ETV Bharat / sports

ಶ್ರೀಲಂಕಾ ವಿರುದ್ಧ 2ನೇ ಟಿ20: ಜೈಸ್ವಾಲ್, ಸೂರ್ಯ ಅಬ್ಬರ; ಮಳೆ ಬಾಧಿತ ಪಂದ್ಯ ಗೆದ್ದ ಭಾರತ, ಸರಣಿ ಕೈ ವಶ - India Beat Sri Lanka

author img

By ANI

Published : Jul 29, 2024, 8:06 AM IST

Updated : Jul 29, 2024, 9:15 AM IST

IND vs SL 2nd T20: ನೂತನ ಕೋಚ್‌ ಆಗಿ ಗೌತಮ್ ಗಂಭೀರ್ ಮತ್ತು ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಆಯ್ಕೆಯಾದ ನಂತರ ಟೀಮ್ ಇಂಡಿಯಾ ಮೊದಲ ಸರಣಿ ಗೆದ್ದುಕೊಂಡಿದೆ.

MEN IN BLUE WON THE MATCH  INDIA TOUR OF SRI LANKA  PALLEKELE INTERNATIONAL STADIUM  IND VS SL 2ND T20
ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್‌ ಸರಣಿ ಗೆದ್ದ ಭಾರತ (AP)

ಪಲ್ಲೆಕೆಲೆ(ಶ್ರೀಲಂಕಾ): ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯ ಭಾನುವಾರ ರಾತ್ರಿ ನಡೆಯಿತು. ಲಂಕಾ ನೀಡಿದ 162 ರನ್‌ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಇನಿಂಗ್ಸ್‌ಗೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಇದರಿಂದ ಪಂದ್ಯವನ್ನು 8 ಓವರ್‌ಗೆ ಇಳಿಸಲಾಯಿತು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಟೀಂ ಇಂಡಿಯಾ ಗೆಲ್ಲಲು 8 ಓವರ್​ಗಳಲ್ಲಿ 78 ರನ್ ಕಲೆ ಹಾಕಬೇಕಿತ್ತು.

ಯಶಸ್ವಿ ಜೈಶ್ವಾಲ್ (15 ಎಸೆತಗಳಲ್ಲಿ 30 ರನ್​), ಸೂರ್ಯಕುಮಾರ್ ಯಾದವ್ (12 ಎಸೆತಗಳಲ್ಲಿ 26 ರನ್​), ಹಾರ್ದಿಕ್ ಪಾಂಡ್ಯ (ಔಟಾಗದೆ 22 ರನ್​) ಮೂಲಕ 6.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ ಈ ಗುರಿ ತಲುಪಿತು. ಗಿಲ್ ಬದಲು ಸಂಜು (0) ಈ ಪಂದ್ಯದಲ್ಲಿ ಅವಕಾಶ ಪಡೆದರು. ಆದರೆ ಅವರು ಯಶಸ್ವಿಯಾಗಲಿಲ್ಲ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಕುಶಾಲ್ ಮೆಂಡಿಸ್ (10 ರನ್) ವಿಫಲರಾದರೆ, ಪಾತುಮ್ ನಿಸ್ಸಾಂಕ (32 ರನ್) ಸಾಧಾರಣ ಪ್ರದರ್ಶನ ನೀಡಿದರು. ಆದರೆ, ಕುಶಾಲ್ ಪೆರೇರಾ (53 ರನ್) ಅರ್ಧಶತಕ ಗಳಿಸಿದರು. ಇನ್ನುಳಿದಂತೆ, ಕಮಿಂದು ಮೆಂಡಿಸ್ (26 ರನ್), ಚರಿತ್ ಅಸಲಂಕ (14 ರನ್), ದಸುನ್ ಶನಕ (0), ವನಿದು ಹಸರಂಗ (0), ರಮೇಶ್ ಮೆಂಡಿಸ್ (12 ರನ್), ಮಹಿಷ್ ತೀಕ್ಷಣ (2) ಹೆಚ್ಚು ರನ್​ ಗಳಿಸದೆ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಹಾದಿ ಹಿಡಿದರು.

ಟೀಂ ಇಂಡಿಯಾದ ಬೌಲರ್‌ಗಳಾದ ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದು ಮಿಂಚಿದರು.

ಪಂದ್ಯದ 15 ಓವರ್‌ಗಳ ನಂತರ ಶ್ರೀಲಂಕಾ 130-2ರೊಂದಿಗೆ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ 15.1 ಓವರ್​ನಲ್ಲಿ ಭಾರತಕ್ಕೆ ಬ್ರೇಕ್ ನೀಡಿದರು. ಕಮಿಂದು ಮೆಂಡೀಸ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಲಂಕಾ ಬ್ಯಾಟಿಂಗ್ ಕ್ರಮಾಂಕದಲ್ಲಿ 30 ರನ್‌ಗಳ ಅಂತರದಲ್ಲಿ 6 ವಿಕೆಟ್‌ಗಳು ಉರುಳಿದವು.

ಸರಣಿಯ ಕೊನೆಯ ಮತ್ತು 3ನೇ ಟಿ20 ಪಂದ್ಯ ನಾಳೆ (ಮಂಗಳವಾರ) ನಡೆಯಲಿದೆ.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್ ಫೈನಲ್​: ಶ್ರೀಲಂಕಾ ವನಿತೆಯರು ಚಾಂಪಿಯನ್​ - SLW Beat INDW

ಪಲ್ಲೆಕೆಲೆ(ಶ್ರೀಲಂಕಾ): ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯ ಭಾನುವಾರ ರಾತ್ರಿ ನಡೆಯಿತು. ಲಂಕಾ ನೀಡಿದ 162 ರನ್‌ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಇನಿಂಗ್ಸ್‌ಗೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಇದರಿಂದ ಪಂದ್ಯವನ್ನು 8 ಓವರ್‌ಗೆ ಇಳಿಸಲಾಯಿತು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಟೀಂ ಇಂಡಿಯಾ ಗೆಲ್ಲಲು 8 ಓವರ್​ಗಳಲ್ಲಿ 78 ರನ್ ಕಲೆ ಹಾಕಬೇಕಿತ್ತು.

ಯಶಸ್ವಿ ಜೈಶ್ವಾಲ್ (15 ಎಸೆತಗಳಲ್ಲಿ 30 ರನ್​), ಸೂರ್ಯಕುಮಾರ್ ಯಾದವ್ (12 ಎಸೆತಗಳಲ್ಲಿ 26 ರನ್​), ಹಾರ್ದಿಕ್ ಪಾಂಡ್ಯ (ಔಟಾಗದೆ 22 ರನ್​) ಮೂಲಕ 6.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ ಈ ಗುರಿ ತಲುಪಿತು. ಗಿಲ್ ಬದಲು ಸಂಜು (0) ಈ ಪಂದ್ಯದಲ್ಲಿ ಅವಕಾಶ ಪಡೆದರು. ಆದರೆ ಅವರು ಯಶಸ್ವಿಯಾಗಲಿಲ್ಲ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಕುಶಾಲ್ ಮೆಂಡಿಸ್ (10 ರನ್) ವಿಫಲರಾದರೆ, ಪಾತುಮ್ ನಿಸ್ಸಾಂಕ (32 ರನ್) ಸಾಧಾರಣ ಪ್ರದರ್ಶನ ನೀಡಿದರು. ಆದರೆ, ಕುಶಾಲ್ ಪೆರೇರಾ (53 ರನ್) ಅರ್ಧಶತಕ ಗಳಿಸಿದರು. ಇನ್ನುಳಿದಂತೆ, ಕಮಿಂದು ಮೆಂಡಿಸ್ (26 ರನ್), ಚರಿತ್ ಅಸಲಂಕ (14 ರನ್), ದಸುನ್ ಶನಕ (0), ವನಿದು ಹಸರಂಗ (0), ರಮೇಶ್ ಮೆಂಡಿಸ್ (12 ರನ್), ಮಹಿಷ್ ತೀಕ್ಷಣ (2) ಹೆಚ್ಚು ರನ್​ ಗಳಿಸದೆ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಹಾದಿ ಹಿಡಿದರು.

ಟೀಂ ಇಂಡಿಯಾದ ಬೌಲರ್‌ಗಳಾದ ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದು ಮಿಂಚಿದರು.

ಪಂದ್ಯದ 15 ಓವರ್‌ಗಳ ನಂತರ ಶ್ರೀಲಂಕಾ 130-2ರೊಂದಿಗೆ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ 15.1 ಓವರ್​ನಲ್ಲಿ ಭಾರತಕ್ಕೆ ಬ್ರೇಕ್ ನೀಡಿದರು. ಕಮಿಂದು ಮೆಂಡೀಸ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಲಂಕಾ ಬ್ಯಾಟಿಂಗ್ ಕ್ರಮಾಂಕದಲ್ಲಿ 30 ರನ್‌ಗಳ ಅಂತರದಲ್ಲಿ 6 ವಿಕೆಟ್‌ಗಳು ಉರುಳಿದವು.

ಸರಣಿಯ ಕೊನೆಯ ಮತ್ತು 3ನೇ ಟಿ20 ಪಂದ್ಯ ನಾಳೆ (ಮಂಗಳವಾರ) ನಡೆಯಲಿದೆ.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್ ಫೈನಲ್​: ಶ್ರೀಲಂಕಾ ವನಿತೆಯರು ಚಾಂಪಿಯನ್​ - SLW Beat INDW

Last Updated : Jul 29, 2024, 9:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.