ETV Bharat / entertainment

ನ್ಯೂಯಾರ್ಕ್‌ ಟೈಮ್ಸ್ ಸ್ಕ್ವೇರ್‌ನಲ್ಲಿ ಚಿರಂಜೀವಿ ಫೋಟೋ: ವಿಶೇಷವಾಗಿ ಅಭಿಮಾನ ಮೆರೆದ ಫ್ಯಾನ್ಸ್​​

author img

By ETV Bharat Karnataka Team

Published : Jan 31, 2024, 5:30 PM IST

Updated : Jan 31, 2024, 5:43 PM IST

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಹೆಸರಾಂತ ನಟ ಚಿರಂಜೀವಿ ಅವರ ಫೋಟೋ ಪ್ರದರ್ಶನಗೊಂಡಿದೆ.

Chiranjeevi at Times Square
ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಚಿರಂಜೀವಿ ಫೋಟೋ

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹೆಸರಾಂತ ನಟ ಚಿರಂಜೀವಿ ಅವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಈ ಹಿನ್ನೆಲೆ ಜನಪ್ರಿಯ ನಟನ ಕಟ್ಟಾ ಅಭಿಮಾನಿಯೊಬ್ಬರು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಚಿರಂಜೀವಿ ಚಿತ್ರ ಪ್ರದರ್ಶಿಸೋ ಮುಖೇನ ಗೌರವ ಸಲ್ಲಿಸಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಅಭಿಮಾನಿಗಳು ಇದರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳು ಸೋಷಿಯಲ್​​ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವ ವಿಡಿಯೋದಲ್ಲಿ, ಚಿರಂಜೀವಿ ಅವರ ಚಿತ್ರವನ್ನು ಅವರ ಕಟ್ಟಾ ಅಭಿಮಾನಿಗಳಾದ ಶ್ರೀನಿವಾಸ್ ನಾಯ್ಡು ಮತ್ತು ಟಿಮ್ಮಿ ಚೀಡಲ ಅವರು ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶನಗೊಂಡ ಚಿತ್ರದಲ್ಲಿ, ಸೌತ್​ ಸೂಪರ್ ಸ್ಟಾರ್ ಚಿರಂಜೀವಿ ಅವರು ಬಿಳಿ ಪಟ್ಟು ಪಂಚೆ ಔಟ್​​ಫಿಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ಮೇಲೆ, "ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿ - ಪದ್ಮವಿಭೂಷಣ ತಮ್ಮದಾಗಿಸಿಕೊಂಡಿದ್ದಕ್ಕಾಗಿ ಮೆಗಾಸ್ಟಾರ್ ಚಿರಂಜೀವಿ ಗಾರು ಅವರಿಗೆ ಅಭಿನಂದನೆಗಳು" ಎಂದು ಬರೆಯಲಾಗಿದೆ.

ಇತ್ತೀಚೆಗಷ್ಟೇ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಮನೋರಂಜನಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಳ ಹಿನ್ನೆಲೆ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟನ ಅಸಂಖ್ಯಾತ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಖ್ಯಾತನಾಮರೂ ಸಹ ಹಿರಿಯ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಲಿನಲ್ಲಿ ಜೂನಿಯರ್ ಎನ್‌ಟಿಆರ್, ಮಮ್ಮುಟ್ಟಿ, ಶಿವ ರಾಜ್​​ಕುಮಾರ್​​ ಮತ್ತು ಮಹೇಶ್ ಬಾಬು ಸೇರಿದಂತೆ ಹಲವರು ಇದ್ದಾರೆ. ಕೆಲ ನಿರ್ದೇಶಕರು, ನಟರು ಚಿರಂಜೀವಿ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದಾರೆ. ರಾಮ್ ಚರಣ್, ಉಪಾಸನಾ ಕೊನಿಡೇಲ, ವರುಣ್ ತೇಜ್, ಅಲ್ಲು ಅರ್ಜುನ್ ಮತ್ತು ಇತರರು ಸೇರಿದಂತೆ ಮೆಗಾ ಫ್ಯಾಮಿಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವಣ್ಣನಿಗೆ ಆ್ಯಕ್ಷನ್​ ಕಟ್​ ಹೇಳ್ತಾರಾ ಸಪ್ತ ಸಾಗರದಾಚೆ ಎಲ್ಲೋ ಡೈರೆಕ್ಟರ್?

ಬಹುಬೇಡಿಕೆ ನಟ ಚಿರಂಜೀವಿ ಅವರು 2006 ರಲ್ಲಿ ಪದ್ಮಭೂಷಣ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದು ನಟನ ಎರಡನೇ ಪದ್ಮ ಪ್ರಶಸ್ತಿ ಆಗಿದೆ. ಚಿರಂಜೀವಿ ಅವರು ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸೇವೆ ಸಲುವಾಗಿಯೂ ಹೆಚ್ಚಿನವರ ಗಮನದಲ್ಲಿದ್ದಾರೆ. 1998ರಲ್ಲಿ ಚಿರಂಜೀವಿ ಚಾರಿಟಬಲ್ ಟ್ರಸ್ಟ್ (CCT) ಮತ್ತು ಚಿರಂಜೀವಿ ರಕ್ತ ಹಾಗೂ ಕಣ್ಣಿನ ಬ್ಯಾಂಕ್‌ಗಳನ್ನು (ಘಟಕ) ಸ್ಥಾಪಿಸಿದರು. ಕೋವಿಡ್ ಸಂದರ್ಭ ಏಕಾಏಕಿ ಉದ್ಯೋಗ ಕಳೆದುಕೊಂಡ ಚಲನಚಿತ್ರೋದ್ಯಮದ ಉದ್ಯೋಗಿಗಳಿಗೆ ಉದ್ಯೋಗ ಮರಳಿ ಪಡೆಯುವಲ್ಲಿ ನಟ ಸಹಾಯ ಹಸ್ತ ಚಾಚಿದ್ದಾರೆ.

ಇದನ್ನೂ ಓದಿ: ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್‌ ಬಾಸ್‌ ರನ್ನರ್ ಅಪ್ ಪ್ರತಾಪ್‌ ಪ್ರಯಾಣ ಮೆಚ್ಚಿದ್ರಾ?

ಚಿರಂಜೀವಿ ಅವರು ತೆಲುಗು, ತಮಿಳು, ಹಿಂದಿ ಮತ್ತು ಕನ್ನಡ ಸೇರಿದಂತೆ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ಮೆಹರ್ ರಮೇಶ್ ಅವರ ಭೋಲಾ ಶಂಕರ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ತಮಿಳು ಸಿನಿಮಾ ವೇದಲಂನ ರಿಮೇಕ್. ಮುಂದಿನ ದಿನಗಳಲ್ಲಿ ಬಿಂಬಿಸಾರ ನಿರ್ದೇಶಕ ವಶಿಷ್ಟ ಮಲ್ಲಿಡಿ ಅವರೊಂದಿಗೆ ವಿಶ್ವಂಭರ ಸಿನಿಮಾದ ಚಿತ್ರೀಕರಣ ಕೂಡಾ ಪ್ರಾರಂಭಿಸಲಿದ್ದಾರೆ. 2025ರ ಸಂಕ್ರಾಂತಿ ಸಂದರ್ಭ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹೆಸರಾಂತ ನಟ ಚಿರಂಜೀವಿ ಅವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಈ ಹಿನ್ನೆಲೆ ಜನಪ್ರಿಯ ನಟನ ಕಟ್ಟಾ ಅಭಿಮಾನಿಯೊಬ್ಬರು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಚಿರಂಜೀವಿ ಚಿತ್ರ ಪ್ರದರ್ಶಿಸೋ ಮುಖೇನ ಗೌರವ ಸಲ್ಲಿಸಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಅಭಿಮಾನಿಗಳು ಇದರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳು ಸೋಷಿಯಲ್​​ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವ ವಿಡಿಯೋದಲ್ಲಿ, ಚಿರಂಜೀವಿ ಅವರ ಚಿತ್ರವನ್ನು ಅವರ ಕಟ್ಟಾ ಅಭಿಮಾನಿಗಳಾದ ಶ್ರೀನಿವಾಸ್ ನಾಯ್ಡು ಮತ್ತು ಟಿಮ್ಮಿ ಚೀಡಲ ಅವರು ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶನಗೊಂಡ ಚಿತ್ರದಲ್ಲಿ, ಸೌತ್​ ಸೂಪರ್ ಸ್ಟಾರ್ ಚಿರಂಜೀವಿ ಅವರು ಬಿಳಿ ಪಟ್ಟು ಪಂಚೆ ಔಟ್​​ಫಿಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ಮೇಲೆ, "ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿ - ಪದ್ಮವಿಭೂಷಣ ತಮ್ಮದಾಗಿಸಿಕೊಂಡಿದ್ದಕ್ಕಾಗಿ ಮೆಗಾಸ್ಟಾರ್ ಚಿರಂಜೀವಿ ಗಾರು ಅವರಿಗೆ ಅಭಿನಂದನೆಗಳು" ಎಂದು ಬರೆಯಲಾಗಿದೆ.

ಇತ್ತೀಚೆಗಷ್ಟೇ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಮನೋರಂಜನಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಳ ಹಿನ್ನೆಲೆ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟನ ಅಸಂಖ್ಯಾತ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಖ್ಯಾತನಾಮರೂ ಸಹ ಹಿರಿಯ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಲಿನಲ್ಲಿ ಜೂನಿಯರ್ ಎನ್‌ಟಿಆರ್, ಮಮ್ಮುಟ್ಟಿ, ಶಿವ ರಾಜ್​​ಕುಮಾರ್​​ ಮತ್ತು ಮಹೇಶ್ ಬಾಬು ಸೇರಿದಂತೆ ಹಲವರು ಇದ್ದಾರೆ. ಕೆಲ ನಿರ್ದೇಶಕರು, ನಟರು ಚಿರಂಜೀವಿ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದಾರೆ. ರಾಮ್ ಚರಣ್, ಉಪಾಸನಾ ಕೊನಿಡೇಲ, ವರುಣ್ ತೇಜ್, ಅಲ್ಲು ಅರ್ಜುನ್ ಮತ್ತು ಇತರರು ಸೇರಿದಂತೆ ಮೆಗಾ ಫ್ಯಾಮಿಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವಣ್ಣನಿಗೆ ಆ್ಯಕ್ಷನ್​ ಕಟ್​ ಹೇಳ್ತಾರಾ ಸಪ್ತ ಸಾಗರದಾಚೆ ಎಲ್ಲೋ ಡೈರೆಕ್ಟರ್?

ಬಹುಬೇಡಿಕೆ ನಟ ಚಿರಂಜೀವಿ ಅವರು 2006 ರಲ್ಲಿ ಪದ್ಮಭೂಷಣ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದು ನಟನ ಎರಡನೇ ಪದ್ಮ ಪ್ರಶಸ್ತಿ ಆಗಿದೆ. ಚಿರಂಜೀವಿ ಅವರು ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸೇವೆ ಸಲುವಾಗಿಯೂ ಹೆಚ್ಚಿನವರ ಗಮನದಲ್ಲಿದ್ದಾರೆ. 1998ರಲ್ಲಿ ಚಿರಂಜೀವಿ ಚಾರಿಟಬಲ್ ಟ್ರಸ್ಟ್ (CCT) ಮತ್ತು ಚಿರಂಜೀವಿ ರಕ್ತ ಹಾಗೂ ಕಣ್ಣಿನ ಬ್ಯಾಂಕ್‌ಗಳನ್ನು (ಘಟಕ) ಸ್ಥಾಪಿಸಿದರು. ಕೋವಿಡ್ ಸಂದರ್ಭ ಏಕಾಏಕಿ ಉದ್ಯೋಗ ಕಳೆದುಕೊಂಡ ಚಲನಚಿತ್ರೋದ್ಯಮದ ಉದ್ಯೋಗಿಗಳಿಗೆ ಉದ್ಯೋಗ ಮರಳಿ ಪಡೆಯುವಲ್ಲಿ ನಟ ಸಹಾಯ ಹಸ್ತ ಚಾಚಿದ್ದಾರೆ.

ಇದನ್ನೂ ಓದಿ: ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್‌ ಬಾಸ್‌ ರನ್ನರ್ ಅಪ್ ಪ್ರತಾಪ್‌ ಪ್ರಯಾಣ ಮೆಚ್ಚಿದ್ರಾ?

ಚಿರಂಜೀವಿ ಅವರು ತೆಲುಗು, ತಮಿಳು, ಹಿಂದಿ ಮತ್ತು ಕನ್ನಡ ಸೇರಿದಂತೆ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ಮೆಹರ್ ರಮೇಶ್ ಅವರ ಭೋಲಾ ಶಂಕರ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ತಮಿಳು ಸಿನಿಮಾ ವೇದಲಂನ ರಿಮೇಕ್. ಮುಂದಿನ ದಿನಗಳಲ್ಲಿ ಬಿಂಬಿಸಾರ ನಿರ್ದೇಶಕ ವಶಿಷ್ಟ ಮಲ್ಲಿಡಿ ಅವರೊಂದಿಗೆ ವಿಶ್ವಂಭರ ಸಿನಿಮಾದ ಚಿತ್ರೀಕರಣ ಕೂಡಾ ಪ್ರಾರಂಭಿಸಲಿದ್ದಾರೆ. 2025ರ ಸಂಕ್ರಾಂತಿ ಸಂದರ್ಭ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Last Updated : Jan 31, 2024, 5:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.