ETV Bharat / entertainment

'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಹೊಸ ಹಾಡು 'ನಿನ್ನ ಹೆಗಲು ನನಗಾಗೇ ಇರಲು' ರಿಲೀಸ್ - Krishnam Pranaya Sakhi

author img

By ETV Bharat Entertainment Team

Published : Aug 9, 2024, 3:07 PM IST

ಶ್ರೀನಿವಾಸರಾಜು ಆ್ಯಕ್ಷನ್​ ಕಟ್​​ ಹೇಳಿರುವ 'ಕೃಷ್ಣಂ ಪ್ರಣಯ ಸಖಿ' ಬಿಡುಗಡೆಗೆ ಸಜ್ಜಾಗುತ್ತಿದೆ. ಟ್ರೇಲರ್​ ಇಲ್ಲದೇ ಹಾಡುಗಳ ಮೂಲಕವೇ ಸದ್ದು ಮಾಡುತ್ತಿರುವ ಚಿತ್ರದ ಹೊಸ ಹಾಡೊಂದು ರಿಲೀಸ್ ಆಗಿದೆ.

Ninna Hegalu song out
'ನಿನ್ನ ಹೆಗಲು ನನಗಾಗೇ ಇರಲು' ಹಾಡು ಬಿಡುಗಡೆ (ETV Bharat/AanandaudioIG)

ನಟ ಗಣೇಶ್ ಅಭಿನಯದ ಮುಂದಿನ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಶ್ರೀನಿವಾಸರಾಜು ನಿರ್ದೇಶನದ ಲವ್​ ಸ್ಟೋರಿ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇದೀಗ ಈ ಚಿತ್ರದ ಮತ್ತೊಂದು ಹಾಡು ಅನಾವರಣವಾಗಿದೆ.

ಐದನೇ ಹಾಡು ಅನಾವರಣ: 'ನಿನ್ನ ಹೆಗಲು ನನಗಾಗೇ ಇರಲು' ಎಂಬ ಹಾಡು ಗುರುವಾರ ಬಿಡುಗಡೆಯಾಯಿತು. ಕವಿರಾಜ್​ ಸಾಹಿತ್ಯ ಬರೆದಿದ್ದು, ಸಾಯಿಕಾರ್ತಿಕ್​​ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕಿ ಕೆ.ಎಸ್.​ಚಿತ್ರಾ ಕಂಠಸಿರಿಯಲ್ಲಿ ಮಧುರ ಗೀತೆ ಮೂಡಿಬಂದಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗೊಂಡಿದೆ.

ಟ್ರೆಂಡಿಂಗ್​​​ನಲ್ಲಿ ಕೃಷ್ಣಂ ಪ್ರಣಯ ಸಖಿ ಸಾಂಗ್ಸ್: ಗಣೇಶ್, ಶ್ರೀನಿವಾಸರಾಜು ಕಾಂಬಿನೇಶನ್​ನ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಿಗ್​ ಬಜೆಟ್​ನಲ್ಲಿ ಪ್ರಶಾಂತ್ ಜಿ.ರುದ್ರಪ್ಪ ನಿರ್ಮಿಸಿರುವ ಸಿನಿಮಾ ಹಾಡುಗಳ​​ ಮೂಲಕವೂ ಸಖತ್​​ ಸದ್ದು ಮಾಡುತ್ತಿದೆ. ಸಿನಿಮಾದ ಟ್ರೇಲರ್ ಇರಲ್ಲ, ಡೈರೆಕ್ಟ್ ಸಿನಿಮಾ ಬಿಡುಗಡೆ ಮಾಡುವುದಾಗಿ ಈ ಹಿಂದೆ ಚಿತ್ರತಂಡ ತಿಳಿಸಿತ್ತು. ಅದರಂತೆ ಈಗಾಗಲೇ ಬಿಡುಗಡೆಯಾಗಿರುವ ನಾಲ್ಕು ಹಾಡುಗಳು ಹಿಟ್​ ಲಿಸ್ಟ್​​ ಸೇರಿವೆ. ಅದರಲ್ಲೂ 'ದ್ವಾಪರ' ಸಾಂಗ್​​ ರೀಲ್ಸ್, ಸ್ಟೇಟಸ್​, ಸ್ಟೋರಿ ಅಂತಾ ಮೊಬೈಲ್​ಗಳಲ್ಲೂ ಹವಾ ಉಂಟು ಮಾಡಿದೆ.

ಗಣೇಶ್ ಪೋಸ್ಟ್​: 'ನಿನ್ನ ಹೆಗಲು ನನಗಾಗೇ ಇರಲು' ಹಾಡನ್ನು ಗಣೇಶ್​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಡಿನ ಪೋಸ್ಟರ್‌ನಲ್ಲಿ, 'ನಿನ್ನ ಹೆಗಲು ನನಗಾಗೇ ಇರಲು - ಕೆ.ಎಸ್ ಚಿತ್ರಮ್ಮನ ದನಿಯಲ್ಲಿನ ನನ್ನ ನೆಚ್ಚಿನ ಗೀತೆ' ಎಂದು ಬರೆದುಕೊಂಡಿದ್ದಾರೆ.

100K+ ವೀವ್ಸ್: ಆನಂದ್​ ಆಡಿಯೋ ಕೂಡಾ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಹಾಡುಗಳು​ ಟ್ರೆಂಡಿಂಗ್​​​ನಲ್ಲಿರುವ ವಿಚಾರ ತಿಳಿಸಿದೆ. ಪೋಸ್ಟರ್ ಮೇಲೆ ಹಾಡಿನ ಶೀರ್ಷಿಕೆ ಜೊತೆಗೆ 100K+ ವೀವ್ಸ್​​ ಎಂದು ಬರೆಯಲಾಗಿದೆ.

ನಿರೀಕ್ಷೆ ಮೀರಿ 'ಕೃಷ್ಣಂ ಪ್ರಣಯ ಸಖಿ' ಹಾಡುಗಳು ಹಿಟ್​ ಆದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಡಿಯೋ ಹಕ್ಕುಗಳನ್ನು ಪಡೆದಿರುವ ಆನಂದ್ ಆಡಿಯೋ ಚಿತ್ರ ತಂಡವನ್ನು ಸನ್ಮಾನಿಸಿತ್ತು. ನಟ, ನಿರ್ದೇಶಕ ಸೇರಿದಂತೆ ಚಿತ್ರತಂಡದ ಬಹುತೇಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ, ನನ್ನ ಸಿನಿಮಾ ಯಶಸ್ಸಿನಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿದೆ ಎಂದು ಗಣೇಶ್‌ ತಿಳಿಸಿದ್ದರು.

ಇದನ್ನೂ ಓದಿ: 'ನನ್ನ ಸಿನಿಮಾ ಯಶಸ್ಸಿನಲ್ಲಿ ಸಂಗೀತ ಮಹತ್ವದ ಪಾತ್ರ ವಹಿಸಿದೆ': ಗೋಲ್ಡನ್ ಸ್ಟಾರ್ ಗಣೇಶ್​​ - Krishnam Pranaya Sakhi

ಡೈರೆಕ್ಟ್​​ ಸಿನಿಮಾ ಬಿಡುಗಡೆ: ಇನ್ನೂ ಟ್ರೇಲರ್​​ ರಿಲೀಸ್​ ಮಾಡದಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಗಣಿ, ನಮ್ಮ ನಿರ್ದೇಶಕರು, ನಿರ್ಮಾಪಕರು ಮಾತನಾಡಿಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಏಕೆಂದರೆ, ಇದು ಸೋಷಿಯಲ್ ಮೀಡಿಯಾ ಜಮಾನ. ಪ್ರೇಕ್ಷಕರ ಅಭಿರುಚಿ ಸಹ ಬದಲಾಗಿದೆ. ಈ ಹಿಂದೆ ಟೀಸರ್ ಟ್ರೇಲರ್ ಸಂಸ್ಕೃತಿ ಇರಲಿಲ್ಲ. ಆಗ ಪ್ರೇಕ್ಷಕರು ನೇರವಾಗಿ ಬಂದು ಥಿಯೇಟರ್​ಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು. ಹಲವು ದಿನಗಳ ಕಾಲ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಓಡಿ ಯಶ ಕಾಣುತ್ತಿದ್ದವು. ಅದೇ ಸೂತ್ರವನ್ನು ನಾವು ನಮ್ಮ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಕೋಟಿ ಕೋಟಿ ಕಲೆಕ್ಷನ್‌ ಮಾಡಿದ್ದ 'ಮುಂಗಾರು ಮಳೆ': ಗಣೇಶ್​ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? - Ganesh Mungaru Male

ನಟ ಗಣೇಶ್ ಅಭಿನಯದ ಮುಂದಿನ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಶ್ರೀನಿವಾಸರಾಜು ನಿರ್ದೇಶನದ ಲವ್​ ಸ್ಟೋರಿ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇದೀಗ ಈ ಚಿತ್ರದ ಮತ್ತೊಂದು ಹಾಡು ಅನಾವರಣವಾಗಿದೆ.

ಐದನೇ ಹಾಡು ಅನಾವರಣ: 'ನಿನ್ನ ಹೆಗಲು ನನಗಾಗೇ ಇರಲು' ಎಂಬ ಹಾಡು ಗುರುವಾರ ಬಿಡುಗಡೆಯಾಯಿತು. ಕವಿರಾಜ್​ ಸಾಹಿತ್ಯ ಬರೆದಿದ್ದು, ಸಾಯಿಕಾರ್ತಿಕ್​​ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕಿ ಕೆ.ಎಸ್.​ಚಿತ್ರಾ ಕಂಠಸಿರಿಯಲ್ಲಿ ಮಧುರ ಗೀತೆ ಮೂಡಿಬಂದಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗೊಂಡಿದೆ.

ಟ್ರೆಂಡಿಂಗ್​​​ನಲ್ಲಿ ಕೃಷ್ಣಂ ಪ್ರಣಯ ಸಖಿ ಸಾಂಗ್ಸ್: ಗಣೇಶ್, ಶ್ರೀನಿವಾಸರಾಜು ಕಾಂಬಿನೇಶನ್​ನ ಚಿತ್ರ ಆಗಸ್ಟ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಿಗ್​ ಬಜೆಟ್​ನಲ್ಲಿ ಪ್ರಶಾಂತ್ ಜಿ.ರುದ್ರಪ್ಪ ನಿರ್ಮಿಸಿರುವ ಸಿನಿಮಾ ಹಾಡುಗಳ​​ ಮೂಲಕವೂ ಸಖತ್​​ ಸದ್ದು ಮಾಡುತ್ತಿದೆ. ಸಿನಿಮಾದ ಟ್ರೇಲರ್ ಇರಲ್ಲ, ಡೈರೆಕ್ಟ್ ಸಿನಿಮಾ ಬಿಡುಗಡೆ ಮಾಡುವುದಾಗಿ ಈ ಹಿಂದೆ ಚಿತ್ರತಂಡ ತಿಳಿಸಿತ್ತು. ಅದರಂತೆ ಈಗಾಗಲೇ ಬಿಡುಗಡೆಯಾಗಿರುವ ನಾಲ್ಕು ಹಾಡುಗಳು ಹಿಟ್​ ಲಿಸ್ಟ್​​ ಸೇರಿವೆ. ಅದರಲ್ಲೂ 'ದ್ವಾಪರ' ಸಾಂಗ್​​ ರೀಲ್ಸ್, ಸ್ಟೇಟಸ್​, ಸ್ಟೋರಿ ಅಂತಾ ಮೊಬೈಲ್​ಗಳಲ್ಲೂ ಹವಾ ಉಂಟು ಮಾಡಿದೆ.

ಗಣೇಶ್ ಪೋಸ್ಟ್​: 'ನಿನ್ನ ಹೆಗಲು ನನಗಾಗೇ ಇರಲು' ಹಾಡನ್ನು ಗಣೇಶ್​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಡಿನ ಪೋಸ್ಟರ್‌ನಲ್ಲಿ, 'ನಿನ್ನ ಹೆಗಲು ನನಗಾಗೇ ಇರಲು - ಕೆ.ಎಸ್ ಚಿತ್ರಮ್ಮನ ದನಿಯಲ್ಲಿನ ನನ್ನ ನೆಚ್ಚಿನ ಗೀತೆ' ಎಂದು ಬರೆದುಕೊಂಡಿದ್ದಾರೆ.

100K+ ವೀವ್ಸ್: ಆನಂದ್​ ಆಡಿಯೋ ಕೂಡಾ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಹಾಡುಗಳು​ ಟ್ರೆಂಡಿಂಗ್​​​ನಲ್ಲಿರುವ ವಿಚಾರ ತಿಳಿಸಿದೆ. ಪೋಸ್ಟರ್ ಮೇಲೆ ಹಾಡಿನ ಶೀರ್ಷಿಕೆ ಜೊತೆಗೆ 100K+ ವೀವ್ಸ್​​ ಎಂದು ಬರೆಯಲಾಗಿದೆ.

ನಿರೀಕ್ಷೆ ಮೀರಿ 'ಕೃಷ್ಣಂ ಪ್ರಣಯ ಸಖಿ' ಹಾಡುಗಳು ಹಿಟ್​ ಆದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಡಿಯೋ ಹಕ್ಕುಗಳನ್ನು ಪಡೆದಿರುವ ಆನಂದ್ ಆಡಿಯೋ ಚಿತ್ರ ತಂಡವನ್ನು ಸನ್ಮಾನಿಸಿತ್ತು. ನಟ, ನಿರ್ದೇಶಕ ಸೇರಿದಂತೆ ಚಿತ್ರತಂಡದ ಬಹುತೇಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ, ನನ್ನ ಸಿನಿಮಾ ಯಶಸ್ಸಿನಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿದೆ ಎಂದು ಗಣೇಶ್‌ ತಿಳಿಸಿದ್ದರು.

ಇದನ್ನೂ ಓದಿ: 'ನನ್ನ ಸಿನಿಮಾ ಯಶಸ್ಸಿನಲ್ಲಿ ಸಂಗೀತ ಮಹತ್ವದ ಪಾತ್ರ ವಹಿಸಿದೆ': ಗೋಲ್ಡನ್ ಸ್ಟಾರ್ ಗಣೇಶ್​​ - Krishnam Pranaya Sakhi

ಡೈರೆಕ್ಟ್​​ ಸಿನಿಮಾ ಬಿಡುಗಡೆ: ಇನ್ನೂ ಟ್ರೇಲರ್​​ ರಿಲೀಸ್​ ಮಾಡದಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಗಣಿ, ನಮ್ಮ ನಿರ್ದೇಶಕರು, ನಿರ್ಮಾಪಕರು ಮಾತನಾಡಿಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಏಕೆಂದರೆ, ಇದು ಸೋಷಿಯಲ್ ಮೀಡಿಯಾ ಜಮಾನ. ಪ್ರೇಕ್ಷಕರ ಅಭಿರುಚಿ ಸಹ ಬದಲಾಗಿದೆ. ಈ ಹಿಂದೆ ಟೀಸರ್ ಟ್ರೇಲರ್ ಸಂಸ್ಕೃತಿ ಇರಲಿಲ್ಲ. ಆಗ ಪ್ರೇಕ್ಷಕರು ನೇರವಾಗಿ ಬಂದು ಥಿಯೇಟರ್​ಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು. ಹಲವು ದಿನಗಳ ಕಾಲ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಓಡಿ ಯಶ ಕಾಣುತ್ತಿದ್ದವು. ಅದೇ ಸೂತ್ರವನ್ನು ನಾವು ನಮ್ಮ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಕೋಟಿ ಕೋಟಿ ಕಲೆಕ್ಷನ್‌ ಮಾಡಿದ್ದ 'ಮುಂಗಾರು ಮಳೆ': ಗಣೇಶ್​ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? - Ganesh Mungaru Male

ETV Bharat Logo

Copyright © 2024 Ushodaya Enterprises Pvt. Ltd., All Rights Reserved.