ETV Bharat / health

ಇಲಿಗಳ ಮೇಲಿನ ಪ್ರಯೋಗ ಯಶಸ್ವಿ, ಮಾನವನ ಮೇಲಿನ ಪ್ರಯೋಗ ಬಾಕಿ; ಸಕ್ಸಸ್​ ಆದ್ರೆ 100ರೂ.ಗೆ ಸಿಗಲಿದೆ ಕ್ಯಾನ್ಸರ್​​ ಮಾತ್ರೆ

ಎರಡನೇ ಬಾರಿ ಕ್ಯಾನ್ಸರ್​ ಬಾರದಂತೆ ತಡೆಯುವ ಉದ್ದೇಶದಿಂದ ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಮಾತ್ರೆಯ ಇಲಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ.

author img

By ETV Bharat Karnataka Team

Published : Feb 29, 2024, 1:13 PM IST

human trials will help understand the efficacy of new Rs 100 cancer pill
human trials will help understand the efficacy of new Rs 100 cancer pill

ನವದೆಹಲಿ: ಟಾಟಾ ಮೆಮೊರಿಯಲ್​ ಸೆಂಟರ್ (ಟಿಎಂಸಿ)​​ ಅಭಿವೃದ್ಧಿ ಪಡಿಸಿರುವ ಕ್ಯಾನ್ಸರ್​ ಬಾರದಂತೆ ತಡೆಗಟ್ಟುವ 100 ರೂ. ಮಾತ್ರೆಯ ಸಾಮರ್ಥ್ಯ ಕುರಿತು ಮಾನವರ ಮೇಲಿನ ಪ್ರಯೋಗ ಸಾಬೀತು ಆಗಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರ್​ ಪ್ಲಸ್​ ಸಿಯು ಎಂಬ ಹೆಸರಿನಲ್ಲಿ ಮುಂಬೈನ ಟಿಎಂಸಿ ಸಂಶೋಧಕರು ಈ ಮಾತ್ರೆಗಳನ್ನು ಅಭಿವೃದ್ಧಿ ಪಡಿಸಿದ್ದು, ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಇದರಲ್ಲಿ ತಾಮ್ರದ ಪ್ರೊ ಆಕ್ಸಿಡೆಂಟ್​​ ಮತ್ತು ರೆಸ್ವೆರಾಟ್ರೊಲ್​ ಸಂಯೋಜನೆ ಇದೆ. ಇದು ಕ್ಯಾನ್ಸರ್​ ಮರುಕಳಿಸುವುದನ್ನು ತಡೆಯಲು ಹೊಟ್ಟೆಯಲ್ಲಿ ಆಕ್ಸಿಜನ್​ ರಾಡಿಕಲ್​​ಗಳನ್ನು ಉತ್ಪಾದಿಸುತ್ತದೆ.

ಇಲಿಗಳ ಮೇಲೆ ನಡೆಸಿದ ಅಧ್ಯಯನಲ್ಲಿ ಕ್ಯಾನ್ಸರ್ ರೋಗಿಗಳ ಗಣನೀಯ ಪ್ರಮಾಣದಲ್ಲಿ ಗುಣಪಡಿಸುವಿಕೆಗೆ ತೋರಿಸಿದೆ. ಆದರೆ, ಇದು ಕ್ಯಾನ್ಸರ್​​ಗೆ ಪರಿಹಾರವಲ್ಲ ಎಂದು ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಮೆಡಿಕಲ್​ ಅಂಕೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ ಶ್ಯಾಮ್​ ಅಗರ್​ವಾಲ್​ ತಿಳಿಸಿದ್ದಾರೆ.

ಇನ್ನು ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಷ್ಟ್ರೀಯ ಐಎಂಎ ಕೋವಿಡ್​ ಟಾಸ್ಕ್​ ಫೋರ್ಸ್​​ನ ಸಹ ಮುಖ್ಯಸ್ಥೆ ಡಾ ರಾಜೀವ್​ ಜಯದೇವ್​​​, ಇದು ಆಸಕ್ತಿದಾಯಕ ಪ್ರಶಂಸಾರ್ಹವಾಗಿದೆ. ಆದರೆ, ಇದನ್ನು ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಪರಿಹಾರದ ನಿಟ್ಟಿನಲ್ಲಿ ನೋಡಲಾಗುವುದಿಲ್ಲ ಎಂದಿದ್ದಾರೆ.

ತಾಮ್ರ ಮತ್ತು ರೆಸ್ವೆರಾಟ್ರೊಲ್ ಸಂಯೋಜನೆ ಬಳಕೆ ಜೀವಕೋಶ-ಮುಕ್ತ ಕ್ರೊಮಾಟಿನ್ ಅನ್ನು ಕುಗ್ಗಿಸುತ್ತದೆ. ಇದು ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಮಾನವನ ಮೇಲೆ ನಡೆಸಿದ ಅಧ್ಯಯನದಲ್ಲಿ ತೋರಿಸಿದೆ. ಇನ್ನೂ ಮಾನವನ ಮೇಲಿನ ಅಧ್ಯಯನ ಸಾಗಿದೆ. ಈ ಅಧ್ಯಯನವು ತಿಳಿಸುವಂತೆ, ಮಾತ್ರೆಗಳು ಕಿಮೊಥೆರಪಿಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಅರ್ಧದಷ್ಟು ಕಡಿಮೆ ಮಾಡುತ್ತವೆ. ಜೊತೆಗೆ ಕ್ಯಾನ್ಸರ್​ ಮರುಕಳಿಸುವ ಸಾಧ್ಯತೆಯನ್ನು ಶೇ 30ರಷ್ಟು ಕಡಿಮೆ ಮಾಡುತ್ತವೆ.

ಸಂಶೋಧಕರು ಬಳಕೆ ಮಾಡಿರುವ ತಾಮ್ರ ಮತ್ತು ರೆಸ್ವೆರಾಟ್ರೊಲ್​​ನ ಪ್ರೊ ಆಕ್ಸಿಡೆಂಟ್​​ ಸಂಯೋಜನೆ ಆಕ್ಸಿಜನ್ ರಾಡಿಕಲ್‌ಗಳನ್ನು ಉತ್ಪಾದಿಸುವ ಮೂಲಕ ಡಿಎನ್‌ಎಗೆ ಹಾನಿ ಮಾಡಲು ಬಳಕೆ ಮಾಡುತ್ತದೆ ಎಂದು ಡಾ ರಾಜೀವ್ ಜಯದೇವನ್​ ತಿಳಿಸಿದ್ದಾರೆ.

ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಒಂದು ದೊಡ್ಡ ಪ್ರಗತಿ. ಭಾರತೀಯ ಸಂಶೋಧಕರು ಇತಿಹಾಸ ಸೃಷ್ಟಿಸುತ್ತಿದ್ದಾರೆ. ಈ ಮಾತ್ರೆ ಪರಿಣಾಮಕಾರಿ ಕೆಲಸ ಮಾಡಿದರೆ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಗುರುಗಾವ್​ನ ಫೋರ್ಟಿಸ್​​ ಮೆಮೋರಿಯನ್​ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ ರಾಹುಲ್​ ಭಾರ್ಗವ ತಿಳಿಸಿದ್ದಾರೆ.

ಮಾತ್ರೆಗಳು ಭರವಸೆದಾಯಕ ಸಾಮರ್ಥ್ಯದ ಪರಿಣಾಮವನ್ನು ತೋರಿಸಿವೆ. ಆದರೆ, ಮಾನವ ಪ್ರಯೋಗ ಪೂರ್ಣಗೊಳ್ಳಬೇಕಿದೆ. ಇದಕ್ಕೆ ಐದು ವರ್ಷ ಸಮಯ ಹಿಡಿಯಲಿದೆ ಎಂದರು.

ಮಾತ್ರೆ ಭಾರತದ ಆಹಾರ ಭದ್ರತೆ ಮತ್ತು ಗುಣಮಟ್ಟದ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಅನುಮೋದನೆಗೆ ಕೂಡ ಕಾಯುತ್ತಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಏಮ್ಸ್ ರಿಷಿಕೇಶದಲ್ಲಿ ಲಿವರ್ ಕ್ಯಾನ್ಸರ್‌ ರೋಗಿಗೆ ಯಶಸ್ವಿ ರೊಬೊಟಿಕ್ ಸರ್ಜರಿ

ನವದೆಹಲಿ: ಟಾಟಾ ಮೆಮೊರಿಯಲ್​ ಸೆಂಟರ್ (ಟಿಎಂಸಿ)​​ ಅಭಿವೃದ್ಧಿ ಪಡಿಸಿರುವ ಕ್ಯಾನ್ಸರ್​ ಬಾರದಂತೆ ತಡೆಗಟ್ಟುವ 100 ರೂ. ಮಾತ್ರೆಯ ಸಾಮರ್ಥ್ಯ ಕುರಿತು ಮಾನವರ ಮೇಲಿನ ಪ್ರಯೋಗ ಸಾಬೀತು ಆಗಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರ್​ ಪ್ಲಸ್​ ಸಿಯು ಎಂಬ ಹೆಸರಿನಲ್ಲಿ ಮುಂಬೈನ ಟಿಎಂಸಿ ಸಂಶೋಧಕರು ಈ ಮಾತ್ರೆಗಳನ್ನು ಅಭಿವೃದ್ಧಿ ಪಡಿಸಿದ್ದು, ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಇದರಲ್ಲಿ ತಾಮ್ರದ ಪ್ರೊ ಆಕ್ಸಿಡೆಂಟ್​​ ಮತ್ತು ರೆಸ್ವೆರಾಟ್ರೊಲ್​ ಸಂಯೋಜನೆ ಇದೆ. ಇದು ಕ್ಯಾನ್ಸರ್​ ಮರುಕಳಿಸುವುದನ್ನು ತಡೆಯಲು ಹೊಟ್ಟೆಯಲ್ಲಿ ಆಕ್ಸಿಜನ್​ ರಾಡಿಕಲ್​​ಗಳನ್ನು ಉತ್ಪಾದಿಸುತ್ತದೆ.

ಇಲಿಗಳ ಮೇಲೆ ನಡೆಸಿದ ಅಧ್ಯಯನಲ್ಲಿ ಕ್ಯಾನ್ಸರ್ ರೋಗಿಗಳ ಗಣನೀಯ ಪ್ರಮಾಣದಲ್ಲಿ ಗುಣಪಡಿಸುವಿಕೆಗೆ ತೋರಿಸಿದೆ. ಆದರೆ, ಇದು ಕ್ಯಾನ್ಸರ್​​ಗೆ ಪರಿಹಾರವಲ್ಲ ಎಂದು ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಮೆಡಿಕಲ್​ ಅಂಕೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ ಶ್ಯಾಮ್​ ಅಗರ್​ವಾಲ್​ ತಿಳಿಸಿದ್ದಾರೆ.

ಇನ್ನು ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಷ್ಟ್ರೀಯ ಐಎಂಎ ಕೋವಿಡ್​ ಟಾಸ್ಕ್​ ಫೋರ್ಸ್​​ನ ಸಹ ಮುಖ್ಯಸ್ಥೆ ಡಾ ರಾಜೀವ್​ ಜಯದೇವ್​​​, ಇದು ಆಸಕ್ತಿದಾಯಕ ಪ್ರಶಂಸಾರ್ಹವಾಗಿದೆ. ಆದರೆ, ಇದನ್ನು ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಪರಿಹಾರದ ನಿಟ್ಟಿನಲ್ಲಿ ನೋಡಲಾಗುವುದಿಲ್ಲ ಎಂದಿದ್ದಾರೆ.

ತಾಮ್ರ ಮತ್ತು ರೆಸ್ವೆರಾಟ್ರೊಲ್ ಸಂಯೋಜನೆ ಬಳಕೆ ಜೀವಕೋಶ-ಮುಕ್ತ ಕ್ರೊಮಾಟಿನ್ ಅನ್ನು ಕುಗ್ಗಿಸುತ್ತದೆ. ಇದು ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಮಾನವನ ಮೇಲೆ ನಡೆಸಿದ ಅಧ್ಯಯನದಲ್ಲಿ ತೋರಿಸಿದೆ. ಇನ್ನೂ ಮಾನವನ ಮೇಲಿನ ಅಧ್ಯಯನ ಸಾಗಿದೆ. ಈ ಅಧ್ಯಯನವು ತಿಳಿಸುವಂತೆ, ಮಾತ್ರೆಗಳು ಕಿಮೊಥೆರಪಿಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಅರ್ಧದಷ್ಟು ಕಡಿಮೆ ಮಾಡುತ್ತವೆ. ಜೊತೆಗೆ ಕ್ಯಾನ್ಸರ್​ ಮರುಕಳಿಸುವ ಸಾಧ್ಯತೆಯನ್ನು ಶೇ 30ರಷ್ಟು ಕಡಿಮೆ ಮಾಡುತ್ತವೆ.

ಸಂಶೋಧಕರು ಬಳಕೆ ಮಾಡಿರುವ ತಾಮ್ರ ಮತ್ತು ರೆಸ್ವೆರಾಟ್ರೊಲ್​​ನ ಪ್ರೊ ಆಕ್ಸಿಡೆಂಟ್​​ ಸಂಯೋಜನೆ ಆಕ್ಸಿಜನ್ ರಾಡಿಕಲ್‌ಗಳನ್ನು ಉತ್ಪಾದಿಸುವ ಮೂಲಕ ಡಿಎನ್‌ಎಗೆ ಹಾನಿ ಮಾಡಲು ಬಳಕೆ ಮಾಡುತ್ತದೆ ಎಂದು ಡಾ ರಾಜೀವ್ ಜಯದೇವನ್​ ತಿಳಿಸಿದ್ದಾರೆ.

ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಒಂದು ದೊಡ್ಡ ಪ್ರಗತಿ. ಭಾರತೀಯ ಸಂಶೋಧಕರು ಇತಿಹಾಸ ಸೃಷ್ಟಿಸುತ್ತಿದ್ದಾರೆ. ಈ ಮಾತ್ರೆ ಪರಿಣಾಮಕಾರಿ ಕೆಲಸ ಮಾಡಿದರೆ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಗುರುಗಾವ್​ನ ಫೋರ್ಟಿಸ್​​ ಮೆಮೋರಿಯನ್​ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ ರಾಹುಲ್​ ಭಾರ್ಗವ ತಿಳಿಸಿದ್ದಾರೆ.

ಮಾತ್ರೆಗಳು ಭರವಸೆದಾಯಕ ಸಾಮರ್ಥ್ಯದ ಪರಿಣಾಮವನ್ನು ತೋರಿಸಿವೆ. ಆದರೆ, ಮಾನವ ಪ್ರಯೋಗ ಪೂರ್ಣಗೊಳ್ಳಬೇಕಿದೆ. ಇದಕ್ಕೆ ಐದು ವರ್ಷ ಸಮಯ ಹಿಡಿಯಲಿದೆ ಎಂದರು.

ಮಾತ್ರೆ ಭಾರತದ ಆಹಾರ ಭದ್ರತೆ ಮತ್ತು ಗುಣಮಟ್ಟದ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಅನುಮೋದನೆಗೆ ಕೂಡ ಕಾಯುತ್ತಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಏಮ್ಸ್ ರಿಷಿಕೇಶದಲ್ಲಿ ಲಿವರ್ ಕ್ಯಾನ್ಸರ್‌ ರೋಗಿಗೆ ಯಶಸ್ವಿ ರೊಬೊಟಿಕ್ ಸರ್ಜರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.