ETV Bharat / bharat

ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದರೂ ಕುಂದದ ಉತ್ಸಾಹ; ಇಂಟರ್​ನಲ್ಲಿ 927 ಅಂಕ ಪಡೆದು ’ಸಿರಿ‘ ಸಾಧನೆ - Success Stroy of student

author img

By ETV Bharat Karnataka Team

Published : Apr 25, 2024, 11:26 AM IST

ಓದುವ ಉತ್ಸಾಹ ಇದ್ದರೆ ಯಾವುದೇ ಸಮಸ್ಯೆ ತೊಡಕು ಆಗದು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಈ ಸಿರಿ.

the-siri-of-studies-dot-dot-dot-who-persevered-despite-failing-both-kidneys-dot-dot-dot-a-student-of-a-government-college-who-secured-927-marks-in-inter
the-siri-of-studies-dot-dot-dot-who-persevered-despite-failing-both-kidneys-dot-dot-dot-a-student-of-a-government-college-who-secured-927-marks-in-inter

ಗೋಧವರಿಖಾನಿ : ಓದುವ ಹಂಬಲ, ಸಾಧಿಸುವ ಛಲ ಇದ್ದರೆ, ಯಾವುದೇ ಸಮಸ್ಯೆಗಳು ಅಡ್ಡಿಯಾಗದು ಎಂಬ ಮಾತಿದೆ. ಅದರಂತೆ ಸಾಧನೆ ಮಾಡಿ ತೋರಿಸಿದ್ದಾರೆ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖಾನಿಯ ಕುಣರಪು ಸಿರಿ. ಇಂಟರ್​ ಫಲಿತಾಂಶದಲ್ಲಿ ಸಿಇಸಿ ವರ್ಗದಲ್ಲಿ 927 ಅಂಕಗಳನ್ನು ​ ಪಡೆಯುವ ಮೂಲಕ ಕಾಲೇಜ್​ಗೆ ಟಾಪರ್​ ಆಗಿದ್ದಾರೆ.

ಶಾರದಾನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಓದುತ್ತಿರುವ ಸಿರಿ ಎಲ್ಲರಂತೆ ಸಾಮಾನ್ಯ ಹುಡುಗಿಯಲ್ಲ. ಕಾರಣ ಈಕೆ ಆರೋಗ್ಯ ಸಮಸ್ಯೆಯಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್​ಗೆ ಒಳಗಾಗಬೇಕು. ಇದರಿಂದ ಆಕೆಗೆ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಓದಿನ ಆದಮ್ಯ ಆಸಕ್ತಿ ಹೊಂದಿದ ಸಿರಿ, ಆರೋಗ್ಯ ಸಮಸ್ಯೆಗಳ ನಡುವೆ ಓದಿ ಶಾರದಾನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಇಂಟರ್ ದ್ವಿತೀಯ ವರ್ಷದಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆ ಜೊತೆಗೆ ಅನೇಕರಿಗೆ ಸ್ಪೂರ್ತಿಯಾಗಿದ್ದಾಳೆ.

ಕಟ್ಟಡ ನಿರ್ಮಾಣ ಕೆಲಸಗಾರರ ಪುತ್ರಿ ಈ ಸಿರಿ: ಗೋದಾವರಿಖನಿ ಎನ್ ಟಿಪಿಸಿ ಕೃಷ್ಣಾನಗರದ ಕುಣರಪು ಪೋಷಂ ಮತ್ತು ವೆಂಕಟ ಲಕ್ಷ್ಮಿ ದಂಪತಿಯ ಮೊದಲ ಮಗಳು ಸಿರಿಯಾಗಿದ್ದಾಳೆ. ಕಟ್ಟಡ ನಿರ್ಮಾಣ ಕೆಲಸ ಮಾಡುವ ಪೋಷಕರು, ಬರುವ ಚಿಕ್ಕ ಆದಾಯದಲ್ಲಿ ಚೊಕ್ಕವಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಸಿರಿಗೆ ಕಳೆದ ಐದು ವರ್ಷದಿಂದ ಕಿಡ್ನಿ ಸಮಸ್ಯೆ ಉಂಟಾಗಿದ್ದು, ದಿನ ಕಳೆದಂತೆ ಆಕೆಯ ಕಿಡ್ನಿ ಕೆಲಸ ನಿಧಾನಗೊಳಿಸಿದೆ. ಕಳೆದ ಎಂಟು ತಿಂಗಳ ಹಿಂದೆ ಆಕೆಯ ಎರಡೂ ಕಿಡ್ನಿ ಸಂಪೂರ್ಣವಾಗಿ ವಿಫಲಗೊಂಡಿವೆ. ಅಂದಿನಿಂದ ಆಕೆ ಸಂಪೂರ್ಣವಾಗಿ ಹಾಸಿಗೆ ಹಿಡಿದು, ವಾರಕ್ಕೆ ಎರಡು ಬಾರಿ ಕಿಡ್ನಿ ಡಯಾಲಿಸೀಸ್​​ಗೆ ಒಳಗಾಗುತ್ತಿದ್ದಾಳೆ.

ಶಾಲಾ ಶಿಕ್ಷಕರು, ಸಿಬ್ಬಂದಿ ಸಹಾಯದಿಂದ ಮನೆಯಲ್ಲೇ ಓದು: ಇಷ್ಟೆಲ್ಲಾ ಸಮಸ್ಯೆ ನಡುವೆಯೂ ಆಕೆಗೆ ಓದಿನಲ್ಲಿರುವ ಆಸಕ್ತಿ ಕಂಡ ಪೋಷಕರು, ಕಾಲೇಜು​ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿಗಳು, ಸ್ನೇಹಿತರು ಓದಿನಲ್ಲಿ ಸಹಾಯ ಮಾಡಿದ್ದಾರೆ. ಓದಿನ ಕುರಿತು ಇದ್ದ ಅನುಮಾನ ಮತ್ತು ಸಲಹೆ ಸೂಚನೆಗಳಿಗೆ ಫೋನ್​ ಮೂಲಕವೇ ತಿಳಿದುಕೊಂಡಿದ್ದಾಳೆ. ಮಗಳ ಪರಿಸ್ಥಿತಿಗೆ ಮರುಗಿದರೂ ಫೋಷಕರು ಆಕೆಯ ಓದಿಗೆ ಪ್ರತಿನಿತ್ಯ ಪ್ರೋತ್ಸಾಹಿಸಿದ್ದಾರೆ.

ಮನೆಯಲ್ಲಿಯೇ ಪಠ್ಯಗಳ ಅಧ್ಯಯನ ಮಾಡಿದ ಸಿರಿ ಸ್ವಂತ ಅಧ್ಯಯನ ಮೂಲಕ ಆಪ್ತರ ಸಲಹೆ ಸೂಚನೆಯಂತೆ ಪರೀಕ್ಷೆಗೆ ತಯಾರಿ ನಡೆಸಿ, ಪರೀಕ್ಷೆ ಬರೆದಿದ್ದಾಳೆ. ಇದೀಗ ಆಕೆ ಫಲಿತಾಂಶ ಹೊರ ಬಂದಿದ್ದು, ಅವಳ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ. ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಹೀಗಾಗಿ ಮಗಳ ಕಿಡ್ನಿ ಕಸಿ ಚಿಕಿತ್ಸೆಗೆ ಸರ್ಕಾರ ಮತ್ತು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಜೆಇಇ ಫಲಿತಾಂಶ ಪ್ರಕಟ: 56 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ.. ಟಾಪರ್ಸ್​​ ಲಿಸ್ಟ್​ನಲ್ಲಿ ಕರ್ನಾಟಕದ ಮೂವರು!

ಗೋಧವರಿಖಾನಿ : ಓದುವ ಹಂಬಲ, ಸಾಧಿಸುವ ಛಲ ಇದ್ದರೆ, ಯಾವುದೇ ಸಮಸ್ಯೆಗಳು ಅಡ್ಡಿಯಾಗದು ಎಂಬ ಮಾತಿದೆ. ಅದರಂತೆ ಸಾಧನೆ ಮಾಡಿ ತೋರಿಸಿದ್ದಾರೆ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖಾನಿಯ ಕುಣರಪು ಸಿರಿ. ಇಂಟರ್​ ಫಲಿತಾಂಶದಲ್ಲಿ ಸಿಇಸಿ ವರ್ಗದಲ್ಲಿ 927 ಅಂಕಗಳನ್ನು ​ ಪಡೆಯುವ ಮೂಲಕ ಕಾಲೇಜ್​ಗೆ ಟಾಪರ್​ ಆಗಿದ್ದಾರೆ.

ಶಾರದಾನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಓದುತ್ತಿರುವ ಸಿರಿ ಎಲ್ಲರಂತೆ ಸಾಮಾನ್ಯ ಹುಡುಗಿಯಲ್ಲ. ಕಾರಣ ಈಕೆ ಆರೋಗ್ಯ ಸಮಸ್ಯೆಯಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್​ಗೆ ಒಳಗಾಗಬೇಕು. ಇದರಿಂದ ಆಕೆಗೆ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಓದಿನ ಆದಮ್ಯ ಆಸಕ್ತಿ ಹೊಂದಿದ ಸಿರಿ, ಆರೋಗ್ಯ ಸಮಸ್ಯೆಗಳ ನಡುವೆ ಓದಿ ಶಾರದಾನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಇಂಟರ್ ದ್ವಿತೀಯ ವರ್ಷದಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆ ಜೊತೆಗೆ ಅನೇಕರಿಗೆ ಸ್ಪೂರ್ತಿಯಾಗಿದ್ದಾಳೆ.

ಕಟ್ಟಡ ನಿರ್ಮಾಣ ಕೆಲಸಗಾರರ ಪುತ್ರಿ ಈ ಸಿರಿ: ಗೋದಾವರಿಖನಿ ಎನ್ ಟಿಪಿಸಿ ಕೃಷ್ಣಾನಗರದ ಕುಣರಪು ಪೋಷಂ ಮತ್ತು ವೆಂಕಟ ಲಕ್ಷ್ಮಿ ದಂಪತಿಯ ಮೊದಲ ಮಗಳು ಸಿರಿಯಾಗಿದ್ದಾಳೆ. ಕಟ್ಟಡ ನಿರ್ಮಾಣ ಕೆಲಸ ಮಾಡುವ ಪೋಷಕರು, ಬರುವ ಚಿಕ್ಕ ಆದಾಯದಲ್ಲಿ ಚೊಕ್ಕವಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಸಿರಿಗೆ ಕಳೆದ ಐದು ವರ್ಷದಿಂದ ಕಿಡ್ನಿ ಸಮಸ್ಯೆ ಉಂಟಾಗಿದ್ದು, ದಿನ ಕಳೆದಂತೆ ಆಕೆಯ ಕಿಡ್ನಿ ಕೆಲಸ ನಿಧಾನಗೊಳಿಸಿದೆ. ಕಳೆದ ಎಂಟು ತಿಂಗಳ ಹಿಂದೆ ಆಕೆಯ ಎರಡೂ ಕಿಡ್ನಿ ಸಂಪೂರ್ಣವಾಗಿ ವಿಫಲಗೊಂಡಿವೆ. ಅಂದಿನಿಂದ ಆಕೆ ಸಂಪೂರ್ಣವಾಗಿ ಹಾಸಿಗೆ ಹಿಡಿದು, ವಾರಕ್ಕೆ ಎರಡು ಬಾರಿ ಕಿಡ್ನಿ ಡಯಾಲಿಸೀಸ್​​ಗೆ ಒಳಗಾಗುತ್ತಿದ್ದಾಳೆ.

ಶಾಲಾ ಶಿಕ್ಷಕರು, ಸಿಬ್ಬಂದಿ ಸಹಾಯದಿಂದ ಮನೆಯಲ್ಲೇ ಓದು: ಇಷ್ಟೆಲ್ಲಾ ಸಮಸ್ಯೆ ನಡುವೆಯೂ ಆಕೆಗೆ ಓದಿನಲ್ಲಿರುವ ಆಸಕ್ತಿ ಕಂಡ ಪೋಷಕರು, ಕಾಲೇಜು​ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿಗಳು, ಸ್ನೇಹಿತರು ಓದಿನಲ್ಲಿ ಸಹಾಯ ಮಾಡಿದ್ದಾರೆ. ಓದಿನ ಕುರಿತು ಇದ್ದ ಅನುಮಾನ ಮತ್ತು ಸಲಹೆ ಸೂಚನೆಗಳಿಗೆ ಫೋನ್​ ಮೂಲಕವೇ ತಿಳಿದುಕೊಂಡಿದ್ದಾಳೆ. ಮಗಳ ಪರಿಸ್ಥಿತಿಗೆ ಮರುಗಿದರೂ ಫೋಷಕರು ಆಕೆಯ ಓದಿಗೆ ಪ್ರತಿನಿತ್ಯ ಪ್ರೋತ್ಸಾಹಿಸಿದ್ದಾರೆ.

ಮನೆಯಲ್ಲಿಯೇ ಪಠ್ಯಗಳ ಅಧ್ಯಯನ ಮಾಡಿದ ಸಿರಿ ಸ್ವಂತ ಅಧ್ಯಯನ ಮೂಲಕ ಆಪ್ತರ ಸಲಹೆ ಸೂಚನೆಯಂತೆ ಪರೀಕ್ಷೆಗೆ ತಯಾರಿ ನಡೆಸಿ, ಪರೀಕ್ಷೆ ಬರೆದಿದ್ದಾಳೆ. ಇದೀಗ ಆಕೆ ಫಲಿತಾಂಶ ಹೊರ ಬಂದಿದ್ದು, ಅವಳ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ. ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಹೀಗಾಗಿ ಮಗಳ ಕಿಡ್ನಿ ಕಸಿ ಚಿಕಿತ್ಸೆಗೆ ಸರ್ಕಾರ ಮತ್ತು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಜೆಇಇ ಫಲಿತಾಂಶ ಪ್ರಕಟ: 56 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ.. ಟಾಪರ್ಸ್​​ ಲಿಸ್ಟ್​ನಲ್ಲಿ ಕರ್ನಾಟಕದ ಮೂವರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.