ETV Bharat / opinion

ರಾಜಭವನ - ಕರ್ನಾಟಕ ಸರ್ಕಾರದ ಮಧ್ಯೆ ಸಂಘರ್ಷ: ಏನಿದರ ಮರ್ಮ? - Raj Bhavan Government Conflict

author img

By ETV Bharat Karnataka Team

Published : Sep 9, 2024, 7:17 PM IST

ಕರ್ನಾಟಕ ಸರ್ಕಾರ ಮತ್ತು ರಾಜಭವನದ ಮಧ್ಯೆ ನಡೆದಿರುವ ತಿಕ್ಕಾಟದ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (IANS)

State Govt vs Governor: ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ರಾಜಭವನದ ನಡುವೆ ತಿಕ್ಕಾಟ ನಡೆಯುತ್ತಿದೆ. ಥಾವರ್ ಚಂದ್ ಗೆಹ್ಲೋಟ್ ಒಂದು ಕಾಲದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು.

ಮೈಸೂರು ನಗರಾಭಿವೃದ್ಧಿ ನಿಗಮ (ಮುಡಾ)ವು ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ಅಭಿವೃದ್ಧಿಪಡಿಸಿದ 3.16 ಎಕರೆ ಜಮೀನಿನ ಬದಲು 14 ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಿಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಿದ ನಂತರ ಈ ಎಲ್ಲ ವಿವಾದ ಆರಂಭವಾಗಿದೆ. ಅಂತಿಮವಾಗಿ ರಾಜ್ಯಪಾಲರು ಪ್ರಕರಣದ ವಿಚಾರಣೆ ನಡೆಸಲು ಅನುಮತಿ ನೀಡಿದ್ದಾರೆ.

ರಾಜ್ಯ ಸರ್ಕಾರ, ಕಾಂಗ್ರೆಸ್ ಮತ್ತು ಹಲವಾರು ಜಾತಿ ಸಂಘಟನೆಗಳು ಈ ಕ್ರಮಗಳನ್ನು ಪ್ರತಿಪಕ್ಷವು ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಗಳು ಎಂದು ಖಂಡಿಸಿವೆ ಮತ್ತು ರಾಜ್ಯಪಾಲರನ್ನು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಟೀಕಿಸಿವೆ. ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಅಡಿ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ರಾಜ್ಯ ಪೊಲೀಸರಿಗೆ ಮನವಿ ಮಾಡಿದೆ.

ಇದನ್ನು ಓದಿ:2026 ರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಲೋಕಾರ್ಪಣೆ: ಸಚಿವ ಸೋಮಣ್ಣ ಭರವಸೆ - Sub Urban Railway Project

ಮಸೂದೆಗಳ ವಿಷಯದಲ್ಲಿ ರಾಜ್ಯಪಾಲರಿಗಿರುವ ಅಧಿಕಾರಗಳೇನು?

  • ಅನುಚ್ಛೇದ 200 - ಮಸೂದೆಗಳಿಗೆ ಒಪ್ಪಿಗೆ: ಒಂದು ಮಸೂದೆಯನ್ನು ಒಂದು ರಾಜ್ಯದ ವಿಧಾನಸಭೆ ಅಂಗೀಕರಿಸಿದಾಗ ಅಥವಾ ಆ ರಾಜ್ಯವು ವಿಧಾನ ಪರಿಷತ್ತನ್ನು ಹೊಂದಿರುವ ರಾಜ್ಯದ ಸಂದರ್ಭದಲ್ಲಿ, ರಾಜ್ಯದ ಶಾಸಕಾಂಗದ ಎರಡೂ ಸದನಗಳು ಅಂಗೀಕರಿಸಿದಾಗ, ಅದನ್ನು ರಾಜ್ಯಪಾಲರು ಮಂಡಿಸತಕ್ಕದ್ದು ಮತ್ತು ರಾಜ್ಯಪಾಲರು ಮಸೂದೆಗೆ ತಾವು ಸಮ್ಮತಿಸುವುದಾಗಿ ಅಥವಾ ಒಪ್ಪಿಗೆಯನ್ನು ತಡೆಹಿಡಿಯುವುದಾಗಿ ಘೋಷಿಸತಕ್ಕದ್ದು. ಅಲ್ಲಿಂದ ಅವರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸುತ್ತಾರೆ: ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿದ ನಂತರ, ರಾಜ್ಯಪಾಲರು ಮಸೂದೆಯನ್ನು ಅದು ಹಣಕಾಸು ಮಸೂದೆಯಲ್ಲದಿದ್ದರೆ ಅದನ್ನು ಹಿಂದಿರುಗಿಸಬಹುದು ಮತ್ತು ಸದನ ಅಥವಾ ಸದನಗಳು ಮಸೂದೆಯನ್ನು ಅಥವಾ ಅದರ ಯಾವುದೇ ನಿರ್ದಿಷ್ಟ ನಿಬಂಧನೆಗಳನ್ನು ಮರುಪರಿಶೀಲಿಸಬೇಕು ಮತ್ತು ನಿರ್ದಿಷ್ಟವಾಗಿ, ಅವರು ತಮ್ಮ ಸಂದೇಶದಲ್ಲಿ ಶಿಫಾರಸು ಮಾಡಬಹುದಾದಂತಹ ಯಾವುದೇ ತಿದ್ದುಪಡಿಗಳನ್ನು ಪರಿಚಯಿಸುವ ಇಚ್ಛೆಯನ್ನು ಪರಿಗಣಿಸುತ್ತಾರೆ ಮತ್ತು ಒಂದು ಮಸೂದೆಯನ್ನು ಹೀಗೆ ಹಿಂದಿರುಗಿಸಿದಾಗ, ಸದನ ಅಥವಾ ಸದನಗಳು ಅದಕ್ಕೆ ಅನುಗುಣವಾಗಿ ಮಸೂದೆಯನ್ನು ಮರುಪರಿಶೀಲಿಸತಕ್ಕದ್ದು, ಮತ್ತು ಮಸೂದೆಯನ್ನು ಸದನ ಅಥವಾ ಸದನಗಳು ತಿದ್ದುಪಡಿಯೊಂದಿಗೆ ಅಥವಾ ತಿದ್ದುಪಡಿ ಇಲ್ಲದೆ ಮತ್ತೆ ಅಂಗೀಕರಿಸಿ ರಾಜ್ಯಪಾಲರ ಒಪ್ಪಿಗೆಗಾಗಿ ಸಲ್ಲಿಸಿದರೆ, ರಾಜ್ಯಪಾಲರು ಅಲ್ಲಿ ಒಪ್ಪಿಗೆಯನ್ನು ತಡೆಹಿಡಿಯುವಂತಿಲ್ಲ.
  • ರಾಜ್ಯಪಾಲರ ಅಭಿಪ್ರಾಯದಲ್ಲಿ ಯಾವುದೇ ಮಸೂದೆಯು ಕಾನೂನಾಗಿ ಮಾರ್ಪಟ್ಟರೆ, ಅದು ಉಚ್ಚ ನ್ಯಾಯಾಲಯದ ಅಧಿಕಾರದಿಂದ ದೂರವಾಗುತ್ತದೆ.

ಮಸೂದೆಗಳಿಗೆ ರಾಜ್ಯಪಾಲರ ಅಂಕಿತ:

ರಾಜ್ಯಪಾರ ಎದುರು ನಾಲ್ಕು ಆಯ್ಕೆಗಳು ತೆರೆದಿರುತ್ತವೆ. ಅವರಿಗೆ ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಮಂಡಿಸಲಾಗುತ್ತದೆ. ರಾಜ್ಯಪಾಲರ ಆಯ್ಕೆಗಳು ಹೀಗಿವೆ:

(i) ಒಪ್ಪಿಗೆಗಳು, ಅಥವಾ (ii) ಒಪ್ಪಿಗೆಯನ್ನು ತಡೆಹಿಡಿಯುವುದು, ಅಥವಾ (iii) ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವುದು, ಅಥವಾ (iv) ಮಸೂದೆಯನ್ನು (ಹಣಕಾಸು ಮಸೂದೆಯಲ್ಲದಿದ್ದರೆ) ತನ್ನ ಸಂದೇಶದೊಂದಿಗೆ ಮರುಪರಿಶೀಲನೆಗಾಗಿ ಹಿಂದಿರುಗಿಸುವುದು. ಮಸೂದೆಯ ಮಂಡನೆಯ ನಂತರ ಸಾಧ್ಯವಾದಷ್ಟು ಬೇಗ ಇದನ್ನು ಮಾಡಬೇಕು (ಮೊದಲನೆಯ ಉಪಬಂಧ) ಈ ನಿಟ್ಟಿನಲ್ಲಿ ರಾಜ್ಯಪಾಲರ ಕ್ರಮವನ್ನು ಸಮರ್ಥನೀಯವಲ್ಲ ಎಂದು ಪರಿಗಣಿಸಲಾಗಿದೆ. ಕೆಳಗೆ ಉಲ್ಲೇಖಿಸಲಾದ ಪ್ರಕರಣಗಳನ್ನು ನೋಡಿ.

(i) ಪುರುಷೋತ್ತಮ ವಿ. ಕೇರಳ ರಾಜ್ಯ, ಎಐಆರ್ 1962 ಎಸ್ಸಿ 694. (ii) ಹೋಚ್ಸ್ಟ್ ವಿ. ಬಿಹಾರ ರಾಜ್ಯ, ಎಐಆರ್ 1983 ಎಸ್ಸಿ 1019. (iii) ಭರೋಟ್ ಸೇವಾ ಆಶ್ರಮ v. ಗುಜರಾತ್​ ರಾಜ್ಯ, ಎಐಆರ್ 1987 ಎಸ್ಸಿ 494.

  • ಅನುಚ್ಛೇದ 201. ಮಸೂದೆಗಳನ್ನು ಪರಿಗಣನೆಗೆ ಕಾಯ್ದಿರಿಸುವುದು. ಒಂದು ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದಾಗ, ರಾಷ್ಟ್ರಪತಿಗಳು ತಾವು ಮಸೂದೆಗೆ ಒಪ್ಪಿಗೆ ನೀಡುತ್ತೇವೆ ಅಥವಾ ಅದಕ್ಕೆ ಒಪ್ಪಿಗೆಯನ್ನು ತಡೆಹಿಡಿಯುತ್ತೇವೆ ಎಂದು ಘೋಷಿಸಬಹುದು: ಮಸೂದೆಯು ಹಣಕಾಸಿನ ಮಸೂದೆಯಲ್ಲದಿದ್ದರೆ, ರಾಷ್ಟ್ರಪತಿಗಳು ಮಸೂದೆಯನ್ನು ಸದನಕ್ಕೆ ಹಿಂದಿರುಗಿಸಲು ರಾಜ್ಯಪಾಲರಿಗೆ ನಿರ್ದೇಶನ ನೀಡಬಹುದು ಅಥವಾ, ಅನುಚ್ಛೇದ 200 ರ ಮೊದಲ ಉಪಬಂಧದಲ್ಲಿ ಉಲ್ಲೇಖಿಸಿರುವ ಸಂದೇಶದೊಂದಿಗೆ ರಾಜ್ಯದ ಶಾಸಕಾಂಗದ ಸದನಗಳು ಮತ್ತು ಮಸೂದೆಯನ್ನು ಹಿಂದಿರುಗಿಸಿದಾಗ, ಸದನ ಅಥವಾ ಸದನಗಳು ಅಂತಹ ಸಂದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಆರು ತಿಂಗಳ ಅವಧಿಯೊಳಗೆ ಅದನ್ನು ಮರುಪರಿಶೀಲಿಸಬೇಕು ಮತ್ತು, ತಿದ್ದುಪಡಿಯೊಂದಿಗೆ ಅಥವಾ ಇಲ್ಲದೇ ಸದನ ಅಥವಾ ಸದನಗಳು ಅದನ್ನು ಮತ್ತೆ ಅಂಗೀಕರಿಸಿದರೆ, ಅದನ್ನು ರಾಷ್ಟ್ರಪತಿಗಳ ಪರಿಗಣನೆಗಾಗಿ ಮತ್ತೆ ಮಂಡಿಸಲಾಗುತ್ತದೆ.

ಇದನ್ನು ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್ ಶೀಟ್ ನಲ್ಲಿ ದರ್ಶನ್ ಸ್ವಇಚ್ಚಾ ಹೇಳಿಕೆ ರಿವೀಲ್: ಏನದು ಸತ್ಯ? - Darshan Statements

ಕರ್ನಾಟಕ ಸರ್ಕಾರ ಹೇಳಿದ್ದೇನು?

  • ರಾಜ್ಯ ಸರ್ಕಾರವು ರಾಜ್ಯಪಾಲರನ್ನು ಪಕ್ಷಪಾತಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಆಗಸ್ಟ್ 22 ರಂದು, ರಾಜ್ಯ ಸಚಿವ ಸಂಪುಟವು ನಾಲ್ವರು ಎನ್ ಡಿಎ ನಾಯಕರಾದ ಮೂವರು ಮಾಜಿ ಬಿಜೆಪಿ ಸಚಿವರು ಮತ್ತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿದ ಮನವಿಗಳ ಬಗ್ಗೆ ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಕುಮಾರಸ್ವಾಮಿ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಶಶಿಕಲಾ ಜೊಲ್ಲೆ ಮತ್ತು ಮುರುಗೇಶ್ ನಿರಾಣಿ ವಿರುದ್ಧ ಪ್ರಾಥಮಿಕ ತನಿಖೆಗೆ ಲೋಕಾಯುಕ್ತ ಪೊಲೀಸರು ಅನುಮತಿ ಕೋರಿದ್ದಾರೆ. ಈ ಪೈಕಿ ಕನಿಷ್ಠ ಎರಡು ಮನವಿಗಳು ರಾಜಭವನದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ.
  • ಮುಡಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ ಕೆಲವೇ ಗಂಟೆಗಳ ನಂತರ, ಜುಲೈ 26 ರಂದು ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿದ ರೀತಿಯೊಂದಿಗೆ ಈ ವಿಳಂಬವನ್ನು ಹೋಲಿಸಲು ಹಲವಾರು ಸಚಿವರು ಪ್ರಯತ್ನಿಸಿದ್ದಾರೆ. ಆಗಸ್ಟ್ 1 ರಂದು, ಕ್ಯಾಬಿನೆಟ್ ರಾಜ್ಯಪಾಲರಿಗೆ ನೋಟಿಸ್ ಹಿಂತೆಗೆದುಕೊಳ್ಳುವಂತೆ ಸಲಹೆ ನೀಡಿತು, ಇದು ಈ ವ್ಯತಿರಿಕ್ತತೆಯನ್ನು ಎತ್ತಿ ತೋರಿಸಿದೆ. ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಅವರು ಕರ್ನಾಟಕ ಹೈಕೋರ್ಟ್​​​​ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಕ್ರಮವು ಸ್ಪಷ್ಟ ಪಕ್ಷಪಾತ ಮತ್ತು ಬಾಹ್ಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದ್ದಾರೆ. ಈ ಆಯ್ದ ನಡವಳಿಕೆ ಮತ್ತು ರಾಜ್ಯಪಾಲರ ಕ್ರಮಗಳ ಹಿಂದಿನ ಸ್ಪಷ್ಟ ರಾಜಕೀಯ ಪ್ರೇರಣೆಗಳು ಕಾನೂನು ದುರುದ್ದೇಶವನ್ನು ಸೂಚಿಸುತ್ತವೆ. ಎನ್ ಡಿಎ ನಾಯಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಆಗಸ್ಟ್ 31 ರಂದು 'ರಾಜಭವನ ಚಲೋ' ಮೆರವಣಿಗೆ ನಡೆಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
  • ಜನವರಿಯಿಂದ ಸ್ಪಷ್ಟೀಕರಣ ಕೋರಿ ರಾಜ್ಯಪಾಲರು 11 ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಹಗ್ಗಜಗ್ಗಾಟ ಉಲ್ಬಣಗೊಂಡ ನಂತರ ಆಗಸ್ಟ್​ನಲ್ಲಿಯೇ 6 ಮಸೂದೆಗಳನ್ನು ವಾಪಸ್ ಕಳುಹಿಸಲಾಗಿದೆ. ಹದಿನೈದು ಕಾಂಗ್ರೆಸ್ ಶಾಸಕರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು, ಅದರಲ್ಲಿ ಅವರು ರಾಜ್ಯಪಾಲರ ನಿರ್ಧಾರಗಳನ್ನು "ರಾಜಕೀಯ ಪ್ರೇರಿತ" ಎಂದು ಕರೆಯಲಾಗಿತ್ತು ಮತ್ತು ಅವರು "ವಿರೋಧ ಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ" ಎಂದು ಅವರೆಲ್ಲ ಆರೋಪಿಸಿದ್ದರು. ಬಿಜೆಪಿಗೆ ಸರಿಹೊಂದುವ ಆಧಾರದ ಮೇಲೆ ರಾಜ್ಯಪಾಲರು ನಿರ್ಧಾರಗಳನ್ನು ತೆಗೆದುಕೊಳ್ಳುವುದಾದರೆ, ಪ್ರಜಾಪ್ರಭುತ್ವದಲ್ಲಿ ನಮಗೆ ಸರ್ಕಾರಗಳು ಏಕೆ ಬೇಕು ಎಂದು ಶಿವಕುಮಾರ್ ಪ್ರಶ್ನಿಸಿದರು.

ರಾಜ್ಯಪಾಲರು ವಾಪಸ್ ಕಳುಹಿಸಿದ 11 ಮಸೂದೆಗಳು ಹೀಗಿವೆ:

  • ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನಗಳನ್ನು ತಡೆಗಟ್ಟುವ ಕ್ರಮಗಳು) ಮಸೂದೆ, 2023
  • ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮಾದಾಯ ದತ್ತಿ ಮಸೂದೆ, 2024
  • ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನೆ (ತಿದ್ದುಪಡಿ) ಮಸೂದೆ, 2024
  • ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024
  • ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆ, 2024
  • ಗದಗ-ಬೆಟಗೇರಿ ವ್ಯಾಪಾರಿ ಮತ್ತು ವಾಸ್ತು ಪ್ರದರ್ಶನ ಪಧಿಕಾರ ಮಸೂದೆ, 2024
  • ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ, 2024
  • ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2024
  • ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ, 2024
  • ಶ್ರೀ ರೇಣುಕಾ ದೇವಸ್ಥಾನ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಮಸೂದೆ, 2024
  • ಕರ್ನಾಟಕ ಶಾಸಕಾಂಗ (ಅನರ್ಹತೆ ತಡೆಗಟ್ಟುವಿಕೆ) (ತಿದ್ದುಪಡಿ) ಮಸೂದೆ, 2024

ಇದನ್ನು ಓದಿ: ಪ್ರಾಸಿಕ್ಯೂಷನ್‌ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅರ್ಜಿ: ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ - CM SIDDARAMAIAH PLEA HEARING

  • ಆಸ್ತಿ ನೋಂದಣಿಗಳು ಮುಖರಹಿತವಾಗುತ್ತಿರುವ ವಿಧಾನದ ಸುರಕ್ಷತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಗೆಹ್ಲೋಟ್ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ. ಇದು ಹೆಚ್ಚಿನ ವಂಚನೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಶಾಸಕಾಂಗವು ಅಂಗೀಕರಿಸಿದ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ಹೊಂದಿರುವ ಈ ಮಸೂದೆಯು ಸುಧಾರಣೆಯನ್ನು ಪರಿಚಯಿಸುತ್ತದೆ, ಇದರೊಂದಿಗೆ ಆಸ್ತಿ ನೋಂದಣಿ ಸಮಯದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭೌತಿಕ ಹಾಜರಾತಿ ಅಗತ್ಯವಿಲ್ಲ. ಇದು ಸಾಫ್ಟ್​ವೇರ್​ ಸಹ ಸಂಯೋಜಿಸುತ್ತದೆ ಇದರಿಂದ ವಂಚನೆಗಳನ್ನು ತಡೆಗಟ್ಟಲು ಕಾಗದ ಅಥವಾ ಕೈಬರಹದ 'ಖಾತಾಗಳನ್ನು' ಸ್ವೀಕರಿಸಲಾಗುವುದಿಲ್ಲ. ಮಸೂದೆ ಹಿಂದಿರುಗಿಸಿದ ಗೆಹ್ಲೋಟ್, ಮುಖರಹಿತ ನೋಂದಣಿ ಪ್ರಕ್ರಿಯೆಯು "ಆಧಾರ್ ಅನ್ನು ಆಧರಿಸಿದ್ದರೂ" ಎಷ್ಟು ಸುರಕ್ಷಿತವಾಗಿರುತ್ತದೆ ಎಂಬುದನ್ನು ಕಂಡುಹಿಡಿಯುವುದು ಅವಶ್ಯಕ ಎಂದು ಹೇಳಿದರು.
  • ಗದಗ-ಬೆಟಗೇರಿ ವ್ಯಾಪಾರಿ ಮಟ್ಟು ವಾಸ್ತು ಪ್ರದರ್ಶನ ಪಧಿಕಾರ ಮಸೂದೆ-2024 ಅನ್ನು ಸೀಮಿತ ಪ್ರದೇಶಕ್ಕೆ ಹೊಸ ಘಟಕವನ್ನು ರಚಿಸುವ ಅಗತ್ಯತೆಯ ಬಗ್ಗೆ ವಿವರಣೆ ಕೋರಿ ಮನವಿಯೊಂದಿಗೆ ಹಿಂದಿರುಗಿಸಲಾಗಿದೆ. ಪ್ರಸ್ತಾವಿತ ಮಸೂದೆಯು ಭಾರತದ ಸಂವಿಧಾನದ 243 ನೇ ವಿಧಿಯ ಅಡಿ ನಗರ ಸ್ಥಳೀಯ ಸಂಸ್ಥೆಗೆ ಒದಗಿಸಲಾದ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಇದನ್ನು ಕಾನೂನುಬದ್ಧವಾಗಿ ಸ್ಪಷ್ಟಪಡಿಸಬೇಕಾಗಿದೆ ಎಂದು ರಾಜ್ಯಪಾಲರು ಹೇಳಿದರು. ನಗರಸಭೆ ಅಧ್ಯಕ್ಷರು 2024ರ ಮಾರ್ಚ್ 8ರಂದು ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಸ್ಥಳೀಯ ಸಂಸ್ಥೆಯೊಂದಿಗೆ ಸರ್ಕಾರ ಚರ್ಚಿಸಿಲ್ಲ ಎಂದು ತಿಳಿಸಿದ್ದರು.
  • ಕಟ್ಟಡದ ಬೈಲಾಗಳ ನಿಬಂಧನೆಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳು, ಅನಧಿಕೃತ ಲೇಔಟ್​ಗಳು, ಕಂದಾಯ ಭೂಮಿ ಮತ್ತು ಪುರಸಭೆ ಅಥವಾ ಕಾರ್ಪೊರೇಷನ್ ಪ್ರದೇಶಗಳಲ್ಲಿ ಸ್ವಾಧೀನ ಪ್ರಮಾಣಪತ್ರ ನೀಡುವ ಕಟ್ಟಡಗಳಿಂದ ಪ್ರತಿ ಕಟ್ಟಡ, ಖಾಲಿ ಭೂಮಿ ಅಥವಾ ಎರಡರಿಂದಲೂ ಆಸ್ತಿ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅನುವು ಮಾಡಿಕೊಡಲು ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆ, 2024 ಅನ್ನು ಅಂಗೀಕರಿಸಲಾಯಿತು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ಅನಧಿಕೃತ ಅಭಿವೃದ್ಧಿ ಅಥವಾ ನಿರ್ಮಾಣಗಳ ಕ್ರಮಬದ್ಧಗೊಳಿಸುವಿಕೆ) ನಿಯಮಗಳು, 2014 ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ ಮತ್ತು ಅದು ಇನ್ನೂ ತೀರ್ಪು ನೀಡಲು ಬಾಕಿ ಇದೆ ಎಂದು ತಿಳಿದು ಬಂದಿದೆ.
  • ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ, 2024, ಕಲ್ಯಾಣ ಮಂಡಳಿಯನ್ನು ರಚಿಸಲು ಮತ್ತು ರಾಜ್ಯದ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣವನ್ನು ಒದಗಿಸಲು ಹಣಕಾಸು ಯೋಜನೆಗಳಿಗೆ ನಿಧಿ ಸ್ಥಾಪಿಸಲು ಉದ್ದೇಶಿಸಿದೆ. ಈ ಮಸೂದೆಯ ಬಗ್ಗೆ ರಾಜ್ಯಪಾಲರು "ಜಿಎಸ್ಟಿ ಮೇಲೆ ಸೆಸ್ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ" ಎಂದು ಕೇಳಿದ್ದಾರೆ. ಇದಲ್ಲದೆ, ಇಂಡಿಯನ್ ಬ್ರಾಡ್ಕಾಸ್ಟಿಂಗ್ & ಡಿಜಿಟಲ್ ಫೌಂಡೇಶನ್ ಪ್ರಸ್ತಾವಿತ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಆದ್ದರಿಂದ, ರಾಜಭವನವು ಮಸೂದೆಯ ಬಗ್ಗೆ ಕೆಲವು ಸ್ಪಷ್ಟೀಕರಣಗಳನ್ನು ಕೋರಿದೆ.
  • ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2024 ಅನ್ನು ರಾಜ್ಯಪಾಲರು ಆಗಸ್ಟ್ 8, 2024 ರಂದು ಕರ್ನಾಟಕ ಹೈಕೋರ್ಟ್​ಗೆ ತೋರಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ರಾಜ್ಯಪಾಲರು "ಪ್ರಸ್ತಾವಿತ ತಿದ್ದುಪಡಿಯು ಭಾರತದ ಸಂವಿಧಾನಕ್ಕೆ ಅನುಗುಣವಾಗಿದೆ" ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೇ, ರಾಜ್ಯಪಾಲರು ಈ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ.
  • ಸವದತ್ತಿಯ (ಬೆಳಗಾವಿ) ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸ್ವತಂತ್ರ ಶಾಸನಬದ್ಧ ಸಂಸ್ಥೆಯನ್ನು ರಚಿಸಲು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ಶಾಸಕಾಂಗವು ಅಂಗೀಕರಿಸಿದೆ. ದೇವಾಲಯದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶದಿಂದ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾಯ್ದೆ, 2024 ಅನ್ನು ಫೆಬ್ರವರಿ 2024 ರಲ್ಲಿ ಜಾರಿಗೆ ತರಲಾಗಿದೆ ಎಂದು ಉಲ್ಲೇಖಿಸಿ ರಾಜ್ಯಪಾಲರು ಮಸೂದೆಯನ್ನು ಹಿಂದಿರುಗಿಸಿದರು.

ಇದನ್ನು ಓದಿ: ಬಿಬಿಎಂಪಿಗೆ ಕನ್ನಡಿಗರೇ ಮೇಯರ್ ಆಗಿರ್ಬೇಕು, ಗ್ರೇಟರ್ ಬೆಂಗಳೂರು ಬಿಲ್​ ಲೋಪ ಸರಿಪಡಿಸದಿದ್ದರೆ ಹೋರಾಟ: ಅಶೋಕ್ - R Ashok

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ನಡೆಯುತ್ತಿರುವುದು ಇದೇ ಮೊದಲಲ್ಲ. 2011ರಲ್ಲಿ ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭೂ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ್ದರು. 2011ರ ಅಕ್ಟೋಬರ್ ನಲ್ಲಿ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಮಧ್ಯೆ, ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಅವರ ಮೇಲೆ ಆರೋಪ ಹೊರಿಸಿದ ನಂತರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, 2015 ರಲ್ಲಿ, ಕರ್ನಾಟಕ ಹೈಕೋರ್ಟ್ ಭಾರದ್ವಾಜ್ ಅವರ ಕಾನೂನು ಕ್ರಮಕ್ಕೆ ಅನುಮತಿ ನೀಡುವ ನಿರ್ಧಾರವನ್ನು ರದ್ದುಗೊಳಿಸಿ, ಮಾಜಿ ಮುಖ್ಯಮಂತ್ರಿಗೆ ಪರಿಹಾರವನ್ನು ನೀಡಿತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧದ ಎಲ್ಲ ಎಫ್ಐಆರ್ ಗಳನ್ನು ರದ್ದುಗೊಳಿಸಲಾಗಿತ್ತು.

ಯಡಿಯೂರಪ್ಪ ಅವರಂತೆ ಮುಡಾ 14 ನಿವೇಶನಗಳನ್ನು ತಮ್ಮ ಪತ್ನಿಗೆ ಹಂಚಿಕೆ ಮಾಡಿದಾಗ ತಾವಾಗಲೀ ಅಥವಾ ತಮ್ಮ ಪಕ್ಷವಾಗಲೀ ಅಧಿಕಾರದಲ್ಲಿ ಇರಲಿಲ್ಲ ಮತ್ತು ಮಂಜೂರಾತಿ ಪ್ರಕ್ರಿಯೆಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಒತ್ತಿ ಹೇಳಲು ಪ್ರಯತ್ನಿಸಿದ್ದಾರೆ.

State Govt vs Governor: ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ರಾಜಭವನದ ನಡುವೆ ತಿಕ್ಕಾಟ ನಡೆಯುತ್ತಿದೆ. ಥಾವರ್ ಚಂದ್ ಗೆಹ್ಲೋಟ್ ಒಂದು ಕಾಲದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು.

ಮೈಸೂರು ನಗರಾಭಿವೃದ್ಧಿ ನಿಗಮ (ಮುಡಾ)ವು ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ಅಭಿವೃದ್ಧಿಪಡಿಸಿದ 3.16 ಎಕರೆ ಜಮೀನಿನ ಬದಲು 14 ಪರ್ಯಾಯ ನಿವೇಶನಗಳನ್ನು ಮಂಜೂರು ಮಾಡಿಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಿದ ನಂತರ ಈ ಎಲ್ಲ ವಿವಾದ ಆರಂಭವಾಗಿದೆ. ಅಂತಿಮವಾಗಿ ರಾಜ್ಯಪಾಲರು ಪ್ರಕರಣದ ವಿಚಾರಣೆ ನಡೆಸಲು ಅನುಮತಿ ನೀಡಿದ್ದಾರೆ.

ರಾಜ್ಯ ಸರ್ಕಾರ, ಕಾಂಗ್ರೆಸ್ ಮತ್ತು ಹಲವಾರು ಜಾತಿ ಸಂಘಟನೆಗಳು ಈ ಕ್ರಮಗಳನ್ನು ಪ್ರತಿಪಕ್ಷವು ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಗಳು ಎಂದು ಖಂಡಿಸಿವೆ ಮತ್ತು ರಾಜ್ಯಪಾಲರನ್ನು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಟೀಕಿಸಿವೆ. ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಅಡಿ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ರಾಜ್ಯ ಪೊಲೀಸರಿಗೆ ಮನವಿ ಮಾಡಿದೆ.

ಇದನ್ನು ಓದಿ:2026 ರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಲೋಕಾರ್ಪಣೆ: ಸಚಿವ ಸೋಮಣ್ಣ ಭರವಸೆ - Sub Urban Railway Project

ಮಸೂದೆಗಳ ವಿಷಯದಲ್ಲಿ ರಾಜ್ಯಪಾಲರಿಗಿರುವ ಅಧಿಕಾರಗಳೇನು?

  • ಅನುಚ್ಛೇದ 200 - ಮಸೂದೆಗಳಿಗೆ ಒಪ್ಪಿಗೆ: ಒಂದು ಮಸೂದೆಯನ್ನು ಒಂದು ರಾಜ್ಯದ ವಿಧಾನಸಭೆ ಅಂಗೀಕರಿಸಿದಾಗ ಅಥವಾ ಆ ರಾಜ್ಯವು ವಿಧಾನ ಪರಿಷತ್ತನ್ನು ಹೊಂದಿರುವ ರಾಜ್ಯದ ಸಂದರ್ಭದಲ್ಲಿ, ರಾಜ್ಯದ ಶಾಸಕಾಂಗದ ಎರಡೂ ಸದನಗಳು ಅಂಗೀಕರಿಸಿದಾಗ, ಅದನ್ನು ರಾಜ್ಯಪಾಲರು ಮಂಡಿಸತಕ್ಕದ್ದು ಮತ್ತು ರಾಜ್ಯಪಾಲರು ಮಸೂದೆಗೆ ತಾವು ಸಮ್ಮತಿಸುವುದಾಗಿ ಅಥವಾ ಒಪ್ಪಿಗೆಯನ್ನು ತಡೆಹಿಡಿಯುವುದಾಗಿ ಘೋಷಿಸತಕ್ಕದ್ದು. ಅಲ್ಲಿಂದ ಅವರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸುತ್ತಾರೆ: ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿದ ನಂತರ, ರಾಜ್ಯಪಾಲರು ಮಸೂದೆಯನ್ನು ಅದು ಹಣಕಾಸು ಮಸೂದೆಯಲ್ಲದಿದ್ದರೆ ಅದನ್ನು ಹಿಂದಿರುಗಿಸಬಹುದು ಮತ್ತು ಸದನ ಅಥವಾ ಸದನಗಳು ಮಸೂದೆಯನ್ನು ಅಥವಾ ಅದರ ಯಾವುದೇ ನಿರ್ದಿಷ್ಟ ನಿಬಂಧನೆಗಳನ್ನು ಮರುಪರಿಶೀಲಿಸಬೇಕು ಮತ್ತು ನಿರ್ದಿಷ್ಟವಾಗಿ, ಅವರು ತಮ್ಮ ಸಂದೇಶದಲ್ಲಿ ಶಿಫಾರಸು ಮಾಡಬಹುದಾದಂತಹ ಯಾವುದೇ ತಿದ್ದುಪಡಿಗಳನ್ನು ಪರಿಚಯಿಸುವ ಇಚ್ಛೆಯನ್ನು ಪರಿಗಣಿಸುತ್ತಾರೆ ಮತ್ತು ಒಂದು ಮಸೂದೆಯನ್ನು ಹೀಗೆ ಹಿಂದಿರುಗಿಸಿದಾಗ, ಸದನ ಅಥವಾ ಸದನಗಳು ಅದಕ್ಕೆ ಅನುಗುಣವಾಗಿ ಮಸೂದೆಯನ್ನು ಮರುಪರಿಶೀಲಿಸತಕ್ಕದ್ದು, ಮತ್ತು ಮಸೂದೆಯನ್ನು ಸದನ ಅಥವಾ ಸದನಗಳು ತಿದ್ದುಪಡಿಯೊಂದಿಗೆ ಅಥವಾ ತಿದ್ದುಪಡಿ ಇಲ್ಲದೆ ಮತ್ತೆ ಅಂಗೀಕರಿಸಿ ರಾಜ್ಯಪಾಲರ ಒಪ್ಪಿಗೆಗಾಗಿ ಸಲ್ಲಿಸಿದರೆ, ರಾಜ್ಯಪಾಲರು ಅಲ್ಲಿ ಒಪ್ಪಿಗೆಯನ್ನು ತಡೆಹಿಡಿಯುವಂತಿಲ್ಲ.
  • ರಾಜ್ಯಪಾಲರ ಅಭಿಪ್ರಾಯದಲ್ಲಿ ಯಾವುದೇ ಮಸೂದೆಯು ಕಾನೂನಾಗಿ ಮಾರ್ಪಟ್ಟರೆ, ಅದು ಉಚ್ಚ ನ್ಯಾಯಾಲಯದ ಅಧಿಕಾರದಿಂದ ದೂರವಾಗುತ್ತದೆ.

ಮಸೂದೆಗಳಿಗೆ ರಾಜ್ಯಪಾಲರ ಅಂಕಿತ:

ರಾಜ್ಯಪಾರ ಎದುರು ನಾಲ್ಕು ಆಯ್ಕೆಗಳು ತೆರೆದಿರುತ್ತವೆ. ಅವರಿಗೆ ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಮಂಡಿಸಲಾಗುತ್ತದೆ. ರಾಜ್ಯಪಾಲರ ಆಯ್ಕೆಗಳು ಹೀಗಿವೆ:

(i) ಒಪ್ಪಿಗೆಗಳು, ಅಥವಾ (ii) ಒಪ್ಪಿಗೆಯನ್ನು ತಡೆಹಿಡಿಯುವುದು, ಅಥವಾ (iii) ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವುದು, ಅಥವಾ (iv) ಮಸೂದೆಯನ್ನು (ಹಣಕಾಸು ಮಸೂದೆಯಲ್ಲದಿದ್ದರೆ) ತನ್ನ ಸಂದೇಶದೊಂದಿಗೆ ಮರುಪರಿಶೀಲನೆಗಾಗಿ ಹಿಂದಿರುಗಿಸುವುದು. ಮಸೂದೆಯ ಮಂಡನೆಯ ನಂತರ ಸಾಧ್ಯವಾದಷ್ಟು ಬೇಗ ಇದನ್ನು ಮಾಡಬೇಕು (ಮೊದಲನೆಯ ಉಪಬಂಧ) ಈ ನಿಟ್ಟಿನಲ್ಲಿ ರಾಜ್ಯಪಾಲರ ಕ್ರಮವನ್ನು ಸಮರ್ಥನೀಯವಲ್ಲ ಎಂದು ಪರಿಗಣಿಸಲಾಗಿದೆ. ಕೆಳಗೆ ಉಲ್ಲೇಖಿಸಲಾದ ಪ್ರಕರಣಗಳನ್ನು ನೋಡಿ.

(i) ಪುರುಷೋತ್ತಮ ವಿ. ಕೇರಳ ರಾಜ್ಯ, ಎಐಆರ್ 1962 ಎಸ್ಸಿ 694. (ii) ಹೋಚ್ಸ್ಟ್ ವಿ. ಬಿಹಾರ ರಾಜ್ಯ, ಎಐಆರ್ 1983 ಎಸ್ಸಿ 1019. (iii) ಭರೋಟ್ ಸೇವಾ ಆಶ್ರಮ v. ಗುಜರಾತ್​ ರಾಜ್ಯ, ಎಐಆರ್ 1987 ಎಸ್ಸಿ 494.

  • ಅನುಚ್ಛೇದ 201. ಮಸೂದೆಗಳನ್ನು ಪರಿಗಣನೆಗೆ ಕಾಯ್ದಿರಿಸುವುದು. ಒಂದು ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದಾಗ, ರಾಷ್ಟ್ರಪತಿಗಳು ತಾವು ಮಸೂದೆಗೆ ಒಪ್ಪಿಗೆ ನೀಡುತ್ತೇವೆ ಅಥವಾ ಅದಕ್ಕೆ ಒಪ್ಪಿಗೆಯನ್ನು ತಡೆಹಿಡಿಯುತ್ತೇವೆ ಎಂದು ಘೋಷಿಸಬಹುದು: ಮಸೂದೆಯು ಹಣಕಾಸಿನ ಮಸೂದೆಯಲ್ಲದಿದ್ದರೆ, ರಾಷ್ಟ್ರಪತಿಗಳು ಮಸೂದೆಯನ್ನು ಸದನಕ್ಕೆ ಹಿಂದಿರುಗಿಸಲು ರಾಜ್ಯಪಾಲರಿಗೆ ನಿರ್ದೇಶನ ನೀಡಬಹುದು ಅಥವಾ, ಅನುಚ್ಛೇದ 200 ರ ಮೊದಲ ಉಪಬಂಧದಲ್ಲಿ ಉಲ್ಲೇಖಿಸಿರುವ ಸಂದೇಶದೊಂದಿಗೆ ರಾಜ್ಯದ ಶಾಸಕಾಂಗದ ಸದನಗಳು ಮತ್ತು ಮಸೂದೆಯನ್ನು ಹಿಂದಿರುಗಿಸಿದಾಗ, ಸದನ ಅಥವಾ ಸದನಗಳು ಅಂತಹ ಸಂದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಆರು ತಿಂಗಳ ಅವಧಿಯೊಳಗೆ ಅದನ್ನು ಮರುಪರಿಶೀಲಿಸಬೇಕು ಮತ್ತು, ತಿದ್ದುಪಡಿಯೊಂದಿಗೆ ಅಥವಾ ಇಲ್ಲದೇ ಸದನ ಅಥವಾ ಸದನಗಳು ಅದನ್ನು ಮತ್ತೆ ಅಂಗೀಕರಿಸಿದರೆ, ಅದನ್ನು ರಾಷ್ಟ್ರಪತಿಗಳ ಪರಿಗಣನೆಗಾಗಿ ಮತ್ತೆ ಮಂಡಿಸಲಾಗುತ್ತದೆ.

ಇದನ್ನು ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್ ಶೀಟ್ ನಲ್ಲಿ ದರ್ಶನ್ ಸ್ವಇಚ್ಚಾ ಹೇಳಿಕೆ ರಿವೀಲ್: ಏನದು ಸತ್ಯ? - Darshan Statements

ಕರ್ನಾಟಕ ಸರ್ಕಾರ ಹೇಳಿದ್ದೇನು?

  • ರಾಜ್ಯ ಸರ್ಕಾರವು ರಾಜ್ಯಪಾಲರನ್ನು ಪಕ್ಷಪಾತಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಆಗಸ್ಟ್ 22 ರಂದು, ರಾಜ್ಯ ಸಚಿವ ಸಂಪುಟವು ನಾಲ್ವರು ಎನ್ ಡಿಎ ನಾಯಕರಾದ ಮೂವರು ಮಾಜಿ ಬಿಜೆಪಿ ಸಚಿವರು ಮತ್ತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿದ ಮನವಿಗಳ ಬಗ್ಗೆ ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಕುಮಾರಸ್ವಾಮಿ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಶಶಿಕಲಾ ಜೊಲ್ಲೆ ಮತ್ತು ಮುರುಗೇಶ್ ನಿರಾಣಿ ವಿರುದ್ಧ ಪ್ರಾಥಮಿಕ ತನಿಖೆಗೆ ಲೋಕಾಯುಕ್ತ ಪೊಲೀಸರು ಅನುಮತಿ ಕೋರಿದ್ದಾರೆ. ಈ ಪೈಕಿ ಕನಿಷ್ಠ ಎರಡು ಮನವಿಗಳು ರಾಜಭವನದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ.
  • ಮುಡಾದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ ಕೆಲವೇ ಗಂಟೆಗಳ ನಂತರ, ಜುಲೈ 26 ರಂದು ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿದ ರೀತಿಯೊಂದಿಗೆ ಈ ವಿಳಂಬವನ್ನು ಹೋಲಿಸಲು ಹಲವಾರು ಸಚಿವರು ಪ್ರಯತ್ನಿಸಿದ್ದಾರೆ. ಆಗಸ್ಟ್ 1 ರಂದು, ಕ್ಯಾಬಿನೆಟ್ ರಾಜ್ಯಪಾಲರಿಗೆ ನೋಟಿಸ್ ಹಿಂತೆಗೆದುಕೊಳ್ಳುವಂತೆ ಸಲಹೆ ನೀಡಿತು, ಇದು ಈ ವ್ಯತಿರಿಕ್ತತೆಯನ್ನು ಎತ್ತಿ ತೋರಿಸಿದೆ. ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಅವರು ಕರ್ನಾಟಕ ಹೈಕೋರ್ಟ್​​​​ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಕ್ರಮವು ಸ್ಪಷ್ಟ ಪಕ್ಷಪಾತ ಮತ್ತು ಬಾಹ್ಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದ್ದಾರೆ. ಈ ಆಯ್ದ ನಡವಳಿಕೆ ಮತ್ತು ರಾಜ್ಯಪಾಲರ ಕ್ರಮಗಳ ಹಿಂದಿನ ಸ್ಪಷ್ಟ ರಾಜಕೀಯ ಪ್ರೇರಣೆಗಳು ಕಾನೂನು ದುರುದ್ದೇಶವನ್ನು ಸೂಚಿಸುತ್ತವೆ. ಎನ್ ಡಿಎ ನಾಯಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಆಗಸ್ಟ್ 31 ರಂದು 'ರಾಜಭವನ ಚಲೋ' ಮೆರವಣಿಗೆ ನಡೆಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
  • ಜನವರಿಯಿಂದ ಸ್ಪಷ್ಟೀಕರಣ ಕೋರಿ ರಾಜ್ಯಪಾಲರು 11 ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಹಗ್ಗಜಗ್ಗಾಟ ಉಲ್ಬಣಗೊಂಡ ನಂತರ ಆಗಸ್ಟ್​ನಲ್ಲಿಯೇ 6 ಮಸೂದೆಗಳನ್ನು ವಾಪಸ್ ಕಳುಹಿಸಲಾಗಿದೆ. ಹದಿನೈದು ಕಾಂಗ್ರೆಸ್ ಶಾಸಕರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು, ಅದರಲ್ಲಿ ಅವರು ರಾಜ್ಯಪಾಲರ ನಿರ್ಧಾರಗಳನ್ನು "ರಾಜಕೀಯ ಪ್ರೇರಿತ" ಎಂದು ಕರೆಯಲಾಗಿತ್ತು ಮತ್ತು ಅವರು "ವಿರೋಧ ಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ" ಎಂದು ಅವರೆಲ್ಲ ಆರೋಪಿಸಿದ್ದರು. ಬಿಜೆಪಿಗೆ ಸರಿಹೊಂದುವ ಆಧಾರದ ಮೇಲೆ ರಾಜ್ಯಪಾಲರು ನಿರ್ಧಾರಗಳನ್ನು ತೆಗೆದುಕೊಳ್ಳುವುದಾದರೆ, ಪ್ರಜಾಪ್ರಭುತ್ವದಲ್ಲಿ ನಮಗೆ ಸರ್ಕಾರಗಳು ಏಕೆ ಬೇಕು ಎಂದು ಶಿವಕುಮಾರ್ ಪ್ರಶ್ನಿಸಿದರು.

ರಾಜ್ಯಪಾಲರು ವಾಪಸ್ ಕಳುಹಿಸಿದ 11 ಮಸೂದೆಗಳು ಹೀಗಿವೆ:

  • ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನಗಳನ್ನು ತಡೆಗಟ್ಟುವ ಕ್ರಮಗಳು) ಮಸೂದೆ, 2023
  • ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮಾದಾಯ ದತ್ತಿ ಮಸೂದೆ, 2024
  • ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನೆ (ತಿದ್ದುಪಡಿ) ಮಸೂದೆ, 2024
  • ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024
  • ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆ, 2024
  • ಗದಗ-ಬೆಟಗೇರಿ ವ್ಯಾಪಾರಿ ಮತ್ತು ವಾಸ್ತು ಪ್ರದರ್ಶನ ಪಧಿಕಾರ ಮಸೂದೆ, 2024
  • ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ, 2024
  • ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2024
  • ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ, 2024
  • ಶ್ರೀ ರೇಣುಕಾ ದೇವಸ್ಥಾನ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಮಸೂದೆ, 2024
  • ಕರ್ನಾಟಕ ಶಾಸಕಾಂಗ (ಅನರ್ಹತೆ ತಡೆಗಟ್ಟುವಿಕೆ) (ತಿದ್ದುಪಡಿ) ಮಸೂದೆ, 2024

ಇದನ್ನು ಓದಿ: ಪ್ರಾಸಿಕ್ಯೂಷನ್‌ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅರ್ಜಿ: ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ - CM SIDDARAMAIAH PLEA HEARING

  • ಆಸ್ತಿ ನೋಂದಣಿಗಳು ಮುಖರಹಿತವಾಗುತ್ತಿರುವ ವಿಧಾನದ ಸುರಕ್ಷತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಗೆಹ್ಲೋಟ್ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ. ಇದು ಹೆಚ್ಚಿನ ವಂಚನೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಶಾಸಕಾಂಗವು ಅಂಗೀಕರಿಸಿದ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ಹೊಂದಿರುವ ಈ ಮಸೂದೆಯು ಸುಧಾರಣೆಯನ್ನು ಪರಿಚಯಿಸುತ್ತದೆ, ಇದರೊಂದಿಗೆ ಆಸ್ತಿ ನೋಂದಣಿ ಸಮಯದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭೌತಿಕ ಹಾಜರಾತಿ ಅಗತ್ಯವಿಲ್ಲ. ಇದು ಸಾಫ್ಟ್​ವೇರ್​ ಸಹ ಸಂಯೋಜಿಸುತ್ತದೆ ಇದರಿಂದ ವಂಚನೆಗಳನ್ನು ತಡೆಗಟ್ಟಲು ಕಾಗದ ಅಥವಾ ಕೈಬರಹದ 'ಖಾತಾಗಳನ್ನು' ಸ್ವೀಕರಿಸಲಾಗುವುದಿಲ್ಲ. ಮಸೂದೆ ಹಿಂದಿರುಗಿಸಿದ ಗೆಹ್ಲೋಟ್, ಮುಖರಹಿತ ನೋಂದಣಿ ಪ್ರಕ್ರಿಯೆಯು "ಆಧಾರ್ ಅನ್ನು ಆಧರಿಸಿದ್ದರೂ" ಎಷ್ಟು ಸುರಕ್ಷಿತವಾಗಿರುತ್ತದೆ ಎಂಬುದನ್ನು ಕಂಡುಹಿಡಿಯುವುದು ಅವಶ್ಯಕ ಎಂದು ಹೇಳಿದರು.
  • ಗದಗ-ಬೆಟಗೇರಿ ವ್ಯಾಪಾರಿ ಮಟ್ಟು ವಾಸ್ತು ಪ್ರದರ್ಶನ ಪಧಿಕಾರ ಮಸೂದೆ-2024 ಅನ್ನು ಸೀಮಿತ ಪ್ರದೇಶಕ್ಕೆ ಹೊಸ ಘಟಕವನ್ನು ರಚಿಸುವ ಅಗತ್ಯತೆಯ ಬಗ್ಗೆ ವಿವರಣೆ ಕೋರಿ ಮನವಿಯೊಂದಿಗೆ ಹಿಂದಿರುಗಿಸಲಾಗಿದೆ. ಪ್ರಸ್ತಾವಿತ ಮಸೂದೆಯು ಭಾರತದ ಸಂವಿಧಾನದ 243 ನೇ ವಿಧಿಯ ಅಡಿ ನಗರ ಸ್ಥಳೀಯ ಸಂಸ್ಥೆಗೆ ಒದಗಿಸಲಾದ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಇದನ್ನು ಕಾನೂನುಬದ್ಧವಾಗಿ ಸ್ಪಷ್ಟಪಡಿಸಬೇಕಾಗಿದೆ ಎಂದು ರಾಜ್ಯಪಾಲರು ಹೇಳಿದರು. ನಗರಸಭೆ ಅಧ್ಯಕ್ಷರು 2024ರ ಮಾರ್ಚ್ 8ರಂದು ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಸ್ಥಳೀಯ ಸಂಸ್ಥೆಯೊಂದಿಗೆ ಸರ್ಕಾರ ಚರ್ಚಿಸಿಲ್ಲ ಎಂದು ತಿಳಿಸಿದ್ದರು.
  • ಕಟ್ಟಡದ ಬೈಲಾಗಳ ನಿಬಂಧನೆಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳು, ಅನಧಿಕೃತ ಲೇಔಟ್​ಗಳು, ಕಂದಾಯ ಭೂಮಿ ಮತ್ತು ಪುರಸಭೆ ಅಥವಾ ಕಾರ್ಪೊರೇಷನ್ ಪ್ರದೇಶಗಳಲ್ಲಿ ಸ್ವಾಧೀನ ಪ್ರಮಾಣಪತ್ರ ನೀಡುವ ಕಟ್ಟಡಗಳಿಂದ ಪ್ರತಿ ಕಟ್ಟಡ, ಖಾಲಿ ಭೂಮಿ ಅಥವಾ ಎರಡರಿಂದಲೂ ಆಸ್ತಿ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅನುವು ಮಾಡಿಕೊಡಲು ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆ, 2024 ಅನ್ನು ಅಂಗೀಕರಿಸಲಾಯಿತು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ಅನಧಿಕೃತ ಅಭಿವೃದ್ಧಿ ಅಥವಾ ನಿರ್ಮಾಣಗಳ ಕ್ರಮಬದ್ಧಗೊಳಿಸುವಿಕೆ) ನಿಯಮಗಳು, 2014 ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ ಮತ್ತು ಅದು ಇನ್ನೂ ತೀರ್ಪು ನೀಡಲು ಬಾಕಿ ಇದೆ ಎಂದು ತಿಳಿದು ಬಂದಿದೆ.
  • ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಮಸೂದೆ, 2024, ಕಲ್ಯಾಣ ಮಂಡಳಿಯನ್ನು ರಚಿಸಲು ಮತ್ತು ರಾಜ್ಯದ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣವನ್ನು ಒದಗಿಸಲು ಹಣಕಾಸು ಯೋಜನೆಗಳಿಗೆ ನಿಧಿ ಸ್ಥಾಪಿಸಲು ಉದ್ದೇಶಿಸಿದೆ. ಈ ಮಸೂದೆಯ ಬಗ್ಗೆ ರಾಜ್ಯಪಾಲರು "ಜಿಎಸ್ಟಿ ಮೇಲೆ ಸೆಸ್ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ" ಎಂದು ಕೇಳಿದ್ದಾರೆ. ಇದಲ್ಲದೆ, ಇಂಡಿಯನ್ ಬ್ರಾಡ್ಕಾಸ್ಟಿಂಗ್ & ಡಿಜಿಟಲ್ ಫೌಂಡೇಶನ್ ಪ್ರಸ್ತಾವಿತ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಆದ್ದರಿಂದ, ರಾಜಭವನವು ಮಸೂದೆಯ ಬಗ್ಗೆ ಕೆಲವು ಸ್ಪಷ್ಟೀಕರಣಗಳನ್ನು ಕೋರಿದೆ.
  • ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2024 ಅನ್ನು ರಾಜ್ಯಪಾಲರು ಆಗಸ್ಟ್ 8, 2024 ರಂದು ಕರ್ನಾಟಕ ಹೈಕೋರ್ಟ್​ಗೆ ತೋರಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ರಾಜ್ಯಪಾಲರು "ಪ್ರಸ್ತಾವಿತ ತಿದ್ದುಪಡಿಯು ಭಾರತದ ಸಂವಿಧಾನಕ್ಕೆ ಅನುಗುಣವಾಗಿದೆ" ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೇ, ರಾಜ್ಯಪಾಲರು ಈ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ.
  • ಸವದತ್ತಿಯ (ಬೆಳಗಾವಿ) ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸ್ವತಂತ್ರ ಶಾಸನಬದ್ಧ ಸಂಸ್ಥೆಯನ್ನು ರಚಿಸಲು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ಶಾಸಕಾಂಗವು ಅಂಗೀಕರಿಸಿದೆ. ದೇವಾಲಯದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶದಿಂದ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕಾಯ್ದೆ, 2024 ಅನ್ನು ಫೆಬ್ರವರಿ 2024 ರಲ್ಲಿ ಜಾರಿಗೆ ತರಲಾಗಿದೆ ಎಂದು ಉಲ್ಲೇಖಿಸಿ ರಾಜ್ಯಪಾಲರು ಮಸೂದೆಯನ್ನು ಹಿಂದಿರುಗಿಸಿದರು.

ಇದನ್ನು ಓದಿ: ಬಿಬಿಎಂಪಿಗೆ ಕನ್ನಡಿಗರೇ ಮೇಯರ್ ಆಗಿರ್ಬೇಕು, ಗ್ರೇಟರ್ ಬೆಂಗಳೂರು ಬಿಲ್​ ಲೋಪ ಸರಿಪಡಿಸದಿದ್ದರೆ ಹೋರಾಟ: ಅಶೋಕ್ - R Ashok

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ನಡೆಯುತ್ತಿರುವುದು ಇದೇ ಮೊದಲಲ್ಲ. 2011ರಲ್ಲಿ ಆಗಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭೂ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ್ದರು. 2011ರ ಅಕ್ಟೋಬರ್ ನಲ್ಲಿ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಮಧ್ಯೆ, ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಅವರ ಮೇಲೆ ಆರೋಪ ಹೊರಿಸಿದ ನಂತರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದಾಗ್ಯೂ, 2015 ರಲ್ಲಿ, ಕರ್ನಾಟಕ ಹೈಕೋರ್ಟ್ ಭಾರದ್ವಾಜ್ ಅವರ ಕಾನೂನು ಕ್ರಮಕ್ಕೆ ಅನುಮತಿ ನೀಡುವ ನಿರ್ಧಾರವನ್ನು ರದ್ದುಗೊಳಿಸಿ, ಮಾಜಿ ಮುಖ್ಯಮಂತ್ರಿಗೆ ಪರಿಹಾರವನ್ನು ನೀಡಿತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧದ ಎಲ್ಲ ಎಫ್ಐಆರ್ ಗಳನ್ನು ರದ್ದುಗೊಳಿಸಲಾಗಿತ್ತು.

ಯಡಿಯೂರಪ್ಪ ಅವರಂತೆ ಮುಡಾ 14 ನಿವೇಶನಗಳನ್ನು ತಮ್ಮ ಪತ್ನಿಗೆ ಹಂಚಿಕೆ ಮಾಡಿದಾಗ ತಾವಾಗಲೀ ಅಥವಾ ತಮ್ಮ ಪಕ್ಷವಾಗಲೀ ಅಧಿಕಾರದಲ್ಲಿ ಇರಲಿಲ್ಲ ಮತ್ತು ಮಂಜೂರಾತಿ ಪ್ರಕ್ರಿಯೆಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಒತ್ತಿ ಹೇಳಲು ಪ್ರಯತ್ನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.