ETV Bharat / bharat

ದೆಹಲಿಯಲ್ಲಿ ಭಾರೀ ಮಳೆ, ದೇಶದ ಹಲವೆಡೆ ಕೂಡ ಇಂದು ವರುಣನ ಸಾಧ್ಯತೆ; ಐಎಂಡಿ - IMD RAIN PREDICTION

author img

By PTI

Published : May 11, 2024, 10:33 AM IST

ಕರ್ನಾಟಕದ ದಕ್ಷಿಣ ಒಳನಾಡು ಸೇರಿದಂತೆ ದಕ್ಷಿಣ ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಮೇಘಾಲಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

thunderstorms-across-country-after-dust-storm-wreaks-havoc-in-delhi
thunderstorms-across-country-after-dust-storm-wreaks-havoc-in-delhi (ಫೋಟೋ ಕೃಪೆ: ಐಎಎನ್​ಎಸ್​)

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಶನಿವಾರ ಗುಡುಗು ಮಿಂಚಿನ ಸಹಿತದ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 3 ಗಂಟೆಗಳಲ್ಲಿ ಉತ್ತರಾಖಂಡ್​​, ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ. ಪಂಜಾಬ್​​, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕೂಡ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಮೇಘಾಲಯ, ಆಗ್ನೇಯ ಅರುಣಾಚಲ ಪ್ರದೇಶ, ಆಗ್ನೇಯ ಅಸ್ಸೋಂ, ಮಣಿಪುರ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕೇರಳದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ದೆಹಲಿಯಲ್ಲಿ ವಿಮಾನ ಹಾರಾಟ ವ್ಯತ್ಯಯ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಧೂಳಿನಿಂದ ಕೂಡಿದ ಬಲವಾದ ಗಾಳಿ ಮತ್ತು ಮಳೆಯಾಗಿದೆ. ಕೆಟ್ಟ ಹವಾಮಾನದಿಂದ 9 ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಕೆಟ್ಟ ಹವಾಮಾನದಿಂದ ಕೆಲವು ವಿಮಾನಗಳನ್ನು ದೆಹಲಿ ಬದಲಾಗಿ ಜೈಪುರದಲ್ಲಿ ಇಳಿಸಲಾಗಿದೆ.

ಭಾರೀ ಧೂಳಿನಿಂದ ಕೂಡಿದ ಮಳೆಯಾಗುವ ಹಿನ್ನೆಲೆ ಜನರಿಗೆ ಮನೆಯಲ್ಲಿಯೇ ಇರುವಂತೆ ಮತ್ತು ಅನಗತ್ಯ ಪ್ರಯಾಣವನ್ನು ರದ್ದು ಮಾಡುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಜನರು ಸುರಕ್ಷಿತ ಆಶ್ರಯತಾಣ ಪಡೆಯುವಂತೆ ಮತ್ತು ಮರದ ಕೆಳಗೆ ನಿಲ್ಲುವುದನ್ನು ತಪ್ಪಿಸುವಂತೆ ಕೂಡ ಮನವಿ ಮಾಡಿದೆ. ಶುಕ್ರವಾರ ರಾತ್ರಿ ಗಾಳಿಯ ವೇಗ ಗಂಟೆಗೆ 60 ರಿಂದ 90 ಕಿ.ಮೀ ಇತ್ತು ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

ನೋಯ್ಡಾ ಮತ್ತು ಗಾಜಿಯಾಬಾದ್​ನಲ್ಲೂ ಕೂಡ ಹಠಾತ್ ಮತ್ತು ಬಲವಾದ ಧೂಳು ಆವರಿಸಿದೆ. ಮರಗಳು ಭಾರೀ ಮಳೆಗೆ ಉರುಳಿದ ಪರಿಣಾಮ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಜನರು ತೊಂದರೆ ಅನುಭವಿಸುವಂತಾಯಿತು.

ಶುಕ್ರವಾರ ಸುರಿದ ಭಾರೀ ಮಳೆಗೆ ವಿವಿಧ ಪ್ರದೇಶಗಳಲ್ಲಿ 152 ಮರಗಳು ನೆಲಕ್ಕುರುಳಿದ್ದು, 55 ಕಟ್ಟಡಗಳಿಗೆ ಹಾನಿಯಾಗಿದೆ. ವಿದ್ಯುತ್​ ಅಡಚಣೆಯಿಂದ ಕೂಡ ಜನರು ತೊಂದರೆ ಅನುಭವಿಸಿದರು. ಶನಿವಾರ ಮತ್ತು ಭಾನುವಾರ ಕೂಡ ದೆಹಲಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಜಾಮೀನು ಮೇಲೆ ಜೈಲಿಂದ ದೆಹಲಿ ಸಿಎಂ ಬಿಡುಗಡೆ: ನಾವು ಸರ್ವಾಧಿಕಾರದಿಂದ ದೇಶವನ್ನು ಕಾಪಾಡಬೇಕಿದೆ ಎಂದ ಕೇಜ್ರಿವಾಲ್

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಶನಿವಾರ ಗುಡುಗು ಮಿಂಚಿನ ಸಹಿತದ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 3 ಗಂಟೆಗಳಲ್ಲಿ ಉತ್ತರಾಖಂಡ್​​, ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ. ಪಂಜಾಬ್​​, ಹರಿಯಾಣ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕೂಡ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಮೇಘಾಲಯ, ಆಗ್ನೇಯ ಅರುಣಾಚಲ ಪ್ರದೇಶ, ಆಗ್ನೇಯ ಅಸ್ಸೋಂ, ಮಣಿಪುರ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕೇರಳದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ದೆಹಲಿಯಲ್ಲಿ ವಿಮಾನ ಹಾರಾಟ ವ್ಯತ್ಯಯ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಧೂಳಿನಿಂದ ಕೂಡಿದ ಬಲವಾದ ಗಾಳಿ ಮತ್ತು ಮಳೆಯಾಗಿದೆ. ಕೆಟ್ಟ ಹವಾಮಾನದಿಂದ 9 ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಕೆಟ್ಟ ಹವಾಮಾನದಿಂದ ಕೆಲವು ವಿಮಾನಗಳನ್ನು ದೆಹಲಿ ಬದಲಾಗಿ ಜೈಪುರದಲ್ಲಿ ಇಳಿಸಲಾಗಿದೆ.

ಭಾರೀ ಧೂಳಿನಿಂದ ಕೂಡಿದ ಮಳೆಯಾಗುವ ಹಿನ್ನೆಲೆ ಜನರಿಗೆ ಮನೆಯಲ್ಲಿಯೇ ಇರುವಂತೆ ಮತ್ತು ಅನಗತ್ಯ ಪ್ರಯಾಣವನ್ನು ರದ್ದು ಮಾಡುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಜನರು ಸುರಕ್ಷಿತ ಆಶ್ರಯತಾಣ ಪಡೆಯುವಂತೆ ಮತ್ತು ಮರದ ಕೆಳಗೆ ನಿಲ್ಲುವುದನ್ನು ತಪ್ಪಿಸುವಂತೆ ಕೂಡ ಮನವಿ ಮಾಡಿದೆ. ಶುಕ್ರವಾರ ರಾತ್ರಿ ಗಾಳಿಯ ವೇಗ ಗಂಟೆಗೆ 60 ರಿಂದ 90 ಕಿ.ಮೀ ಇತ್ತು ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

ನೋಯ್ಡಾ ಮತ್ತು ಗಾಜಿಯಾಬಾದ್​ನಲ್ಲೂ ಕೂಡ ಹಠಾತ್ ಮತ್ತು ಬಲವಾದ ಧೂಳು ಆವರಿಸಿದೆ. ಮರಗಳು ಭಾರೀ ಮಳೆಗೆ ಉರುಳಿದ ಪರಿಣಾಮ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಜನರು ತೊಂದರೆ ಅನುಭವಿಸುವಂತಾಯಿತು.

ಶುಕ್ರವಾರ ಸುರಿದ ಭಾರೀ ಮಳೆಗೆ ವಿವಿಧ ಪ್ರದೇಶಗಳಲ್ಲಿ 152 ಮರಗಳು ನೆಲಕ್ಕುರುಳಿದ್ದು, 55 ಕಟ್ಟಡಗಳಿಗೆ ಹಾನಿಯಾಗಿದೆ. ವಿದ್ಯುತ್​ ಅಡಚಣೆಯಿಂದ ಕೂಡ ಜನರು ತೊಂದರೆ ಅನುಭವಿಸಿದರು. ಶನಿವಾರ ಮತ್ತು ಭಾನುವಾರ ಕೂಡ ದೆಹಲಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಜಾಮೀನು ಮೇಲೆ ಜೈಲಿಂದ ದೆಹಲಿ ಸಿಎಂ ಬಿಡುಗಡೆ: ನಾವು ಸರ್ವಾಧಿಕಾರದಿಂದ ದೇಶವನ್ನು ಕಾಪಾಡಬೇಕಿದೆ ಎಂದ ಕೇಜ್ರಿವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.