ETV Bharat / entertainment

ವರುಣ್​ ತೇಜ್​​ ಸಿನಿಮಾ ಆಯ್ಕೆ ಬಗ್ಗೆ ಚಿರಂಜೀವಿ ಮೆಚ್ಚುಗೆ; ಸಹೋದರನ ಮಗನ ದಶಕದ ಜರ್ನಿ ನೆನೆದ ಮೆಗಾಸ್ಟಾರ್​

author img

By ETV Bharat Karnataka Team

Published : Feb 26, 2024, 1:04 PM IST

Updated : Feb 26, 2024, 2:58 PM IST

ಹೊಸ ಚಿತ್ರದ ಪ್ರಿ ರಿಲೀಸ್​ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್​​ ಚಿರಂಜೀವಿ ಅವರು ವರುಣ್​ ತೇಜ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

operation-valentine-pre-release-event-chiranjeevi-lauds-varun-tejs-film-choices-gently-teases-about-his-marriage-to-lavanya-tripathi
operation-valentine-pre-release-event-chiranjeevi-lauds-varun-tejs-film-choices-gently-teases-about-his-marriage-to-lavanya-tripathi

ಹೈದರಾಬಾದ್​: ವೈವಿಧ್ಯಮಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮನರಂಜಿಸುತ್ತಿರುವ ನಟ ವರುಣ್​ ತೇಜ್​​ಗೆ ಟಾಲಿವುಡ್​​ ಮೆಗಾಸ್ಟಾರ್​​ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಡಿಸೆಂಬರ್​​ಗೆ ವರುಣ್​​ ತೇಜ್​​ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಶಕ ಪೂರೈಸಲಿದೆ. 2014ರಲ್ಲಿ ಮುಕುಂದ ಚಿತ್ರದ ಮೂಲಕ ಸಿನಿರಂಗ ಪ್ರವೇಶಿದ ವರುಣ್​ ತೇಜ್​, ಇದೀಗ ಆಪರೇಷನ್​ ವ್ಯಾಲಂಟೈನ್​​ ಚಿತ್ರ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ವರುಣ್​ ತೇಜ್​ ಅವರ ಬಹುನಿರೀಕ್ಷಿತ ಚಿತ್ರ ಆಪರೇಷನ್​ ವ್ಯಾಲಂಟೈನ್​​ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಿ ರಿಲೀಸ್​ ಕಾರ್ಯಕ್ರಮದಲ್ಲಿ ಸಹೋದರನ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಉದ್ಯಮದಲ್ಲಿ ತಮ್ಮದೇ ಹಾದಿಯನ್ನು ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಚಿತ್ರದ ಪ್ರಿ ರಿಲೀಸ್​ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಮಿಸಿದ್ದ ಮೆಗಾಸ್ಟಾರ್​​, ಆಪರೇಷನ್​ ವ್ಯಾಲಂಟೈನ್​ ತಂಡದ ಪ್ರಯತ್ನವನ್ನು ಹೊಗಳಿದರು. ಚಿತ್ರವನ್ನು ಶಕ್ತಿ ಪ್ರತಾಪ್​ ಸಿಂಗ್​ ನಿರ್ದೇಶನ ಮಾಡುತ್ತಿದ್ದು, ಆಗಸದಲ್ಲಿ ಸಾಹಸ ದೃಶ್ಯ ಮಾಡಿರುವ ಚಿತ್ರತಂಡದ ಧೈರ್ಯಕ್ಕೆ ಮೆಚ್ಚಬೇಕು ಎಂದು ಪ್ರಶಂಸಿದರು. ಕಾರ್ಯಕ್ರಮದಲ್ಲಿ ಸಂಪೂರ್ಣ ಚಿತ್ರತಂಡ ಉಪಸ್ಥಿತರಿದ್ದು, ಚಿತ್ರದ ನಟಿ ಮಾನುಷಿ ಚಿಲ್ಲರ್​ ಅನುಪಸ್ಥಿತಿ ಕಾಡಿತು.

  • " class="align-text-top noRightClick twitterSection" data="">

ವರುಣ್​ ಅಭಿರುಚಿಯ ವಿಭಿನ್ನ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ವರುಣ್​ ಚಿತ್ರದ ಆಯ್ಕೆ ಮತ್ತು ಸಾಮರ್ಥ್ಯಗಳು ಎಲ್ಲಾ ಪ್ರಕಾರವನ್ನು ಹೊಂದಿದೆ. ಮುಕುಂದದಿಂದ ಫಿದಾ, ಕಂಚೆ, ಗಡ್ಡಲಕೊಂಡ ಗಣೇಶ್​ ಮತ್ತು ಇದೀಗ ಆಪರೇಷನ್​​ ವ್ಯಾಲಂಟೈನ್​ ಇದಕ್ಕೆ ತಾಜಾ ಉದಾಹರಣೆಯಾಗಿದೆ ಎಂದರು.

ಇದೇ ವೇಳೆ ತಮ್ಮ ಸೋದರಳಿಯನ ಕಾಲೆಳೆದ ಅವರು, ಚಿತ್ರಕಥೆಯ ಬಗ್ಗೆ ಚರ್ಚಿಸುವಾಗ ಲಾವಣ್ಯ ತ್ರಿಪಾಠಿ-ವರುಣ್ ಮದುವೆಯ ಬಗ್ಗೆ ತಮಾಷೆ ಮಾಡಿದರು. ಇದೇ ವೇಳೆ ಆಪರೇಷನ್ ವ್ಯಾಲೆಂಟೈನ್ ಮತ್ತು ಟಾಪ್ ಗನ್ ಮೇವರಿಕ್ ನಡುವೆ ಹೋಲಿಕೆಗಳನ್ನು ಮಾಡಿದರು. ತೆಲುಗು ಚಿತ್ರದಲ್ಲಿ ಆಗಸದಲ್ಲಿ ಮೊದಲ ಬಾರಿ ಸಾಹಸ ದೃಶ್ಯ ಹೊಂದಿರುವ ಚಿತ್ರ ಇದಾಗಿದೆ ಎಂದು ತಿಳಿಸಿದರು. ಈ ಚಿತ್ರ ಫೆ. 14ರ ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವುದಾಗಿದೆ.

  • " class="align-text-top noRightClick twitterSection" data="">

ನಿರ್ದೇಶಕ ಶಕ್ತಿ ಪ್ರತಾಪ್​ ಸಿಂಗ್​ ಸಮರ್ಪಣೆಯನ್ನು ಮೆಚ್ಚಿದ ಅವರು, ವೈಮಾನಿಕ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಅವರ ಕಿರುಚಿತ್ರವು ವಾಯುಪಡೆಯ ಅಧಿಕಾರಿಗಳನ್ನು ಹೇಗೆ ಸೆಳೆಯಿತು ಎಂದು ತಿಳಿಸಿದರು. ಸಿಂಗ್​​ ತೆಲುಗು ಚಿತ್ರೋದ್ಯಮದ ಯುವ ಪ್ರತಿಭೆ ಸೇರಿದಂತೆ ಅನೇಕರನ್ನು ತಮ್ಮ ಕೆಲಸದ ಮೂಲಕ ಪ್ರೇರೇಪಿಸಿದ್ದಾರೆ ಎಂದರು.

ಇದನ್ನೂ ಓದಿ: 100 ಕೋಟಿ ಆಫರ್​ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ?

ಹೈದರಾಬಾದ್​: ವೈವಿಧ್ಯಮಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮನರಂಜಿಸುತ್ತಿರುವ ನಟ ವರುಣ್​ ತೇಜ್​​ಗೆ ಟಾಲಿವುಡ್​​ ಮೆಗಾಸ್ಟಾರ್​​ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಡಿಸೆಂಬರ್​​ಗೆ ವರುಣ್​​ ತೇಜ್​​ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಶಕ ಪೂರೈಸಲಿದೆ. 2014ರಲ್ಲಿ ಮುಕುಂದ ಚಿತ್ರದ ಮೂಲಕ ಸಿನಿರಂಗ ಪ್ರವೇಶಿದ ವರುಣ್​ ತೇಜ್​, ಇದೀಗ ಆಪರೇಷನ್​ ವ್ಯಾಲಂಟೈನ್​​ ಚಿತ್ರ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ವರುಣ್​ ತೇಜ್​ ಅವರ ಬಹುನಿರೀಕ್ಷಿತ ಚಿತ್ರ ಆಪರೇಷನ್​ ವ್ಯಾಲಂಟೈನ್​​ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಿ ರಿಲೀಸ್​ ಕಾರ್ಯಕ್ರಮದಲ್ಲಿ ಸಹೋದರನ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಉದ್ಯಮದಲ್ಲಿ ತಮ್ಮದೇ ಹಾದಿಯನ್ನು ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಚಿತ್ರದ ಪ್ರಿ ರಿಲೀಸ್​ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಮಿಸಿದ್ದ ಮೆಗಾಸ್ಟಾರ್​​, ಆಪರೇಷನ್​ ವ್ಯಾಲಂಟೈನ್​ ತಂಡದ ಪ್ರಯತ್ನವನ್ನು ಹೊಗಳಿದರು. ಚಿತ್ರವನ್ನು ಶಕ್ತಿ ಪ್ರತಾಪ್​ ಸಿಂಗ್​ ನಿರ್ದೇಶನ ಮಾಡುತ್ತಿದ್ದು, ಆಗಸದಲ್ಲಿ ಸಾಹಸ ದೃಶ್ಯ ಮಾಡಿರುವ ಚಿತ್ರತಂಡದ ಧೈರ್ಯಕ್ಕೆ ಮೆಚ್ಚಬೇಕು ಎಂದು ಪ್ರಶಂಸಿದರು. ಕಾರ್ಯಕ್ರಮದಲ್ಲಿ ಸಂಪೂರ್ಣ ಚಿತ್ರತಂಡ ಉಪಸ್ಥಿತರಿದ್ದು, ಚಿತ್ರದ ನಟಿ ಮಾನುಷಿ ಚಿಲ್ಲರ್​ ಅನುಪಸ್ಥಿತಿ ಕಾಡಿತು.

  • " class="align-text-top noRightClick twitterSection" data="">

ವರುಣ್​ ಅಭಿರುಚಿಯ ವಿಭಿನ್ನ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ವರುಣ್​ ಚಿತ್ರದ ಆಯ್ಕೆ ಮತ್ತು ಸಾಮರ್ಥ್ಯಗಳು ಎಲ್ಲಾ ಪ್ರಕಾರವನ್ನು ಹೊಂದಿದೆ. ಮುಕುಂದದಿಂದ ಫಿದಾ, ಕಂಚೆ, ಗಡ್ಡಲಕೊಂಡ ಗಣೇಶ್​ ಮತ್ತು ಇದೀಗ ಆಪರೇಷನ್​​ ವ್ಯಾಲಂಟೈನ್​ ಇದಕ್ಕೆ ತಾಜಾ ಉದಾಹರಣೆಯಾಗಿದೆ ಎಂದರು.

ಇದೇ ವೇಳೆ ತಮ್ಮ ಸೋದರಳಿಯನ ಕಾಲೆಳೆದ ಅವರು, ಚಿತ್ರಕಥೆಯ ಬಗ್ಗೆ ಚರ್ಚಿಸುವಾಗ ಲಾವಣ್ಯ ತ್ರಿಪಾಠಿ-ವರುಣ್ ಮದುವೆಯ ಬಗ್ಗೆ ತಮಾಷೆ ಮಾಡಿದರು. ಇದೇ ವೇಳೆ ಆಪರೇಷನ್ ವ್ಯಾಲೆಂಟೈನ್ ಮತ್ತು ಟಾಪ್ ಗನ್ ಮೇವರಿಕ್ ನಡುವೆ ಹೋಲಿಕೆಗಳನ್ನು ಮಾಡಿದರು. ತೆಲುಗು ಚಿತ್ರದಲ್ಲಿ ಆಗಸದಲ್ಲಿ ಮೊದಲ ಬಾರಿ ಸಾಹಸ ದೃಶ್ಯ ಹೊಂದಿರುವ ಚಿತ್ರ ಇದಾಗಿದೆ ಎಂದು ತಿಳಿಸಿದರು. ಈ ಚಿತ್ರ ಫೆ. 14ರ ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವುದಾಗಿದೆ.

  • " class="align-text-top noRightClick twitterSection" data="">

ನಿರ್ದೇಶಕ ಶಕ್ತಿ ಪ್ರತಾಪ್​ ಸಿಂಗ್​ ಸಮರ್ಪಣೆಯನ್ನು ಮೆಚ್ಚಿದ ಅವರು, ವೈಮಾನಿಕ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಅವರ ಕಿರುಚಿತ್ರವು ವಾಯುಪಡೆಯ ಅಧಿಕಾರಿಗಳನ್ನು ಹೇಗೆ ಸೆಳೆಯಿತು ಎಂದು ತಿಳಿಸಿದರು. ಸಿಂಗ್​​ ತೆಲುಗು ಚಿತ್ರೋದ್ಯಮದ ಯುವ ಪ್ರತಿಭೆ ಸೇರಿದಂತೆ ಅನೇಕರನ್ನು ತಮ್ಮ ಕೆಲಸದ ಮೂಲಕ ಪ್ರೇರೇಪಿಸಿದ್ದಾರೆ ಎಂದರು.

ಇದನ್ನೂ ಓದಿ: 100 ಕೋಟಿ ಆಫರ್​ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ?

Last Updated : Feb 26, 2024, 2:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.