ETV Bharat / entertainment

ರಿಲೀಸ್​ಗೆ ಅಣಿಯಾದ ಪೃಥ್ವಿ ಅಂಬಾರ್ ನಟನೆಯ 'ಮತ್ಸ್ಯಗಂಧ': 'ಕುವ ಕುವ ಕುವಾಲೆ' ಹಾಡು ಅನಾವರಣ

author img

By ETV Bharat Karnataka Team

Published : Feb 2, 2024, 6:41 PM IST

Matsyagandha: 'ಮತ್ಸ್ಯಗಂಧ' ಸಿನಿಮಾದ ಟೀಸರ್​, ಹಾಡುಗಳು ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

Matsyagandha
ಮತ್ಸ್ಯಗಂಧ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಪೃಥ್ವಿ ಅಂಬಾರ್. 'ದಿಯಾ' ಸ್ಟಾರ್ ಎಂದೇ ಫೇಮಸ್​. ವಿಭಿನ್ನ ಪ್ರೇಮಕಥೆ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅತಿ ಶೀಘ್ರದಲ್ಲಿ ಮೂರು ಸಿನಿಮಾಗಳು ತೆರೆಕಾಣಲಿದ್ದು, ಸ್ಯಾಂಡಲ್​​ವುಡ್​ ಅಂಗಳದಲ್ಲೀಗ 'ಮತ್ಸ್ಯಗಂಧ' ಚಿತ್ರದ ಘಮಲಿದೆ.

  • " class="align-text-top noRightClick twitterSection" data="">

'ದೂರದರ್ಶನ' ಚಿತ್ರದ ಬಳಿಕ ಪೃಥ್ವಿ ಅಂಬಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಮತ್ಸಗಂಧ'. ಶೀರ್ಷಿಕೆಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಕ್ರೇಜ್ ಹುಟ್ಟಿಸಿರೋ ಈ ಚಿತ್ರ ಒಂದಲ್ಲ ಒಂದು ವಿಚಾರವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಲವರ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬಾರ್ ಮತ್ಸ್ಯಗಂಧ ಚಿತ್ರದಲ್ಲಿ ಖಾಕಿ ತೊಟ್ಟು ಕಾನೂನು ಕಾಪಾಡುವ ರಕ್ಷಕನಾಗಿದ್ದಾರೆ‌‌. ಈ ಚಿತ್ರದ ಅಧಿಕೃತ ಟೀಸರ್ ಅನ್ನು ಮಿಲಿಯನ್​ಗಟ್ಟಲೇ ಜನರು ವೀಕ್ಷಿಸಿದ್ದು, ಭಾಗೀರಥಿ ಹಾಡು ಕೂಡ ಫುಲ್ ವೈರಲ್ ಆಗಿದೆ. ಬ್ಯಾಕ್ ಟು ಬ್ಯಾಕ್ ಕಂಟೆಂಟ್​​ಗಳೊಂದಿಗೆ ಮತ್ಸ್ಯಗಂಧ ಚಿತ್ರತಂಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸುತ್ತಿದೆ.

  • " class="align-text-top noRightClick twitterSection" data="">

ಮೊದಲು ರಿಲೀಸ್ ಆದ ಭಾಗೀರಥಿ ಹಾಡು ರೀಲ್ಸ್​​ನಲ್ಲಿ ಟ್ರೆಂಡಿಂಗ್ ಆಗಿದೆ. ಆನ್​​ಲೈನ್​​ನಲ್ಲಿ ಸಖತ್​​ ಸದ್ದು ಮಾಡುತ್ತಿದೆ. ಇದ್ರ ಬೆನ್ನಿಗೆ ರಿಲೀಸ್ ಆದ ಅಫೀಶಿಯಲ್ ಟೀಸರ್ ಕೂಡ ಸಖತ್​ ಸದ್ದು ಮಾಡಿದ್ದು, ವೀಕ್ಷಣೆಯಲ್ಲಿ ಮಿಲಿಯನ್ ದಾಟಿದೆ. ಇದೀಗ 'ಕುವಾ ಕುವಾ ಕುವಾಲೆ' ಅನ್ನೋ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಮತ್ಸ್ಯಗಂಧದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಪೃಥ್ವಿ ಅಂಬಾರ್ ಜೊತೆ ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾ ಬಳಗವಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಪೃಥ್ವಿ ಅಂಬಾರ್ ನಟನೆಯ ಮೂರು ಸಿನಿಮಾಗಳು ರಿಲೀಸ್​ಗೆ ಸಿದ್ಧ: 'ಮತ್ಸ್ಯಗಂಧ' ಟೀಸರ್ ನೋಡಿದ್ರಾ?

ಕನ್ನಡ ಪಿಚ್ಚರ್ ಅರ್ಪಿಸುವ, ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣ ಆಗಿರುವ ಈ ಚಿತ್ರ ಶೀಘ್ರದಲ್ಲೇ ತೆರೆಗಪ್ಪಳಿಸಲಿದೆ. ಬಿ.ಎಸ್ ವಿಶ್ವನಾಥ್ ನಿರ್ಮಾಣದ ಈ ಚಿತ್ರಕ್ಕೆ ದೇವರಾಜ್ ಪೂಜಾರಿ ಆ್ಯಕ್ಷನ್​​ ಕಟ್​​ ಹೇಳಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಟೀಸರ್ ಹಾಗೂ ಮೇಕಿಂಗ್ ವಿಚಾರದಲ್ಲಿ ಸದ್ದು ಮಾಡುತ್ತಿರುವ 'ಮತ್ಸ್ಯಗಂಧ' ಇದೇ ತಿಂಗಳ 23ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರ ಪ್ರವೇಶಿಸಲಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, 'ಮತ್ಸ್ಯಗಂಧ' ವೀಕ್ಷಿಸುವ ಕಾತರದಲ್ಲಿ ಸಿನಿಪ್ರಿಯರಿದ್ದಾರೆ.

ಇದನ್ನೂ ಓದಿ: 'ಪ್ರೀತಿ ಯಾರ ಮೇಲೆ ಹುಟ್ಟುತ್ತೆ ಹೇಳಿ'? ಅಂತಿದ್ದಾರೆ ಪೃಥ್ವಿ ಅಂಬಾರ್ - ಜೂನಿ ಟ್ರೇಲರ್ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಪೃಥ್ವಿ ಅಂಬಾರ್. 'ದಿಯಾ' ಸ್ಟಾರ್ ಎಂದೇ ಫೇಮಸ್​. ವಿಭಿನ್ನ ಪ್ರೇಮಕಥೆ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅತಿ ಶೀಘ್ರದಲ್ಲಿ ಮೂರು ಸಿನಿಮಾಗಳು ತೆರೆಕಾಣಲಿದ್ದು, ಸ್ಯಾಂಡಲ್​​ವುಡ್​ ಅಂಗಳದಲ್ಲೀಗ 'ಮತ್ಸ್ಯಗಂಧ' ಚಿತ್ರದ ಘಮಲಿದೆ.

  • " class="align-text-top noRightClick twitterSection" data="">

'ದೂರದರ್ಶನ' ಚಿತ್ರದ ಬಳಿಕ ಪೃಥ್ವಿ ಅಂಬಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಮತ್ಸಗಂಧ'. ಶೀರ್ಷಿಕೆಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಕ್ರೇಜ್ ಹುಟ್ಟಿಸಿರೋ ಈ ಚಿತ್ರ ಒಂದಲ್ಲ ಒಂದು ವಿಚಾರವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಲವರ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬಾರ್ ಮತ್ಸ್ಯಗಂಧ ಚಿತ್ರದಲ್ಲಿ ಖಾಕಿ ತೊಟ್ಟು ಕಾನೂನು ಕಾಪಾಡುವ ರಕ್ಷಕನಾಗಿದ್ದಾರೆ‌‌. ಈ ಚಿತ್ರದ ಅಧಿಕೃತ ಟೀಸರ್ ಅನ್ನು ಮಿಲಿಯನ್​ಗಟ್ಟಲೇ ಜನರು ವೀಕ್ಷಿಸಿದ್ದು, ಭಾಗೀರಥಿ ಹಾಡು ಕೂಡ ಫುಲ್ ವೈರಲ್ ಆಗಿದೆ. ಬ್ಯಾಕ್ ಟು ಬ್ಯಾಕ್ ಕಂಟೆಂಟ್​​ಗಳೊಂದಿಗೆ ಮತ್ಸ್ಯಗಂಧ ಚಿತ್ರತಂಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸುತ್ತಿದೆ.

  • " class="align-text-top noRightClick twitterSection" data="">

ಮೊದಲು ರಿಲೀಸ್ ಆದ ಭಾಗೀರಥಿ ಹಾಡು ರೀಲ್ಸ್​​ನಲ್ಲಿ ಟ್ರೆಂಡಿಂಗ್ ಆಗಿದೆ. ಆನ್​​ಲೈನ್​​ನಲ್ಲಿ ಸಖತ್​​ ಸದ್ದು ಮಾಡುತ್ತಿದೆ. ಇದ್ರ ಬೆನ್ನಿಗೆ ರಿಲೀಸ್ ಆದ ಅಫೀಶಿಯಲ್ ಟೀಸರ್ ಕೂಡ ಸಖತ್​ ಸದ್ದು ಮಾಡಿದ್ದು, ವೀಕ್ಷಣೆಯಲ್ಲಿ ಮಿಲಿಯನ್ ದಾಟಿದೆ. ಇದೀಗ 'ಕುವಾ ಕುವಾ ಕುವಾಲೆ' ಅನ್ನೋ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಮತ್ಸ್ಯಗಂಧದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಪೃಥ್ವಿ ಅಂಬಾರ್ ಜೊತೆ ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾ ಬಳಗವಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಪೃಥ್ವಿ ಅಂಬಾರ್ ನಟನೆಯ ಮೂರು ಸಿನಿಮಾಗಳು ರಿಲೀಸ್​ಗೆ ಸಿದ್ಧ: 'ಮತ್ಸ್ಯಗಂಧ' ಟೀಸರ್ ನೋಡಿದ್ರಾ?

ಕನ್ನಡ ಪಿಚ್ಚರ್ ಅರ್ಪಿಸುವ, ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣ ಆಗಿರುವ ಈ ಚಿತ್ರ ಶೀಘ್ರದಲ್ಲೇ ತೆರೆಗಪ್ಪಳಿಸಲಿದೆ. ಬಿ.ಎಸ್ ವಿಶ್ವನಾಥ್ ನಿರ್ಮಾಣದ ಈ ಚಿತ್ರಕ್ಕೆ ದೇವರಾಜ್ ಪೂಜಾರಿ ಆ್ಯಕ್ಷನ್​​ ಕಟ್​​ ಹೇಳಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಟೀಸರ್ ಹಾಗೂ ಮೇಕಿಂಗ್ ವಿಚಾರದಲ್ಲಿ ಸದ್ದು ಮಾಡುತ್ತಿರುವ 'ಮತ್ಸ್ಯಗಂಧ' ಇದೇ ತಿಂಗಳ 23ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರ ಪ್ರವೇಶಿಸಲಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, 'ಮತ್ಸ್ಯಗಂಧ' ವೀಕ್ಷಿಸುವ ಕಾತರದಲ್ಲಿ ಸಿನಿಪ್ರಿಯರಿದ್ದಾರೆ.

ಇದನ್ನೂ ಓದಿ: 'ಪ್ರೀತಿ ಯಾರ ಮೇಲೆ ಹುಟ್ಟುತ್ತೆ ಹೇಳಿ'? ಅಂತಿದ್ದಾರೆ ಪೃಥ್ವಿ ಅಂಬಾರ್ - ಜೂನಿ ಟ್ರೇಲರ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.