇಡೀ ಹಾಕಿ ತಂಡ ಭಾಗವಹಿಸಿತು. ನಂತರ ಕಳಿಂಗ ಕ್ರೀಡಾಂಗಣದಲ್ಲಿ ತಂಡವನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಆಟಗಾರರನ್ನು ಅಭಿನಂದಿಸಿದರು.

ಗಮನಾರ್ಹವೆಂದರೆ, ಇಂಡಿಯಾ ಹಾಕಿ ತಂಡ ಒಲಿಂಪಿಕ್​​ನಲ್ಲಿ ಕಂಚು ಗೆಲ್ಲಲು ಸಹಾಯ ಮಾಡಿದ್ದ ಒಡಿಶಾದ ಸ್ಟಾರ್​ ಡಿಫೆಂಡರ್​ ಆದ ಅಮಿತ್​ ರೋಹಿದಾಸ್​ ಅವರಿಗೂ ವಿಶೇಷವಾಗಿ ಸನ್ಮಾನಿಸಲಾಯಿತು. ಜತೆಗೆ ಸಿಎಂ ಮಾಝಿ ಅವರು 4 ಕೋಟಿ ರೂಪಾಯಿಗಳ ವಿಶೇಷ ನಗದು ಬಹುಮಾನ ಘೋಷಿಸಿದರು. ಉಳಿದಂತೆ ತಂಡದ ಎಲ್ಲಾ ಆಟಗಾರರಿಗೂ ತಲಾ 15 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗಳಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು.

1972ರ ಮ್ಯೂನಿಚ್​ ಒಲಿಂಪಿಕ್​​​ ನಂತರ ಅಂದರೆ 52 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸತತ 2 ಒಲಿಂಪಿಕ್​​​ ಪದಕಗಳನ್ನು ಗೆದ್ದುಕೊಂಡಿದೆ. ಒಡಿಶಾ ಸರ್ಕಾರವು ಕಳೆದ 2018 ರಿಂದ ರಾಷ್ಟ್ರೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳನ್ನು ಪ್ರಾಯೋಜಿಸುತ್ತಿದೆ. ಒಡಿಶಾದ ಹಿಂದಿನ ಸರ್ಕಾರವು 2033ರ ವರೆಗೆ ಹಾಕಿ ಇಂಡಿಯಾದ ಪ್ರಾಯೋಜಕತ್ವ ವಹಿಸಿಕೊಳ್ಳುವುದಾಗಿ ತಿಳಿಸಿತ್ತು. ಈ ವರ್ಷದ ಜೂನ್‌ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಮಾಝಿ ಅವರು ಹಿಂದಿನ ಸರ್ಕಾರದ ಆದೇಶದಂತೆ ಎರಡೂ ರಾಷ್ಟ್ರೀಯ ಹಾಕಿ ತಂಡಗಳ ರಾಜ್ಯದ ಪ್ರಾಯೋಜಕತ್ವ ಬೆಂಬಲವನ್ನು ಇನ್ನೂ ಹೆಚ್ಚುವರಿ ಮೂರು ವರ್ಷಗಳವರೆಗೆ ಅಂದರೆ 2036ರ ವರೆಗೆ ವಿಸ್ತರಿಸಿ ಘೋಷಿಸಿದ್ದಾರೆ.

ಪ್ಯಾರಿಸ್​ ಒಲಿಂಪಿಕ್​​​ನ ಹಾಕಿ ಕಂಚಿನ ಪದಕ ಪಂದ್ಯದಲ್ಲಿ ಭಾರತ ತಂಡ ಸ್ಪೇನ್ ಅನ್ನು 2-1 ಅಂತರ ಗೋಲುಗಳಿಂದ ಸೋಲಿಸುವ ಮೂಲಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಗಳಿಸಿತು. ಇದರೊಂದಿಗೆ ಭಾರತ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: ಬಂಗಾಳ ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆಗೆ ಮುಂದಾದ ಸೌರವ್ ಗಂಗೂಲಿ - Sourav Ganguly

ETV Bharat Logo

Copyright © 2024 Ushodaya Enterprises Pvt. Ltd., All Rights Reserved.