ETV Bharat / bharat

ಕೇವಲ 8 ತಿಂಗಳಲ್ಲಿ 5 ಬಾರಿ ವರ್ಗಾವಣೆ: ಬೇಸತ್ತು ಕಮಿಷನರ್​​ಗೆ ರಾಜೀನಾಮೆ ಕಳುಹಿಸಿದ ಕಾನ್ಸ್​​ಟೇಬಲ್​

8 ತಿಂಗಳುಗಳು, 5 ವರ್ಗಾವಣೆಗಳ ಹಿನ್ನೆಲೆಯಲ್ಲಿ ಬೇಸತ್ತ ಕಾನ್ಸ್‌ಟೇಬಲ್ ಒಬ್ಬರು ಲಖನೌ ಪೊಲೀಸ್ ಕಮಿಷನರ್‌ಗೆ ರಾಜೀನಾಮೆ ಕಳುಹಿಸಿದ್ದಾರೆ. ಪ್ರಕರಣದ ಗಂಭೀರತೆ ಪರಿಗಣಿಸಿ ಪೊಲೀಸ್ ಆಯುಕ್ತರು ತನಿಖೆ ಆರಂಭಿಸಿದ್ದಾರೆ.

up-police-constable-resign-due-to-5-transfers-in-8-months
ಕೇವಲ 8 ತಿಂಗಳಲ್ಲಿ 5 ಬಾರಿ ವರ್ಗಾವಣೆ: ಬೇಸತ್ತು ಕಮಿಷನರ್​​ಗೆ ರಾಜೀನಾಮೆ ಕಳುಹಿಸಿದ ಕಾನ್ಸ್​​ಟೇಬಲ್​ (Photo Credit; Constable Niaz Ahmed)
author img

By ETV Bharat Karnataka Team

Published : 3 hours ago

ಲಖನೌ ಉತ್ತರಪ್ರದೇಶ: ಎಂಟು ತಿಂಗಳಲ್ಲಿ 5 ಬಾರಿ ವರ್ಗಾವಣೆಯಾಗಿರುವುದರಿಂದ ಬೇಸತ್ತು ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕಾನ್ಸ್​ಟೇಬಲ್​​​ ಲಖನೌದಲ್ಲಿ ನಿಯೋಜನೆಗೊಂಡಿದ್ದರು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಅವರು ಪತ್ರವನ್ನೂ ಬರೆದಿದ್ದಾರೆ. ಇದಾದ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ಆದರೆ, ಯಾವೊಬ್ಬ ಪೊಲೀಸ್ ಅಧಿಕಾರಿಯೂ ಈ ವಿಚಾರದಲ್ಲಿ ಏನನ್ನೂ ಹೇಳಲು ಸಿದ್ಧರಿಲ್ಲ.

ಪ್ರಸ್ತುತ ಲಖನೌದ ನಾಗ್ರಾಮ್ ಪೊಲೀಸ್ ಠಾಣೆಯಲ್ಲಿ ಯುಪಿ 112 ರಲ್ಲಿ ನಿಯೋಜಿತರಾಗಿರುವ ಕಾನ್ಸ್‌ಟೇಬಲ್ ನಿಯಾಜ್ ಅಹ್ಮದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಲಖನೌ ಪೊಲೀಸ್ ಕಮಿಷನರ್‌ಗೆ ಕಳುಹಿಸಿದ್ದಾರೆ. ಇದರಲ್ಲಿ ಕಳೆದ 8 ತಿಂಗಳಲ್ಲಿ 5 ಬಾರಿ ವರ್ಗಾವಣೆಯಾಗಿರುವುದರಿಂದ ಬೇಸತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವರ್ಗಾವಣೆಯಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ. ಈ ಸ್ಥಿತಿಯಿಂದಾಗಿ ಕೆಲವು ಅಹಿತಕರ ಘಟನೆಗಳು ಸಂಭವಿಸಬಹುದು. ವರ್ಗಾವಣೆಯಿಂದಾಗಿ ತಮ್ಮ ಮಾನಸಿಕ ಸ್ಥಿತಿ ಮತ್ತು ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ನಾನು ಕೆಲಸಕ್ಕೆ ರಾಜೀನಾಮೆ ನೀಡಲು ಬಯಸುತ್ತೇನೆ ಎಂದು ಪತ್ರದಲ್ಲಿ ಪೇದೆ ನಿಯಾಜ್​ ಅಹ್ಮದ್​​ ವಿವರಿಸಿದ್ದಾರೆ.

ತನಿಖೆಗೆ ಆದೇಶ ನೀಡಿದ ಕಮಿಷನರ್​: ಪೊಲೀಸ್ ಕಾನ್ಸ್​​ಟೇಬಲ್​​ ಬರೆದಿರುವ ಪತ್ರದ ಗಂಭೀರತೆಯನ್ನು ಅರಿತಿರುವ ಪೊಲೀಸ್​ ಆಯುಕ್ತ ಅಮರೇಂದ್ರ ಸೆಂಗಾರ್, ಈ ವಿಷಯದ ತನಿಖೆಯನ್ನು ಡಿಸಿಪಿ ಸೆಂಟ್ರಲ್ ರವೀನಾ ತ್ಯಾಗಿ ಅವರಿಗೆ ವಹಿಸಿದ್ದಾರೆ. ಕಾನ್ಸ್​ಟೇಬಲ್​​ ಅವರೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ಕಾನ್ಸ್​​ಟೇಬಲ್​ ಹೇಳಿಕೆ ಪ್ರಕಾರ ಉದ್ದೇಶಪೂರ್ವಕವಾಗಿ ಅವರನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಅವರು ಇನ್ಮುಂದೆ ಕೆಲಸ ಮಾಡಲು ಬಯಸುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ.

ಪೊಲೀಸರು ಮಾನಸಿಕ ಒತ್ತಡದಲ್ಲಿರುವುದೇಕೆ?: ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ ಸುಮಾರು 24 ಪ್ರತಿಶತ ಪೊಲೀಸರು ಸರಾಸರಿ 16 ಗಂಟೆಗಳ ಕಾಲ ಮತ್ತು ಶೇ 44 ರಷ್ಟು ಜನ 12 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಅಧ್ಯಯನದ ಪ್ರಕಾರ, ಪೊಲೀಸರು ಸರಾಸರಿ ಪ್ರತಿದಿನ 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಶೇಕಡಾ 73 ರಷ್ಟು ಪೊಲೀಸರು ತಮ್ಮ ಕೆಲಸದ ಹೊರೆಯಿಂದ ಬಳಲುತ್ತಿದ್ದು, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. 85 ರಷ್ಟು ಪೊಲೀಸರ ಪ್ರಕಾರ, ಅವರು ತಮ್ಮ ಕರ್ತವ್ಯದ ಕಾರಣದಿಂದಾಗಿ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧ್ಯಯನದ ವೇಳೆ ಹೇಳಿಕೊಂಡಿದ್ದಾರೆ.

ಪೊಲೀಸರಿಗೆ ರಜೆಗಳು ಸಿಗುವುದು ಕಷ್ಟ: ಉತ್ತರ ಪ್ರದೇಶ ಪೊಲೀಸ್ ಅಸೋಸಿಯೇಷನ್ ​​ನಾನ್ ಗೆಜೆಟೆಡ್ ಪ್ರಧಾನ ಕಾರ್ಯದರ್ಶಿ ಆರ್.ಡಿ.ಪಾಠಕ್ ಮಾತನಾಡಿ, ಪೊಲೀಸರಿಗೆ ವರ್ಷದಲ್ಲಿ ಕೇವಲ 60 ರಜೆಗಳು ಸಿಗುತ್ತವೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಈ ರಜಾದಿನಗಳಿಂದ. ಪೊಲೀಸರ ಮನೆಯಲ್ಲಿ ಯಾವುದಾದರೂ ಅನಿರೀಕ್ಷಿತ ಸಮಸ್ಯೆ ಎದುರಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಬೇಗನೆ ರಜೆ ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಕೌಟುಂಬಿಕ ಕಲಹಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದೆ ವಾರದ ರಜೆ ನೀಡುವ ಉಪಕ್ರಮ: ಹತ್ತು ವರ್ಷಗಳ ಹಿಂದೆ ಅಂದರೆ ಜೂನ್ 1, 2013 ರಂದು ಅಂದಿನ ಡಿಐಜಿ ಲಖನೌ ನವನೀತ್ ಸಿಕೇರಾ ಅವರು ಪ್ರಾಯೋಗಿಕ ಯೋಜನೆಯಡಿ ಗೋಮತಿ ನಗರ ಪೊಲೀಸ್ ಠಾಣೆಯ ಪೊಲೀಸರಿಗೆ ವಾರದ ರಜೆ ನೀಡಲು ಮುಂದಾಗಿದ್ದರು. ಅದು ಹೇಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬ ಬಗ್ಗೆಯೂ ಸಂಶೋಧನೆ ನಡೆಸಲಾಗಿತ್ತು. ಅದರ ಫಲಿತಾಂಶ ಅಲ್ಲಿ ಯಶಸ್ವಿಯಾಗಿತ್ತು. ರಜೆಯ ಲಾಭ ಪಡೆದ ಪೊಲೀಸರ ಆರೋಗ್ಯ ತಪಾಸಣೆಯನ್ನೂ ಮಾಡಲಾಗಿದ್ದು, ಅದರಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿತ್ತು. ಆದಾಗ್ಯೂ ಈ ಉಪಕ್ರಮವು ಕ್ರಮೇಣ ನಿಂತು ಹೋಯಿತು.

ಮನೋವೈದ್ಯರು ಈ ಬಗ್ಗೆ ಹೇಳುವುದೇನು?: ಮನೋವೈದ್ಯ ಡಾ. ದೇವಶಿಶ್ ಶುಕ್ಲಾ ಅವರು ಕರೋನಾ ಅವಧಿಯಿಂದ ಮಾನಸಿಕ ಒತ್ತಡವು ಹಠಾತ್ ಆಗಿ ಹೆಚ್ಚಾಗುತ್ತಿದೆ. ಕೆಲವರು ಕೋಪದ ಭರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಅದರಲ್ಲೂ 15 ಗಂಟೆಗೂ ಹೆಚ್ಚು ಕಾಲ ರಜೆ ಇಲ್ಲದೇ ಕರ್ತವ್ಯ ನಿರ್ವಹಿಸುವ ಪೊಲೀಸರು ಇಂತಹ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಡಾ.ದೇವಶಿಶ್ ಅವರ ಪ್ರಕಾರ, ಪೊಲೀಸರ ಪೋಸ್ಟಿಂಗ್ ಸಾಮಾನ್ಯವಾಗಿ ಸಂಬಂಧಪಟ್ಟ ಜಿಲ್ಲೆಯಿಂದ ದೂರವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಕುಟುಂಬವನ್ನು ಭೇಟಿಯಾಗುವುದು ಅಪರೂಪ. ಅದಕ್ಕೂ ಮಿಗಿಲಾಗಿ ಕರ್ತವ್ಯದಲ್ಲಿರುವಾಗ ಸದಾ ಎಚ್ಚರದಿಂದಿರುವುದು ಮತ್ತು ಎಲ್ಲ ಇಲಾಖೆಗಳಿಗಿಂತ ಹೆಚ್ಚು ಹೊಣೆಗಾರಿಕೆ ಪೊಲೀಸರ ಮೇಲಿದೆ. ಸಾರ್ವಜನಿಕರಲ್ಲಿ ನಕಾರಾತ್ಮಕ ಚಿತ್ರಣ, ಅಧಿಕಾರಿಗಳಿಂದ ಸಂವಹನದ ಕೊರತೆ, ದೀರ್ಘ ಕರ್ತವ್ಯ, ವಾರದ ರಜೆ ಪಡೆಯದಿರುವುದು ಮುಂತಾದ ಕಾರಣಗಳು ಅವರ ಒತ್ತಡ ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗಲು ಪ್ರಮುಖ ಕಾರಣಗಳಾಗಿವೆ ಅಂತಾರೆ ಇವರು.

ಇದನ್ನು ಓದಿ:ಅರ್ಹತೆ-ಕೌಶಲ್ಯವಿಲ್ಲದಿದ್ದರೆ, ಚಿಕಿತ್ಸೆ ನೀಡದಿದ್ದರೆ ಮಾತ್ರ ವೈದ್ಯರು ನಿರ್ಲಕ್ಷ್ಯಕ್ಕೆ ಹೊಣೆ: ಸುಪ್ರೀಂ ಕೋರ್ಟ್
ಕಾಶ್ಮೀರದ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆದ ಅಣ್ಣ ತಂಗಿ: ಲಕ್ಷಾಂತರ ಆದಾಯದ ನಿರೀಕ್ಷೆ

ಲಖನೌ ಉತ್ತರಪ್ರದೇಶ: ಎಂಟು ತಿಂಗಳಲ್ಲಿ 5 ಬಾರಿ ವರ್ಗಾವಣೆಯಾಗಿರುವುದರಿಂದ ಬೇಸತ್ತು ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕಾನ್ಸ್​ಟೇಬಲ್​​​ ಲಖನೌದಲ್ಲಿ ನಿಯೋಜನೆಗೊಂಡಿದ್ದರು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಅವರು ಪತ್ರವನ್ನೂ ಬರೆದಿದ್ದಾರೆ. ಇದಾದ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ಆದರೆ, ಯಾವೊಬ್ಬ ಪೊಲೀಸ್ ಅಧಿಕಾರಿಯೂ ಈ ವಿಚಾರದಲ್ಲಿ ಏನನ್ನೂ ಹೇಳಲು ಸಿದ್ಧರಿಲ್ಲ.

ಪ್ರಸ್ತುತ ಲಖನೌದ ನಾಗ್ರಾಮ್ ಪೊಲೀಸ್ ಠಾಣೆಯಲ್ಲಿ ಯುಪಿ 112 ರಲ್ಲಿ ನಿಯೋಜಿತರಾಗಿರುವ ಕಾನ್ಸ್‌ಟೇಬಲ್ ನಿಯಾಜ್ ಅಹ್ಮದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಲಖನೌ ಪೊಲೀಸ್ ಕಮಿಷನರ್‌ಗೆ ಕಳುಹಿಸಿದ್ದಾರೆ. ಇದರಲ್ಲಿ ಕಳೆದ 8 ತಿಂಗಳಲ್ಲಿ 5 ಬಾರಿ ವರ್ಗಾವಣೆಯಾಗಿರುವುದರಿಂದ ಬೇಸತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವರ್ಗಾವಣೆಯಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ. ಈ ಸ್ಥಿತಿಯಿಂದಾಗಿ ಕೆಲವು ಅಹಿತಕರ ಘಟನೆಗಳು ಸಂಭವಿಸಬಹುದು. ವರ್ಗಾವಣೆಯಿಂದಾಗಿ ತಮ್ಮ ಮಾನಸಿಕ ಸ್ಥಿತಿ ಮತ್ತು ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ನಾನು ಕೆಲಸಕ್ಕೆ ರಾಜೀನಾಮೆ ನೀಡಲು ಬಯಸುತ್ತೇನೆ ಎಂದು ಪತ್ರದಲ್ಲಿ ಪೇದೆ ನಿಯಾಜ್​ ಅಹ್ಮದ್​​ ವಿವರಿಸಿದ್ದಾರೆ.

ತನಿಖೆಗೆ ಆದೇಶ ನೀಡಿದ ಕಮಿಷನರ್​: ಪೊಲೀಸ್ ಕಾನ್ಸ್​​ಟೇಬಲ್​​ ಬರೆದಿರುವ ಪತ್ರದ ಗಂಭೀರತೆಯನ್ನು ಅರಿತಿರುವ ಪೊಲೀಸ್​ ಆಯುಕ್ತ ಅಮರೇಂದ್ರ ಸೆಂಗಾರ್, ಈ ವಿಷಯದ ತನಿಖೆಯನ್ನು ಡಿಸಿಪಿ ಸೆಂಟ್ರಲ್ ರವೀನಾ ತ್ಯಾಗಿ ಅವರಿಗೆ ವಹಿಸಿದ್ದಾರೆ. ಕಾನ್ಸ್​ಟೇಬಲ್​​ ಅವರೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ಕಾನ್ಸ್​​ಟೇಬಲ್​ ಹೇಳಿಕೆ ಪ್ರಕಾರ ಉದ್ದೇಶಪೂರ್ವಕವಾಗಿ ಅವರನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಅವರು ಇನ್ಮುಂದೆ ಕೆಲಸ ಮಾಡಲು ಬಯಸುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ.

ಪೊಲೀಸರು ಮಾನಸಿಕ ಒತ್ತಡದಲ್ಲಿರುವುದೇಕೆ?: ಒಂದು ಅಧ್ಯಯನದ ಪ್ರಕಾರ ದೇಶದಲ್ಲಿ ಸುಮಾರು 24 ಪ್ರತಿಶತ ಪೊಲೀಸರು ಸರಾಸರಿ 16 ಗಂಟೆಗಳ ಕಾಲ ಮತ್ತು ಶೇ 44 ರಷ್ಟು ಜನ 12 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಅಧ್ಯಯನದ ಪ್ರಕಾರ, ಪೊಲೀಸರು ಸರಾಸರಿ ಪ್ರತಿದಿನ 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಶೇಕಡಾ 73 ರಷ್ಟು ಪೊಲೀಸರು ತಮ್ಮ ಕೆಲಸದ ಹೊರೆಯಿಂದ ಬಳಲುತ್ತಿದ್ದು, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. 85 ರಷ್ಟು ಪೊಲೀಸರ ಪ್ರಕಾರ, ಅವರು ತಮ್ಮ ಕರ್ತವ್ಯದ ಕಾರಣದಿಂದಾಗಿ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧ್ಯಯನದ ವೇಳೆ ಹೇಳಿಕೊಂಡಿದ್ದಾರೆ.

ಪೊಲೀಸರಿಗೆ ರಜೆಗಳು ಸಿಗುವುದು ಕಷ್ಟ: ಉತ್ತರ ಪ್ರದೇಶ ಪೊಲೀಸ್ ಅಸೋಸಿಯೇಷನ್ ​​ನಾನ್ ಗೆಜೆಟೆಡ್ ಪ್ರಧಾನ ಕಾರ್ಯದರ್ಶಿ ಆರ್.ಡಿ.ಪಾಠಕ್ ಮಾತನಾಡಿ, ಪೊಲೀಸರಿಗೆ ವರ್ಷದಲ್ಲಿ ಕೇವಲ 60 ರಜೆಗಳು ಸಿಗುತ್ತವೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಈ ರಜಾದಿನಗಳಿಂದ. ಪೊಲೀಸರ ಮನೆಯಲ್ಲಿ ಯಾವುದಾದರೂ ಅನಿರೀಕ್ಷಿತ ಸಮಸ್ಯೆ ಎದುರಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಬೇಗನೆ ರಜೆ ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಕೌಟುಂಬಿಕ ಕಲಹಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದೆ ವಾರದ ರಜೆ ನೀಡುವ ಉಪಕ್ರಮ: ಹತ್ತು ವರ್ಷಗಳ ಹಿಂದೆ ಅಂದರೆ ಜೂನ್ 1, 2013 ರಂದು ಅಂದಿನ ಡಿಐಜಿ ಲಖನೌ ನವನೀತ್ ಸಿಕೇರಾ ಅವರು ಪ್ರಾಯೋಗಿಕ ಯೋಜನೆಯಡಿ ಗೋಮತಿ ನಗರ ಪೊಲೀಸ್ ಠಾಣೆಯ ಪೊಲೀಸರಿಗೆ ವಾರದ ರಜೆ ನೀಡಲು ಮುಂದಾಗಿದ್ದರು. ಅದು ಹೇಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬ ಬಗ್ಗೆಯೂ ಸಂಶೋಧನೆ ನಡೆಸಲಾಗಿತ್ತು. ಅದರ ಫಲಿತಾಂಶ ಅಲ್ಲಿ ಯಶಸ್ವಿಯಾಗಿತ್ತು. ರಜೆಯ ಲಾಭ ಪಡೆದ ಪೊಲೀಸರ ಆರೋಗ್ಯ ತಪಾಸಣೆಯನ್ನೂ ಮಾಡಲಾಗಿದ್ದು, ಅದರಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿತ್ತು. ಆದಾಗ್ಯೂ ಈ ಉಪಕ್ರಮವು ಕ್ರಮೇಣ ನಿಂತು ಹೋಯಿತು.

ಮನೋವೈದ್ಯರು ಈ ಬಗ್ಗೆ ಹೇಳುವುದೇನು?: ಮನೋವೈದ್ಯ ಡಾ. ದೇವಶಿಶ್ ಶುಕ್ಲಾ ಅವರು ಕರೋನಾ ಅವಧಿಯಿಂದ ಮಾನಸಿಕ ಒತ್ತಡವು ಹಠಾತ್ ಆಗಿ ಹೆಚ್ಚಾಗುತ್ತಿದೆ. ಕೆಲವರು ಕೋಪದ ಭರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಅದರಲ್ಲೂ 15 ಗಂಟೆಗೂ ಹೆಚ್ಚು ಕಾಲ ರಜೆ ಇಲ್ಲದೇ ಕರ್ತವ್ಯ ನಿರ್ವಹಿಸುವ ಪೊಲೀಸರು ಇಂತಹ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಡಾ.ದೇವಶಿಶ್ ಅವರ ಪ್ರಕಾರ, ಪೊಲೀಸರ ಪೋಸ್ಟಿಂಗ್ ಸಾಮಾನ್ಯವಾಗಿ ಸಂಬಂಧಪಟ್ಟ ಜಿಲ್ಲೆಯಿಂದ ದೂರವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಕುಟುಂಬವನ್ನು ಭೇಟಿಯಾಗುವುದು ಅಪರೂಪ. ಅದಕ್ಕೂ ಮಿಗಿಲಾಗಿ ಕರ್ತವ್ಯದಲ್ಲಿರುವಾಗ ಸದಾ ಎಚ್ಚರದಿಂದಿರುವುದು ಮತ್ತು ಎಲ್ಲ ಇಲಾಖೆಗಳಿಗಿಂತ ಹೆಚ್ಚು ಹೊಣೆಗಾರಿಕೆ ಪೊಲೀಸರ ಮೇಲಿದೆ. ಸಾರ್ವಜನಿಕರಲ್ಲಿ ನಕಾರಾತ್ಮಕ ಚಿತ್ರಣ, ಅಧಿಕಾರಿಗಳಿಂದ ಸಂವಹನದ ಕೊರತೆ, ದೀರ್ಘ ಕರ್ತವ್ಯ, ವಾರದ ರಜೆ ಪಡೆಯದಿರುವುದು ಮುಂತಾದ ಕಾರಣಗಳು ಅವರ ಒತ್ತಡ ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗಲು ಪ್ರಮುಖ ಕಾರಣಗಳಾಗಿವೆ ಅಂತಾರೆ ಇವರು.

ಇದನ್ನು ಓದಿ:ಅರ್ಹತೆ-ಕೌಶಲ್ಯವಿಲ್ಲದಿದ್ದರೆ, ಚಿಕಿತ್ಸೆ ನೀಡದಿದ್ದರೆ ಮಾತ್ರ ವೈದ್ಯರು ನಿರ್ಲಕ್ಷ್ಯಕ್ಕೆ ಹೊಣೆ: ಸುಪ್ರೀಂ ಕೋರ್ಟ್
ಕಾಶ್ಮೀರದ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆದ ಅಣ್ಣ ತಂಗಿ: ಲಕ್ಷಾಂತರ ಆದಾಯದ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.