ETV Bharat / opinion

ಎಎಪಿ​ ಏಕಾಂಗಿ ಸ್ಪರ್ಧೆ: 2025ರ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್​ ಪಕ್ಷದ ಮೇಲಾಗುತ್ತಾ ಪರಿಣಾಮ? - IMPLICATIONS FOR ARVIND KEJRIWAL

ದೆಹಲಿಯಲ್ಲಿ ಮೂರು ಪಕ್ಷಗಳ ತ್ರಿಕೋನ ಸ್ಪರ್ಧೆ ಮತಗಳ ಹಂಚಿಕೆಗೆ ಕಾರಣವಾಗಲಿದ್ದು, ಇದು ಹೇಗೆ ಪರಿಣಾಮ ಬೀರಲಿದೆ ಎಂಬ ಕುರಿತು ಸಾಯಂತನ್ ಘೋಷ್ ಅವರ ಲೇಖನ ಇಲ್ಲಿದೆ.

Delhi Assembly Elections by Sayantan Ghosh
ಅರವಿಂದ್​ ಕೇಜ್ರಿವಾಲ್​ (ಎಎನ್​ಐ)
author img

By ETV Bharat Karnataka Team

Published : Dec 21, 2024, 6:22 PM IST

ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಕಾಂಗ್ರೆಸ್​ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ. ಎಲ್ಲಾ ವಿಫಲ ಮಾತುಕತೆಗಳ ಹೊರತಾಗಿ ಸದ್ಯ ಅರವಿಂದ್​ ಕೇಜ್ರಿವಾಲ್​ ಅವರ ಏಕಾಂಗಿ ಸ್ಪರ್ಧೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಈ ಚುನಾವಣೆ ಕೇಜ್ರಿವಾಲ್​​ ನಾಯಕತ್ವ ಮತ್ತು ರಾಜಕೀಯ ಪ್ರಸ್ತುತಿಯಲ್ಲಿ ನಿರ್ಣಾಯಕವಾಗಿದ್ದು, ಅಗ್ನಿ ಪರೀಕ್ಷೆಯೇ ಆಗಿದೆ.

ಇತ್ತೀಚಿನ ಬಂಧನದ ಬಳಿಕ ಸುಪ್ರೀಂಕೋರ್ಟ್​​ನಿಂದ ಜಾಮೀನು ಪಡೆದು ಹೊರ ಬಂದ ಕೇಜ್ರಿವಾಲ್​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಅತಿಶಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. ಈ ನಡೆಯು ಕೇವಲ ಎಎಪಿಗೆ ಮಾತ್ರವಲ್ಲದೇ, ಮುಂದಿನ ಚುನಾವಣೆಯಲ್ಲಿ ದೆಹಲಿ ಮತದಾರರಿಗೂ ಕೂಡ ಗೊಂದಲ ಮೂಡಿಸಿದೆ.

ಮತ್ತೊಂದೆಡೆ ಕಾಂಗ್ರೆಸ್​ ಕೂಡ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಲ್ಪ ಹಿಡಿತವನ್ನು ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಮತ ಪ್ರಮಾಣವೂ ಶೇ 10ಕ್ಕಿಂತ ಕಡಿಮೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್​​​ ಕೂಟವನ್ನು ಸೇರಿದ ಬಳಿಕ ದೆಹಲಿಯ ಏಳು ಸಂಸದೀಯ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನದಲ್ಲಿ ಗೆಲುವು ಕಾಣುವಲ್ಲಿ ವಿಫಲವಾಗಿದೆ.

ದೆಹಲಿಯಲ್ಲಿ ಮೂರು ಪಕ್ಷಗಳ ತ್ರಿಕೋನಸ್ಪರ್ಧೆ ಮತಗಳ ಹಂಚಿಕೆಗೆ ಕಾರಣವಾಗಲಿದೆ. ಅದರಲ್ಲೂ ಮುಸ್ಲಿಂ ಮತ್ತು ದಲಿತ ಸಮುದಾಯಗಳ ಮತವು ಎಎಪಿಗೆ ಸವಾಲಾಗಬಹುದು. ಈ ಮತಹಂಚಿಕೆಯು ಕಾಂಗ್ರೆಸ್​​ಗೆ​ ಲಾಭವಾಗುವ ಸಾಧ್ಯತೆ ಇದೆ. ಎಎಪಿ ದುರ್ಬಲ ಹೊಂದಿದಂತೆ ಅದು ಬಿಜೆಪಿಗೆ ಲಾಭವನ್ನು ತರುತ್ತದೆ.

ಪಕ್ಷಗಳು ಮೈತ್ರಿ ಹೊರತಾಗಿಯೂ ಏಕಾಂಗಿ ಸ್ಪರ್ಧೆಯು ಎಎಪಿಗೆ ಹಾನಿ ಮಾಡುವ ಜೊತೆಗೆ ಕಾಂಗ್ರೆಸ್​ಗೆ ಲಾಭವೂ ಆಗಬಹುದು. ಕೇಜ್ರಿವಾಲ್​ ಅವರಿಗೆ ಮತಗಳ ಪಾಲು ಕಡಿಮೆಯಾಗಬಹುದು. ದೆಹಲಿಯನ್ನು ಎಎಪಿಯ ಭದ್ರಕೋಟೆಯಾಗಿಸುವಲ್ಲಿ ಅವರ ರಾಜಕೀಯ ಬ್ರಾಂಡ್​ ಮತ್ತಷ್ಟು ಕಡಿಮೆಯಾಗುತ್ತದೆಯಾ ಎಂಬುದನ್ನು ಚುನಾವಣೆ ನಿರ್ಧರಿಸಲಿದೆ.

ದೆಹಲಿ ಚುನಾವಣೆಯಲ್ಲಿ ಬದಲಾವಣೆ: ದೆಹಲಿ ಚುನಾವಣಾ ಟ್ರೆಂಡ್​ ಗಮನಿಸಿದಾಗ ವಿಧಾನಸಭೆಯಿಂದ ಲೋಕಸಭೆವರೆಗೆ ಸಾಕಷ್ಟು ವ್ಯತ್ಯಾಸ ಕಾಣಬಹುದಾಗಿದ್ದು, ಮತದಾರರಲ್ಲಿ ದ್ವಂದ್ವ ನಿಲುವು ಕಾಣಬಹುದಾಗಿದೆ. 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 53ರಷ್ಟು ಮತ ಹಂಚಿಕೆ ಪಡೆದರೆ, ಬಿಜೆಪಿ ಶೇ 38 ಮತ್ತು ಕಾಂಗ್ರೆಸ್​ ಕೇವಲ ಶೇ 4ರಷ್ಟು ಮತ ಹಂಚಿಕೆ ಪಡೆದಿತ್ತು.

ಅದೇ 2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 54ರಷ್ಟು, ಬಿಜೆಪಿ ಶೇ 32 ಮತ್ತು ಕಾಂಗ್ರೆಸ್​ ಶೇ. 9ರಷ್ಟು ಮತ ಗಳಿಸಿತ್ತು. ಇದಕ್ಕಿಂತ ಮುಂದಿನ ಚುನಾವಣೆ ಅಂದರೆ ಎಎಪಿ ಮೊದಲ ಚುನಾವಣೆಯಲ್ಲಿ 2013ರಲ್ಲಿ ಕಾಂಗ್ರೆಸ್​ ಶೇ 24ರಷ್ಟು, ಬಿಜೆಪಿ ಶೇ. 33ರಷ್ಟು ಹಾಗೂ ಎಎಪಿ ಶೇ. 29ರಷ್ಟು ಮತ ಗಳಿಸಿತ್ತು. ಈ ವೇಳೆ ಕಾಂಗ್ರೆಸ್​ ಉತ್ತಮ ಪ್ರದರ್ಶನ ತೋರಿತ್ತು.

ಈ ಮತಹಂಚಿಕೆ ಬದಲಾವಣೆಯನ್ನು ಗಮನಿಸಿದಾಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 54ರಷ್ಟು ಮತಹಂಚಿಕೆ ಪಡೆದರೆ, ಎಎಪಿ ಶೇ 24 ಹಾಗೂ ಕಾಂಗ್ರೆಸ್​ ಶೇ. 18ರಷ್ಟು ಮತ ಗಳಿಸಿತು. 2019ರ ಚುನಾವಣೆಯಲ್ಲೂ ಇದೇ ಟ್ರೆಂಡ್​ ಕಾಣಬಹುದಾಗಿದೆ. ಇಲ್ಲಿ ಬಿಜೆಪಿ ಶೇ 56, ಎಎಪಿ ಶೇ 22 ಮತ್ತು ಕಾಂಗ್ರೆಸ್​ ಶೇ 18ರಷ್ಟು ಮತಗಳಿಸಿತ್ತು. ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 46, ಎಎಪಿ ಶೇ 32 ಹಾಗೂ ಕಾಂಗ್ರೆಸ್​ ಶೇ 15ರಷ್ಟು ಮತ ಹಂಚಿಕೆಯಾಗಿತ್ತು.

ದೆಹಲಿಯ ಮತದಾನದ ನಡವಳಿಕೆಯು ವಿಶಿಷ್ಟ ಬೆಂಬಲದ ಆಧಾರವಾಗಿದೆ. ಬಿಜೆಪಿ ಸಿದ್ಧಾಂತಬೆಂಬಲಿಸುವ ಮತದಾರರು ನಿರಂತರವಾಗಿ ಶೇ. 32ರಷ್ಟಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಎಎಪಿಗೆ ಶೇ 18ರಷ್ಟು ಬೆಂಬವಿದೆ. ರಾಷ್ಟ್ರೀಯ ಚುನಾವಣೆಗಿಂತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅನ್ನು ಬೆಂಬಲಿಸುವ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್​​ ಶೇ. 18ರಷ್ಟು ಮತಗಳನ್ನು ಲೋಕಸಭೆಯಲ್ಲಿ ಗಳಿಸಿದರೂ, ರಾಜ್ಯ ಚುನಾವಣೆಯಲ್ಲಿ ಈ ಬೆಂಬಲ ಎಎಪಿಗೆ ಬದಲಾಗುತ್ತಿದೆ.

ಈ ಬದಲಾವಣೆಗಳಲ್ಲಿ ಶೇ 10-15ರಲ್ಲಿ ಮತಗಳು ವಿಧಾನಸಭೆಯಲ್ಲಿ ಎಎಪಿಗೆ ಮತ್ತು ಲೋಕಸಭೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಫ್ಲೋಟಿಂಗ್​ ಮತಗಳಾಗಿವೆ. ಈ ಮತಗಳ ತೂಗುಯ್ಯಾಲೆಯು ರಾಜ್ಯ ಮಟ್ಟದಲ್ಲಿ ಎಎಪಿ ಪ್ರಾಲಭ್ಯ ಮತ್ತು ಲೋಕಸಭೆಯಲ್ಲಿ ಬಿಜೆಪಿಯ ಮುನ್ನಡೆಗೆ ಪ್ರಮುಖವಾಗಿದೆ. ದೆಹಲಿಯ ಈ ವಿಶಿಷ್ಟ ಮತದಾರರ ನಡುವಳಿಕೆಯು ರಾಜಕೀಯ ನೆಲೆಯಲ್ಲಿ ಸಂಕೀರ್ಣತೆಗೂ ಕಾರಣವಾಗಿದೆ. ಕಾರಣ ಸ್ಥಳೀಯ ಆಡಳಿತ ಮತ್ತು ರಾಷ್ಟ್ರೀಯ ಚುನಾವಣೆಯಲ್ಲಿ ಈ ಮತಗಳ ಹಂಚಿಕೆ ಬದಲಾಗುತ್ತದೆ.

ಮುಸ್ಲಿಂ ಮತದಾರರು: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಜೊತೆಗೆ ಮೈತ್ರಿ ನಡೆಸುವುದಿಲ್ಲ ಎಂಬ ನಿರ್ಧಾರವೂ ಮುಸ್ಲಿಂ ಮತಗಳ ಹಿನ್ನಡೆಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಗಳ ಮತದ ಬಲ ಹೆಚ್ಚಿದ್ದು, ಪ್ರಮುಖ ಕ್ಷೇತ್ರದಲ್ಲಿ ಇವು ನಿರ್ಣಾಯಕವೂ ಆಗಿದೆ.

2015ರಲ್ಲಿ ಸಿಎಸ್​ಡಿಎಸ್​ ಲೋಕ್​​ನೀತಿ ಅಧ್ಯಯನ ಪ್ರಕಾರ, ಎಎಪಿ ಮುಸ್ಲಿಂ ಮತಗಳ ಬೆಂಬಲವನ್ನು ಹೊಂದಿದ್ದು, ಶೇ 77ರಷ್ಟು ಮತವನ್ನು ಗಳಿಸಿತ್ತು. ಅಲ್ಲದೇ ಮುಸ್ಲಿಂ ಪ್ರಾಬಲ್ಯದ 10 ಕ್ಷೇತ್ರದಲ್ಲಿ 9ಸ್ಥಾನ ಗೆದ್ದಿತ್ತು. ಆದಾಗ್ಯೂ ಈ ಮತಗಳ 2020ರಲ್ಲಿ ಕುಸಿಯಲಾರಂಭಿಸಿತು. ಎಎಪಿಯ ಮುಸ್ಲಿಂ ಮತ ಹಂಚಿಕೆ ಶೇ 69ರಷ್ಟು ಕುಸಿದಿದೆ.

ಈ ಇಳಿಕೆಯು 2022ರ ದೆಹಲಿ ಮುನ್ಸಿಪಲ್​ ಚುನಾವಣೆ (ಎಂಎಸ್​ಡಿ)ಯಲ್ಲಿ ಸ್ಪಷ್ಟವಾಗಿ ಕಂಡಿತು. ಇಲ್ಲಿ ಕಾಂಗ್ರೆಸ್​ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಾದ ಮುಸ್ತಫಾಬಾದ್​ ಮತ್ತು ಶಹೀನ್​ ಬಾಗ್​ನಲ್ಲಿ ಮತ ಗಳಿಕೆ ಕಂಡಿತು.

ಮೈತ್ರಿ ಹೊರತಾದ ಏಕಾಂಗಿ ಸ್ಪರ್ಧೆಯಲ್ಲಿ ಮುಸ್ಲಿಂ ಮತಗಳು ಎಎಪಿ ಮತ್ತು ಕಾಂಗ್ರೆಸ್​ ನಡುವೆ ಹರಿದು ಹಂಚಲಿದೆ. ಈ ಮತ ವಿಭಜನೆಯು ಬಿಜೆಪಿಯ ಸ್ಥಾನ ಭದ್ರಪಡಿಸಲು ಮತ್ತು ಮತ ಗಳಿಸಲು ಸಹಕಾರಿಯಾಗಲಿದೆ.

ದಲಿತರ ಬೆಂಬಲ: ಐತಿಹಾಸಿಕವಾಗಿ ದಲಿತರು ಕಾಂಗ್ರೆಸ್​ನ ಪ್ರಮುಖ ಮತದಾರರಾಗಿದ್ದಾರೆ. ಆದರೆ, ಕಾಲಾನಂತರದಲ್ಲಿ ಅನೇಕರು ಎಎಪಿಯ ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೊಳಗೊಂಡ ಆಡಳಿತದ ಭರವಸೆ ಹಿನ್ನೆಲೆ ಆಪ್​ನತ್ತ ವಾಲಿದರು. ಆದಾಗ್ಯೂ, ಇತ್ತೀಚಿನ ಘಟನೆಗಳು ಅವರ ಸಂಬಂಧವನ್ನು ಕಡಿಮೆ ಮಾಡಿದೆ. ಅದರಲ್ಲಿ ಪ್ರಮುಖವಾಗಿರುವ ಘಟನೆ ಎಂದರೆ, ಪ್ರಮುಖ ದಲಿತ ನಾಯಕ ಹಾಗೂ ದೆಹಲಿ ಮಾಜಿ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್​ ಗೌತಮ್​ ರಾಜೀನಾಮೆ.

2022ರಲ್ಲಿ ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕಾರ್ಯಕ್ರಮದ ಬಳಿಕ ಗೌತಮ್​ ಅವರು ತಮ್ಮ ಕ್ಯಾಬಿನೆಟ್​ ಹುದ್ದೆಗೆ ರಾಜೀನಾಮೆ ನೀಡಿತು. ಈ ಕಾರ್ಯಕ್ರಮವು ಅನೇಕ ವಿವಾದ ಮತ್ತು ಎಎಪಿ ದಲಿತ ಬೆಂಬಲಿಗರ ಆಕಾಂಕ್ಷೆಗಳು ಮತ್ತು ಸೂಕ್ಷ್ಮತೆಗಳನ್ನು ಪರಿಹರಿಸುವಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಎತ್ತಿ ತೋರಿಸಿತು.

ಗೌತಮ್​ ರಾಜೀನಾಮೆ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ದಲಿತ ನಾಯಕ, ಸಮಾಜ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ರಾಜ್​ಕುಮಾರ್​ ಆನಂದ್​ ಕೂಡ ಏಪ್ರಿಲ್​ 2024ರಲ್ಲಿ ಪಕ್ಷ ತೊರೆದರು. ಪಕ್ಷದ ನೀತಿಗಳು ದಲಿತ ವಿರೋಧಿಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಇವರು ರಾಜೀನಾಮೆ ನೀಡಿದರು. ಆನ್ಂದ್​ ಅವರ ನಿರ್ಗಮನ ಪಕ್ಷದಲ್ಲಿ ದಲಿತ ನಾಯಕರ ಹೆಚ್ಚುತ್ತಿರುವ ಅಸಮಾಧಾನವನ್ನು ತೋರಿಸಿತು.

ರಾಜೇಂದ್ರ ಪಾಲ್ ಗೌತಮ್‌ರಂತಹ ಪ್ರಮುಖ ದಲಿತ ನಾಯಕರು ಆಪ್‌ನಿಂದ ಕಾಂಗ್ರೆಸ್​ ಸೇರಿದ್ದನ್ನು ಗಮನಿಸಿದರೆ ಈ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್​ ಎನ್ನುವಂತೆ ಕಂಡುಬಂತು. ಇತ್ತೀಚೆಗೆ, ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಇತ್ತೀಚೆಗೆ ಎಎಪಿಯ ಆಡಳಿತವನ್ನು ಟೀಕಿಸಿದರು ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಕಾಂಗ್ರೆಸ್‌ನ ಬದ್ಧತೆಯನ್ನು ಒತ್ತಿ ಹೇಳಿದರು.. ಈ ಹೇಳಿಕೆಗಳು ದಲಿತ ಮತದಾರರ ಮೇಲೆ ಪ್ರಭಾವ ಬೀರಲಿವೆ. ಕಾಂಗ್ರೆಸ್​ ಮತ್ತು ಎಎಪಿ ಮೈತ್ರಿ ಕೊರತೆ ದಲಿತ ಬೆಂಬಲಿಗರನ್ನು ಪಡೆಯುವಲ್ಲಿ ಎಎಪಿಗೆ ಹಿನ್ನಡೆಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಏನಿದು ಒಂದು ದೇಶ, ಒಂದು ಚುನಾವಣೆ? ಇಲ್ಲಿದೆ ವಿಧೇಯಕದ ಒಳಹೊರಗು

ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಕಾಂಗ್ರೆಸ್​ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ. ಎಲ್ಲಾ ವಿಫಲ ಮಾತುಕತೆಗಳ ಹೊರತಾಗಿ ಸದ್ಯ ಅರವಿಂದ್​ ಕೇಜ್ರಿವಾಲ್​ ಅವರ ಏಕಾಂಗಿ ಸ್ಪರ್ಧೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಈ ಚುನಾವಣೆ ಕೇಜ್ರಿವಾಲ್​​ ನಾಯಕತ್ವ ಮತ್ತು ರಾಜಕೀಯ ಪ್ರಸ್ತುತಿಯಲ್ಲಿ ನಿರ್ಣಾಯಕವಾಗಿದ್ದು, ಅಗ್ನಿ ಪರೀಕ್ಷೆಯೇ ಆಗಿದೆ.

ಇತ್ತೀಚಿನ ಬಂಧನದ ಬಳಿಕ ಸುಪ್ರೀಂಕೋರ್ಟ್​​ನಿಂದ ಜಾಮೀನು ಪಡೆದು ಹೊರ ಬಂದ ಕೇಜ್ರಿವಾಲ್​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಅತಿಶಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. ಈ ನಡೆಯು ಕೇವಲ ಎಎಪಿಗೆ ಮಾತ್ರವಲ್ಲದೇ, ಮುಂದಿನ ಚುನಾವಣೆಯಲ್ಲಿ ದೆಹಲಿ ಮತದಾರರಿಗೂ ಕೂಡ ಗೊಂದಲ ಮೂಡಿಸಿದೆ.

ಮತ್ತೊಂದೆಡೆ ಕಾಂಗ್ರೆಸ್​ ಕೂಡ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಲ್ಪ ಹಿಡಿತವನ್ನು ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಮತ ಪ್ರಮಾಣವೂ ಶೇ 10ಕ್ಕಿಂತ ಕಡಿಮೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್​​​ ಕೂಟವನ್ನು ಸೇರಿದ ಬಳಿಕ ದೆಹಲಿಯ ಏಳು ಸಂಸದೀಯ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನದಲ್ಲಿ ಗೆಲುವು ಕಾಣುವಲ್ಲಿ ವಿಫಲವಾಗಿದೆ.

ದೆಹಲಿಯಲ್ಲಿ ಮೂರು ಪಕ್ಷಗಳ ತ್ರಿಕೋನಸ್ಪರ್ಧೆ ಮತಗಳ ಹಂಚಿಕೆಗೆ ಕಾರಣವಾಗಲಿದೆ. ಅದರಲ್ಲೂ ಮುಸ್ಲಿಂ ಮತ್ತು ದಲಿತ ಸಮುದಾಯಗಳ ಮತವು ಎಎಪಿಗೆ ಸವಾಲಾಗಬಹುದು. ಈ ಮತಹಂಚಿಕೆಯು ಕಾಂಗ್ರೆಸ್​​ಗೆ​ ಲಾಭವಾಗುವ ಸಾಧ್ಯತೆ ಇದೆ. ಎಎಪಿ ದುರ್ಬಲ ಹೊಂದಿದಂತೆ ಅದು ಬಿಜೆಪಿಗೆ ಲಾಭವನ್ನು ತರುತ್ತದೆ.

ಪಕ್ಷಗಳು ಮೈತ್ರಿ ಹೊರತಾಗಿಯೂ ಏಕಾಂಗಿ ಸ್ಪರ್ಧೆಯು ಎಎಪಿಗೆ ಹಾನಿ ಮಾಡುವ ಜೊತೆಗೆ ಕಾಂಗ್ರೆಸ್​ಗೆ ಲಾಭವೂ ಆಗಬಹುದು. ಕೇಜ್ರಿವಾಲ್​ ಅವರಿಗೆ ಮತಗಳ ಪಾಲು ಕಡಿಮೆಯಾಗಬಹುದು. ದೆಹಲಿಯನ್ನು ಎಎಪಿಯ ಭದ್ರಕೋಟೆಯಾಗಿಸುವಲ್ಲಿ ಅವರ ರಾಜಕೀಯ ಬ್ರಾಂಡ್​ ಮತ್ತಷ್ಟು ಕಡಿಮೆಯಾಗುತ್ತದೆಯಾ ಎಂಬುದನ್ನು ಚುನಾವಣೆ ನಿರ್ಧರಿಸಲಿದೆ.

ದೆಹಲಿ ಚುನಾವಣೆಯಲ್ಲಿ ಬದಲಾವಣೆ: ದೆಹಲಿ ಚುನಾವಣಾ ಟ್ರೆಂಡ್​ ಗಮನಿಸಿದಾಗ ವಿಧಾನಸಭೆಯಿಂದ ಲೋಕಸಭೆವರೆಗೆ ಸಾಕಷ್ಟು ವ್ಯತ್ಯಾಸ ಕಾಣಬಹುದಾಗಿದ್ದು, ಮತದಾರರಲ್ಲಿ ದ್ವಂದ್ವ ನಿಲುವು ಕಾಣಬಹುದಾಗಿದೆ. 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 53ರಷ್ಟು ಮತ ಹಂಚಿಕೆ ಪಡೆದರೆ, ಬಿಜೆಪಿ ಶೇ 38 ಮತ್ತು ಕಾಂಗ್ರೆಸ್​ ಕೇವಲ ಶೇ 4ರಷ್ಟು ಮತ ಹಂಚಿಕೆ ಪಡೆದಿತ್ತು.

ಅದೇ 2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 54ರಷ್ಟು, ಬಿಜೆಪಿ ಶೇ 32 ಮತ್ತು ಕಾಂಗ್ರೆಸ್​ ಶೇ. 9ರಷ್ಟು ಮತ ಗಳಿಸಿತ್ತು. ಇದಕ್ಕಿಂತ ಮುಂದಿನ ಚುನಾವಣೆ ಅಂದರೆ ಎಎಪಿ ಮೊದಲ ಚುನಾವಣೆಯಲ್ಲಿ 2013ರಲ್ಲಿ ಕಾಂಗ್ರೆಸ್​ ಶೇ 24ರಷ್ಟು, ಬಿಜೆಪಿ ಶೇ. 33ರಷ್ಟು ಹಾಗೂ ಎಎಪಿ ಶೇ. 29ರಷ್ಟು ಮತ ಗಳಿಸಿತ್ತು. ಈ ವೇಳೆ ಕಾಂಗ್ರೆಸ್​ ಉತ್ತಮ ಪ್ರದರ್ಶನ ತೋರಿತ್ತು.

ಈ ಮತಹಂಚಿಕೆ ಬದಲಾವಣೆಯನ್ನು ಗಮನಿಸಿದಾಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 54ರಷ್ಟು ಮತಹಂಚಿಕೆ ಪಡೆದರೆ, ಎಎಪಿ ಶೇ 24 ಹಾಗೂ ಕಾಂಗ್ರೆಸ್​ ಶೇ. 18ರಷ್ಟು ಮತ ಗಳಿಸಿತು. 2019ರ ಚುನಾವಣೆಯಲ್ಲೂ ಇದೇ ಟ್ರೆಂಡ್​ ಕಾಣಬಹುದಾಗಿದೆ. ಇಲ್ಲಿ ಬಿಜೆಪಿ ಶೇ 56, ಎಎಪಿ ಶೇ 22 ಮತ್ತು ಕಾಂಗ್ರೆಸ್​ ಶೇ 18ರಷ್ಟು ಮತಗಳಿಸಿತ್ತು. ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 46, ಎಎಪಿ ಶೇ 32 ಹಾಗೂ ಕಾಂಗ್ರೆಸ್​ ಶೇ 15ರಷ್ಟು ಮತ ಹಂಚಿಕೆಯಾಗಿತ್ತು.

ದೆಹಲಿಯ ಮತದಾನದ ನಡವಳಿಕೆಯು ವಿಶಿಷ್ಟ ಬೆಂಬಲದ ಆಧಾರವಾಗಿದೆ. ಬಿಜೆಪಿ ಸಿದ್ಧಾಂತಬೆಂಬಲಿಸುವ ಮತದಾರರು ನಿರಂತರವಾಗಿ ಶೇ. 32ರಷ್ಟಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಎಎಪಿಗೆ ಶೇ 18ರಷ್ಟು ಬೆಂಬವಿದೆ. ರಾಷ್ಟ್ರೀಯ ಚುನಾವಣೆಗಿಂತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅನ್ನು ಬೆಂಬಲಿಸುವ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್​​ ಶೇ. 18ರಷ್ಟು ಮತಗಳನ್ನು ಲೋಕಸಭೆಯಲ್ಲಿ ಗಳಿಸಿದರೂ, ರಾಜ್ಯ ಚುನಾವಣೆಯಲ್ಲಿ ಈ ಬೆಂಬಲ ಎಎಪಿಗೆ ಬದಲಾಗುತ್ತಿದೆ.

ಈ ಬದಲಾವಣೆಗಳಲ್ಲಿ ಶೇ 10-15ರಲ್ಲಿ ಮತಗಳು ವಿಧಾನಸಭೆಯಲ್ಲಿ ಎಎಪಿಗೆ ಮತ್ತು ಲೋಕಸಭೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಫ್ಲೋಟಿಂಗ್​ ಮತಗಳಾಗಿವೆ. ಈ ಮತಗಳ ತೂಗುಯ್ಯಾಲೆಯು ರಾಜ್ಯ ಮಟ್ಟದಲ್ಲಿ ಎಎಪಿ ಪ್ರಾಲಭ್ಯ ಮತ್ತು ಲೋಕಸಭೆಯಲ್ಲಿ ಬಿಜೆಪಿಯ ಮುನ್ನಡೆಗೆ ಪ್ರಮುಖವಾಗಿದೆ. ದೆಹಲಿಯ ಈ ವಿಶಿಷ್ಟ ಮತದಾರರ ನಡುವಳಿಕೆಯು ರಾಜಕೀಯ ನೆಲೆಯಲ್ಲಿ ಸಂಕೀರ್ಣತೆಗೂ ಕಾರಣವಾಗಿದೆ. ಕಾರಣ ಸ್ಥಳೀಯ ಆಡಳಿತ ಮತ್ತು ರಾಷ್ಟ್ರೀಯ ಚುನಾವಣೆಯಲ್ಲಿ ಈ ಮತಗಳ ಹಂಚಿಕೆ ಬದಲಾಗುತ್ತದೆ.

ಮುಸ್ಲಿಂ ಮತದಾರರು: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಜೊತೆಗೆ ಮೈತ್ರಿ ನಡೆಸುವುದಿಲ್ಲ ಎಂಬ ನಿರ್ಧಾರವೂ ಮುಸ್ಲಿಂ ಮತಗಳ ಹಿನ್ನಡೆಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಗಳ ಮತದ ಬಲ ಹೆಚ್ಚಿದ್ದು, ಪ್ರಮುಖ ಕ್ಷೇತ್ರದಲ್ಲಿ ಇವು ನಿರ್ಣಾಯಕವೂ ಆಗಿದೆ.

2015ರಲ್ಲಿ ಸಿಎಸ್​ಡಿಎಸ್​ ಲೋಕ್​​ನೀತಿ ಅಧ್ಯಯನ ಪ್ರಕಾರ, ಎಎಪಿ ಮುಸ್ಲಿಂ ಮತಗಳ ಬೆಂಬಲವನ್ನು ಹೊಂದಿದ್ದು, ಶೇ 77ರಷ್ಟು ಮತವನ್ನು ಗಳಿಸಿತ್ತು. ಅಲ್ಲದೇ ಮುಸ್ಲಿಂ ಪ್ರಾಬಲ್ಯದ 10 ಕ್ಷೇತ್ರದಲ್ಲಿ 9ಸ್ಥಾನ ಗೆದ್ದಿತ್ತು. ಆದಾಗ್ಯೂ ಈ ಮತಗಳ 2020ರಲ್ಲಿ ಕುಸಿಯಲಾರಂಭಿಸಿತು. ಎಎಪಿಯ ಮುಸ್ಲಿಂ ಮತ ಹಂಚಿಕೆ ಶೇ 69ರಷ್ಟು ಕುಸಿದಿದೆ.

ಈ ಇಳಿಕೆಯು 2022ರ ದೆಹಲಿ ಮುನ್ಸಿಪಲ್​ ಚುನಾವಣೆ (ಎಂಎಸ್​ಡಿ)ಯಲ್ಲಿ ಸ್ಪಷ್ಟವಾಗಿ ಕಂಡಿತು. ಇಲ್ಲಿ ಕಾಂಗ್ರೆಸ್​ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಾದ ಮುಸ್ತಫಾಬಾದ್​ ಮತ್ತು ಶಹೀನ್​ ಬಾಗ್​ನಲ್ಲಿ ಮತ ಗಳಿಕೆ ಕಂಡಿತು.

ಮೈತ್ರಿ ಹೊರತಾದ ಏಕಾಂಗಿ ಸ್ಪರ್ಧೆಯಲ್ಲಿ ಮುಸ್ಲಿಂ ಮತಗಳು ಎಎಪಿ ಮತ್ತು ಕಾಂಗ್ರೆಸ್​ ನಡುವೆ ಹರಿದು ಹಂಚಲಿದೆ. ಈ ಮತ ವಿಭಜನೆಯು ಬಿಜೆಪಿಯ ಸ್ಥಾನ ಭದ್ರಪಡಿಸಲು ಮತ್ತು ಮತ ಗಳಿಸಲು ಸಹಕಾರಿಯಾಗಲಿದೆ.

ದಲಿತರ ಬೆಂಬಲ: ಐತಿಹಾಸಿಕವಾಗಿ ದಲಿತರು ಕಾಂಗ್ರೆಸ್​ನ ಪ್ರಮುಖ ಮತದಾರರಾಗಿದ್ದಾರೆ. ಆದರೆ, ಕಾಲಾನಂತರದಲ್ಲಿ ಅನೇಕರು ಎಎಪಿಯ ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೊಳಗೊಂಡ ಆಡಳಿತದ ಭರವಸೆ ಹಿನ್ನೆಲೆ ಆಪ್​ನತ್ತ ವಾಲಿದರು. ಆದಾಗ್ಯೂ, ಇತ್ತೀಚಿನ ಘಟನೆಗಳು ಅವರ ಸಂಬಂಧವನ್ನು ಕಡಿಮೆ ಮಾಡಿದೆ. ಅದರಲ್ಲಿ ಪ್ರಮುಖವಾಗಿರುವ ಘಟನೆ ಎಂದರೆ, ಪ್ರಮುಖ ದಲಿತ ನಾಯಕ ಹಾಗೂ ದೆಹಲಿ ಮಾಜಿ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್​ ಗೌತಮ್​ ರಾಜೀನಾಮೆ.

2022ರಲ್ಲಿ ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕಾರ್ಯಕ್ರಮದ ಬಳಿಕ ಗೌತಮ್​ ಅವರು ತಮ್ಮ ಕ್ಯಾಬಿನೆಟ್​ ಹುದ್ದೆಗೆ ರಾಜೀನಾಮೆ ನೀಡಿತು. ಈ ಕಾರ್ಯಕ್ರಮವು ಅನೇಕ ವಿವಾದ ಮತ್ತು ಎಎಪಿ ದಲಿತ ಬೆಂಬಲಿಗರ ಆಕಾಂಕ್ಷೆಗಳು ಮತ್ತು ಸೂಕ್ಷ್ಮತೆಗಳನ್ನು ಪರಿಹರಿಸುವಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಎತ್ತಿ ತೋರಿಸಿತು.

ಗೌತಮ್​ ರಾಜೀನಾಮೆ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ದಲಿತ ನಾಯಕ, ಸಮಾಜ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ರಾಜ್​ಕುಮಾರ್​ ಆನಂದ್​ ಕೂಡ ಏಪ್ರಿಲ್​ 2024ರಲ್ಲಿ ಪಕ್ಷ ತೊರೆದರು. ಪಕ್ಷದ ನೀತಿಗಳು ದಲಿತ ವಿರೋಧಿಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಇವರು ರಾಜೀನಾಮೆ ನೀಡಿದರು. ಆನ್ಂದ್​ ಅವರ ನಿರ್ಗಮನ ಪಕ್ಷದಲ್ಲಿ ದಲಿತ ನಾಯಕರ ಹೆಚ್ಚುತ್ತಿರುವ ಅಸಮಾಧಾನವನ್ನು ತೋರಿಸಿತು.

ರಾಜೇಂದ್ರ ಪಾಲ್ ಗೌತಮ್‌ರಂತಹ ಪ್ರಮುಖ ದಲಿತ ನಾಯಕರು ಆಪ್‌ನಿಂದ ಕಾಂಗ್ರೆಸ್​ ಸೇರಿದ್ದನ್ನು ಗಮನಿಸಿದರೆ ಈ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್​ ಎನ್ನುವಂತೆ ಕಂಡುಬಂತು. ಇತ್ತೀಚೆಗೆ, ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಇತ್ತೀಚೆಗೆ ಎಎಪಿಯ ಆಡಳಿತವನ್ನು ಟೀಕಿಸಿದರು ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಕಾಂಗ್ರೆಸ್‌ನ ಬದ್ಧತೆಯನ್ನು ಒತ್ತಿ ಹೇಳಿದರು.. ಈ ಹೇಳಿಕೆಗಳು ದಲಿತ ಮತದಾರರ ಮೇಲೆ ಪ್ರಭಾವ ಬೀರಲಿವೆ. ಕಾಂಗ್ರೆಸ್​ ಮತ್ತು ಎಎಪಿ ಮೈತ್ರಿ ಕೊರತೆ ದಲಿತ ಬೆಂಬಲಿಗರನ್ನು ಪಡೆಯುವಲ್ಲಿ ಎಎಪಿಗೆ ಹಿನ್ನಡೆಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಏನಿದು ಒಂದು ದೇಶ, ಒಂದು ಚುನಾವಣೆ? ಇಲ್ಲಿದೆ ವಿಧೇಯಕದ ಒಳಹೊರಗು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.