ETV Bharat / bharat

ಶಿವಮೊಗ್ಗ ಐಸಿಸ್ ಪಿತೂರಿ ಪ್ರಕರಣ: ಎನ್​ಐಎ ಚಾರ್ಜ್​ಶೀಟ್​ನಲ್ಲಿ ಮತ್ತೋರ್ವ ಆರೋಪಿ ಹೆಸರು ಉಲ್ಲೇಖ

author img

By ETV Bharat Karnataka Team

Published : Mar 8, 2024, 7:12 PM IST

ಶಿವಮೊಗ್ಗ ಐಸಿಸ್ ಸಂಚು ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಮತ್ತೋರ್ವ ಆರೋಪಿ ವಿರುದ್ಧ ಆರೋಪಪಟ್ಟಿ ​ಸಲ್ಲಿಸಿದೆ.

nia-chargesheets-1-more-accused-and-adds-additional-charges-against-2-others-in-shivamogga-isis-conspiracy-case
ಶಿವಮೊಗ್ಗ ಐಸಿಸ್ ಪಿತೂರಿ ಪ್ರಕರಣ: ಎನ್​ಐಎ ಚಾರ್ಜ್​ಶೀಟ್​ನಲ್ಲಿ ಮತ್ತೋರ್ವ ಆರೋಪಿ ಹೆಸರು ಉಲ್ಲೇಖ

ನವದೆಹಲಿ: ಶಿವಮೊಗ್ಗ ಐಸಿಸ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಮತ್ತೋರ್ವ ಆರೋಪಿ ವಿರುದ್ಧ ಆರೋಪಪಟ್ಟಿ ​ಸಲ್ಲಿಸಿದೆ. ಇದೇ ವೇಳೆ, ಇನ್ನಿಬ್ಬರು ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್​ಶೀಟ್​ ದಾಖಲಿಸಿದೆ. ಶಿವಮೊಗ್ಗದ ಐಎಸ್​ಐಎಸ್​ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಗೋಡೆ ಬರಹ ವಿಷಯವಾಗಿ ತನಿಖಾ ತಂಡವು ಈ ಚಾರ್ಜ್​​ಶೀಟ್​ ದಾಖಲಿಸಿದೆ. ಮಂಗಳೂರಿನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಇಸ್ಲಾಮಿಕ್ ಸ್ಟೇಟ್ (ಐಎಸ್), ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ತಾಲಿಬಾನ್ ಬೆಂಬಲಿಸಿ ಗೋಡೆ ಬರಹ ಬರೆಯಲಾಗಿತ್ತು.

ಈ ಸಂಬಂಧ ಇಂದು ಸಲ್ಲಿಸಲಾದ ಎರಡನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ಎನ್ಐಎ, ಹೊಸದಾಗಿ ಅರಾಫತ್ ಅಲಿ ಎಂಬಾತನ ಹೆಸರನ್ನೂ ಕೂಡಾ ಸೇರಿಸಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಆರೋಪಿಸಲಾಗಿದ್ದ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ವಿರುದ್ಧ ಹೆಚ್ಚುವರಿ ಚಾರ್ಜ್​ಶೀಟ್​ ದಾಖಲಿಸಿದೆ.

2020ರ ಜನವರಿಯಲ್ಲಿ ಗೋಡೆ ಬರಹ ಬರೆಯಲು ಇತರ ಆರೋಪಿಗಳನ್ನು ಅರಾಫತ್ ನೇಮಿಸಿಕೊಂಡಿದ್ದ​. 2023ರ ಸೆಪ್ಟೆಂಬರ್ 14 ರಂದು ಕೀನ್ಯಾದಿಂದ ಭಾರತಕ್ಕೆ ಹಿಂದಿರುಗಿದ ನಂತರ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತನನ್ನು ಎನ್ಐಎ ಬಂಧಿಸಿತ್ತು. ಹಿಂದಿನ ಮತ್ತೊಂದು ಅಲ್ - ಹಿಂದ್ ಮಾಡ್ಯೂಲ್ ಪ್ರಕರಣದಲ್ಲಿ ಈತ ಬಂಧನದ ಭೀತಿಯಿಂದಾಗಿ ದುಬೈಗೆ ಪಲಾಯನ ಮಾಡಿದ್ದ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜೆಬ್ ಜೊತೆ ನಂಟು ಸಹ ಹೊಂದಿದ್ದ ಎಂದು ತನಿಖಾ ದಳ ಹೇಳಿದೆ.

ಅಬ್ದುಲ್ ಮತೀನ್ ಮತ್ತು ಮುಸ್ಸಾವಿರ್ ಹುಸೇನ್ ನಿರ್ದೇಶನ ಮೇರೆಗೆ ಅರಾಫತ್ ಮಂಗಳೂರಿನ ಎರಡು ಸ್ಥಳಗಳಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಗೋಡೆ ಬರಹಗಳನ್ನು ಬರೆಯಲು ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಮತ್ತು ಇತರರಿಗೆ ಸೂಚನೆ ನೀಡಿದ್ದ ಎಂದು ಎನ್ಐಎ ತನಿಖೆಯಿಂದ ತಿಳಿದು ಬಂದಿದೆ.

ಅರಾಫತ್ ತನ್ನ ಸಹಚರರು ಮತ್ತು ಆನ್‌ಲೈನ್ ಹ್ಯಾಂಡ್ಲರ್ ಜೊತೆಗೆ ಐಎಸ್/ಐಎಸ್‌ಐಎಸ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ದೊಡ್ಡ ಪಿತೂರಿಯ ಭಾಗವಾಗಿದ್ದರು ಎಂದು ತಿಳಿದು ಬಂದಿದೆ. ಅರಾಫತ್ ತನ್ನ ಆನ್‌ಲೈನ್ ಹ್ಯಾಂಡ್ಲರ್‌ನಿಂದ ಕ್ರಿಪ್ಟೋ ಕರೆನ್ಸಿಗಳ ರೂಪದಲ್ಲಿ ಬಂದ ಹಣವನ್ನು ಗ್ರಾಫಿಟಿ ಬರಹಗಾರರಿಗೆ ಪಾವತಿಸಿದ್ದ. ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ಎನ್ಐಎ ಈ ಹಿಂದೆ ಒಂದು ಮುಖ್ಯ ಮತ್ತು ಒಂದು ಪೂರಕ ಚಾರ್ಜ್​ಶೀಟ್​ ಅನ್ನು ಸಲ್ಲಿಸಿತ್ತು. ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಬಳ್ಳಾರಿಗೆ ಆರೋಪಿ ತೆರಳಿರುವ ಶಂಕೆ: ಎನ್​ಐಎಯಿಂದ ಪರಿಶೀಲನೆ

ನವದೆಹಲಿ: ಶಿವಮೊಗ್ಗ ಐಸಿಸ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಮತ್ತೋರ್ವ ಆರೋಪಿ ವಿರುದ್ಧ ಆರೋಪಪಟ್ಟಿ ​ಸಲ್ಲಿಸಿದೆ. ಇದೇ ವೇಳೆ, ಇನ್ನಿಬ್ಬರು ಆರೋಪಿಗಳ ವಿರುದ್ಧ ಹೆಚ್ಚುವರಿ ಚಾರ್ಜ್​ಶೀಟ್​ ದಾಖಲಿಸಿದೆ. ಶಿವಮೊಗ್ಗದ ಐಎಸ್​ಐಎಸ್​ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಗೋಡೆ ಬರಹ ವಿಷಯವಾಗಿ ತನಿಖಾ ತಂಡವು ಈ ಚಾರ್ಜ್​​ಶೀಟ್​ ದಾಖಲಿಸಿದೆ. ಮಂಗಳೂರಿನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಇಸ್ಲಾಮಿಕ್ ಸ್ಟೇಟ್ (ಐಎಸ್), ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ತಾಲಿಬಾನ್ ಬೆಂಬಲಿಸಿ ಗೋಡೆ ಬರಹ ಬರೆಯಲಾಗಿತ್ತು.

ಈ ಸಂಬಂಧ ಇಂದು ಸಲ್ಲಿಸಲಾದ ಎರಡನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ಎನ್ಐಎ, ಹೊಸದಾಗಿ ಅರಾಫತ್ ಅಲಿ ಎಂಬಾತನ ಹೆಸರನ್ನೂ ಕೂಡಾ ಸೇರಿಸಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಆರೋಪಿಸಲಾಗಿದ್ದ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ವಿರುದ್ಧ ಹೆಚ್ಚುವರಿ ಚಾರ್ಜ್​ಶೀಟ್​ ದಾಖಲಿಸಿದೆ.

2020ರ ಜನವರಿಯಲ್ಲಿ ಗೋಡೆ ಬರಹ ಬರೆಯಲು ಇತರ ಆರೋಪಿಗಳನ್ನು ಅರಾಫತ್ ನೇಮಿಸಿಕೊಂಡಿದ್ದ​. 2023ರ ಸೆಪ್ಟೆಂಬರ್ 14 ರಂದು ಕೀನ್ಯಾದಿಂದ ಭಾರತಕ್ಕೆ ಹಿಂದಿರುಗಿದ ನಂತರ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತನನ್ನು ಎನ್ಐಎ ಬಂಧಿಸಿತ್ತು. ಹಿಂದಿನ ಮತ್ತೊಂದು ಅಲ್ - ಹಿಂದ್ ಮಾಡ್ಯೂಲ್ ಪ್ರಕರಣದಲ್ಲಿ ಈತ ಬಂಧನದ ಭೀತಿಯಿಂದಾಗಿ ದುಬೈಗೆ ಪಲಾಯನ ಮಾಡಿದ್ದ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜೆಬ್ ಜೊತೆ ನಂಟು ಸಹ ಹೊಂದಿದ್ದ ಎಂದು ತನಿಖಾ ದಳ ಹೇಳಿದೆ.

ಅಬ್ದುಲ್ ಮತೀನ್ ಮತ್ತು ಮುಸ್ಸಾವಿರ್ ಹುಸೇನ್ ನಿರ್ದೇಶನ ಮೇರೆಗೆ ಅರಾಫತ್ ಮಂಗಳೂರಿನ ಎರಡು ಸ್ಥಳಗಳಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಗೋಡೆ ಬರಹಗಳನ್ನು ಬರೆಯಲು ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಮತ್ತು ಇತರರಿಗೆ ಸೂಚನೆ ನೀಡಿದ್ದ ಎಂದು ಎನ್ಐಎ ತನಿಖೆಯಿಂದ ತಿಳಿದು ಬಂದಿದೆ.

ಅರಾಫತ್ ತನ್ನ ಸಹಚರರು ಮತ್ತು ಆನ್‌ಲೈನ್ ಹ್ಯಾಂಡ್ಲರ್ ಜೊತೆಗೆ ಐಎಸ್/ಐಎಸ್‌ಐಎಸ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ದೊಡ್ಡ ಪಿತೂರಿಯ ಭಾಗವಾಗಿದ್ದರು ಎಂದು ತಿಳಿದು ಬಂದಿದೆ. ಅರಾಫತ್ ತನ್ನ ಆನ್‌ಲೈನ್ ಹ್ಯಾಂಡ್ಲರ್‌ನಿಂದ ಕ್ರಿಪ್ಟೋ ಕರೆನ್ಸಿಗಳ ರೂಪದಲ್ಲಿ ಬಂದ ಹಣವನ್ನು ಗ್ರಾಫಿಟಿ ಬರಹಗಾರರಿಗೆ ಪಾವತಿಸಿದ್ದ. ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ಎನ್ಐಎ ಈ ಹಿಂದೆ ಒಂದು ಮುಖ್ಯ ಮತ್ತು ಒಂದು ಪೂರಕ ಚಾರ್ಜ್​ಶೀಟ್​ ಅನ್ನು ಸಲ್ಲಿಸಿತ್ತು. ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಬಳ್ಳಾರಿಗೆ ಆರೋಪಿ ತೆರಳಿರುವ ಶಂಕೆ: ಎನ್​ಐಎಯಿಂದ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.