ETV Bharat / entertainment

'ಇದು ನನಗೆ ಸಿಕ್ಕ ಆಸ್ಕರ್'​​ : ಬಾಲ ಕಲಾವಿದನಿಗೆ ಸುದೀಪ್​ ವಿಶೇಷ ಉಡುಗೊರೆ - SUDEEP

ಬಿಗ್​ ಬಾಸ್​ ವೇದಿಕೆಯಲ್ಲಿ ಸುದೀಪ್​ ಅವರ ತಾಯಿಯ ಸ್ಮರಣೆ ನಡೆಯಿತು. ಕಿಚ್ಚ ಭಾವುಕರಾಗಿದ್ದನ್ನು ಕಂಡ ಅಭಿಮಾನಿಗಳು ಮರುಗಿದ್ದಾರೆ.

Sudeep
ನಟ ಸುದೀಪ್​ (Photo: ETV Bharat)
author img

By ETV Bharat Entertainment Team

Published : Jan 27, 2025, 11:39 AM IST

ಕಳೆದ ರಾತ್ರಿ ಬಿಗ್ ಬಾಸ್​​ ಗ್ರ್ಯಾಂಡ್​ ಫಿನಾಲೆ ಪ್ರಸಾರ ಕಂಡಿದೆ. ಹನುಮಂತು ವಿಜೇತರಾಗಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ವರ್ಣರಂಜಿತ ಕಾರ್ಯಕ್ರಮ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಗಿತ್ತು. ಹೌದು, ಇತ್ತೀಚೆಗಷ್ಟೇ ನಿರೂಪಕ ಸುದೀಪ್​ ಅವರ ತಾಯಿ ವಿಧಿವಶರಾಗಿರೋದು ನಿಮಗೆ ತಿಳಿದಿರುವ ವಿಚಾರವೇ. ಅವರ ಸ್ಮರಣೆ ಈ ವೇದಿಕೆಯಲ್ಲಿ ನಡೆಯಿತು.

ಸರೋಜಾ ಅವರ ಸ್ಮರಣೆ : 2024ರ ಅಕ್ಟೋಬರ್​​ 20ರಂದು ಸುದೀಪ್ ಅವರ ತಾಯಿ ಸರೋಜಾ (75) ಕೊನೆಯುಸಿರೆಳೆದರು. ಕೆಲವೇ ದಿನಗಳಲ್ಲಿ ಬಿಗ್ ಬಾಸ್​ ವೇದಿಕೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಕಳೆದ ರಾತ್ರಿ ಪ್ರಸಾರವಾದ ಗ್ರ್ಯಾಂಡ್​ ಫಿನಾಲೆ ವೇದಿಕೆಯಲ್ಲೂ ಸರೋಜಾ ಅವರ ಸ್ಮರಣೆ ನಡೆಯಿತು.

ಭಾವುಕ ಕ್ಷಣ : ಬಿಗ್​ ಬಾಸ್​ ಸೀಸನ್​ 11 ತಾವು ನಿರೂಪಿಸುತ್ತಿರುವ ಕೊನೆಯ ಸೀಸನ್​ ಎಂದು ಸುದೀಪ್​ ಈಗಾಗಲೇ ಘೋಷಿಸಿದ್ದಾರೆ. ಈ ಹಿನ್ನೆಲೆ, ಕಾರ್ಯಕ್ರಮ ವೀಕ್ಷಿಸಲು ಬಿಗ್​ ಬಾಸ್​ ಸೆಟ್​ಗೆ ಸುದೀಪ್​ ಅವರ ತಂದೆ ಸಂಜೀವ್​ ಮತ್ತು ಮಗಳು ಸಾನ್ವಿ ಆಗಮಿಸಿದ್ದರು. ಸರೋಜಾ ಅವರ ನೆನಪಲ್ಲಿ ವಿಶೇಷ ಹಾಡೊಂದನ್ನು ಅರ್ಪಿಸಲಾಯ್ತ. ಆ ಸಂದರ್ಭ ಸುದೀಪ್​, ಸಂಜೀವ್​, ಸಾನ್ವಿ ಬಹಳ ಭಾವುಕರಾಗಿ ಕಣ್ಣೀರಿಟ್ಟರು. ವೇದಿಕೆ ಬಳಿ ಇದ್ದ ಇತರರೂ ಸೇರಿದಂತೆ ಟಿವಿ ಮೂಲಕ ಈ ದೃಶ್ಯ ಕಣ್ತುಂಬಿಕೊಂಡವರೂ ಭಾವುಕರಾದರು. ಆದಷ್ಟೂ ಪ್ರಯತ್ನಿಸಿದರೂ ಸುದೀಪ್​ ಕಣ್ಣೀರು ಕಣ್ಣಂಚನ್ನು ದಾಟೇಬಿಟ್ಟಿತು.

ಅಮ್ಮನ ದನಿ ಕೇಳಿ ಭಾವುಕ : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​ ಅವರು ಸುದೀಪ್​ ಅವರಿಗಾಗಿ ಹಾಡೊಂದನ್ನು ಬರೆದಿದ್ರು. ಗ್ರ್ಯಾಂಡ್​ ಫಿನಾಲೆಗೆ ಆಗಮಿಸಿದ ಅವರು ಪ್ರೇಕ್ಷಕರಂತೆ ಕುಳಿತು ಈ ಕಾರ್ಯಕ್ರಮ ವೀಕ್ಷಿಸಿ ಎಂದು ಕಿಚ್ಚನ ಬಳಿ ಮನವಿ ಮಾಡಿಕೊಂಡ್ರು. ಹಾಡಿನ ನಡುವೆ ಬಂದ ಅಮ್ಮನ ದನಿ ಕೇಳಿ ಸುದೀಪ್​ ಬಹಳ ಭಾವುಕರಾದ್ರು.

ಮಗಳಿಗೆ ಪ್ರೀತಿಯ ಮಳೆಗೈದ ಕಿಚ್ಚ : ಯೋಗರಾಜ್​​ ಭಟ್​​ ಬರೆದ ಸಾಹಿತ್ಯಕ್ಕೆ ಸುದೀಪ್​ ಪುತ್ರಿ ಸಾನ್ವಿ ದನಿ ನೀಡಿದ್ದರೆ, ವಾಸುಕಿ ಅವರ ಮ್ಯೂಸಿಕ್​ ಈ ಹಾಡಿಗಿದೆ. ಹಾಡಿನ ಪ್ರತೀ ಸಾಲುಗಳು ನನಗಿಡಿಸಿತು. ಎಂದ ಸುದೀಪ್​​ ಹಾಡು ಹಾಡಿದ ಮಗಳಿಗೆ ವೇದಿಕೆಯಿಂದಲೇ ಪ್ರೀತಿಯ ಮಳೆಗೈದರು.

ಇದನ್ನೂ ಓದಿ: ಬಿಗ್​ ಬಾಸ್: ಕಿಚ್ಚನಿಲ್ಲದೇ ಕಾರ್ಯಕ್ರಮ ​ಸಾಧ್ಯವೇ? ಮುಂದಿನ ನಿರೂಪಕ ಯಾರಾಗಬಹುದು?

ನನಗೆ ಸಿಕ್ಕ ದೊಡ್ಡ ಆಸ್ಕರ್ ​​: ಈ ರೀತಿ ಸಾಹಿತ್ಯ ರಚಿಸಲು ನಿಮ್ಮಿಂದ (ಯೋಗರಾಜ್​ ಭಟ್​) ಮಾತ್ರ ಸಾಧ್ಯ. ಬಹಳ ಧನ್ಯವಾದಗಳು. ಈ ಹಾಡು ನನಗೆ ಸಿಕ್ಕ ದೊಡ್ಡ ಆಸ್ಕರ್​​. ತಂಡದವರು ಮರೆಯದೇ ಈ ಹಾಡನ್ನು ಪೆನ್​ಡ್ರೈವ್​ಗೆ ಹಾಕಿಕೊಡಿ ಎಂದು ತಿಳಿಸಿದ್ರು.

ಇದನ್ನೂ ಓದಿ: 5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್​ಬಾಸ್​ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?

ಬಾಲ ಕಲಾವಿದನಿಗೆ ವಿಶೇಷ ಉಡುಗೊರೆ : ಇನ್ನು ಈ ಹಾಡಿನಲ್ಲಿ ಸುದೀಪ್​ ಆಗಿ ವೇದಿಕೆಗೆ ಬಂದ ಯುವನ್​ ಎಂಬ ಬಾಲ ಕಲಾವಿದನಿಗೆ ಮುತ್ತಿಟ್ಟು ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಜೊತೆಗೆ ತಮ್ಮ ಕೈಯಲ್ಲಿದ್ದ ಬ್ರೇಸ್​ಲೈಟ್​​ ಅನ್ನು ಉಡುಗೊರೆಯಾಗಿ ನೀಡೋ ಮೂಲಕ ಮನದುಂಬಿ ಧನ್ಯವಾದ ಅರ್ಪಿಸಿದರು.

ಕಳೆದ ರಾತ್ರಿ ಬಿಗ್ ಬಾಸ್​​ ಗ್ರ್ಯಾಂಡ್​ ಫಿನಾಲೆ ಪ್ರಸಾರ ಕಂಡಿದೆ. ಹನುಮಂತು ವಿಜೇತರಾಗಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ವರ್ಣರಂಜಿತ ಕಾರ್ಯಕ್ರಮ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಗಿತ್ತು. ಹೌದು, ಇತ್ತೀಚೆಗಷ್ಟೇ ನಿರೂಪಕ ಸುದೀಪ್​ ಅವರ ತಾಯಿ ವಿಧಿವಶರಾಗಿರೋದು ನಿಮಗೆ ತಿಳಿದಿರುವ ವಿಚಾರವೇ. ಅವರ ಸ್ಮರಣೆ ಈ ವೇದಿಕೆಯಲ್ಲಿ ನಡೆಯಿತು.

ಸರೋಜಾ ಅವರ ಸ್ಮರಣೆ : 2024ರ ಅಕ್ಟೋಬರ್​​ 20ರಂದು ಸುದೀಪ್ ಅವರ ತಾಯಿ ಸರೋಜಾ (75) ಕೊನೆಯುಸಿರೆಳೆದರು. ಕೆಲವೇ ದಿನಗಳಲ್ಲಿ ಬಿಗ್ ಬಾಸ್​ ವೇದಿಕೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಕಳೆದ ರಾತ್ರಿ ಪ್ರಸಾರವಾದ ಗ್ರ್ಯಾಂಡ್​ ಫಿನಾಲೆ ವೇದಿಕೆಯಲ್ಲೂ ಸರೋಜಾ ಅವರ ಸ್ಮರಣೆ ನಡೆಯಿತು.

ಭಾವುಕ ಕ್ಷಣ : ಬಿಗ್​ ಬಾಸ್​ ಸೀಸನ್​ 11 ತಾವು ನಿರೂಪಿಸುತ್ತಿರುವ ಕೊನೆಯ ಸೀಸನ್​ ಎಂದು ಸುದೀಪ್​ ಈಗಾಗಲೇ ಘೋಷಿಸಿದ್ದಾರೆ. ಈ ಹಿನ್ನೆಲೆ, ಕಾರ್ಯಕ್ರಮ ವೀಕ್ಷಿಸಲು ಬಿಗ್​ ಬಾಸ್​ ಸೆಟ್​ಗೆ ಸುದೀಪ್​ ಅವರ ತಂದೆ ಸಂಜೀವ್​ ಮತ್ತು ಮಗಳು ಸಾನ್ವಿ ಆಗಮಿಸಿದ್ದರು. ಸರೋಜಾ ಅವರ ನೆನಪಲ್ಲಿ ವಿಶೇಷ ಹಾಡೊಂದನ್ನು ಅರ್ಪಿಸಲಾಯ್ತ. ಆ ಸಂದರ್ಭ ಸುದೀಪ್​, ಸಂಜೀವ್​, ಸಾನ್ವಿ ಬಹಳ ಭಾವುಕರಾಗಿ ಕಣ್ಣೀರಿಟ್ಟರು. ವೇದಿಕೆ ಬಳಿ ಇದ್ದ ಇತರರೂ ಸೇರಿದಂತೆ ಟಿವಿ ಮೂಲಕ ಈ ದೃಶ್ಯ ಕಣ್ತುಂಬಿಕೊಂಡವರೂ ಭಾವುಕರಾದರು. ಆದಷ್ಟೂ ಪ್ರಯತ್ನಿಸಿದರೂ ಸುದೀಪ್​ ಕಣ್ಣೀರು ಕಣ್ಣಂಚನ್ನು ದಾಟೇಬಿಟ್ಟಿತು.

ಅಮ್ಮನ ದನಿ ಕೇಳಿ ಭಾವುಕ : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​ ಅವರು ಸುದೀಪ್​ ಅವರಿಗಾಗಿ ಹಾಡೊಂದನ್ನು ಬರೆದಿದ್ರು. ಗ್ರ್ಯಾಂಡ್​ ಫಿನಾಲೆಗೆ ಆಗಮಿಸಿದ ಅವರು ಪ್ರೇಕ್ಷಕರಂತೆ ಕುಳಿತು ಈ ಕಾರ್ಯಕ್ರಮ ವೀಕ್ಷಿಸಿ ಎಂದು ಕಿಚ್ಚನ ಬಳಿ ಮನವಿ ಮಾಡಿಕೊಂಡ್ರು. ಹಾಡಿನ ನಡುವೆ ಬಂದ ಅಮ್ಮನ ದನಿ ಕೇಳಿ ಸುದೀಪ್​ ಬಹಳ ಭಾವುಕರಾದ್ರು.

ಮಗಳಿಗೆ ಪ್ರೀತಿಯ ಮಳೆಗೈದ ಕಿಚ್ಚ : ಯೋಗರಾಜ್​​ ಭಟ್​​ ಬರೆದ ಸಾಹಿತ್ಯಕ್ಕೆ ಸುದೀಪ್​ ಪುತ್ರಿ ಸಾನ್ವಿ ದನಿ ನೀಡಿದ್ದರೆ, ವಾಸುಕಿ ಅವರ ಮ್ಯೂಸಿಕ್​ ಈ ಹಾಡಿಗಿದೆ. ಹಾಡಿನ ಪ್ರತೀ ಸಾಲುಗಳು ನನಗಿಡಿಸಿತು. ಎಂದ ಸುದೀಪ್​​ ಹಾಡು ಹಾಡಿದ ಮಗಳಿಗೆ ವೇದಿಕೆಯಿಂದಲೇ ಪ್ರೀತಿಯ ಮಳೆಗೈದರು.

ಇದನ್ನೂ ಓದಿ: ಬಿಗ್​ ಬಾಸ್: ಕಿಚ್ಚನಿಲ್ಲದೇ ಕಾರ್ಯಕ್ರಮ ​ಸಾಧ್ಯವೇ? ಮುಂದಿನ ನಿರೂಪಕ ಯಾರಾಗಬಹುದು?

ನನಗೆ ಸಿಕ್ಕ ದೊಡ್ಡ ಆಸ್ಕರ್ ​​: ಈ ರೀತಿ ಸಾಹಿತ್ಯ ರಚಿಸಲು ನಿಮ್ಮಿಂದ (ಯೋಗರಾಜ್​ ಭಟ್​) ಮಾತ್ರ ಸಾಧ್ಯ. ಬಹಳ ಧನ್ಯವಾದಗಳು. ಈ ಹಾಡು ನನಗೆ ಸಿಕ್ಕ ದೊಡ್ಡ ಆಸ್ಕರ್​​. ತಂಡದವರು ಮರೆಯದೇ ಈ ಹಾಡನ್ನು ಪೆನ್​ಡ್ರೈವ್​ಗೆ ಹಾಕಿಕೊಡಿ ಎಂದು ತಿಳಿಸಿದ್ರು.

ಇದನ್ನೂ ಓದಿ: 5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್​ಬಾಸ್​ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?

ಬಾಲ ಕಲಾವಿದನಿಗೆ ವಿಶೇಷ ಉಡುಗೊರೆ : ಇನ್ನು ಈ ಹಾಡಿನಲ್ಲಿ ಸುದೀಪ್​ ಆಗಿ ವೇದಿಕೆಗೆ ಬಂದ ಯುವನ್​ ಎಂಬ ಬಾಲ ಕಲಾವಿದನಿಗೆ ಮುತ್ತಿಟ್ಟು ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಜೊತೆಗೆ ತಮ್ಮ ಕೈಯಲ್ಲಿದ್ದ ಬ್ರೇಸ್​ಲೈಟ್​​ ಅನ್ನು ಉಡುಗೊರೆಯಾಗಿ ನೀಡೋ ಮೂಲಕ ಮನದುಂಬಿ ಧನ್ಯವಾದ ಅರ್ಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.