ETV Bharat / sports

CSK vs KKR: ತವರಿನಲ್ಲಿ ಸಿಎಸ್​ಕೆ ಬೌಲರ್‌ಗಳ​ ಮೇಲುಗೈ; 138 ರನ್ ಟಾರ್ಗೆಟ್ ನೀಡಿದ ಕೆಕೆಆರ್ - IPL 2024

author img

By ETV Bharat Karnataka Team

Published : Apr 8, 2024, 7:19 PM IST

Updated : Apr 8, 2024, 9:28 PM IST

ಚೆನ್ನೈ ಸೂಪರ್​ ಕಿಂಗ್ಸ್ ಎದುರು ಕೋಲ್ಕತ್ತಾ ನೈಟ್​ ರೈಡರ್ಸ್ 137 ರನ್​ಗಳ ಸಾಧಾರಣ ಮೊತ್ತ ಕಲೆಹಾಕಿದೆ.

ಕೋಲ್ಕತ್ತಾ ಮತ್ತು ಚೆನ್ನೈ
ಕೋಲ್ಕತ್ತಾ ಮತ್ತು ಚೆನ್ನೈ

ಚೆನ್ನೈ(ತಮಿಳುನಾಡು): ಚೆನ್ನೈ ಸೂಪರ್​ ಕಿಂಗ್ಸ್ ಬೌಲರ್​ಗಳ ಸಂಘಟಿತ ಪ್ರದರ್ಶನ ಬಲಿಷ್ಠ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವನ್ನು 137 ರನ್​ಗಳ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದೆ. ತವರಿನಲ್ಲಿ ಸಿಎಸ್​ಕೆ ಗೆಲ್ಲಲು 138 ರನ್​ಗಳ ಅವಶ್ಯಕತೆ ಇದೆ. ಕಳೆದ ಪಂದ್ಯಕ್ಕೆ ಹೋಲಿಸಿದರೆ ಸಿಎಸ್​ಕೆ ಎದುರು ಕೆಕೆಆರ್ ಬ್ಯಾಟರ್‌ಗಳ ಆಟ ನಡೆಯಲಿಲ್ಲ.

ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ ಆರಂಭದಲ್ಲೇ ಫಿಲಿಪ್ ಸಾಲ್ಟ್ ವಿಕೆಟ್​ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ಸಾಲ್ಟ್​, ಸಿಎಸ್​ಕೆ ಎದುರು ಮಂಕಾದರು. 2ನೇ ವಿಕೆಟ್​ಗೆ ಬಂದ ಯುವ ಬ್ಯಾಟರ್​ ಅಂಗಕೃಷ್ ರಘುವಂಶಿ ಅವರು ಸುನಿಲ್​ ನರೈನ್​ ಜತೆಗೂಡಿ ಉತ್ತಮ ಪ್ರದರ್ಶನ ತೋರಿದರು. ಸಿಕ್ಸರ್, ಬೌಂಡರಿ ಸಿಡಿಸಿ ಬೃಹತ್​ ರನ್​ ಕಲೆಹಾಕುವ ಸುಳಿವು ನೀಡಿದರು.

ಆದರೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ರಘುವಂಶಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್​ ಮಾಡುತ್ತಿದ್ದ ಸುನಿಲ್​ ನರೈನ್​ (27) ಅವರನ್ನೂ ತಮ್ಮದೇ ಓವರ್​ನಲ್ಲಿ ಜಡೇಜಾ ಔಟ್​ ಮಾಡಿದರು. ವೆಂಕಟೇಶ್​ ಅಯ್ಯರ್​ ಕೂಡಾ ತಂಡಕ್ಕೆ ಆಸರೆಯಾಗಲಿಲ್ಲ.

ಹೀಗೆ ವಿಕೆಟ್​ಗಳು ಬೀಳುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ನಾಯಕ ಶ್ರೇಯಸ್​ ಅಯ್ಯರ್​ ತಮ್ಮ ಮಂದಗತಿ ಆಟದ ಮೂಲಕ ರನ್​ ಸೇರಿಸಿದರು. ಈ ಹಂತದಲ್ಲಿ 13 ರನ್​ಗಳಿಸಿದ ರಮಣದೀಪ್ ಸಿಂಗ್ ಮಹೇಶ್​ ತೀಕ್ಷಣ ಅವರಿಗೆ ವಿಕೆಟ್ ಒಪ್ಪಿಸಿದರು. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಹೊಡಿ ಬಡಿ ಆಟಗಾರ ರಿಂಕು ಸಿಂಗ್​ (9) ಕೂಡಾ ತಂಡಕ್ಕೆ ಅವಶ್ಯಕತೆ ಇದ್ದಾಗ ಹೇಳಿಕೊಳ್ಳವಂತಹ ಪ್ರದರ್ಶನ ನೀಡಲಿಲ್ಲ.

ದೈತ್ಯ ಬ್ಯಾಟರ್​ ಆಂಡ್ರೆ ರಸೆಲ್ (10) ಎರಡು ಬೌಂಡರಿಗಳಷ್ಟೇ ಸೀಮಿತವಾಗಿ ಆಟ ನಿಲ್ಲಿಸಿದರು. ಕೊನೆ ಓವರ್​ನಲ್ಲಿ ಕೆಕೆಆರ್​ ತಂಡದ ಮೊತ್ತ ಹೆಚ್ಚಿಸಲು ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶ್ರೇಯಸ್​ ಅಯ್ಯರ್​ 34 ರನ್​ಗಳಿಸಿ ಔಟಾದರು. ಮಿಚೆಲ್ ಸ್ಟಾರ್ಕ್ ಕೂಡ ಶೂನ್ಯಕ್ಕೆ ವಿಕೆಟ್​ ನೀಡಿದರು. ಅಂತಿಮವಾಗಿ ಅನುಕೂಲ್ ರಾಯ್ (3) ಮತ್ತು ವರುಣ್​ ಚಕ್ರವರ್ತಿ ಅಜೇಯರಾಗುಳಿದರು.

ಸಂಘಟಿತ ಮತ್ತು ಆಕ್ರಮಣಕಾರಿ ಬೌಲಿಂಗ್​ ಮಾಡಿದ ಸಿಎಸ್​ಕೆ ಬೌಲರ್‌​ಗಳಾದ ರವೀಂದ್ರ ಜಡೇಜಾ ಮತ್ತು ತುಷರ್​ ದೇಶಪಾಂಡೆ 3 ಮೂರು ವಿಕೆಟ್​ ಕಬಳಿಸಿದರೆ, ಮುಸ್ತಾಫಿಜುರ್ ರೆಹಮಾನ್ ಎರಡು ಹಾಗು ಮಹೇಶ್​ ತೀಕ್ಷಣ ಒಂದು ವಿಕೆಟ್​ ಪಡೆದುಕೊಂಡರು.​ ​ ​

ತಂಡಗಳು- ಕೋಲ್ಕತ್ತಾ ನೈಟ್ ರೈಡರ್ಸ್: ಫಿಲಿಪ್ ಸಾಲ್ಟ್(ವಿ.ಕೀ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಇದನ್ನೂ ಓದಿ: ಧೋನಿ ಭಾರತ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕ: ಗೌತಮ್ ಗಂಭೀರ್ - Gautam Gambhir

ಚೆನ್ನೈ(ತಮಿಳುನಾಡು): ಚೆನ್ನೈ ಸೂಪರ್​ ಕಿಂಗ್ಸ್ ಬೌಲರ್​ಗಳ ಸಂಘಟಿತ ಪ್ರದರ್ಶನ ಬಲಿಷ್ಠ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವನ್ನು 137 ರನ್​ಗಳ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದೆ. ತವರಿನಲ್ಲಿ ಸಿಎಸ್​ಕೆ ಗೆಲ್ಲಲು 138 ರನ್​ಗಳ ಅವಶ್ಯಕತೆ ಇದೆ. ಕಳೆದ ಪಂದ್ಯಕ್ಕೆ ಹೋಲಿಸಿದರೆ ಸಿಎಸ್​ಕೆ ಎದುರು ಕೆಕೆಆರ್ ಬ್ಯಾಟರ್‌ಗಳ ಆಟ ನಡೆಯಲಿಲ್ಲ.

ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ ಆರಂಭದಲ್ಲೇ ಫಿಲಿಪ್ ಸಾಲ್ಟ್ ವಿಕೆಟ್​ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ಸಾಲ್ಟ್​, ಸಿಎಸ್​ಕೆ ಎದುರು ಮಂಕಾದರು. 2ನೇ ವಿಕೆಟ್​ಗೆ ಬಂದ ಯುವ ಬ್ಯಾಟರ್​ ಅಂಗಕೃಷ್ ರಘುವಂಶಿ ಅವರು ಸುನಿಲ್​ ನರೈನ್​ ಜತೆಗೂಡಿ ಉತ್ತಮ ಪ್ರದರ್ಶನ ತೋರಿದರು. ಸಿಕ್ಸರ್, ಬೌಂಡರಿ ಸಿಡಿಸಿ ಬೃಹತ್​ ರನ್​ ಕಲೆಹಾಕುವ ಸುಳಿವು ನೀಡಿದರು.

ಆದರೆ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ರಘುವಂಶಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್​ ಮಾಡುತ್ತಿದ್ದ ಸುನಿಲ್​ ನರೈನ್​ (27) ಅವರನ್ನೂ ತಮ್ಮದೇ ಓವರ್​ನಲ್ಲಿ ಜಡೇಜಾ ಔಟ್​ ಮಾಡಿದರು. ವೆಂಕಟೇಶ್​ ಅಯ್ಯರ್​ ಕೂಡಾ ತಂಡಕ್ಕೆ ಆಸರೆಯಾಗಲಿಲ್ಲ.

ಹೀಗೆ ವಿಕೆಟ್​ಗಳು ಬೀಳುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ನಾಯಕ ಶ್ರೇಯಸ್​ ಅಯ್ಯರ್​ ತಮ್ಮ ಮಂದಗತಿ ಆಟದ ಮೂಲಕ ರನ್​ ಸೇರಿಸಿದರು. ಈ ಹಂತದಲ್ಲಿ 13 ರನ್​ಗಳಿಸಿದ ರಮಣದೀಪ್ ಸಿಂಗ್ ಮಹೇಶ್​ ತೀಕ್ಷಣ ಅವರಿಗೆ ವಿಕೆಟ್ ಒಪ್ಪಿಸಿದರು. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಹೊಡಿ ಬಡಿ ಆಟಗಾರ ರಿಂಕು ಸಿಂಗ್​ (9) ಕೂಡಾ ತಂಡಕ್ಕೆ ಅವಶ್ಯಕತೆ ಇದ್ದಾಗ ಹೇಳಿಕೊಳ್ಳವಂತಹ ಪ್ರದರ್ಶನ ನೀಡಲಿಲ್ಲ.

ದೈತ್ಯ ಬ್ಯಾಟರ್​ ಆಂಡ್ರೆ ರಸೆಲ್ (10) ಎರಡು ಬೌಂಡರಿಗಳಷ್ಟೇ ಸೀಮಿತವಾಗಿ ಆಟ ನಿಲ್ಲಿಸಿದರು. ಕೊನೆ ಓವರ್​ನಲ್ಲಿ ಕೆಕೆಆರ್​ ತಂಡದ ಮೊತ್ತ ಹೆಚ್ಚಿಸಲು ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶ್ರೇಯಸ್​ ಅಯ್ಯರ್​ 34 ರನ್​ಗಳಿಸಿ ಔಟಾದರು. ಮಿಚೆಲ್ ಸ್ಟಾರ್ಕ್ ಕೂಡ ಶೂನ್ಯಕ್ಕೆ ವಿಕೆಟ್​ ನೀಡಿದರು. ಅಂತಿಮವಾಗಿ ಅನುಕೂಲ್ ರಾಯ್ (3) ಮತ್ತು ವರುಣ್​ ಚಕ್ರವರ್ತಿ ಅಜೇಯರಾಗುಳಿದರು.

ಸಂಘಟಿತ ಮತ್ತು ಆಕ್ರಮಣಕಾರಿ ಬೌಲಿಂಗ್​ ಮಾಡಿದ ಸಿಎಸ್​ಕೆ ಬೌಲರ್‌​ಗಳಾದ ರವೀಂದ್ರ ಜಡೇಜಾ ಮತ್ತು ತುಷರ್​ ದೇಶಪಾಂಡೆ 3 ಮೂರು ವಿಕೆಟ್​ ಕಬಳಿಸಿದರೆ, ಮುಸ್ತಾಫಿಜುರ್ ರೆಹಮಾನ್ ಎರಡು ಹಾಗು ಮಹೇಶ್​ ತೀಕ್ಷಣ ಒಂದು ವಿಕೆಟ್​ ಪಡೆದುಕೊಂಡರು.​ ​ ​

ತಂಡಗಳು- ಕೋಲ್ಕತ್ತಾ ನೈಟ್ ರೈಡರ್ಸ್: ಫಿಲಿಪ್ ಸಾಲ್ಟ್(ವಿ.ಕೀ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಇದನ್ನೂ ಓದಿ: ಧೋನಿ ಭಾರತ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕ: ಗೌತಮ್ ಗಂಭೀರ್ - Gautam Gambhir

Last Updated : Apr 8, 2024, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.