ETV Bharat / bharat

ಮದ್ಯ ಸೇವಿಸಿ ಮರ್ಸಿಡಿಸ್​ ಕಾರು ಅಪಘಾತ: ಪೊಲೀಸರಿಗೆ ಶರಣಾದ ಆರೋಪಿ ಮಹಿಳೆ - Nagpur Mercedes Crash Case

author img

By PTI

Published : Jul 2, 2024, 10:38 AM IST

ಮದ್ಯ​ ಸೇವಿಸಿ ಕಾರು ಅಪಘಾತವೆಸಗಿದ ಪ್ರಕರಣದಲ್ಲಿ ಆರೋಪಿ ಮಹಿಳೆ ನಾಗ್ಪುರ ಪೊಲೀಸರಿಗೆ ಶರಣಾಗಿದ್ದಾರೆ.

mercedes-crash-in-nagpur-woman-driver-surrenders-before-police
ಸಾಂದರ್ಭಿಕ ಚಿತ್ರ (ETV Bharat)

ನಾಗ್ಪುರ್​: ಸುಮಾರು ನಾಲ್ಕು ತಿಂಗಳ ಹಿಂದೆ ಮದ್ಯದ​ ನಶೆಯಲ್ಲಿ ಮರ್ಸಿಡಿಸ್​ ಕಾರು ಚಲಾಯಿಸಿ ಇಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ ಆರೋಪಿ ಮಹಿಳೆ ಶರಣಾಗಿದ್ದು, ಬಂಧಿಸಲಾಗಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.

ರಿತಿಕಾ ಅಲಿಯಾಸ್​ ರಿತು ಮಲೂ ಸೋಮವಾರ ಸಂಜೆ ಪೊಲೀಸ್​ ಠಾಣೆಗೆ ವಿಚಾರಣೆಗೆ ಆಗಮಿಸಿದ್ದರು. ಇದಾದ ಬಳಿಕ ಆಕೆಯನ್ನು ಬಂಧಿಸಲಾಗಿದೆ. ಕಳೆದ ತಿಂಗಳು ಈಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್​ ತಿರಸ್ಕರಿಸಿತ್ತು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಗಂಭೀರ ದುರ್ನಡತೆ ಎಂದು ಕೋರ್ಟ್ ಎಚ್ಚರಿಸಿತ್ತು.

ಘಟನೆಯ ವಿವರ: ಫೆಬ್ರವರಿ 25ರಂದು ರಿತಿಕಾ, ಮದ್ಯ ಸೇವಿಸಿ ತನ್ನ ಐಷಾರಾಮಿ ಮರ್ಸಿಡಿಸ್​ ಕಾರು ಚಲಾಯಿಸುತ್ತಿದ್ದರು. ನಾಗ್ಪುರದ ರಾಮ್​ ಜುಲಾ ಸೇತುವೆ ಬಳಿ ಜೋರಾಗಿ ಸಾಗಿ ಇಬ್ಬರು ಸ್ಕೂಟರ್​ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ, ಸ್ಕೂಟರ್​ನಲ್ಲಿದ್ದ ಮೊಹಮ್ಮದ್ ಹುಸೇನ್ ಗುಲಾಮ್ ಮುಸ್ತಫಾ ಮತ್ತು ಮೊಹಮ್ಮದ್ ಅತೀಫ್ ಮೊಹಮ್ಮದ್ ಜಿಯಾ ಎಂಬಿಬ್ಬರು ಮಾರಣಾಂತಿಕವಾಗಿ ಗಾಯಗೊಂಡಿದ್ದರು.

ಆರೋಪಿ ರಿತಿಕಾ ವಿರುದ್ದ ಐಪಿಸಿ ಮತ್ತು ಮೋಟಾರ್​ ವಾಹನ ಕಾಯ್ದೆ, ನಿರ್ಲಕ್ಷ್ಯ ಚಾಲನೆ, ಇಬ್ಬರು ವ್ಯಕ್ತಿಗಳನ್ನು ಗಾಯಗೊಳಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಾರ್ವಜನಿಕರಿಂದ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆ ಮತ್ತು ಅಪಘಾತದ ತೀವ್ರತೆ ಪರಿಗಣಿಸಿ ಆಕೆಯ ವಿರುದ್ಧ ಹೆಚ್ಚುವರಿ ಕ್ರಿಮಿನಲ್ ಮೊಕದ್ದಮೆಗಳನ್ನೂ ದಾಖಲಿಸಲಾಗಿತ್ತು. ಆರಂಭದಲ್ಲಿ ಪ್ರಕರಣ ಸಂಬಂಧ ಮಹಿಳೆಗೆ ಜಾಮೀನು ಸಿಕ್ಕಿತ್ತು. ಆದರೆ, ಇತ್ತೀಚಿಗೆ ಪೊಲೀಸರು ಆರೋಪಿ ಮಹಿಳೆಯ ಬಂಧನ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇದೀಗ ಬಂಧನದಲ್ಲಿರುವ ಆರೋಪಿ ಮಹಿಳೆಯನ್ನು ಸ್ಥಳೀಯ ನ್ಯಾಯಾಲಯದೆದುರು ಇಂದು ಪೊಲೀಸರು ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: 3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು?

ನಾಗ್ಪುರ್​: ಸುಮಾರು ನಾಲ್ಕು ತಿಂಗಳ ಹಿಂದೆ ಮದ್ಯದ​ ನಶೆಯಲ್ಲಿ ಮರ್ಸಿಡಿಸ್​ ಕಾರು ಚಲಾಯಿಸಿ ಇಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ ಆರೋಪಿ ಮಹಿಳೆ ಶರಣಾಗಿದ್ದು, ಬಂಧಿಸಲಾಗಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.

ರಿತಿಕಾ ಅಲಿಯಾಸ್​ ರಿತು ಮಲೂ ಸೋಮವಾರ ಸಂಜೆ ಪೊಲೀಸ್​ ಠಾಣೆಗೆ ವಿಚಾರಣೆಗೆ ಆಗಮಿಸಿದ್ದರು. ಇದಾದ ಬಳಿಕ ಆಕೆಯನ್ನು ಬಂಧಿಸಲಾಗಿದೆ. ಕಳೆದ ತಿಂಗಳು ಈಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್​ ತಿರಸ್ಕರಿಸಿತ್ತು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಗಂಭೀರ ದುರ್ನಡತೆ ಎಂದು ಕೋರ್ಟ್ ಎಚ್ಚರಿಸಿತ್ತು.

ಘಟನೆಯ ವಿವರ: ಫೆಬ್ರವರಿ 25ರಂದು ರಿತಿಕಾ, ಮದ್ಯ ಸೇವಿಸಿ ತನ್ನ ಐಷಾರಾಮಿ ಮರ್ಸಿಡಿಸ್​ ಕಾರು ಚಲಾಯಿಸುತ್ತಿದ್ದರು. ನಾಗ್ಪುರದ ರಾಮ್​ ಜುಲಾ ಸೇತುವೆ ಬಳಿ ಜೋರಾಗಿ ಸಾಗಿ ಇಬ್ಬರು ಸ್ಕೂಟರ್​ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ, ಸ್ಕೂಟರ್​ನಲ್ಲಿದ್ದ ಮೊಹಮ್ಮದ್ ಹುಸೇನ್ ಗುಲಾಮ್ ಮುಸ್ತಫಾ ಮತ್ತು ಮೊಹಮ್ಮದ್ ಅತೀಫ್ ಮೊಹಮ್ಮದ್ ಜಿಯಾ ಎಂಬಿಬ್ಬರು ಮಾರಣಾಂತಿಕವಾಗಿ ಗಾಯಗೊಂಡಿದ್ದರು.

ಆರೋಪಿ ರಿತಿಕಾ ವಿರುದ್ದ ಐಪಿಸಿ ಮತ್ತು ಮೋಟಾರ್​ ವಾಹನ ಕಾಯ್ದೆ, ನಿರ್ಲಕ್ಷ್ಯ ಚಾಲನೆ, ಇಬ್ಬರು ವ್ಯಕ್ತಿಗಳನ್ನು ಗಾಯಗೊಳಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಾರ್ವಜನಿಕರಿಂದ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆ ಮತ್ತು ಅಪಘಾತದ ತೀವ್ರತೆ ಪರಿಗಣಿಸಿ ಆಕೆಯ ವಿರುದ್ಧ ಹೆಚ್ಚುವರಿ ಕ್ರಿಮಿನಲ್ ಮೊಕದ್ದಮೆಗಳನ್ನೂ ದಾಖಲಿಸಲಾಗಿತ್ತು. ಆರಂಭದಲ್ಲಿ ಪ್ರಕರಣ ಸಂಬಂಧ ಮಹಿಳೆಗೆ ಜಾಮೀನು ಸಿಕ್ಕಿತ್ತು. ಆದರೆ, ಇತ್ತೀಚಿಗೆ ಪೊಲೀಸರು ಆರೋಪಿ ಮಹಿಳೆಯ ಬಂಧನ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಇದೀಗ ಬಂಧನದಲ್ಲಿರುವ ಆರೋಪಿ ಮಹಿಳೆಯನ್ನು ಸ್ಥಳೀಯ ನ್ಯಾಯಾಲಯದೆದುರು ಇಂದು ಪೊಲೀಸರು ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: 3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.