ETV Bharat / bharat

ಜಮ್ಮು ಕಾಶ್ಮೀರದ ಸಿಎಂ ಆಗಿ ಒಮರ್​ ಅಬ್ದುಲ್ಲಾ ಪ್ರಮಾಣವಚನ; ಇಂಡಿಯಾ ಒಕ್ಕೂಟದ ನಾಯಕರಿಂದ ಶುಭಾಶಯ

ಅಬ್ಧುಲ್ಲಾ ಕುಟುಂಬದ ಮೂರನೇ ಪೀಳಿಗೆ ಒಮರ್​ ಎರಡನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

author img

By PTI

Published : 4 hours ago

omar-abdullah-takes-oath-as-first-cm-of-j-and-k-union-territory
ಒಮರ್​ ಅಬ್ದುಲ್ಲಾ ಪ್ರಮಾಣವಚನ (ANI)

ಶ್ರೀನಗರ: 370ನೇ ವಿಧಿ ರದ್ದಾದ ಬಳಿಕ 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಜಮ್ಮು ಮತ್ತು ಕಾಶ್ಮೀರದ ಮೊದಲ ಮುಖ್ಯಮಂತ್ರಿಯಾಗಿ ನ್ಯಾಷನಲ್​ ಕಾನ್ಫರೆನ್ಸ್​ನ ನಾಯಕ ಒಮರ್​ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕರಿಸಿದರು. ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಅಬ್ಧುಲ್ಲಾ ಕುಟುಂಬದ ಮೂರನೇ ಪೀಳಿಗೆ ಒಮರ್​ ಎರಡನೇ ಬಾರಿ ಸಿಎಂ ಆಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಒಮರ್​ ಅವರ ಅಜ್ಜ ಶೇಖ್​ ಅಬ್ಧುಲ್ಲಾ ಮತ್ತು ತಂದೆ ಫಾರೂಕ್​ ಅಬ್ದುಲ್ಲಾ ಕೂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಒಮರ್​ ಜೊತೆಗೆ ಐದು ಜನ ಶಾಸಕರು ಕೂಡ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಶ್ರೀನಗರದ ಶೇರ್​- ಎ- ಕಾಶ್ಮೀರ್​ ಇಂಟರ್​ನ್ಯಾಷನಲ್​ ಕನ್ವೆನ್ಷನ್​ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಉಪಸ್ಥಿತರಿದ್ದು, ಒಮರ್​ ಅವರಿಗೆ ಶುಭಾಶಯ ತಿಳಿಸಿದರು. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​​ ಯಾದವ್​, ಎಎಪಿ ರಾಜ್ಯ ಸಭಾ ಸಂಸದ ಸಂಜಯ್​ ಸಿಂಗ್, ಡಿಎಂಕೆ ಕನ್ನಿಮೋಳಿ, ಎನ್​ಸಿಪಿ ಸುಪ್ರಿಯಾ ಸುಳೆ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಕೂಡ ಹಾಜರಿದ್ದರು.

ಎನ್​ಸಿ ಶಾಸಕಾಂಗ ಪಕ್ಷದಲ್ಲಿ ಅಬ್ದುಲ್ಲಾ ಅವರನ್ನು ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಮೊದಲು ಅಖಂಡ ಜಮ್ಮು ಮತ್ತು ಕಾಶ್ಮೀರದ ಸಿಎಂ ಆಗಿ 2009ರಿಂದ 2014ರವರೆಗೆ ಅವರು ಕಾರ್ಯ ನಿರ್ವಹಿಸಿದ್ದರು.

ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಸ್ಪರ್ಧೆ ಮಾಡಿದ್ದ ಎನ್​ಸಿ ಮತ್ತು ಕಾಂಗ್ರೆಸ್​ 48 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಗೆ ಬಹುಮತ ಪಡೆದುಕೊಂಡಿತ್ತು.

ಇದನ್ನೂ ಓದಿ: ಕೇಂದ್ರಾಡಳಿತ ಪ್ರದೇಶದ ಸಿಎಂ ಆಗಿ ಕಾರ್ಯ ನಿರ್ವಹಣೆ ಸವಾಲಿನಿಂದ ಕೂಡಿರಲಿದೆ; ಒಮರ್​ ಅಬ್ಧುಲ್ಲಾ

ಶ್ರೀನಗರ: 370ನೇ ವಿಧಿ ರದ್ದಾದ ಬಳಿಕ 2019ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಜಮ್ಮು ಮತ್ತು ಕಾಶ್ಮೀರದ ಮೊದಲ ಮುಖ್ಯಮಂತ್ರಿಯಾಗಿ ನ್ಯಾಷನಲ್​ ಕಾನ್ಫರೆನ್ಸ್​ನ ನಾಯಕ ಒಮರ್​ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕರಿಸಿದರು. ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಅಬ್ಧುಲ್ಲಾ ಕುಟುಂಬದ ಮೂರನೇ ಪೀಳಿಗೆ ಒಮರ್​ ಎರಡನೇ ಬಾರಿ ಸಿಎಂ ಆಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಒಮರ್​ ಅವರ ಅಜ್ಜ ಶೇಖ್​ ಅಬ್ಧುಲ್ಲಾ ಮತ್ತು ತಂದೆ ಫಾರೂಕ್​ ಅಬ್ದುಲ್ಲಾ ಕೂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಒಮರ್​ ಜೊತೆಗೆ ಐದು ಜನ ಶಾಸಕರು ಕೂಡ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಶ್ರೀನಗರದ ಶೇರ್​- ಎ- ಕಾಶ್ಮೀರ್​ ಇಂಟರ್​ನ್ಯಾಷನಲ್​ ಕನ್ವೆನ್ಷನ್​ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಉಪಸ್ಥಿತರಿದ್ದು, ಒಮರ್​ ಅವರಿಗೆ ಶುಭಾಶಯ ತಿಳಿಸಿದರು. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​​ ಯಾದವ್​, ಎಎಪಿ ರಾಜ್ಯ ಸಭಾ ಸಂಸದ ಸಂಜಯ್​ ಸಿಂಗ್, ಡಿಎಂಕೆ ಕನ್ನಿಮೋಳಿ, ಎನ್​ಸಿಪಿ ಸುಪ್ರಿಯಾ ಸುಳೆ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಕೂಡ ಹಾಜರಿದ್ದರು.

ಎನ್​ಸಿ ಶಾಸಕಾಂಗ ಪಕ್ಷದಲ್ಲಿ ಅಬ್ದುಲ್ಲಾ ಅವರನ್ನು ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಮೊದಲು ಅಖಂಡ ಜಮ್ಮು ಮತ್ತು ಕಾಶ್ಮೀರದ ಸಿಎಂ ಆಗಿ 2009ರಿಂದ 2014ರವರೆಗೆ ಅವರು ಕಾರ್ಯ ನಿರ್ವಹಿಸಿದ್ದರು.

ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಸ್ಪರ್ಧೆ ಮಾಡಿದ್ದ ಎನ್​ಸಿ ಮತ್ತು ಕಾಂಗ್ರೆಸ್​ 48 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಗೆ ಬಹುಮತ ಪಡೆದುಕೊಂಡಿತ್ತು.

ಇದನ್ನೂ ಓದಿ: ಕೇಂದ್ರಾಡಳಿತ ಪ್ರದೇಶದ ಸಿಎಂ ಆಗಿ ಕಾರ್ಯ ನಿರ್ವಹಣೆ ಸವಾಲಿನಿಂದ ಕೂಡಿರಲಿದೆ; ಒಮರ್​ ಅಬ್ಧುಲ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.