ETV Bharat / sports

ಟಿ20 ತಂಡಕ್ಕೆ ಸೂರ್ಯ, ಏಕದಿನಕ್ಕೆ ರಾಹುಲ್​ - ಗಿಲ್​ಗೆ ನಾಯಕತ್ವ: ಕೋಚ್​ ಗಂಭೀರ್​ ದೂರಾಲೋಚನೆ ಏನು? - Team India Seletion

author img

By ETV Bharat Karnataka Team

Published : Jul 17, 2024, 8:25 PM IST

ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಆಯ್ಕೆ ಮಾಡಬೇಕಿದ್ದು, ಹೊಸ ಕೋಚ್​ ಗೌತಮ್​ ಗಂಭೀರ್​ ಜೊತೆಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಮಾತುಕತೆ ನಡೆಸಿದೆ.

ಟಿ20 ತಂಡಕ್ಕೆ ಸೂರ್ಯ, ಏಕದಿನಕ್ಕೆ ರಾಹುಲ್​- ಗಿಲ್​ಗೆ ನಾಯಕತ್ವ
ಟಿ20 ತಂಡಕ್ಕೆ ಸೂರ್ಯ, ಏಕದಿನಕ್ಕೆ ರಾಹುಲ್​- ಗಿಲ್​ಗೆ ನಾಯಕತ್ವ (ETV Bharat)

ನವದೆಹಲಿ: ಈ ತಿಂಗಳಾಂತ್ಯದಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ತಂಡ ಪ್ರಕಟ ಮಾಡುವ ಜೊತೆಗೆ ನಾಯಕರನ್ನೂ ಘೋಷಿಸುವ ಸವಾಲಿದೆ. ಹೊಸ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಈ ಬಗ್ಗೆ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಜೊತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ.

ಕ್ರೀಡಾ ಮಾಧ್ಯಮವೊಂದರ ವರದಿಯ ಪ್ರಕಾರ, ನೂತನ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅವರು, ತಂಡದ ಆಯ್ಕೆ ಮತ್ತು ಮಂದಿನ ಯೋಜನೆಗಳ ಕುರಿತು ಬಿಸಿಸಿಐ ಮತ್ತು ಆಯ್ಕೆ ಸಮಿತಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂಬರುವ ಟೂರ್ನಿ ಮತ್ತು ಭಾರತ ತಂಡದ ಭವಿಷ್ಯದ ಹಿನ್ನೆಲೆಯಲ್ಲಿಯೂ ಯೋಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರೊಂದಿಗೆ ವರ್ಚುಯಲ್​ ಆಗಿ ಒಂದು ಗಂಟೆ ಕಾಲ ಸಭೆ ನಡೆಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ. ಅವರ ಅನುಪಸ್ಥಿತಿಯಲ್ಲಿ ಟಿ-20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗದ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್‌ಗೆ ಅವಕಾಶ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ನಾಯಕ ರೋಹಿತ್ ಶರ್ಮಾ ಸರಣಿಯಿಂದ ಹೊರಗುಳಿಯುವ ನಿರೀಕ್ಷೆಯಿದೆ. ಏಕದಿನ ಸರಣಿಯಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಆಯ್ಕೆಗೆ ಅಲಭ್ಯವಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಏಕದಿನ ಸರಣಿಯನ್ನು ಮುನ್ನಡೆಸಲು ಕೆಎಲ್ ರಾಹುಲ್ ಅಥವಾ ಶುಭ್​ಮನ್​​ ಗಿಲ್​, ಟಿ-20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಬಹುದು.

ಹಾರ್ದಿಕ್​ ಗಾಯದ ಸಮಸ್ಯೆ: ಟಿ-20 ತಂಡದ ಉಪನಾಯಕ ಹಾರ್ದಿಕ್​​ ಪಾಂಡ್ಯ ಆಗಾಗ್ಗೆ ಗಾಯಗೊಳ್ಳುತ್ತಿರುವುದು ಸ್ಥಿರ ನಾಯಕತ್ವಕ್ಕೆ ಹಿನ್ನಡೆ ಉಂಟಾಗುತ್ತಿದೆ. ಗಾಯದ ಕಳವಳದಿಂದಾಗಿ ವಿಶ್ವದ ನಂ.1 ಬ್ಯಾಟರ್​ ಆಗಿರುವ ಸೂರ್ಯಕುಮಾರ್​​ ಯಾದವ್​ಗೆ ಪಟ್ಟ ಕಟ್ಟಲು ಬಿಸಿಸಿಐ ಯೋಜಿಸಿದೆ ಎಂದು ಹೇಳಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ-20 ಸರಣಿಯು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ಟೀಂ ಇಂಡಿಯಾ ಟಿ-20 ನಾಯಕತ್ವ ಕುತೂಹಲ; ಹಾರ್ದಿಕ್​ ಪಾಂಡ್ಯ ಕೈ ತಪ್ಪಿದ್ರೆ ಯಾರಿಗೆ ಚಾನ್ಸ್? - Team India T20 Captaincy

ನವದೆಹಲಿ: ಈ ತಿಂಗಳಾಂತ್ಯದಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ತಂಡ ಪ್ರಕಟ ಮಾಡುವ ಜೊತೆಗೆ ನಾಯಕರನ್ನೂ ಘೋಷಿಸುವ ಸವಾಲಿದೆ. ಹೊಸ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಈ ಬಗ್ಗೆ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಜೊತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ.

ಕ್ರೀಡಾ ಮಾಧ್ಯಮವೊಂದರ ವರದಿಯ ಪ್ರಕಾರ, ನೂತನ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅವರು, ತಂಡದ ಆಯ್ಕೆ ಮತ್ತು ಮಂದಿನ ಯೋಜನೆಗಳ ಕುರಿತು ಬಿಸಿಸಿಐ ಮತ್ತು ಆಯ್ಕೆ ಸಮಿತಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂಬರುವ ಟೂರ್ನಿ ಮತ್ತು ಭಾರತ ತಂಡದ ಭವಿಷ್ಯದ ಹಿನ್ನೆಲೆಯಲ್ಲಿಯೂ ಯೋಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರೊಂದಿಗೆ ವರ್ಚುಯಲ್​ ಆಗಿ ಒಂದು ಗಂಟೆ ಕಾಲ ಸಭೆ ನಡೆಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ. ಅವರ ಅನುಪಸ್ಥಿತಿಯಲ್ಲಿ ಟಿ-20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗದ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್‌ಗೆ ಅವಕಾಶ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ನಾಯಕ ರೋಹಿತ್ ಶರ್ಮಾ ಸರಣಿಯಿಂದ ಹೊರಗುಳಿಯುವ ನಿರೀಕ್ಷೆಯಿದೆ. ಏಕದಿನ ಸರಣಿಯಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಆಯ್ಕೆಗೆ ಅಲಭ್ಯವಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಏಕದಿನ ಸರಣಿಯನ್ನು ಮುನ್ನಡೆಸಲು ಕೆಎಲ್ ರಾಹುಲ್ ಅಥವಾ ಶುಭ್​ಮನ್​​ ಗಿಲ್​, ಟಿ-20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಬಹುದು.

ಹಾರ್ದಿಕ್​ ಗಾಯದ ಸಮಸ್ಯೆ: ಟಿ-20 ತಂಡದ ಉಪನಾಯಕ ಹಾರ್ದಿಕ್​​ ಪಾಂಡ್ಯ ಆಗಾಗ್ಗೆ ಗಾಯಗೊಳ್ಳುತ್ತಿರುವುದು ಸ್ಥಿರ ನಾಯಕತ್ವಕ್ಕೆ ಹಿನ್ನಡೆ ಉಂಟಾಗುತ್ತಿದೆ. ಗಾಯದ ಕಳವಳದಿಂದಾಗಿ ವಿಶ್ವದ ನಂ.1 ಬ್ಯಾಟರ್​ ಆಗಿರುವ ಸೂರ್ಯಕುಮಾರ್​​ ಯಾದವ್​ಗೆ ಪಟ್ಟ ಕಟ್ಟಲು ಬಿಸಿಸಿಐ ಯೋಜಿಸಿದೆ ಎಂದು ಹೇಳಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ-20 ಸರಣಿಯು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ಟೀಂ ಇಂಡಿಯಾ ಟಿ-20 ನಾಯಕತ್ವ ಕುತೂಹಲ; ಹಾರ್ದಿಕ್​ ಪಾಂಡ್ಯ ಕೈ ತಪ್ಪಿದ್ರೆ ಯಾರಿಗೆ ಚಾನ್ಸ್? - Team India T20 Captaincy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.