ETV Bharat / entertainment

ಕೃತಿಚೌರ್ಯ ಆರೋಪ: 7 ವರ್ಷಗಳ ಬಳಿಕ ಮೌನ ಮುರಿದ 'ಶ್ರೀಮಂತುಡು' ನಿರ್ಮಾಪಕರು

author img

By ETV Bharat Karnataka Team

Published : Feb 2, 2024, 5:54 PM IST

2015ರಲ್ಲಿ ಬಂದ 'ಶ್ರೀಮಂತುಡು' ಸಿನಿಮಾ ಮೇಲೆ 2017ರಲ್ಲಿ ಕೃತಿಚೌರ್ಯ ಆರೋಪ ಕೇಳಿ ಬಂದಿತ್ತು. ಪ್ರಕರಣ ನ್ಯಾಯಾಲಯದಲ್ಲಿದ್ದು, ಚಿತ್ರ ನಿರ್ಮಾಪಕರು ಪ್ರತಿಕ್ರಿಯಿಸಿದ್ದಾರೆ.

SrimSrimanthudu Plagiarism Case  anthudu
'ಶ್ರೀಮಂತುಡು' ಮೇಲೆ ಕೃತಿಚೌರ್ಯ ಆರೋಪ

7 ವರ್ಷಗಳ ನಂತರ ದಕ್ಷಿಣ ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಮುಖ್ಯಭೂಮಿಕೆಯ 'ಶ್ರೀಮಂತುಡು' ಚಿತ್ರ ನಿರ್ಮಾಪಕರು ಕೃತಿಚೌರ್ಯ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. 2015ರಲ್ಲಿ 'ಶ್ರೀಮಂತುಡು' ಸಿನಿಮಾ ತೆರೆಕಂಡಿತು. ತೆಲುಗು ಚಲನಚಿತ್ರೋದ್ಯಮದಲ್ಲಿ ಬಿರುಗಾಳಿ ಎಬ್ಬಿಸಿ, ಬಾಕ್ಸ್ ಆಫೀಸ್​​ ಕೊಳ್ಳೆ ಹೊಡೆಯಿತು. ಅದಾಗ್ಯೂ, ಆರ್‌ಡಿ ವಿಲ್ಸನ್ ಎಂದೂ ಕರೆಯಲ್ಪಡುವ ತೆಲುಗು ಬರಹಗಾರ ಶರತ್ ಚಂದ್ರ ಅವರು 2017ರಲ್ಲಿ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯ ಮತ್ತು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಚಿತ್ರದ ವಿರುದ್ಧ ಕೃತಿಚೌರ್ಯ ಪ್ರಕರಣವನ್ನು ದಾಖಲಿಸಿದರು. ಇದು ಚಲನಚಿತ್ರ ನಿರ್ಮಾಪಕರಿಗೆ ಕಾನೂನು ಹೋರಾಟಕ್ಕಿಳಿಯುವಂತೆ ಮಾಡಿತು.

SrimSrimanthudu Plagiarism Case  anthudu
ಮೈತ್ರಿ ಮೂವಿ ಮೇಕರ್ಸ್ ಹೇಳಿಕೆ

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ರದ್ದುಗೊಳಿಸುವ ಹಲವು ಪ್ರಯತ್ನಗಳ ಹೊರತಾಗಿಯೂ, ಶ್ರೀಮಂತುಡು ಚಿತ್ರ ತಯಾರಕರ ಅರ್ಜಿಯನ್ನು ಜನವರಿ 30 ರಂದು ವಜಾಗೊಳಿಸಲಾಯಿತು. ಇದು ತೆಲಂಗಾಣ ಹೈಕೋರ್ಟ್‌ನಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಕಳೆದ ಏಳು ವರ್ಷಗಳಿಂದ ಮೌನ ವಹಿಸಿದ್ದ ಶ್ರೀಮಂತುಡು ನಿರ್ಮಾಪಕರು, ಕಾನೂನು ಪ್ರಕ್ರಿಯೆಯ ಈ ಬೆಳವಣಿಗೆಯ ನಂತರ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ಮತ್ತು ಸಂಯಮ ವಹಿಸುವಂತೆ ಒತ್ತಾಯಿಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೇಳಿಕೆ ಹೀಗಿದೆ: "ಈ ವಿಷಯ ಪ್ರಸ್ತುತ ಕಾನೂನು ಪರಿಶೀಲನೆಯಲ್ಲಿದೆ. ಈವರೆಗೆ ಯಾವುದೇ ವಿಚಾರಣೆಗಳು ಅಥವಾ ತೀರ್ಪುಗಳಿಲ್ಲ. ನಾವು ಮಾಧ್ಯಮಗಳು ಮತ್ತು ಕಮೆಂಟೇಟರ್ಸ್​​ಗೆ ಅಕಾಲಿಕ ತೀರ್ಮಾನದಿಂದ ದೂರವಿರಲು ಒತ್ತಾಯಿಸುತ್ತೇವೆ. ಕಾನೂನು ಫಲಿತಾಂಶಗಳಿಗೆ ಆದ್ಯತೆ ಕೊಡುವುದಕ್ಕೆ ಒತ್ತು ನೀಡೋಣ" ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ ಹೇಳಿಕೆಯು, ಕೃತಿಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಂತೆ ಕೇಳಿಕೊಂಡಿದೆ. ಕಾನೂನು ಪ್ರಕ್ರಿಯೆಯಲ್ಲಿ ತಾಳ್ಮೆ ಮತ್ತು ನಂಬಿಕೆ ಇರಿಸುವಂತೆ ನಾವು ಮನವಿ ಮಾಡುತ್ತೇವೆ. ನ್ಯಾಯೋಚಿತತೆ ಮತ್ತು ಸಮಗ್ರತೆಯ ತತ್ವಗಳನ್ನು ಪ್ರತಿಪಾದಿಸುತ್ತೇವೆ ಎಂದು ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: ಯೋಗರಾಜ್ ಭಟ್ ನಿರ್ಮಾಣದ 'ಉಡಾಳ' ಸಿನಿಮಾಗೆ ಡಾಲಿ ಸಾಥ್

ಕಾದಂಬರಿಕಾರ ಶರತ್, ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಮಹೇಶ್ ಬಾಬು, ಕೊರಟಾಲ ಶಿವ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರರು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಹೇಳಿಕೆ ನೀಡಲು ಒತ್ತಾಯಿಸಲ್ಪಟ್ಟಿದ್ದಾರೇನೋ ಎಂಬುದು ನನ್ನ ಗಮನಕ್ಕೆ ಬಂದ ವಿಚಾರ. ಆದರೆ ನನ್ನ ಈ ಹೋರಾಟ ಪರಿಹಾರ ಪಡೆಯೋ ಬಗ್ಗೆ ಅಲ್ಲ, ನನ್ನ ಕೆಲಸಕ್ಕೆ ಕ್ರೆಡಿಟ್ ಪಡೆಯುವುದರ ಬಗ್ಗೆ ಎಂದು ಸ್ಪಷ್ಟಪಡಿಸಿದ್ದರು. "ಇದು ಹಣದ ಬಗ್ಗೆ ಅಲ್ಲ; ಇದು ನಾನೋರ್ವ ಬರಹಗಾರನಾಗಿ ಗುರುತಿಸುವಿಕೆಗೆ ಸಂಬಂಧಿಸಿದೆ. ಕೊರಟಾಲ ಶಿವ ಅವರು ನ್ಯಾಯಾಲಯದಲ್ಲಿ ಮತ್ತು ಚಿತ್ರರಂಗದಲ್ಲಿ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ತಿಳಿಸಿದ್ದರು. ತಮ್ಮ ಆರೋಪಗಳಿಗೆ ಪುರಾವೆಗಳನ್ನು ಹೊಂದಿರುವುದಾಗಿ ಮತ್ತು ಮಹೇಶ್ ಬಾಬು ವಿರುದ್ಧ ಪ್ರಕರಣ ದಾಖಲಿಸಲು ಉದ್ದೇಶಿಸಿರುವುದಾಗಿಯೂ ಶರತ್ ತಿಳಿಸಿದ್ದರು.

ಇದನ್ನೂ ಓದಿ: ಮೊದಲ ಮಹಿಳಾ ಸ್ಪೈ ಸಿನಿಮಾಗೆ ಆಲಿಯಾ ಭಟ್ ನಾಯಕ ನಟಿ

'ಶ್ರೀಮಂತುಡು' ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಮಿಲಿಯನೇರ್ ಮಗನ ಕಥೆಯನ್ನು ವಿವರಿಸುತ್ತದೆ. ಸಾಮಾಜಿಕವಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಯುತ್ತಾರೆ. ಸ್ಥಳೀಯ ಹಳ್ಳಿಯ ಅಭಿವೃದ್ಧಿ ಮಾಡೋ ಮುಖೇನ ತಂದೆ ಎದುರು ನಿಲ್ಲುತ್ತಾನೆ. ಪ್ರಗತಿಗೆ ಅಡ್ಡಿಪಡಿಸುವವರನ್ನು ಎದುರಿಸುತ್ತಾನೆ. ಚಿತ್ರದಲ್ಲಿ ಮಹೇಶ್ ಬಾಬು ಜೊತೆ, ಶ್ರುತಿ ಹಾಸನ್, ಜಗಪತಿ ಬಾಬು, ಸುಕನ್ಯಾ ಮತ್ತು ವೆನ್ನೆಲ ಕಿಶೋರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

7 ವರ್ಷಗಳ ನಂತರ ದಕ್ಷಿಣ ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಮುಖ್ಯಭೂಮಿಕೆಯ 'ಶ್ರೀಮಂತುಡು' ಚಿತ್ರ ನಿರ್ಮಾಪಕರು ಕೃತಿಚೌರ್ಯ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. 2015ರಲ್ಲಿ 'ಶ್ರೀಮಂತುಡು' ಸಿನಿಮಾ ತೆರೆಕಂಡಿತು. ತೆಲುಗು ಚಲನಚಿತ್ರೋದ್ಯಮದಲ್ಲಿ ಬಿರುಗಾಳಿ ಎಬ್ಬಿಸಿ, ಬಾಕ್ಸ್ ಆಫೀಸ್​​ ಕೊಳ್ಳೆ ಹೊಡೆಯಿತು. ಅದಾಗ್ಯೂ, ಆರ್‌ಡಿ ವಿಲ್ಸನ್ ಎಂದೂ ಕರೆಯಲ್ಪಡುವ ತೆಲುಗು ಬರಹಗಾರ ಶರತ್ ಚಂದ್ರ ಅವರು 2017ರಲ್ಲಿ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯ ಮತ್ತು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಚಿತ್ರದ ವಿರುದ್ಧ ಕೃತಿಚೌರ್ಯ ಪ್ರಕರಣವನ್ನು ದಾಖಲಿಸಿದರು. ಇದು ಚಲನಚಿತ್ರ ನಿರ್ಮಾಪಕರಿಗೆ ಕಾನೂನು ಹೋರಾಟಕ್ಕಿಳಿಯುವಂತೆ ಮಾಡಿತು.

SrimSrimanthudu Plagiarism Case  anthudu
ಮೈತ್ರಿ ಮೂವಿ ಮೇಕರ್ಸ್ ಹೇಳಿಕೆ

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ರದ್ದುಗೊಳಿಸುವ ಹಲವು ಪ್ರಯತ್ನಗಳ ಹೊರತಾಗಿಯೂ, ಶ್ರೀಮಂತುಡು ಚಿತ್ರ ತಯಾರಕರ ಅರ್ಜಿಯನ್ನು ಜನವರಿ 30 ರಂದು ವಜಾಗೊಳಿಸಲಾಯಿತು. ಇದು ತೆಲಂಗಾಣ ಹೈಕೋರ್ಟ್‌ನಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಕಳೆದ ಏಳು ವರ್ಷಗಳಿಂದ ಮೌನ ವಹಿಸಿದ್ದ ಶ್ರೀಮಂತುಡು ನಿರ್ಮಾಪಕರು, ಕಾನೂನು ಪ್ರಕ್ರಿಯೆಯ ಈ ಬೆಳವಣಿಗೆಯ ನಂತರ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ಮತ್ತು ಸಂಯಮ ವಹಿಸುವಂತೆ ಒತ್ತಾಯಿಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೇಳಿಕೆ ಹೀಗಿದೆ: "ಈ ವಿಷಯ ಪ್ರಸ್ತುತ ಕಾನೂನು ಪರಿಶೀಲನೆಯಲ್ಲಿದೆ. ಈವರೆಗೆ ಯಾವುದೇ ವಿಚಾರಣೆಗಳು ಅಥವಾ ತೀರ್ಪುಗಳಿಲ್ಲ. ನಾವು ಮಾಧ್ಯಮಗಳು ಮತ್ತು ಕಮೆಂಟೇಟರ್ಸ್​​ಗೆ ಅಕಾಲಿಕ ತೀರ್ಮಾನದಿಂದ ದೂರವಿರಲು ಒತ್ತಾಯಿಸುತ್ತೇವೆ. ಕಾನೂನು ಫಲಿತಾಂಶಗಳಿಗೆ ಆದ್ಯತೆ ಕೊಡುವುದಕ್ಕೆ ಒತ್ತು ನೀಡೋಣ" ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ ಹೇಳಿಕೆಯು, ಕೃತಿಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಂತೆ ಕೇಳಿಕೊಂಡಿದೆ. ಕಾನೂನು ಪ್ರಕ್ರಿಯೆಯಲ್ಲಿ ತಾಳ್ಮೆ ಮತ್ತು ನಂಬಿಕೆ ಇರಿಸುವಂತೆ ನಾವು ಮನವಿ ಮಾಡುತ್ತೇವೆ. ನ್ಯಾಯೋಚಿತತೆ ಮತ್ತು ಸಮಗ್ರತೆಯ ತತ್ವಗಳನ್ನು ಪ್ರತಿಪಾದಿಸುತ್ತೇವೆ ಎಂದು ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: ಯೋಗರಾಜ್ ಭಟ್ ನಿರ್ಮಾಣದ 'ಉಡಾಳ' ಸಿನಿಮಾಗೆ ಡಾಲಿ ಸಾಥ್

ಕಾದಂಬರಿಕಾರ ಶರತ್, ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಮಹೇಶ್ ಬಾಬು, ಕೊರಟಾಲ ಶಿವ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರರು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಹೇಳಿಕೆ ನೀಡಲು ಒತ್ತಾಯಿಸಲ್ಪಟ್ಟಿದ್ದಾರೇನೋ ಎಂಬುದು ನನ್ನ ಗಮನಕ್ಕೆ ಬಂದ ವಿಚಾರ. ಆದರೆ ನನ್ನ ಈ ಹೋರಾಟ ಪರಿಹಾರ ಪಡೆಯೋ ಬಗ್ಗೆ ಅಲ್ಲ, ನನ್ನ ಕೆಲಸಕ್ಕೆ ಕ್ರೆಡಿಟ್ ಪಡೆಯುವುದರ ಬಗ್ಗೆ ಎಂದು ಸ್ಪಷ್ಟಪಡಿಸಿದ್ದರು. "ಇದು ಹಣದ ಬಗ್ಗೆ ಅಲ್ಲ; ಇದು ನಾನೋರ್ವ ಬರಹಗಾರನಾಗಿ ಗುರುತಿಸುವಿಕೆಗೆ ಸಂಬಂಧಿಸಿದೆ. ಕೊರಟಾಲ ಶಿವ ಅವರು ನ್ಯಾಯಾಲಯದಲ್ಲಿ ಮತ್ತು ಚಿತ್ರರಂಗದಲ್ಲಿ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ತಿಳಿಸಿದ್ದರು. ತಮ್ಮ ಆರೋಪಗಳಿಗೆ ಪುರಾವೆಗಳನ್ನು ಹೊಂದಿರುವುದಾಗಿ ಮತ್ತು ಮಹೇಶ್ ಬಾಬು ವಿರುದ್ಧ ಪ್ರಕರಣ ದಾಖಲಿಸಲು ಉದ್ದೇಶಿಸಿರುವುದಾಗಿಯೂ ಶರತ್ ತಿಳಿಸಿದ್ದರು.

ಇದನ್ನೂ ಓದಿ: ಮೊದಲ ಮಹಿಳಾ ಸ್ಪೈ ಸಿನಿಮಾಗೆ ಆಲಿಯಾ ಭಟ್ ನಾಯಕ ನಟಿ

'ಶ್ರೀಮಂತುಡು' ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಮಿಲಿಯನೇರ್ ಮಗನ ಕಥೆಯನ್ನು ವಿವರಿಸುತ್ತದೆ. ಸಾಮಾಜಿಕವಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಯುತ್ತಾರೆ. ಸ್ಥಳೀಯ ಹಳ್ಳಿಯ ಅಭಿವೃದ್ಧಿ ಮಾಡೋ ಮುಖೇನ ತಂದೆ ಎದುರು ನಿಲ್ಲುತ್ತಾನೆ. ಪ್ರಗತಿಗೆ ಅಡ್ಡಿಪಡಿಸುವವರನ್ನು ಎದುರಿಸುತ್ತಾನೆ. ಚಿತ್ರದಲ್ಲಿ ಮಹೇಶ್ ಬಾಬು ಜೊತೆ, ಶ್ರುತಿ ಹಾಸನ್, ಜಗಪತಿ ಬಾಬು, ಸುಕನ್ಯಾ ಮತ್ತು ವೆನ್ನೆಲ ಕಿಶೋರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.