ETV Bharat / entertainment

Jr.ಎನ್‌ಟಿಆರ್‌ 'ದೇವರ'ಗೆ ಬಾಲಿವುಡ್‌ನಿಂದ ಮತ್ತೋರ್ವ ವಿಲನ್? - Devara

author img

By ETV Bharat Karnataka Team

Published : Jul 26, 2024, 7:21 PM IST

ಜೂನಿಯರ್​​ ಎನ್​ಟಿಆರ್ ನಟನೆಯ ಬಹುನಿರೀಕ್ಷಿತ 'ದೇವರ' ಚಿತ್ರದಲ್ಲಿ ಬಾಲಿವುಡ್​ನ ಸೈಫ್​ ಆಲಿ ಖಾನ್​ ಮತ್ತು ಜಾಹ್ನವಿ ಕಪೂರ್ ನಟಿಸುತ್ತಿದ್ದು, ಮತ್ತೋರ್ವ ನಟನ ಎಂಟ್ರಿಯಾಗಲಿದೆ ಎಂದು ಹೇಳಲಾಗಿದೆ. ​

Bobby Deol, Jr NTR
ಬಾಬಿ ಡಿಯೋಲ್​​, ಜೂ.ಎನ್​ಟಿಆರ್​ (ETV Bharat)

ಆರ್​ಆರ್​ಆರ್​​ ಎಂಬ ಬ್ಲಾಕ್​ಬಸ್ಟರ್ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿರುವ ಸೌತ್​​ ಸೂಪರ್​ ಸ್ಟಾರ್ ಜೂನಿಯರ್​​ ಎನ್​ಟಿಆರ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಕೊರಟಾಲ ಶಿವ ಈ ಪ್ಯಾನ್ ಇಂಡಿಯಾ ಸಿನಿಮಾಗೆ ಆ್ಯಕ್ಷನ್​ ಕಟ್​​ ಹೇಳುತ್ತಿದ್ದು, ಜೂನಿಯರ್​​ ಎನ್​ಟಿಆರ್​​ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ಕಲಾವಿದರು ಅಭಿನಯಿಸುತ್ತಿದ್ದು, ಮತ್ತೋರ್ವ ಬಾಲಿವುಡ್​​ ನಟನ ಎಂಟ್ರಿಯಾಗಲಿದೆಯಂತೆ.

ಕೊರಟಾಲ ಶಿವ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್​ ನಟಿ ಜಾಹ್ನವಿ ಕಪೂರ್​​​​ ನಟಿಸುತ್ತಿದ್ದಾರೆ. ಬಾಲಿವುಡ್​ ಬೆಡಗಿಗಿದು ಟಾಲಿವುಡ್​​ನ ಚೊಚ್ಚಲ ಚಿತ್ರ. ಬಾಲಿವುಡ್​ ನಟ ಸೈಫ್​ ಆಲಿ ಖಾನ್​ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಬಾಲಿವುಡ್​​ನ ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲ ಭಾಗದಲ್ಲಿ ತಾರಕ್​​ಗೆ ಎದುರಾಗಲಿರುವ ವಿಲನ್ ಪಾತ್ರದಲ್ಲಿ ಸೈಫ್ ಇರಲಿದ್ದಾರೆ. ಇದೀಗ ಸಿನಿಮಾಗೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲಕಾರಿ ಸುದ್ದಿ ಬಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಾಬಿ ಡಿಯೋಲ್​ ಕೂಡ ಮತ್ತೋರ್ವ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕೊನೆಗೆ ತೆರೆಮೇಲೆ ಬರುವ ಅವರ ಪಾತ್ರ 'ದೇವರ ಭಾಗ 2'ರಲ್ಲಿ ನಿರ್ಣಾಯಕವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಎರಡನೇ ಭಾಗದಲ್ಲಿ ಬಾಲಿ ಅವರು ಸೈಫ್ ಮತ್ತು ಎನ್‌ಟಿಆರ್ ಜೊತೆ ಫೈಟ್​ ಮಾಡಲಿದ್ದಾರೆ. ಸದ್ಯ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಮಾಸ್ ಆ್ಯಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿದೆ. ಸದ್ಯದಲ್ಲೇ ಹೈದರಾಬಾದ್‌ನಲ್ಲಿ ಹಾಡೊಂದರ ಶೂಟಿಂಗ್​​​ ನಡೆಯಲಿದೆ. ಪ್ರಕಾಶ್‌ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಸೇರಿದಂತೆ ಹಲವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ಸಂಗೀತ ನೀಡುತ್ತಿರುವ 'ದೇವರ ಭಾಗ 1' ಸೆಪ್ಟೆಂಬರ್ 27 ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಸಾಂತ್ವನ: 1 ಲಕ್ಷ ರೂ. ಚೆಕ್ ನೀಡಿದ ನಟ - Vinod Raj visits Renukaswamy House

ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ಎನ್​ಟಿಆರ್​​ ಆರ್ಟ್ಸ್ ಮತ್ತು ಯುವ ಸುಧಾ ಆರ್ಟ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಜೊತೆ ಸಂತೋಷ್ ವೆಂಕಿ ಕೂಡ ಸಂಗೀತ ನಿರ್ದೇಶನ ಮಾಡಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಸೇರಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಮಿಥ್ಯ ಯಾಕಾಗಬಾರದು ಸತ್ಯ! ಕಾಮಿಡಿ ಶೋನಲ್ಲಿ ಪುನೀತ್​​ ಸ್ಮರಣೆ: ಒದ್ದೆಯಾಯ್ತು ಕನ್ನಡಿಗರ ಕಣ್ಣಾಲಿಗಳು - Puneeth Rajkumar

ಆರ್​ಆರ್​ಆರ್​​ ಎಂಬ ಬ್ಲಾಕ್​ಬಸ್ಟರ್ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿರುವ ಸೌತ್​​ ಸೂಪರ್​ ಸ್ಟಾರ್ ಜೂನಿಯರ್​​ ಎನ್​ಟಿಆರ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಕೊರಟಾಲ ಶಿವ ಈ ಪ್ಯಾನ್ ಇಂಡಿಯಾ ಸಿನಿಮಾಗೆ ಆ್ಯಕ್ಷನ್​ ಕಟ್​​ ಹೇಳುತ್ತಿದ್ದು, ಜೂನಿಯರ್​​ ಎನ್​ಟಿಆರ್​​ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ಕಲಾವಿದರು ಅಭಿನಯಿಸುತ್ತಿದ್ದು, ಮತ್ತೋರ್ವ ಬಾಲಿವುಡ್​​ ನಟನ ಎಂಟ್ರಿಯಾಗಲಿದೆಯಂತೆ.

ಕೊರಟಾಲ ಶಿವ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್​ ನಟಿ ಜಾಹ್ನವಿ ಕಪೂರ್​​​​ ನಟಿಸುತ್ತಿದ್ದಾರೆ. ಬಾಲಿವುಡ್​ ಬೆಡಗಿಗಿದು ಟಾಲಿವುಡ್​​ನ ಚೊಚ್ಚಲ ಚಿತ್ರ. ಬಾಲಿವುಡ್​ ನಟ ಸೈಫ್​ ಆಲಿ ಖಾನ್​ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಬಾಲಿವುಡ್​​ನ ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲ ಭಾಗದಲ್ಲಿ ತಾರಕ್​​ಗೆ ಎದುರಾಗಲಿರುವ ವಿಲನ್ ಪಾತ್ರದಲ್ಲಿ ಸೈಫ್ ಇರಲಿದ್ದಾರೆ. ಇದೀಗ ಸಿನಿಮಾಗೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲಕಾರಿ ಸುದ್ದಿ ಬಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಾಬಿ ಡಿಯೋಲ್​ ಕೂಡ ಮತ್ತೋರ್ವ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕೊನೆಗೆ ತೆರೆಮೇಲೆ ಬರುವ ಅವರ ಪಾತ್ರ 'ದೇವರ ಭಾಗ 2'ರಲ್ಲಿ ನಿರ್ಣಾಯಕವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಎರಡನೇ ಭಾಗದಲ್ಲಿ ಬಾಲಿ ಅವರು ಸೈಫ್ ಮತ್ತು ಎನ್‌ಟಿಆರ್ ಜೊತೆ ಫೈಟ್​ ಮಾಡಲಿದ್ದಾರೆ. ಸದ್ಯ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಮಾಸ್ ಆ್ಯಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿದೆ. ಸದ್ಯದಲ್ಲೇ ಹೈದರಾಬಾದ್‌ನಲ್ಲಿ ಹಾಡೊಂದರ ಶೂಟಿಂಗ್​​​ ನಡೆಯಲಿದೆ. ಪ್ರಕಾಶ್‌ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಸೇರಿದಂತೆ ಹಲವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ಸಂಗೀತ ನೀಡುತ್ತಿರುವ 'ದೇವರ ಭಾಗ 1' ಸೆಪ್ಟೆಂಬರ್ 27 ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಸಾಂತ್ವನ: 1 ಲಕ್ಷ ರೂ. ಚೆಕ್ ನೀಡಿದ ನಟ - Vinod Raj visits Renukaswamy House

ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ಎನ್​ಟಿಆರ್​​ ಆರ್ಟ್ಸ್ ಮತ್ತು ಯುವ ಸುಧಾ ಆರ್ಟ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಜೊತೆ ಸಂತೋಷ್ ವೆಂಕಿ ಕೂಡ ಸಂಗೀತ ನಿರ್ದೇಶನ ಮಾಡಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಸೇರಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಮಿಥ್ಯ ಯಾಕಾಗಬಾರದು ಸತ್ಯ! ಕಾಮಿಡಿ ಶೋನಲ್ಲಿ ಪುನೀತ್​​ ಸ್ಮರಣೆ: ಒದ್ದೆಯಾಯ್ತು ಕನ್ನಡಿಗರ ಕಣ್ಣಾಲಿಗಳು - Puneeth Rajkumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.