ETV Bharat / bharat

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿ ಸಾವು: ಕುಲಪತಿ ಅಮಾನತುಗೊಳಿಸಿ ಕೇರಳ ರಾಜ್ಯಪಾಲರ ಆದೇಶ

author img

By ETV Bharat Karnataka Team

Published : Mar 2, 2024, 4:05 PM IST

Updated : Mar 2, 2024, 5:18 PM IST

ಕೇರಳದ ವಯನಾಡಿನಲ್ಲಿರುವ ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್​.ಸಸೀಂದ್ರನಾಥ್ ಅವರನ್ನು ಕುಲಾಧಿಪತಿಗಳಾದ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್ ಅಮಾನತು ಮಾಡಿದ್ದಾರೆ.

Student death Case: Kerala governor suspends VC of Kerala Veterinary University
ಹಾಸ್ಟೆಲ್​ನಲ್ಲಿ ವಿದ್ಯಾರ್ಥಿ ಸಾವು: ಕುಲಪತಿಯ ಅಮಾನತುಗೊಳಿಸಿ ಕೇರಳ ರಾಜ್ಯಪಾಲ ಆದೇಶ

ತಿರುವನಂತಪುರಂ (ಕೇರಳ): ಕೇರಳ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿ ಡಾ.ಎಂ.ಆರ್​.ಸಸೀಂದ್ರನಾಥ್ ಅವರನ್ನು ಶನಿವಾರ ಕುಲಾಧಿಪತಿಗಳಾದ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ವಿಶ್ವವಿದ್ಯಾಲಯದ ಹಾಸ್ಟೆಲ್​ನ ಸ್ನಾನಗೃಹದಲ್ಲಿ ಫೆಬ್ರವರಿ 18ರಂದು ಬಿ.ವಿಸ್ಸಿ ವಿದ್ಯಾರ್ಥಿ ಜೆ.ಎಸ್​.ಸಿದ್ಧಾರ್ಥ್ (20) ಎಂಬಾತ ಮೃತಪಟ್ಟಿದ್ದ. ಕ್ಯಾಂಪಸ್​ನಲ್ಲಿ ಎಸ್​ಎಫ್​ಐ ಮುಖಂಡರನ್ನೊಳಗೊಂಡ ವಿದ್ಯಾರ್ಥಿಗಳ ಗುಂಪು ರ‍್ಯಾಗಿಂಗ್​ ಮಾಡಿ, ಚಿತ್ರಹಿಂಸೆ ನೀಡಿದ್ದರಿಂದ ಸಿದ್ಧಾರ್ಥ್ ಸಾವನ್ನಪ್ಪಿದ್ದಾನೆ ಎಂದು ಸಹಪಾಠಿಗಳು ಮತ್ತು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದೇ ವಿಷಯವಾಗಿ ಶನಿವಾರ ಮೃತ ಸಿದ್ಧಾರ್ಥ್ ಕುಟುಂಬಸ್ಥರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಪೋಷಕರು ತಮ್ಮನ್ನು ಭೇಟಿಯಾದ 24 ಗಂಟೆಯೊಳಗೆ ವಿವಿಯ ಕುಲಾಧಿಪತಿಯಾದ ಆರೀಫ್​ ಮೊಹಮ್ಮದ್​ ಖಾನ್ ಅವರು ಕುಲಪತಿ ಡಾ.ಎಂ.ಆರ್​.ಸಸೀಂದ್ರನಾಥ್ ಅವರನ್ನು ಅಮಾನತು ಮಾಡಿದ್ದಾರೆ. 2019ರಲ್ಲಿ ಸಸೀಂದ್ರನಾಥ್ ಕುಲಪತಿಯಾಗಿ ನೇಮಕಗೊಂಡಿದ್ದರು.

ನ್ಯಾಯಾಂಗ ತನಿಖೆಗೂ ರಾಜ್ಯಪಾಲರ ನಿರ್ಧಾರ: ಜೊತೆಗೆ ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲು ಕೂಡ ರಾಜ್ಯಪಾಲರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್​​ಗೆ ಪತ್ರ ಪಡೆದಿದ್ದಾರೆ. ಮೂರ್ನಾಲ್ಕು ದಿನಗಳಲ್ಲೇ ನ್ಯಾಯಾಂಗ ತನಿಖೆ ಆಗಬೇಕೆಂದೂ ಅವರು ಕೋರಿದ್ದಾರೆ. ಇದೇ ವೇಳೆ, ವಿವಿಯ ಕ್ಯಾಂಪಸ್​ನಲ್ಲಿ ನಡೆದ ಇಂತಹ ಘಟನೆ ಬಗ್ಗೆ ನಿನ್ನೆಯಷ್ಟೇ ವಿವಿಯ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯಪಾಲರು, ''ಇದು ಸ್ಪಷ್ಟವಾಗಿ ಕೊಲೆ ಪ್ರಕರಣವಾಗಿದೆ. 24 ಗಂಟೆಗಳ ಕಾಲ ಆ ವಿದ್ಯಾರ್ಥಿಗೆ ಆಹಾರ, ನೀರು ಕೊಟ್ಟಿರಲಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಕ್ಯಾಂಪಸ್​ನ ಒಳಗಡೆ ಅಧಿಕಾರಿಗಳ ಗಮನಕ್ಕೆ ಬಾರದೇ ಇಂತಹ ಭೀಕರ ಘಟನೆ ಹೇಗೆ ಸಂಭವಿಸುತ್ತದೆ?. ಒಬ್ಬ ವಿದ್ಯಾರ್ಥಿಗೆ ಮೂರು ದಿನಗಳ ದೈಹಿಕ, ಮಾನಸಿಕವಾಗಿ ಹಿಂಸೆ ಕೊಟ್ಟಿದ್ದರೂ, ಅಧಿಕಾರಿಗಳು ಎಲ್ಲಿದ್ದರು?'' ಎಂದು ತೀವ್ರ ಅಸಮಾಧಾನ ಹೊರಹಾಕಿದರು.

''ತನ್ನ ದಬ್ಬಾಳಿಕೆಗೆ ಎಸ್​ಎಫ್​ಐ ಕಾಲೇಜು ಹಾಸ್ಟೆಲ್​ಗಳನ್ನು ಬಳಸಿಕೊಳ್ಳುತ್ತದೆ ಎಂಬುವುದನ್ನು ತೋರುತ್ತದೆ. ಪಶು ವೈದ್ಯಕೀಯ ವಿವಿಯ ಕ್ಯಾಂಪಸ್​​ನಲ್ಲಿ ಎಸ್​​ಎಫ್​ಐ, ಪಿಎಫ್​ಐ ಕಾರ್ಯಕರ್ತರು ಅನೇಕ ದಿನಗಳಿಂದ ಇದೇ ರೀತಿ ವರ್ತಿಸುತ್ತಿದ್ದಾರೆ. ಹಾಸ್ಟೆಲ್​ಗಳ ತಪಾಸಣೆಗೆ ಬೋಧಕರು, ಸಿಬ್ಬಂದಿ ಹೋಗಲು ಭಯ ಪಡುತ್ತಾರೆ'' ಎಂದು ಆರೀಫ್​ ಮೊಹಮ್ಮದ್​ ಖಾನ್ ಟೀಕಿಸಿದರು.

ಮತ್ತೊಂದೆಡೆ, ಸಿದ್ಧಾರ್ಥ್ ಸಾವಿನ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಎಸ್​​ಎಫ್​ಐ ಅಲ್ಲಗೆಳೆದಿದೆ. ಈ ಘಟನೆ ತನಿಖೆ ನಡೆಸುತ್ತಿರುವ ಪೊಲೀಸರು, ಇದುವರೆಗೆ 11 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರವಾಸಕ್ಕೆ ಬಂದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ತಿರುವನಂತಪುರಂ (ಕೇರಳ): ಕೇರಳ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿ ಡಾ.ಎಂ.ಆರ್​.ಸಸೀಂದ್ರನಾಥ್ ಅವರನ್ನು ಶನಿವಾರ ಕುಲಾಧಿಪತಿಗಳಾದ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ವಿಶ್ವವಿದ್ಯಾಲಯದ ಹಾಸ್ಟೆಲ್​ನ ಸ್ನಾನಗೃಹದಲ್ಲಿ ಫೆಬ್ರವರಿ 18ರಂದು ಬಿ.ವಿಸ್ಸಿ ವಿದ್ಯಾರ್ಥಿ ಜೆ.ಎಸ್​.ಸಿದ್ಧಾರ್ಥ್ (20) ಎಂಬಾತ ಮೃತಪಟ್ಟಿದ್ದ. ಕ್ಯಾಂಪಸ್​ನಲ್ಲಿ ಎಸ್​ಎಫ್​ಐ ಮುಖಂಡರನ್ನೊಳಗೊಂಡ ವಿದ್ಯಾರ್ಥಿಗಳ ಗುಂಪು ರ‍್ಯಾಗಿಂಗ್​ ಮಾಡಿ, ಚಿತ್ರಹಿಂಸೆ ನೀಡಿದ್ದರಿಂದ ಸಿದ್ಧಾರ್ಥ್ ಸಾವನ್ನಪ್ಪಿದ್ದಾನೆ ಎಂದು ಸಹಪಾಠಿಗಳು ಮತ್ತು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದೇ ವಿಷಯವಾಗಿ ಶನಿವಾರ ಮೃತ ಸಿದ್ಧಾರ್ಥ್ ಕುಟುಂಬಸ್ಥರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಪೋಷಕರು ತಮ್ಮನ್ನು ಭೇಟಿಯಾದ 24 ಗಂಟೆಯೊಳಗೆ ವಿವಿಯ ಕುಲಾಧಿಪತಿಯಾದ ಆರೀಫ್​ ಮೊಹಮ್ಮದ್​ ಖಾನ್ ಅವರು ಕುಲಪತಿ ಡಾ.ಎಂ.ಆರ್​.ಸಸೀಂದ್ರನಾಥ್ ಅವರನ್ನು ಅಮಾನತು ಮಾಡಿದ್ದಾರೆ. 2019ರಲ್ಲಿ ಸಸೀಂದ್ರನಾಥ್ ಕುಲಪತಿಯಾಗಿ ನೇಮಕಗೊಂಡಿದ್ದರು.

ನ್ಯಾಯಾಂಗ ತನಿಖೆಗೂ ರಾಜ್ಯಪಾಲರ ನಿರ್ಧಾರ: ಜೊತೆಗೆ ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲು ಕೂಡ ರಾಜ್ಯಪಾಲರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್​​ಗೆ ಪತ್ರ ಪಡೆದಿದ್ದಾರೆ. ಮೂರ್ನಾಲ್ಕು ದಿನಗಳಲ್ಲೇ ನ್ಯಾಯಾಂಗ ತನಿಖೆ ಆಗಬೇಕೆಂದೂ ಅವರು ಕೋರಿದ್ದಾರೆ. ಇದೇ ವೇಳೆ, ವಿವಿಯ ಕ್ಯಾಂಪಸ್​ನಲ್ಲಿ ನಡೆದ ಇಂತಹ ಘಟನೆ ಬಗ್ಗೆ ನಿನ್ನೆಯಷ್ಟೇ ವಿವಿಯ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯಪಾಲರು, ''ಇದು ಸ್ಪಷ್ಟವಾಗಿ ಕೊಲೆ ಪ್ರಕರಣವಾಗಿದೆ. 24 ಗಂಟೆಗಳ ಕಾಲ ಆ ವಿದ್ಯಾರ್ಥಿಗೆ ಆಹಾರ, ನೀರು ಕೊಟ್ಟಿರಲಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಕ್ಯಾಂಪಸ್​ನ ಒಳಗಡೆ ಅಧಿಕಾರಿಗಳ ಗಮನಕ್ಕೆ ಬಾರದೇ ಇಂತಹ ಭೀಕರ ಘಟನೆ ಹೇಗೆ ಸಂಭವಿಸುತ್ತದೆ?. ಒಬ್ಬ ವಿದ್ಯಾರ್ಥಿಗೆ ಮೂರು ದಿನಗಳ ದೈಹಿಕ, ಮಾನಸಿಕವಾಗಿ ಹಿಂಸೆ ಕೊಟ್ಟಿದ್ದರೂ, ಅಧಿಕಾರಿಗಳು ಎಲ್ಲಿದ್ದರು?'' ಎಂದು ತೀವ್ರ ಅಸಮಾಧಾನ ಹೊರಹಾಕಿದರು.

''ತನ್ನ ದಬ್ಬಾಳಿಕೆಗೆ ಎಸ್​ಎಫ್​ಐ ಕಾಲೇಜು ಹಾಸ್ಟೆಲ್​ಗಳನ್ನು ಬಳಸಿಕೊಳ್ಳುತ್ತದೆ ಎಂಬುವುದನ್ನು ತೋರುತ್ತದೆ. ಪಶು ವೈದ್ಯಕೀಯ ವಿವಿಯ ಕ್ಯಾಂಪಸ್​​ನಲ್ಲಿ ಎಸ್​​ಎಫ್​ಐ, ಪಿಎಫ್​ಐ ಕಾರ್ಯಕರ್ತರು ಅನೇಕ ದಿನಗಳಿಂದ ಇದೇ ರೀತಿ ವರ್ತಿಸುತ್ತಿದ್ದಾರೆ. ಹಾಸ್ಟೆಲ್​ಗಳ ತಪಾಸಣೆಗೆ ಬೋಧಕರು, ಸಿಬ್ಬಂದಿ ಹೋಗಲು ಭಯ ಪಡುತ್ತಾರೆ'' ಎಂದು ಆರೀಫ್​ ಮೊಹಮ್ಮದ್​ ಖಾನ್ ಟೀಕಿಸಿದರು.

ಮತ್ತೊಂದೆಡೆ, ಸಿದ್ಧಾರ್ಥ್ ಸಾವಿನ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಎಸ್​​ಎಫ್​ಐ ಅಲ್ಲಗೆಳೆದಿದೆ. ಈ ಘಟನೆ ತನಿಖೆ ನಡೆಸುತ್ತಿರುವ ಪೊಲೀಸರು, ಇದುವರೆಗೆ 11 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರವಾಸಕ್ಕೆ ಬಂದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Last Updated : Mar 2, 2024, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.