ETV Bharat / bharat

ಜ್ಞಾನವಾಪಿ ಪ್ರಕರಣ: ಇಂದು ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ - Varanasi Gyanvapi case

author img

By ETV Bharat Karnataka Team

Published : Aug 3, 2024, 1:08 PM IST

ಇಂದು ಜಿಲ್ಲಾ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆ ನಡೆಯಲಿದೆ. ಜನವರಿ 31 ರಿಂದ ವ್ಯಾಸ್ ಅವರ ನೆಲಮಾಳಿಗೆಯಲ್ಲಿ ಪೂಜೆ ನಡೆಯುತ್ತಿದೆ. ನೆಲಮಾಳಿಗೆಯ ಶಿಥಿಲಗೊಂಡಿರುವ ಮೇಲ್ಛಾವಣಿ ದುರಸ್ತಿಗೆ ಬೇಡಿಕೆ ಸಲ್ಲಿಸಲಾಗಿದೆ.

VYASJI BASEMENT REPAIR  COURT GYANVAPI CASE HEARING  GYANVAPI CASE SCHEDULE
ಇಂದು ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ (ETV Bharat)

ವಾರಾಣಸಿ (ಉತ್ತರಪ್ರದೇಶ): ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಜ್ಞಾನವಾಪಿಯಲ್ಲಿರುವ ವ್ಯಾಸ್ ಜಿ ಅವರ ನೆಲಮಾಳಿಗೆಯ ಮೇಲ್ಛಾವಣಿ ದುರಸ್ತಿ ಮತ್ತು ಮೇಲ್ಛಾವಣಿಯ ಮೇಲೆ ಮುಸ್ಲಿಂ ಸಮುದಾಯದ ಪ್ರವೇಶವನ್ನು ತಡೆಯುವ ಕುರಿತು, ಹಾಗೂ ಒಳಗಿನ ಇತರ ನೆಲಮಾಳಿಗೆಗಳ ವೈಜ್ಞಾನಿಕ ಸಮೀಕ್ಷೆಯ ಬೇಡಿಕೆ ಕುರಿತು ಇಂದು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ರಾಖಿ ಸಿಂಗ್ ಸೇರಿದಂತೆ ವಿಶ್ವನಾಥ ದೇವಾಲಯದ ಟ್ರಸ್ಟ್, ದೇವಾಲಯಕ್ಕೆ ಹಸ್ತಾಂತರಿಸಲಾದ ವ್ಯಾಸ್ ಜಿ ಅವರ ನೆಲಮಾಳಿಗೆ ಶಿಥಿಲವಾದ ಮೇಲ್ಛಾವಣಿ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ದೇವಸ್ಥಾನವೂ ಈ ಬಗ್ಗೆ ತನ್ನ ಉತ್ತರವನ್ನು ಸಲ್ಲಿಸಿತ್ತು. ಇದಲ್ಲದೇ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿರುವ ಏಳು ಪ್ರತ್ಯೇಕ ಇಂಟಿಗ್ರೇಟೆಡ್ ಪ್ರಕರಣಗಳ ವೇಳಾಪಟ್ಟಿಯನ್ನೂ ಇಂದೇ ತೀರ್ಮಾನಿಸಬಹುದು. ಈ ಬಗ್ಗೆಯೂ ನ್ಯಾಯಾಲಯ ವಿಚಾರಣೆ ನಡೆಯಲಿದೆ.

ಜನವರಿ 31 ರಂದು ವಾರಾಣಸಿಯ ಜ್ಞಾನವಾಪಿ ವ್ಯಾಸ್ ಜಿ ತಹಖಾನಾದಲ್ಲಿ ಪೂಜೆ ಪುನಾರಂಭಿಸಲು ನಿರ್ಧರಿಸಿದ ನಂತರ, ವಾದಿನಿ ರಾಖಿ ಸಿಂಗ್ ಅವರು ಶೃಂಗಾರ್ ಗೌರಿಯನ್ನು ನಿಯಮಿತವಾಗಿ ಪೂಜಿಸುವಂತೆ ಒತ್ತಾಯಿಸಿದರು. ನೆಲಮಾಳಿಗೆಯ ಛಾವಣಿ ಮತ್ತು ಕಂಬಗಳು ಶಿಥಿಲವಾಗಿವೆ ಎಂದು ಹೇಳಿದರು. ಈ ಬಗ್ಗೆ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿಯಿಂದ ಮನವಿ ಕೂಡ ಮಾಡಲಾಗಿದ್ದು, ಒಳಗೆ ಪೂಜೆ ಸಲ್ಲಿಸುವ ಅರ್ಚಕರಿಗೆ ಅಪಾಯ ಎದುರಾಗಬಹುದು. ಹೀಗಾಗಿ ಕೂಡಲೇ ದುರಸ್ತಿಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ರಾಖಿ ಸಿಂಗ್ ಪರವಾಗಿ ಅರ್ಜಿ ಸಲ್ಲಿಸಿದ ವಕೀಲರು, ಶಿಥಿಲಗೊಂಡ ಛಾವಣಿಯ ಮೇಲೆ ನಮಾಜಿಗಳ ಪ್ರವೇಶ ತಡೆಯಲು ಬೇಡಿಕೆಯನ್ನು ಸಹ ಮಾಡಲಾಗಿದೆ. ಇದಾದ ನಂತರ ನ್ಯಾಯಾಲಯದ ಆದೇಶವು ಪ್ರಕರಣದ ವಿಚಾರಣೆ ನಡೆಸಲಿದೆ. ಇದಲ್ಲದೇ ಭಾರತೀಯ ಪುರಾತತ್ವ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಕಾಂಪ್ಲೆಕ್ಸ್‌ನಲ್ಲಿ ಸೆಲ್ಲಾರ್‌ಗಳು ಹೆಚ್ಚಿವೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇತರ ಸೆಲ್ಲಾರ್‌ಗಳ ಬಗ್ಗೆಯೂ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಆಗ್ರಹ ಮಾಡಲಾಗಿದೆ.

ಈ ಬಗ್ಗೆ ಮಸೀದಿ ಉಸ್ತುವಾರಿ ಸಮಿತಿಯು ಆಕ್ಷೇಪಣೆ ಸಲ್ಲಿಸಿದೆ. ಫಿರ್ಯಾದಿ ಮಹಿಳೆಯರಲ್ಲಿ ಲಕ್ಷ್ಮೀದೇವಿ, ಸೀತಾ ಸಾಹು, ಮಂಜು ವಿಕಾಸ್ ಮತ್ತು ರೇಖಾ ಪಾಠಕ್ ಕೂಡ ಸೇರಿದ್ದಾರೆ. ಇತ್ತೀಚೆಗೆ ಮುಷ್ಕರದ ಕಾರಣ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ, ಆದರೆ, ಇಂದು ಎರಡೂ ಕಡೆಯವರು ತಮ್ಮ ಚರ್ಚೆ ಮುಂದಕ್ಕೆ ಕೊಂಡೊಯ್ಯಲಿದ್ದಾರೆ.

ಓದಿ: ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ - Rape case Judgement

ವಾರಾಣಸಿ (ಉತ್ತರಪ್ರದೇಶ): ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಜ್ಞಾನವಾಪಿಯಲ್ಲಿರುವ ವ್ಯಾಸ್ ಜಿ ಅವರ ನೆಲಮಾಳಿಗೆಯ ಮೇಲ್ಛಾವಣಿ ದುರಸ್ತಿ ಮತ್ತು ಮೇಲ್ಛಾವಣಿಯ ಮೇಲೆ ಮುಸ್ಲಿಂ ಸಮುದಾಯದ ಪ್ರವೇಶವನ್ನು ತಡೆಯುವ ಕುರಿತು, ಹಾಗೂ ಒಳಗಿನ ಇತರ ನೆಲಮಾಳಿಗೆಗಳ ವೈಜ್ಞಾನಿಕ ಸಮೀಕ್ಷೆಯ ಬೇಡಿಕೆ ಕುರಿತು ಇಂದು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ರಾಖಿ ಸಿಂಗ್ ಸೇರಿದಂತೆ ವಿಶ್ವನಾಥ ದೇವಾಲಯದ ಟ್ರಸ್ಟ್, ದೇವಾಲಯಕ್ಕೆ ಹಸ್ತಾಂತರಿಸಲಾದ ವ್ಯಾಸ್ ಜಿ ಅವರ ನೆಲಮಾಳಿಗೆ ಶಿಥಿಲವಾದ ಮೇಲ್ಛಾವಣಿ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ದೇವಸ್ಥಾನವೂ ಈ ಬಗ್ಗೆ ತನ್ನ ಉತ್ತರವನ್ನು ಸಲ್ಲಿಸಿತ್ತು. ಇದಲ್ಲದೇ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿರುವ ಏಳು ಪ್ರತ್ಯೇಕ ಇಂಟಿಗ್ರೇಟೆಡ್ ಪ್ರಕರಣಗಳ ವೇಳಾಪಟ್ಟಿಯನ್ನೂ ಇಂದೇ ತೀರ್ಮಾನಿಸಬಹುದು. ಈ ಬಗ್ಗೆಯೂ ನ್ಯಾಯಾಲಯ ವಿಚಾರಣೆ ನಡೆಯಲಿದೆ.

ಜನವರಿ 31 ರಂದು ವಾರಾಣಸಿಯ ಜ್ಞಾನವಾಪಿ ವ್ಯಾಸ್ ಜಿ ತಹಖಾನಾದಲ್ಲಿ ಪೂಜೆ ಪುನಾರಂಭಿಸಲು ನಿರ್ಧರಿಸಿದ ನಂತರ, ವಾದಿನಿ ರಾಖಿ ಸಿಂಗ್ ಅವರು ಶೃಂಗಾರ್ ಗೌರಿಯನ್ನು ನಿಯಮಿತವಾಗಿ ಪೂಜಿಸುವಂತೆ ಒತ್ತಾಯಿಸಿದರು. ನೆಲಮಾಳಿಗೆಯ ಛಾವಣಿ ಮತ್ತು ಕಂಬಗಳು ಶಿಥಿಲವಾಗಿವೆ ಎಂದು ಹೇಳಿದರು. ಈ ಬಗ್ಗೆ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿಯಿಂದ ಮನವಿ ಕೂಡ ಮಾಡಲಾಗಿದ್ದು, ಒಳಗೆ ಪೂಜೆ ಸಲ್ಲಿಸುವ ಅರ್ಚಕರಿಗೆ ಅಪಾಯ ಎದುರಾಗಬಹುದು. ಹೀಗಾಗಿ ಕೂಡಲೇ ದುರಸ್ತಿಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ರಾಖಿ ಸಿಂಗ್ ಪರವಾಗಿ ಅರ್ಜಿ ಸಲ್ಲಿಸಿದ ವಕೀಲರು, ಶಿಥಿಲಗೊಂಡ ಛಾವಣಿಯ ಮೇಲೆ ನಮಾಜಿಗಳ ಪ್ರವೇಶ ತಡೆಯಲು ಬೇಡಿಕೆಯನ್ನು ಸಹ ಮಾಡಲಾಗಿದೆ. ಇದಾದ ನಂತರ ನ್ಯಾಯಾಲಯದ ಆದೇಶವು ಪ್ರಕರಣದ ವಿಚಾರಣೆ ನಡೆಸಲಿದೆ. ಇದಲ್ಲದೇ ಭಾರತೀಯ ಪುರಾತತ್ವ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಕಾಂಪ್ಲೆಕ್ಸ್‌ನಲ್ಲಿ ಸೆಲ್ಲಾರ್‌ಗಳು ಹೆಚ್ಚಿವೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇತರ ಸೆಲ್ಲಾರ್‌ಗಳ ಬಗ್ಗೆಯೂ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಆಗ್ರಹ ಮಾಡಲಾಗಿದೆ.

ಈ ಬಗ್ಗೆ ಮಸೀದಿ ಉಸ್ತುವಾರಿ ಸಮಿತಿಯು ಆಕ್ಷೇಪಣೆ ಸಲ್ಲಿಸಿದೆ. ಫಿರ್ಯಾದಿ ಮಹಿಳೆಯರಲ್ಲಿ ಲಕ್ಷ್ಮೀದೇವಿ, ಸೀತಾ ಸಾಹು, ಮಂಜು ವಿಕಾಸ್ ಮತ್ತು ರೇಖಾ ಪಾಠಕ್ ಕೂಡ ಸೇರಿದ್ದಾರೆ. ಇತ್ತೀಚೆಗೆ ಮುಷ್ಕರದ ಕಾರಣ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ, ಆದರೆ, ಇಂದು ಎರಡೂ ಕಡೆಯವರು ತಮ್ಮ ಚರ್ಚೆ ಮುಂದಕ್ಕೆ ಕೊಂಡೊಯ್ಯಲಿದ್ದಾರೆ.

ಓದಿ: ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ - Rape case Judgement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.