ETV Bharat / bharat

ಮಹಿಳೆಯರಂತೆ ವೇಷ ತೊಟ್ಟು ಮನೆಗೆ ಕನ್ನ ಹಾಕುತ್ತಿದ್ದ ತಂಡದ ಬಂಧನ: 600 ಗ್ರಾಂ ಬಂಗಾರ ವಶಕ್ಕೆ - Arrest Burglary Gang Robbery

author img

By ETV Bharat Karnataka Team

Published : 9 hours ago

ಮನೆಗೆ ಖನ್ನ ಹಾಕಿ ಪರಾರಿ ಆಗುತ್ತಿದ್ದ ತಂಡದಿಂದ 35 ಲಕ್ಷ್ಯ ಮೌಲ್ಯದ 600 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಹಾಗೂ ಬಜಾಜ್​ ಡಿಸ್ಕವರ್​ ಮೋಟರ್​ಸೈಕಲ್​ ವಶಕ್ಕೆ ಪಡೆಯಲಾಗಿದೆ.

Rajendra Nagar Police Arrest Burglary Gang Robbery
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

ಹೈದರಾಬಾದ್​: ತೆಲುಗು ರಾಜ್ಯದೆಲ್ಲೆಡೆ ಮಹಿಳೆಯರಂತೆ ದಿರಿಸು ಧರಿಸಿ 60 ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ತಂಡದ ಸದಸ್ಯರನ್ನು ಬಂಧಿಸುವಲ್ಲಿ ರಾಜೇಂದ್ರ ನಗರ ಪೊಲೀಸ್​ ಠಾಣೆಯ ಕ್ರೈಂ ತಂಡ ಯಶಸ್ವಿಯಾಗಿದೆ. ಸಿಸಿಎಸ್​ ರಾಜೇಂದ್ರ ನಗರ ವಲಯದಲ್ಲಿ ಇವರನ್ನು ಬಂಧಿಸಲಾಗಿದೆ.

ಮೆಹದಿಪಟ್ಟಣಂ ನಿವಾಸಿಯಾಗಿರುವ ಆಟೋ ಡ್ರೈವರ್​ ಗುಂಜಪೊಗು ಸುಧಾಕರ್​ (33) ಸೇರಿದಂತೆ ಸರೂರ್​ನಗರ ನಿವಾಸಿಯಾಗಿರುವ ಕಾರ್​ ಕ್ಲೀನರ್​ ಭಂಡಾರಿ ಸಮ್ಯೊನ್​ (22), ಪುಣೆ ಮೂಲದ ನಾರಾಯಣಗುಡ ಕಾಲೋನಿ ವೆಲ್ಡರ್​​ ಶನಿದೇವ್​​ ಸಾಲುಂಕೆ (20), ಪಂಜಾಬ್​ ಮೂಲದ ಡ್ರೈವರ್​ ಅಮರ್​​ಜೀತ್​ ಸಿಂಗ್​ (31) ಬಂಧಿತರು.

ಬಂಧಿತರಿಂದ 35 ಲಕ್ಷ್ಯ ಮೌಲ್ಯದ 600 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಹಾಗೂ ಬಜಾಜ್​ ಡಿಸ್ಕವರ್​ ಮೋಟರ್​ಸೈಕಲ್​ ವಶಕ್ಕೆ ಪಡೆಯಲಾಗಿದೆ.

ಸುಧಾಕರ್​​ ಈಗಾಗಲೇ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅನೇಕ ಕಾರು​ ಕಳ್ಳತನ, ಮನೆಗೆ ಕನ್ನದಂತಹ ಪ್ರಕರಣದಲ್ಲಿ ವಿವಿಧ ಪೊಲೀಸ್​ ಠಾಣೆಗಳಲ್ಲಿ ಈತನ ವಿರುದ್ಧ ಅಲ್ಲಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ 50 ಲಕ್ಷ ಮೌಲ್ಯದ ಆಸ್ತಿ ಸಂಬಂಧಿತ ಕೊಲೆಯಲ್ಲಿ ಕೂಡ ಈತ ಭಾಗಿಯಾಗಿದ್ದಾನೆ. ಆಸಿಫ್​ ನಗರ ಪೊಲೀಸರು ಈತನ ವಿರುದ್ಧ ಪಿಡಿ ಕಾಯ್ದೆ ಅಡಿ ಹುಡುಕಾಟ ನಡೆಸಿದ್ದರು.

ಹಲವು ಅಪರಾಧ: ಸುಧಾಕರ್​, ಸಾಯಿ, ಸಲ್ಮಾನ್​, ಕಾಕಾ, ಡೇಂಜರ್​ ಮತ್ತು ಆಂಟೋನಿ ಎಂಬ ಅನೇಕ ಹೆಸರಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಬೈಕ್​ ಕಳ್ಳತನ ಮತ್ತು ಮನೆಗನ್ನ ಹಾಕುತ್ತಿದ್ದರು. ಅಲ್ಲದೇ ಆಗಾಗಗ್ಗೆ ವಾಹನದ ಮೂಲಕ ಕಣ್ಮರೆಯಾಗುತ್ತಿದ್ದರು. ಕಳ್ಳತನ ಮಾಡಿದ ದಿನ ಅವರು ವಿಗ್​ ಮತ್ತು ಮಹಿಳೆಯರ ಉಡುಪು ಧರಿಸಿ, ತಮ್ಮ ಗುರುತು ಮರೆ ಮಾಚಿಕೊಳ್ಳುತ್ತಿದ್ದರು.

ಗ್ಯಾಂಗ್​ ನೆಟ್​​ವರ್ಕ್​​ ಮತ್ತು ಜಾಮೀನು ತಂತ್ರ: ಸುಧಾಕರ್​ ಈ ಹಿಂದೆ ಆಸೀಫ್​ನಗರ ಪೊಲೀಸರಿಂದ ಪಿಡಿ ಕಾಯ್ದೆ ಅಡಿ ಬಂಧಿತನಾಗಿದ್ದ. ಈ ವೇಳೆ ಸ್ಯಾಮ್ಸನ್​, ಸಾಲುಂಕೆ ಮತ್ತು ಸಿಂಗ್​ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದ. ಈ ವೇಳೆ, ಗ್ಯಾಂಗ್​ ಕಟ್ಟಿಕೊಂಡ ಇವರು ದರೋಡೆ ಮಾಡಿ, ಕದ್ದ ವಸ್ತುಗಳನ್ನು ಆತನ ಸಹೋದರ ಗುಂಜಪೊಗು ಸುರೇಶ್​ ಮೂಲಕ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಸ್ಥಳೀಯವಾಗಿ ಸುರೇಶ್​ ಉತ್ತಮ ಹೆಸರು ಹೊಂದಿದ್ದು, ಆರ್ಥಿಕ ವ್ಯವಹಾರ ನಡೆಸುತ್ತಿದ್ದು, ಬಂದ ಹಣವನ್ನು ಸಂಗ್ರಹಿಸಿ ಸುಧಾಕರ್​ ಮತ್ತು ಆತನ ಸಹಚರರು ಬಂಧನವಾದಾಗ ಜಾಮೀನು ಕೊಡಿಸುತ್ತಿದ್ದ.

ಭರವಸೆಯ ಬೆಳಕು: ಪ್ರತಿ ಬಾರಿ ಸುಧಾಕರ್​ ಬಂಧನವಾದಾಗ ತಕ್ಷಣಕ್ಕೆ ವಕೀಲರು ಜಾಮೀನು ನೀಡಲು ಮುಂದಾಗಿ, ಅಪರಾಧ ಚಟುವಟಿಕೆ ಮುಂದುವರೆಸಲು ಅವಕಾಶ ನೀಡುತ್ತಿದ್ದರು. ಇದೀಗ ಸುಧಾಕರ್​ ಮತ್ತು ಅವರ ಗ್ಯಾಂಗ್​ ಪೊಲೀಸರ ಬಂಧನದಲ್ಲಿದ್ದು, ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ಅಪರಾಧ ಚಟುವಟಿಕೆ ಮುಕ್ತಾಯವಾಗಲಿದೆ ಎಂಬ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಹಳಿ ತಪ್ಪಿದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್​ ರೈಲು

ಹೈದರಾಬಾದ್​: ತೆಲುಗು ರಾಜ್ಯದೆಲ್ಲೆಡೆ ಮಹಿಳೆಯರಂತೆ ದಿರಿಸು ಧರಿಸಿ 60 ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ತಂಡದ ಸದಸ್ಯರನ್ನು ಬಂಧಿಸುವಲ್ಲಿ ರಾಜೇಂದ್ರ ನಗರ ಪೊಲೀಸ್​ ಠಾಣೆಯ ಕ್ರೈಂ ತಂಡ ಯಶಸ್ವಿಯಾಗಿದೆ. ಸಿಸಿಎಸ್​ ರಾಜೇಂದ್ರ ನಗರ ವಲಯದಲ್ಲಿ ಇವರನ್ನು ಬಂಧಿಸಲಾಗಿದೆ.

ಮೆಹದಿಪಟ್ಟಣಂ ನಿವಾಸಿಯಾಗಿರುವ ಆಟೋ ಡ್ರೈವರ್​ ಗುಂಜಪೊಗು ಸುಧಾಕರ್​ (33) ಸೇರಿದಂತೆ ಸರೂರ್​ನಗರ ನಿವಾಸಿಯಾಗಿರುವ ಕಾರ್​ ಕ್ಲೀನರ್​ ಭಂಡಾರಿ ಸಮ್ಯೊನ್​ (22), ಪುಣೆ ಮೂಲದ ನಾರಾಯಣಗುಡ ಕಾಲೋನಿ ವೆಲ್ಡರ್​​ ಶನಿದೇವ್​​ ಸಾಲುಂಕೆ (20), ಪಂಜಾಬ್​ ಮೂಲದ ಡ್ರೈವರ್​ ಅಮರ್​​ಜೀತ್​ ಸಿಂಗ್​ (31) ಬಂಧಿತರು.

ಬಂಧಿತರಿಂದ 35 ಲಕ್ಷ್ಯ ಮೌಲ್ಯದ 600 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಹಾಗೂ ಬಜಾಜ್​ ಡಿಸ್ಕವರ್​ ಮೋಟರ್​ಸೈಕಲ್​ ವಶಕ್ಕೆ ಪಡೆಯಲಾಗಿದೆ.

ಸುಧಾಕರ್​​ ಈಗಾಗಲೇ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅನೇಕ ಕಾರು​ ಕಳ್ಳತನ, ಮನೆಗೆ ಕನ್ನದಂತಹ ಪ್ರಕರಣದಲ್ಲಿ ವಿವಿಧ ಪೊಲೀಸ್​ ಠಾಣೆಗಳಲ್ಲಿ ಈತನ ವಿರುದ್ಧ ಅಲ್ಲಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ 50 ಲಕ್ಷ ಮೌಲ್ಯದ ಆಸ್ತಿ ಸಂಬಂಧಿತ ಕೊಲೆಯಲ್ಲಿ ಕೂಡ ಈತ ಭಾಗಿಯಾಗಿದ್ದಾನೆ. ಆಸಿಫ್​ ನಗರ ಪೊಲೀಸರು ಈತನ ವಿರುದ್ಧ ಪಿಡಿ ಕಾಯ್ದೆ ಅಡಿ ಹುಡುಕಾಟ ನಡೆಸಿದ್ದರು.

ಹಲವು ಅಪರಾಧ: ಸುಧಾಕರ್​, ಸಾಯಿ, ಸಲ್ಮಾನ್​, ಕಾಕಾ, ಡೇಂಜರ್​ ಮತ್ತು ಆಂಟೋನಿ ಎಂಬ ಅನೇಕ ಹೆಸರಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಬೈಕ್​ ಕಳ್ಳತನ ಮತ್ತು ಮನೆಗನ್ನ ಹಾಕುತ್ತಿದ್ದರು. ಅಲ್ಲದೇ ಆಗಾಗಗ್ಗೆ ವಾಹನದ ಮೂಲಕ ಕಣ್ಮರೆಯಾಗುತ್ತಿದ್ದರು. ಕಳ್ಳತನ ಮಾಡಿದ ದಿನ ಅವರು ವಿಗ್​ ಮತ್ತು ಮಹಿಳೆಯರ ಉಡುಪು ಧರಿಸಿ, ತಮ್ಮ ಗುರುತು ಮರೆ ಮಾಚಿಕೊಳ್ಳುತ್ತಿದ್ದರು.

ಗ್ಯಾಂಗ್​ ನೆಟ್​​ವರ್ಕ್​​ ಮತ್ತು ಜಾಮೀನು ತಂತ್ರ: ಸುಧಾಕರ್​ ಈ ಹಿಂದೆ ಆಸೀಫ್​ನಗರ ಪೊಲೀಸರಿಂದ ಪಿಡಿ ಕಾಯ್ದೆ ಅಡಿ ಬಂಧಿತನಾಗಿದ್ದ. ಈ ವೇಳೆ ಸ್ಯಾಮ್ಸನ್​, ಸಾಲುಂಕೆ ಮತ್ತು ಸಿಂಗ್​ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದ. ಈ ವೇಳೆ, ಗ್ಯಾಂಗ್​ ಕಟ್ಟಿಕೊಂಡ ಇವರು ದರೋಡೆ ಮಾಡಿ, ಕದ್ದ ವಸ್ತುಗಳನ್ನು ಆತನ ಸಹೋದರ ಗುಂಜಪೊಗು ಸುರೇಶ್​ ಮೂಲಕ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಸ್ಥಳೀಯವಾಗಿ ಸುರೇಶ್​ ಉತ್ತಮ ಹೆಸರು ಹೊಂದಿದ್ದು, ಆರ್ಥಿಕ ವ್ಯವಹಾರ ನಡೆಸುತ್ತಿದ್ದು, ಬಂದ ಹಣವನ್ನು ಸಂಗ್ರಹಿಸಿ ಸುಧಾಕರ್​ ಮತ್ತು ಆತನ ಸಹಚರರು ಬಂಧನವಾದಾಗ ಜಾಮೀನು ಕೊಡಿಸುತ್ತಿದ್ದ.

ಭರವಸೆಯ ಬೆಳಕು: ಪ್ರತಿ ಬಾರಿ ಸುಧಾಕರ್​ ಬಂಧನವಾದಾಗ ತಕ್ಷಣಕ್ಕೆ ವಕೀಲರು ಜಾಮೀನು ನೀಡಲು ಮುಂದಾಗಿ, ಅಪರಾಧ ಚಟುವಟಿಕೆ ಮುಂದುವರೆಸಲು ಅವಕಾಶ ನೀಡುತ್ತಿದ್ದರು. ಇದೀಗ ಸುಧಾಕರ್​ ಮತ್ತು ಅವರ ಗ್ಯಾಂಗ್​ ಪೊಲೀಸರ ಬಂಧನದಲ್ಲಿದ್ದು, ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ಅಪರಾಧ ಚಟುವಟಿಕೆ ಮುಕ್ತಾಯವಾಗಲಿದೆ ಎಂಬ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಹಳಿ ತಪ್ಪಿದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್​ ರೈಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.