ETV Bharat / entertainment

ಬಣ್ಣದ ಲೋಕದಲ್ಲಿ ಬಗೆಬಗೆ ಕನಸು ಕಂಡ ಕರಾವಳಿ ಬೆಡಗಿಗೆ ನಿರಾಶೆ: ಎರಿಕಾ ಫರ್ನಾಂಡಿಸ್ ಹೇಳಿದ್ದೇನು ಗೊತ್ತೇ? - Erica Fernandes

ಸಿನಿಮಾ ಎಂಬ ಕಲರ್​ಫುಲ್ ಜಗತ್ತಿನ ಕರಾಳ ಚಿತ್ರವನ್ನು ನಟಿ ಎರಿಕಾ ಫರ್ನಾಂಡಿಸ್ ಬಹಿರಂಗಪಡಿಸಿದ್ದಾರೆ.

author img

By ETV Bharat Karnataka Team

Published : Apr 10, 2024, 8:10 PM IST

Erica Fernandes
ನಟಿ ಎರಿಕಾ ಫರ್ನಾಂಡಿಸ್

ಸಿನಿಮಾ ಎಂಬ ಬಣ್ಣದ ಲೋಕ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ. ಹೊರಗಡೆಯಿಂದ ಈ ಲೋಕ ತುಂಬಾನೇ ಕಲರ್‌ಫುಲ್ ಅನಿಸುತ್ತದೆ. ಆದರೆ ಒಳಹೊಕ್ಕಾಗಲೇ ಅಸಲಿ ವಿಚಾರ ಗೊತ್ತಾಗೋದು. ನಟಿ ಎರಿಕಾ ಫರ್ನಾಂಡಿಸ್ ಅವರಿಗೂ ಇಂಥದ್ದೇ ಒಂದು ಅನುಭವವಾಗಿದೆಯಂತೆ.

ಎರಿಕಾ ಫರ್ನಾಂಡಿಸ್ ಗೊತ್ತಲ್ವೇ? ಪುನೀತ್ ರಾಜ್​ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮಂಗಳೂರಿನ ಬೆಡಗಿ. ನಿನ್ನಿಂದಲೇ ಚಿತ್ರಕ್ಕೂ ಮುನ್ನ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದ ಇವರು, ನಿನ್ನಿಂದಲೇ ಸಿನಿಮಾ ನಂತರ ಮುಂಬೈ ವಿಮಾನ ಹತ್ತಿದ್ದರು. ಅಲ್ಲಿ 'ಬಬ್ಲೂ ಹ್ಯಾಪಿ ಹೈ' ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದರು. ವಿಶೇಷ ಅಂದರೆ, ಎರಿಕಾ ಫರ್ನಾಂಡಿಸ್ ಬದುಕಿನಲ್ಲಿ ಇದೆಲ್ಲವೂ ಘಟಿಸಿದ್ದು ಕೇವಲ ಒಂದೇ ವರ್ಷದಲ್ಲಿ.

ಒಂದೇ ವರ್ಷದಲ್ಲಿ ತಮಿಳು, ಕನ್ನಡ ಹಾಗೂ ಹಿಂದಿಯಲ್ಲಿ ನಟಿಸಿದ್ದ ಎರಿಕಾ ಅವರನ್ನು ತಡೆದು ನಿಲ್ಲಿಸುವವರು ಯಾರೂ ಇಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಒಂದೇ ವರ್ಷದಲ್ಲಿ ಮೂರು ಭಾಷೆಯಲ್ಲಿ ಬಣ್ಣ ಹಚ್ಚಿದ ಸಂಭ್ರಮ ಎರಿಕಾ ಅವರಲ್ಲೂ ಇತ್ತು. 2014ರಲ್ಲಿ ಈ ಸಂಭ್ರಮ ಇನ್ನೂ ದುಪ್ಪಟ್ಟಾಯಿತು. 2014ರಲ್ಲೂ ಕೂಡ ಮೂರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಆ ಮೂರರಲ್ಲಿ ಒಂದು ತಮಿಳು ಚಿತ್ರವಾದರೆ, ಮಿಕ್ಕೆರಡು ತೆಲುಗು ಸಿನಿಮಾಗಳಾಗಿದ್ದವು.

ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ಬೆಳ್ಳಿ ಪರದೆ ಮೇಲೆ ಮಿಂಚಬೇಕಿದ್ದ ನಟಿ ಏಕಾಏಕಿ ಕಾಣೆಯಾದರು. ಎಲ್ಲಿ ಹೋದರು? ಎಂದು ಎಲ್ಲರೂ ಹುಡುಕುವ ಸಂದರ್ಭದಲ್ಲಿ ಇವರು ಕಂಡಿದ್ದು ಕಿರುತೆರೆಯಲ್ಲಿ. ಚಿತ್ರರಂಗದಲ್ಲಿ ನಾಯಕಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದ ಎರಿಕಾರನ್ನು ಕಿರುತೆರೆಯಲ್ಲಿ ಕಂಡ ಅನೇಕರು ನಿಜಕ್ಕೂ ಅಚ್ಚರಿಗೊಳಗಾಗಿದ್ದರು. ಹಿರಿತೆರೆ ಬಿಟ್ಟು ಕಿರುತೆರೆಯಲ್ಲಿ ಏನ್ಮಾಡ್ತಿದ್ದಾರೆ ಎಂದು ಪ್ರಶ್ನೆಯನ್ನೂ ಕೇಳಿದ್ದರು. ಆ ಪ್ರಶ್ನೆಗಳಿಗೆ ಎರಿಕಾ ಫರ್ನಾಂಡಿಸ್ ಈಗ ಉತ್ತರ ಕೊಟ್ಟಿದ್ದಾರೆ. ಹಳಿ ತಪ್ಪಿದ್ಹೇಗೆ? ತಪ್ಪಲು ಕಾರಣವೇನು? ಎನ್ನುವುದನ್ನು ವಿವರಿಸಿದ್ದಾರೆ. ಬಾಲಿವುಡ್​ನ ಮತ್ತೊಂದು ಮುಖ ಕಂಡು ಬೆಚ್ಚಿ ಬಿದ್ದಿದ್ದೆ ಅಂದಿದ್ದಾರೆ.

Erica Fernandes
ನಟಿ ಎರಿಕಾ ಫರ್ನಾಂಡಿಸ್

ಹೌದು, ಸಂದರ್ಶನವೊಂದರಲ್ಲಿ ಎರಿಕಾ ತಮ್ಮ ಮನದ ನೋವು ಹಂಚಿಕೊಂಡರು. ಬಾಲಿವುಡ್​ನಲ್ಲಿ ನೆಲೆಯೂರಬೇಕೆಂಬ ಕನಸು ಹೊತ್ತು, ಮುಂಬೈನಲ್ಲಿ ನಾನು ಅಲೆದಾಡಿದ್ದೆ. ಅನೇಕ ಕಡೆ ಆಡಿಷನ್‌ಗಳನ್ನೂ ಕೊಟ್ಟು ಬಂದಿದ್ದೆ. ಆಡಿಷನ್ ಕೊಟ್ಟ ನಂತರ ನನ್ನ ಅಭಿನಯದಿಂದ ಪ್ರಭಾವಕ್ಕೊಳಗಾದ ಅನೇಕ ನಿರ್ದೇಶಕರು ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂಬ ಆಶ್ವಾಸನೆಯನ್ನೂ ಕೊಟ್ಟು ಕಳಿಸಿದ್ದರು. ಆದರೆ ಆ ನಂತರ ಕೇಳಿದಾಗ ನಿಮ್ಮ ಬದಲು ಸ್ಟಾರ್ ಹೀರೋಯಿನ್​ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು. ಇನ್ನೂ ಹಲವರು ಸ್ಟಾರ್ ಕಿಡ್ಸ್​​ಗೆ ಮಣೆ ಹಾಕಿದರು. ಯಾರು ಏನೇ ಹೇಳಲಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಇದ್ದೇ ಇದೆ ಎನ್ನುತ್ತಾರೆ ಎರಿಕಾ ಫರ್ನಾಂಡಿಸ್.

ಇದೇ ಸಮಯದಲ್ಲಿ ತಮ್ಮನ್ನು ಆಡಿಕೊಂಡವರ ಬಗ್ಗೆಯೂ ಮಾತನಾಡಿದರು. ಅನೇಕರು ನನ್ನ ದೇಹದ ಆಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನೋಡಲು ಒಣ ಕಡ್ಡಿಯಂತಿರುವ ನೀನು ನಾಯಕಿನಾ? ಎಂದು ಕಿಂಡಲ್ ಮಾಡಿದರು. ನನ್ನ ಎತ್ತರವನ್ನು ಅಣಕಿಸಿದರು. ಇದೆಲ್ಲದರ ಪರಿಣಾಮ ಕೆಲ ದಿನ ನಾನು ಮಾನಸಿಕ ಖಿನ್ನತೆಗೂ ಒಳಗಾಗಿದ್ದೆ ಎಂದು ಕಣ್ಣೀರಿಟ್ಟರು.

ಕೇವಲ ಬಾಲಿವುಡ್​ನವರ ಜಾತಕವನ್ನಷ್ಟೇ ಎರಿಕಾ ಬಯಲು ಮಾಡಿಲ್ಲ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವವನ್ನೂ ಕೂಡ ಸಂದರ್ಶನದಲ್ಲಿ ಹಂಚಿಕೊಂಡರು. ದಕ್ಷಿಣದ ಚಿತ್ರವೊಂದಕ್ಕೆ ನಾನು ನಾಯಕಿಯಾಗಿ ಆಯ್ಕೆಯಾಗಿದ್ದೆ. ಎರಡು ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಆ ನಂತರ ಹೇಳದೇ ಕೇಳದೇ ಆ ಚಿತ್ರದಿಂದ ನನ್ನನ್ನು ತೆಗೆದುಹಾಕಲಾಯಿತು. ಪತ್ರಕರ್ತರೊಬ್ಬರು ಕರೆ ಮಾಡಿದಾಗಲೇ ನಾನು ಚಿತ್ರದಲ್ಲಿ ಇಲ್ಲ ಎನ್ನುವ ವಿಚಾರ ನನಗೆ ಗೊತ್ತಾಗಿತ್ತು ಎಂದರು.

ಇದನ್ನೂ ಓದಿ: 'ದೇವರ': ಉತ್ತರ ಭಾರತದ ವಿತರಣಾ ಹಕ್ಕು ಪಡೆದ ಕರಣ್​ ಜೋಹರ್ ಕಂಪನಿ - Devara

ಇಷ್ಟೆಲ್ಲಾ ಅಡೆ-ತಡೆ, ನೋವು, ಅವಮಾನಗಳನ್ನು ಎದುರಿಸಿದ ಎರಿಕಾ ಕೊನೆಯದಾಗಿ ಕಿರುತೆರೆಗೆ ಕಾಲಿಡುವ ಮನಸು ಮಾಡಿದರು. ಖುದ್ದು ಅವರೇ ಹೇಳಿದಂತೆ, ತಲ್ಲಣ ಸೃಷ್ಟಿಯಾಗಿತ್ತು. ಬದುಕಿನ ಅನಿವಾರ್ಯತೆ ಮನಸ್ಥಿತಿಯನ್ನು ಬದಲಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ತಾನು ಸಾಬೀತು ಮಾಡಿಕೊಳ್ಳಬೇಕಿತ್ತು. ಈ ಕಾರಣಕ್ಕೆ ಕಿರುತೆರೆಗೆ ಕಾಲಿಡಲು ನಿರ್ಧಾರ ಮಾಡಿದೆ ಎಂದಿರುವ ಎರಿಕಾ ಸದ್ಯ ಸ್ಮಾಲ್ ಸ್ಕ್ರೀನ್​ನಲ್ಲಿ ನಾನು ಹ್ಯಾಪಿಯಾಗಿದ್ದೇನೆ ಎಂದಿದ್ದಾರೆ. ವೆಬ್ ಸರಣಿಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಷ್ಟೇ ಸಾಕು. ಅವಮಾನಗಳಿಂದ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ ಎನ್ನುತ್ತಾ ಮಾತು ಮುಗಿಸಿದರು ಎರಿಕಾ ಫರ್ನಾಂಡಿಸ್.

ಇದನ್ನೂ ಓದಿ: ರಜನಿಕಾಂತ್ ಅಭಿನಯದ 'ತಲೈವರ್ 171'ರಲ್ಲಿ ಶಾರುಖ್​ ಖಾನ್? - Thalaivar 171

ಸಿನಿಮಾ ಎಂಬ ಬಣ್ಣದ ಲೋಕ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ. ಹೊರಗಡೆಯಿಂದ ಈ ಲೋಕ ತುಂಬಾನೇ ಕಲರ್‌ಫುಲ್ ಅನಿಸುತ್ತದೆ. ಆದರೆ ಒಳಹೊಕ್ಕಾಗಲೇ ಅಸಲಿ ವಿಚಾರ ಗೊತ್ತಾಗೋದು. ನಟಿ ಎರಿಕಾ ಫರ್ನಾಂಡಿಸ್ ಅವರಿಗೂ ಇಂಥದ್ದೇ ಒಂದು ಅನುಭವವಾಗಿದೆಯಂತೆ.

ಎರಿಕಾ ಫರ್ನಾಂಡಿಸ್ ಗೊತ್ತಲ್ವೇ? ಪುನೀತ್ ರಾಜ್​ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮಂಗಳೂರಿನ ಬೆಡಗಿ. ನಿನ್ನಿಂದಲೇ ಚಿತ್ರಕ್ಕೂ ಮುನ್ನ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದ ಇವರು, ನಿನ್ನಿಂದಲೇ ಸಿನಿಮಾ ನಂತರ ಮುಂಬೈ ವಿಮಾನ ಹತ್ತಿದ್ದರು. ಅಲ್ಲಿ 'ಬಬ್ಲೂ ಹ್ಯಾಪಿ ಹೈ' ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದರು. ವಿಶೇಷ ಅಂದರೆ, ಎರಿಕಾ ಫರ್ನಾಂಡಿಸ್ ಬದುಕಿನಲ್ಲಿ ಇದೆಲ್ಲವೂ ಘಟಿಸಿದ್ದು ಕೇವಲ ಒಂದೇ ವರ್ಷದಲ್ಲಿ.

ಒಂದೇ ವರ್ಷದಲ್ಲಿ ತಮಿಳು, ಕನ್ನಡ ಹಾಗೂ ಹಿಂದಿಯಲ್ಲಿ ನಟಿಸಿದ್ದ ಎರಿಕಾ ಅವರನ್ನು ತಡೆದು ನಿಲ್ಲಿಸುವವರು ಯಾರೂ ಇಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಒಂದೇ ವರ್ಷದಲ್ಲಿ ಮೂರು ಭಾಷೆಯಲ್ಲಿ ಬಣ್ಣ ಹಚ್ಚಿದ ಸಂಭ್ರಮ ಎರಿಕಾ ಅವರಲ್ಲೂ ಇತ್ತು. 2014ರಲ್ಲಿ ಈ ಸಂಭ್ರಮ ಇನ್ನೂ ದುಪ್ಪಟ್ಟಾಯಿತು. 2014ರಲ್ಲೂ ಕೂಡ ಮೂರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಆ ಮೂರರಲ್ಲಿ ಒಂದು ತಮಿಳು ಚಿತ್ರವಾದರೆ, ಮಿಕ್ಕೆರಡು ತೆಲುಗು ಸಿನಿಮಾಗಳಾಗಿದ್ದವು.

ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ಬೆಳ್ಳಿ ಪರದೆ ಮೇಲೆ ಮಿಂಚಬೇಕಿದ್ದ ನಟಿ ಏಕಾಏಕಿ ಕಾಣೆಯಾದರು. ಎಲ್ಲಿ ಹೋದರು? ಎಂದು ಎಲ್ಲರೂ ಹುಡುಕುವ ಸಂದರ್ಭದಲ್ಲಿ ಇವರು ಕಂಡಿದ್ದು ಕಿರುತೆರೆಯಲ್ಲಿ. ಚಿತ್ರರಂಗದಲ್ಲಿ ನಾಯಕಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದ ಎರಿಕಾರನ್ನು ಕಿರುತೆರೆಯಲ್ಲಿ ಕಂಡ ಅನೇಕರು ನಿಜಕ್ಕೂ ಅಚ್ಚರಿಗೊಳಗಾಗಿದ್ದರು. ಹಿರಿತೆರೆ ಬಿಟ್ಟು ಕಿರುತೆರೆಯಲ್ಲಿ ಏನ್ಮಾಡ್ತಿದ್ದಾರೆ ಎಂದು ಪ್ರಶ್ನೆಯನ್ನೂ ಕೇಳಿದ್ದರು. ಆ ಪ್ರಶ್ನೆಗಳಿಗೆ ಎರಿಕಾ ಫರ್ನಾಂಡಿಸ್ ಈಗ ಉತ್ತರ ಕೊಟ್ಟಿದ್ದಾರೆ. ಹಳಿ ತಪ್ಪಿದ್ಹೇಗೆ? ತಪ್ಪಲು ಕಾರಣವೇನು? ಎನ್ನುವುದನ್ನು ವಿವರಿಸಿದ್ದಾರೆ. ಬಾಲಿವುಡ್​ನ ಮತ್ತೊಂದು ಮುಖ ಕಂಡು ಬೆಚ್ಚಿ ಬಿದ್ದಿದ್ದೆ ಅಂದಿದ್ದಾರೆ.

Erica Fernandes
ನಟಿ ಎರಿಕಾ ಫರ್ನಾಂಡಿಸ್

ಹೌದು, ಸಂದರ್ಶನವೊಂದರಲ್ಲಿ ಎರಿಕಾ ತಮ್ಮ ಮನದ ನೋವು ಹಂಚಿಕೊಂಡರು. ಬಾಲಿವುಡ್​ನಲ್ಲಿ ನೆಲೆಯೂರಬೇಕೆಂಬ ಕನಸು ಹೊತ್ತು, ಮುಂಬೈನಲ್ಲಿ ನಾನು ಅಲೆದಾಡಿದ್ದೆ. ಅನೇಕ ಕಡೆ ಆಡಿಷನ್‌ಗಳನ್ನೂ ಕೊಟ್ಟು ಬಂದಿದ್ದೆ. ಆಡಿಷನ್ ಕೊಟ್ಟ ನಂತರ ನನ್ನ ಅಭಿನಯದಿಂದ ಪ್ರಭಾವಕ್ಕೊಳಗಾದ ಅನೇಕ ನಿರ್ದೇಶಕರು ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂಬ ಆಶ್ವಾಸನೆಯನ್ನೂ ಕೊಟ್ಟು ಕಳಿಸಿದ್ದರು. ಆದರೆ ಆ ನಂತರ ಕೇಳಿದಾಗ ನಿಮ್ಮ ಬದಲು ಸ್ಟಾರ್ ಹೀರೋಯಿನ್​ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು. ಇನ್ನೂ ಹಲವರು ಸ್ಟಾರ್ ಕಿಡ್ಸ್​​ಗೆ ಮಣೆ ಹಾಕಿದರು. ಯಾರು ಏನೇ ಹೇಳಲಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಇದ್ದೇ ಇದೆ ಎನ್ನುತ್ತಾರೆ ಎರಿಕಾ ಫರ್ನಾಂಡಿಸ್.

ಇದೇ ಸಮಯದಲ್ಲಿ ತಮ್ಮನ್ನು ಆಡಿಕೊಂಡವರ ಬಗ್ಗೆಯೂ ಮಾತನಾಡಿದರು. ಅನೇಕರು ನನ್ನ ದೇಹದ ಆಕಾರದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನೋಡಲು ಒಣ ಕಡ್ಡಿಯಂತಿರುವ ನೀನು ನಾಯಕಿನಾ? ಎಂದು ಕಿಂಡಲ್ ಮಾಡಿದರು. ನನ್ನ ಎತ್ತರವನ್ನು ಅಣಕಿಸಿದರು. ಇದೆಲ್ಲದರ ಪರಿಣಾಮ ಕೆಲ ದಿನ ನಾನು ಮಾನಸಿಕ ಖಿನ್ನತೆಗೂ ಒಳಗಾಗಿದ್ದೆ ಎಂದು ಕಣ್ಣೀರಿಟ್ಟರು.

ಕೇವಲ ಬಾಲಿವುಡ್​ನವರ ಜಾತಕವನ್ನಷ್ಟೇ ಎರಿಕಾ ಬಯಲು ಮಾಡಿಲ್ಲ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವವನ್ನೂ ಕೂಡ ಸಂದರ್ಶನದಲ್ಲಿ ಹಂಚಿಕೊಂಡರು. ದಕ್ಷಿಣದ ಚಿತ್ರವೊಂದಕ್ಕೆ ನಾನು ನಾಯಕಿಯಾಗಿ ಆಯ್ಕೆಯಾಗಿದ್ದೆ. ಎರಡು ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಆ ನಂತರ ಹೇಳದೇ ಕೇಳದೇ ಆ ಚಿತ್ರದಿಂದ ನನ್ನನ್ನು ತೆಗೆದುಹಾಕಲಾಯಿತು. ಪತ್ರಕರ್ತರೊಬ್ಬರು ಕರೆ ಮಾಡಿದಾಗಲೇ ನಾನು ಚಿತ್ರದಲ್ಲಿ ಇಲ್ಲ ಎನ್ನುವ ವಿಚಾರ ನನಗೆ ಗೊತ್ತಾಗಿತ್ತು ಎಂದರು.

ಇದನ್ನೂ ಓದಿ: 'ದೇವರ': ಉತ್ತರ ಭಾರತದ ವಿತರಣಾ ಹಕ್ಕು ಪಡೆದ ಕರಣ್​ ಜೋಹರ್ ಕಂಪನಿ - Devara

ಇಷ್ಟೆಲ್ಲಾ ಅಡೆ-ತಡೆ, ನೋವು, ಅವಮಾನಗಳನ್ನು ಎದುರಿಸಿದ ಎರಿಕಾ ಕೊನೆಯದಾಗಿ ಕಿರುತೆರೆಗೆ ಕಾಲಿಡುವ ಮನಸು ಮಾಡಿದರು. ಖುದ್ದು ಅವರೇ ಹೇಳಿದಂತೆ, ತಲ್ಲಣ ಸೃಷ್ಟಿಯಾಗಿತ್ತು. ಬದುಕಿನ ಅನಿವಾರ್ಯತೆ ಮನಸ್ಥಿತಿಯನ್ನು ಬದಲಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ತಾನು ಸಾಬೀತು ಮಾಡಿಕೊಳ್ಳಬೇಕಿತ್ತು. ಈ ಕಾರಣಕ್ಕೆ ಕಿರುತೆರೆಗೆ ಕಾಲಿಡಲು ನಿರ್ಧಾರ ಮಾಡಿದೆ ಎಂದಿರುವ ಎರಿಕಾ ಸದ್ಯ ಸ್ಮಾಲ್ ಸ್ಕ್ರೀನ್​ನಲ್ಲಿ ನಾನು ಹ್ಯಾಪಿಯಾಗಿದ್ದೇನೆ ಎಂದಿದ್ದಾರೆ. ವೆಬ್ ಸರಣಿಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಷ್ಟೇ ಸಾಕು. ಅವಮಾನಗಳಿಂದ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ ಎನ್ನುತ್ತಾ ಮಾತು ಮುಗಿಸಿದರು ಎರಿಕಾ ಫರ್ನಾಂಡಿಸ್.

ಇದನ್ನೂ ಓದಿ: ರಜನಿಕಾಂತ್ ಅಭಿನಯದ 'ತಲೈವರ್ 171'ರಲ್ಲಿ ಶಾರುಖ್​ ಖಾನ್? - Thalaivar 171

ETV Bharat Logo

Copyright © 2024 Ushodaya Enterprises Pvt. Ltd., All Rights Reserved.