ETV Bharat / health

ಬೆಳಗ್ಗೆ ಎದ್ದ ತಕ್ಷಣ ಈ ಜ್ಯೂಸ್​ ಕುಡಿದರೆ ಇಡೀ ದಿನ ಉತ್ಸಾಹ; ಮಧುಮೇಹ ಸಮಸ್ಯೆಗೆ ಮನೆಯಲ್ಲೇ ಇದೆ ರಾಮಬಾಣ! - DIABETES HOMEO MEDICINE

author img

By ETV Bharat Karnataka Team

Published : Jul 31, 2024, 4:45 PM IST

ಕೆಲವು ಜ್ಯೂಸ್​ಗಳು ಮಧುಮೇಹಕ್ಕೆ ರಾಮಬಾಣವಾಗಿದ್ದು, ಅವು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯಕಾರಿಯಾಗಿದೆ.

these juices are working as superfoods for the prevention of diabetes
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

ಹೈದರಾಬಾದ್​: ಮಧುಮೇಹ ಎಂಬುದು ಸೈಲೆಂಟ್​ ಕಿಲ್ಲರ್​ನಂತೆ. ಇದರ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ, ಡಯಟ್​​ ಅತ್ಯಗತ್ಯ. ಹೆಚ್ಚು ವ್ಯಾಯಾಮದ ಅಭ್ಯಾಸದ ಹೊರತಾಗಿಯೂ ಸರಳ ಆಹಾರ ಪದ್ಧತಿ ಬದಲಾವಣೆ ಮಾಡುವ ಮೂಲಕ ಈ ಮಧುಮೇಹ ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು. ದೈನಂದಿನ ಡಯಟ್​ನಲ್ಲಿನ ಸಣ್ಣ ಬದಲಾವಣೆ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ನಿಯಂತ್ರಣದಲ್ಲಿಡಲು ಸಮತೋಲಿತ ಆಹಾರ ಮತ್ತು ನಿಯಮಿತ ಚಟುವಟಿಕೆ ಅವಶ್ಯವಾಗಿದೆ. ಅದರಲ್ಲೂ ನಿಮ್ಮ ದೈನಂದಿನ ಆಹಾರದಲ್ಲಿ ಬೆಳಗಿನ ಸಮಯದಲ್ಲಿ ಈ ಆಹಾರ ಅಭ್ಯಾಸ ನಡೆಸುವುದು ಹೆಚ್ಚು ನಿರ್ಣಾಯಕವಾಗಿದೆ.

ಮಧುಮೇಹಿಗಳು ಬೆಳಗ್ಗಿನ ಹೊತ್ತು ಅರ್ಧ ಗಂಟೆಯ ವಾಕಿಂಗ್​ ಜೊತೆಗೆ ಸರಳ ಕಾರ್ಬೋಹೈಡ್ರೇಟ್​ ಆಹಾರ ಸೇವಿಸುವುದು ಅತ್ಯುತ್ತಮ. ಅದರಲ್ಲೂ ಕೆಲವು ಜ್ಯೂಸ್​ಗಳು ಮಧುಮೇಹಕ್ಕೆ ರಾಮಬಾಣವಾಗಿದ್ದು, ಅವು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದಿದ್ದಾರೆ.

ಹಾಗಲಕಾಯಿ: ಹಾಗಲಕಾಯಿ ಜ್ಯೂಸ್​ ಕೂಡ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೆಳಗಿನ ಹೊತ್ತು ಇವುಗಳ ಸೇವನೆಯಿಂದ ಇನ್ಸುಲಿನ್​ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವನ್ನು ತಡೆಯುತ್ತದೆ. ಇದರಲ್ಲಿನ ಪೊಲಿಪೆಟೈಡ್ ​- ಪಿಯು ಇನ್ಸುಲಿನ್​ ಸುಧಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಸಿನ್ ಮತ್ತು ಲೆಕ್ಟಿನ್ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆ ಉತ್ತೇಜಿಸುತ್ತದೆ. ಗ್ಲೂಕೋಸ್ ನಿಧಾನಗತಿಯ ಬಳಕೆಗೆ ಕಾರಣವಾಗುತ್ತದೆ.

ಮೆಂತ್ಯೆ: ಮೆಂತ್ಯೆ ಮಧುಮೇಹ ನಿಯಂತ್ರಣಕ್ಕೆ ಅತ್ಯುತ್ತಮವಾಗಿದೆ. ರಾತ್ರಿ ನೆನಸಿದ ಮೆಂತ್ಯೆಯನ್ನು ಬೆಳಗ್ಗೆ ಸೇವಿಸುವುದರಿಂದ ಗ್ಲೆಸೆಮಿಕ್​ ನಿಯಂತ್ರಣವಾಗುತ್ತದೆ. ಮೆಂತ್ಯೆ ಹಸಿವನ್ನು ಕಡಿಮೆ ಮಾಡಿ, ತೂಕ ನಿರ್ವಹಣೆ ಮಾಡುತ್ತದೆ. ಮೆಂತ್ಯ ಒಟ್ಟಾರೆ ಕೊಲೆಸ್ಟ್ರಾಲ್​ ನಿಯಂತ್ರಿಸುತ್ತದೆ. ಇದು ಔಷಧೀಯ ರೀತಿಯ ಕಾರ್ಯಾಚರಣೆ ನಡೆಸುವ ಮೂಲಕ ಮಧುಮೇಹಿಗಳಲ್ಲಿ ಹೃದಯ ಸಮಸ್ಯೆ ತಡೆಯುತ್ತದೆ.

ನೆಲ್ಲಿಕಾಯಿ: ವಿಟಮಿನ್​ ಸಿ ಯಥೇಚ್ಛವಾಗಿರುವ ಇದರಲ್ಲಿ ಆಂಟಿ ಆಕ್ಸಿಡೆಂಟ್​ ಮತ್ತು ಉರಿಯೂತ ವಿರೋಧಿ ಗುಣವಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ. ಬೆಳಗಿನ ಹೊತ್ತು ನೆಲ್ಲಿಕಾಯಿ ಜ್ಯೂಸ್​ ಸೇವನೆಯಿಂದ ಮಧುಮೇಹ ತಡೆಗಟ್ಟುವ ಪರಿಣಾಮಕಾರಿ ತಂತ್ರವಾಗಿದೆ.

ಅರಿಶಿಣ: ಇದು ಕೂಡ ಉರಿಯೂತ ಮತ್ತು ಉತ್ಕರ್ಷಣ ವಿರೋದ ಪರಿಣಾಮ ಹೊಂದಿದೆ. ಇದು ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಿ, ಇನ್ಸುಲಿನ್​ ಸಂವೇದನಾ ಸುಧಾರಣೆ ಮಾಡುತ್ತದೆ. ನಿತ್ಯ ಹಾಲಿಗೆ ಒಂದು ಚಿಟಿಕೆ ಅರಿಶಿಣ ಬೇರಸಿ ಸೇವಿಸುವುದರಿಂದ ದಿನವೀಡಿ ಉತ್ಸಾಹದಿಂದಲೂ ಇರಬಹುದು.

ಚಕ್ಕೆ: ಇದು ಕೂಡ ಇನ್ಸುಲಿನ್​ ಸಂವೇದನವನ್ನು ಸುಧಾರಿಸುತ್ತದೆ. ಗ್ಲುಕೋಸ್​ ಚಯಾಪಚಯದ ಮೇಲೆ ಪ್ರಭಾವ ಬೀರುವ ಮೂಲಕ ಮಧುಮೇಹ ನಿಯಂತ್ರಣ ಮಾಡುತ್ತದೆ. ಇದರಲ್ಲಿ ಸಮೃದ್ಧ ಉತ್ಕರ್ಷಣಾ ವಿರೋಧಿ ಅಂಶ ಇದ್ದು, ಒತ್ತಡದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಈ ಹಿನ್ನೆಲೆಯಲ್ಲಿ ಟೀಗೆ ಒಂದು ಚಿಟಿಕೆ ಚಕ್ಕೆ ಸೇರಿಸುವುದು ಉತ್ತಮವಾಗಿದೆ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತರ ಬಳಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಎಣ್ಣೆ ಬೇಕಿಲ್ಲ, ಒಲೆಯ ಅಗತ್ಯವೂ ಇಲ್ಲ: ಈ ಹಸಿಮೆಣಸಿನಕಾಯಿ ಚಟ್ನಿ ತಿಂದರೆ ಆಹಾ ಎನ್ನದೇ ಇರಲ್ಲ!

ಹೈದರಾಬಾದ್​: ಮಧುಮೇಹ ಎಂಬುದು ಸೈಲೆಂಟ್​ ಕಿಲ್ಲರ್​ನಂತೆ. ಇದರ ನಿಯಂತ್ರಣಕ್ಕೆ ನಿಯಮಿತ ವ್ಯಾಯಾಮ, ಡಯಟ್​​ ಅತ್ಯಗತ್ಯ. ಹೆಚ್ಚು ವ್ಯಾಯಾಮದ ಅಭ್ಯಾಸದ ಹೊರತಾಗಿಯೂ ಸರಳ ಆಹಾರ ಪದ್ಧತಿ ಬದಲಾವಣೆ ಮಾಡುವ ಮೂಲಕ ಈ ಮಧುಮೇಹ ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು. ದೈನಂದಿನ ಡಯಟ್​ನಲ್ಲಿನ ಸಣ್ಣ ಬದಲಾವಣೆ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ನಿಯಂತ್ರಣದಲ್ಲಿಡಲು ಸಮತೋಲಿತ ಆಹಾರ ಮತ್ತು ನಿಯಮಿತ ಚಟುವಟಿಕೆ ಅವಶ್ಯವಾಗಿದೆ. ಅದರಲ್ಲೂ ನಿಮ್ಮ ದೈನಂದಿನ ಆಹಾರದಲ್ಲಿ ಬೆಳಗಿನ ಸಮಯದಲ್ಲಿ ಈ ಆಹಾರ ಅಭ್ಯಾಸ ನಡೆಸುವುದು ಹೆಚ್ಚು ನಿರ್ಣಾಯಕವಾಗಿದೆ.

ಮಧುಮೇಹಿಗಳು ಬೆಳಗ್ಗಿನ ಹೊತ್ತು ಅರ್ಧ ಗಂಟೆಯ ವಾಕಿಂಗ್​ ಜೊತೆಗೆ ಸರಳ ಕಾರ್ಬೋಹೈಡ್ರೇಟ್​ ಆಹಾರ ಸೇವಿಸುವುದು ಅತ್ಯುತ್ತಮ. ಅದರಲ್ಲೂ ಕೆಲವು ಜ್ಯೂಸ್​ಗಳು ಮಧುಮೇಹಕ್ಕೆ ರಾಮಬಾಣವಾಗಿದ್ದು, ಅವು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದಿದ್ದಾರೆ.

ಹಾಗಲಕಾಯಿ: ಹಾಗಲಕಾಯಿ ಜ್ಯೂಸ್​ ಕೂಡ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೆಳಗಿನ ಹೊತ್ತು ಇವುಗಳ ಸೇವನೆಯಿಂದ ಇನ್ಸುಲಿನ್​ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವನ್ನು ತಡೆಯುತ್ತದೆ. ಇದರಲ್ಲಿನ ಪೊಲಿಪೆಟೈಡ್ ​- ಪಿಯು ಇನ್ಸುಲಿನ್​ ಸುಧಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಸಿನ್ ಮತ್ತು ಲೆಕ್ಟಿನ್ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆ ಉತ್ತೇಜಿಸುತ್ತದೆ. ಗ್ಲೂಕೋಸ್ ನಿಧಾನಗತಿಯ ಬಳಕೆಗೆ ಕಾರಣವಾಗುತ್ತದೆ.

ಮೆಂತ್ಯೆ: ಮೆಂತ್ಯೆ ಮಧುಮೇಹ ನಿಯಂತ್ರಣಕ್ಕೆ ಅತ್ಯುತ್ತಮವಾಗಿದೆ. ರಾತ್ರಿ ನೆನಸಿದ ಮೆಂತ್ಯೆಯನ್ನು ಬೆಳಗ್ಗೆ ಸೇವಿಸುವುದರಿಂದ ಗ್ಲೆಸೆಮಿಕ್​ ನಿಯಂತ್ರಣವಾಗುತ್ತದೆ. ಮೆಂತ್ಯೆ ಹಸಿವನ್ನು ಕಡಿಮೆ ಮಾಡಿ, ತೂಕ ನಿರ್ವಹಣೆ ಮಾಡುತ್ತದೆ. ಮೆಂತ್ಯ ಒಟ್ಟಾರೆ ಕೊಲೆಸ್ಟ್ರಾಲ್​ ನಿಯಂತ್ರಿಸುತ್ತದೆ. ಇದು ಔಷಧೀಯ ರೀತಿಯ ಕಾರ್ಯಾಚರಣೆ ನಡೆಸುವ ಮೂಲಕ ಮಧುಮೇಹಿಗಳಲ್ಲಿ ಹೃದಯ ಸಮಸ್ಯೆ ತಡೆಯುತ್ತದೆ.

ನೆಲ್ಲಿಕಾಯಿ: ವಿಟಮಿನ್​ ಸಿ ಯಥೇಚ್ಛವಾಗಿರುವ ಇದರಲ್ಲಿ ಆಂಟಿ ಆಕ್ಸಿಡೆಂಟ್​ ಮತ್ತು ಉರಿಯೂತ ವಿರೋಧಿ ಗುಣವಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ. ಬೆಳಗಿನ ಹೊತ್ತು ನೆಲ್ಲಿಕಾಯಿ ಜ್ಯೂಸ್​ ಸೇವನೆಯಿಂದ ಮಧುಮೇಹ ತಡೆಗಟ್ಟುವ ಪರಿಣಾಮಕಾರಿ ತಂತ್ರವಾಗಿದೆ.

ಅರಿಶಿಣ: ಇದು ಕೂಡ ಉರಿಯೂತ ಮತ್ತು ಉತ್ಕರ್ಷಣ ವಿರೋದ ಪರಿಣಾಮ ಹೊಂದಿದೆ. ಇದು ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಿ, ಇನ್ಸುಲಿನ್​ ಸಂವೇದನಾ ಸುಧಾರಣೆ ಮಾಡುತ್ತದೆ. ನಿತ್ಯ ಹಾಲಿಗೆ ಒಂದು ಚಿಟಿಕೆ ಅರಿಶಿಣ ಬೇರಸಿ ಸೇವಿಸುವುದರಿಂದ ದಿನವೀಡಿ ಉತ್ಸಾಹದಿಂದಲೂ ಇರಬಹುದು.

ಚಕ್ಕೆ: ಇದು ಕೂಡ ಇನ್ಸುಲಿನ್​ ಸಂವೇದನವನ್ನು ಸುಧಾರಿಸುತ್ತದೆ. ಗ್ಲುಕೋಸ್​ ಚಯಾಪಚಯದ ಮೇಲೆ ಪ್ರಭಾವ ಬೀರುವ ಮೂಲಕ ಮಧುಮೇಹ ನಿಯಂತ್ರಣ ಮಾಡುತ್ತದೆ. ಇದರಲ್ಲಿ ಸಮೃದ್ಧ ಉತ್ಕರ್ಷಣಾ ವಿರೋಧಿ ಅಂಶ ಇದ್ದು, ಒತ್ತಡದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಈ ಹಿನ್ನೆಲೆಯಲ್ಲಿ ಟೀಗೆ ಒಂದು ಚಿಟಿಕೆ ಚಕ್ಕೆ ಸೇರಿಸುವುದು ಉತ್ತಮವಾಗಿದೆ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತರ ಬಳಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಎಣ್ಣೆ ಬೇಕಿಲ್ಲ, ಒಲೆಯ ಅಗತ್ಯವೂ ಇಲ್ಲ: ಈ ಹಸಿಮೆಣಸಿನಕಾಯಿ ಚಟ್ನಿ ತಿಂದರೆ ಆಹಾ ಎನ್ನದೇ ಇರಲ್ಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.