ETV Bharat / bharat

ಮಹಾರಾಷ್ಟ್ರದಲ್ಲಿ 12 ನಕ್ಸಲೀಯರು ಹತ; ಪೊಲೀಸ್​ ತಂಡಕ್ಕೆ ₹51 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ - several Maoists killed

author img

By ETV Bharat Karnataka Team

Published : Jul 17, 2024, 9:01 PM IST

ಮಹಾರಾಷ್ಟ್ರ ಮತ್ತು ಛತ್ತೀಸ್​ಗಢ ಗಡಿಯಲ್ಲಿ ಬುಧವಾರ ನಡೆದ ಕಾರ್ಯಾಚರಣೆಯಲ್ಲಿ 12 ನಕ್ಸಲೀಯರ ವಧೆಯಾಗಿದೆ. ಇನ್ನಷ್ಟು ಜನರಿಗಾಗಿ ಶೋಧ ಮುಂದುವರಿದಿದೆ.

ಮಹಾರಾಷ್ಟ್ರದಲ್ಲಿ 12 ನಕ್ಸಲೀಯರು ಖತಂ
ಮಹಾರಾಷ್ಟ್ರದಲ್ಲಿ 12 ನಕ್ಸಲೀಯರು ಖತಂ (ETV Bharat)

ಗಡ್‌ಚಿರೋಲಿ (ಮಹಾರಾಷ್ಟ್ರ): ನಕ್ಸಲ್​​ಪೀಡಿತ ರಾಜ್ಯವಾದ ಛತ್ತೀಸ್​ಗಢಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಇದರಿಂದ 12 ನಕ್ಸಲರು ಹತರಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಸಿಕ್ಕಿವೆ.

ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗಡ್‌ಚಿರೋಲಿಯಲ್ಲಿ ನಕ್ಸಲ್​ ದಮನ ಕಾರ್ಯಾಚರಣೆ ಆರಂಭಿಸಲಾಗಿತ್ತು. ಛತ್ತೀಸ್​ಗಢ ಗಡಿಯ ಬಳಿ ಇರುವ ವಂಡೋಲಿ ಗ್ರಾಮದಲ್ಲಿ ಮಾವೋವಾದಿಗಳು ಅಡಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು. 12 ರಿಂದ 15 ನಕ್ಸಲರು ಬೀಡು ಬಿಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸ್​ ತಂಡಗಳು ಅರಣ್ಯಕ್ಕೆ ನುಗ್ಗಿದ್ದವು.

ಮಧ್ಯಾಹ್ನ ಆರಂಭವಾದ ಗುಂಡಿನ ಚಕಮಕಿ ಸಂಜೆ 6 ​​ಗಂಟೆವರೆಗೂ ಮುಂದುವರಿದಿತ್ತು. ಬಳಿಕ ಕೆಲ ನಕ್ಸಲರು ಅಲ್ಲಿಂದ ಪರಾರಿಯಾದ ಬಳಿಕ ಈ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ. ಈವರೆಗೆ 12 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಜೊತೆಗೆ ಸ್ಥಳದಲ್ಲಿ ಮೂರು ಎಕೆ 47, ಎರಡು ಐಎನ್‌ಎಸ್‌ಎಎಸ್, 1 ಕಾರ್ಬೈನ್, 1 ಎಸ್‌ಎಲ್‌ಆರ್ ಸೇರಿದಂತೆ 7 ಆಧುನಿಕ ಶಸ್ತ್ರಾಸ್ತ್ರಗಳು ಸಿಕ್ಕಿವೆ. ಇದರಲ್ಲಿ ಪೊಲೀಸ್​ ಪಡೆಗಳಿಗೆ ಬೇಕಾಗಿದ್ದ, ತಲೆಗೆ ಬಹುಮಾನ ಘೋಷಿಸಲಾಗಿದ್ದ ನಕ್ಸಲರೂ ಹತರಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ಜನ ನಕ್ಸಲರು ಇರುವ ಶಂಕೆ ಮೇರೆಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದೇ ವೇಳೆ ಗುಂಡಿನ ಕಾಳಗದಲ್ಲಿ ಪಿಎಸ್‌ಐ ಮತ್ತು ಪೊಲೀಸ್​ ಕಾನ್ಸ್​ಟೇಬಲ್​ಗೆ ಬುಲೆಟ್‌ ತಗುಲಿದೆ. ಅಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹುಮಾನ ಘೋಷಣೆ: 12 ನಕ್ಸಲರನ್ನು ಹೊಡೆದುರುಳಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್​ ಪಡೆಗಳಿಗೆ ಮಹಾರಾಷ್ಟ್ರ ಸರ್ಕಾರ ನಗದು ಬಹುಮಾನ ಘೋಷಿಸಿದೆ. C60 ಕಮಾಂಡೋಗಳು ಮತ್ತು ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿರುವ ದೇವೇಂದ್ರ ಫಡ್ನವೀಸ್​ ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ: 8 ನಕ್ಸಲರ ಹತ್ಯೆ, ಓರ್ವ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ - 8 NAXALITES KILLED

ಗಡ್‌ಚಿರೋಲಿ (ಮಹಾರಾಷ್ಟ್ರ): ನಕ್ಸಲ್​​ಪೀಡಿತ ರಾಜ್ಯವಾದ ಛತ್ತೀಸ್​ಗಢಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಇದರಿಂದ 12 ನಕ್ಸಲರು ಹತರಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಸಿಕ್ಕಿವೆ.

ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗಡ್‌ಚಿರೋಲಿಯಲ್ಲಿ ನಕ್ಸಲ್​ ದಮನ ಕಾರ್ಯಾಚರಣೆ ಆರಂಭಿಸಲಾಗಿತ್ತು. ಛತ್ತೀಸ್​ಗಢ ಗಡಿಯ ಬಳಿ ಇರುವ ವಂಡೋಲಿ ಗ್ರಾಮದಲ್ಲಿ ಮಾವೋವಾದಿಗಳು ಅಡಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು. 12 ರಿಂದ 15 ನಕ್ಸಲರು ಬೀಡು ಬಿಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸ್​ ತಂಡಗಳು ಅರಣ್ಯಕ್ಕೆ ನುಗ್ಗಿದ್ದವು.

ಮಧ್ಯಾಹ್ನ ಆರಂಭವಾದ ಗುಂಡಿನ ಚಕಮಕಿ ಸಂಜೆ 6 ​​ಗಂಟೆವರೆಗೂ ಮುಂದುವರಿದಿತ್ತು. ಬಳಿಕ ಕೆಲ ನಕ್ಸಲರು ಅಲ್ಲಿಂದ ಪರಾರಿಯಾದ ಬಳಿಕ ಈ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ. ಈವರೆಗೆ 12 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಜೊತೆಗೆ ಸ್ಥಳದಲ್ಲಿ ಮೂರು ಎಕೆ 47, ಎರಡು ಐಎನ್‌ಎಸ್‌ಎಎಸ್, 1 ಕಾರ್ಬೈನ್, 1 ಎಸ್‌ಎಲ್‌ಆರ್ ಸೇರಿದಂತೆ 7 ಆಧುನಿಕ ಶಸ್ತ್ರಾಸ್ತ್ರಗಳು ಸಿಕ್ಕಿವೆ. ಇದರಲ್ಲಿ ಪೊಲೀಸ್​ ಪಡೆಗಳಿಗೆ ಬೇಕಾಗಿದ್ದ, ತಲೆಗೆ ಬಹುಮಾನ ಘೋಷಿಸಲಾಗಿದ್ದ ನಕ್ಸಲರೂ ಹತರಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ಜನ ನಕ್ಸಲರು ಇರುವ ಶಂಕೆ ಮೇರೆಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದೇ ವೇಳೆ ಗುಂಡಿನ ಕಾಳಗದಲ್ಲಿ ಪಿಎಸ್‌ಐ ಮತ್ತು ಪೊಲೀಸ್​ ಕಾನ್ಸ್​ಟೇಬಲ್​ಗೆ ಬುಲೆಟ್‌ ತಗುಲಿದೆ. ಅಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹುಮಾನ ಘೋಷಣೆ: 12 ನಕ್ಸಲರನ್ನು ಹೊಡೆದುರುಳಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್​ ಪಡೆಗಳಿಗೆ ಮಹಾರಾಷ್ಟ್ರ ಸರ್ಕಾರ ನಗದು ಬಹುಮಾನ ಘೋಷಿಸಿದೆ. C60 ಕಮಾಂಡೋಗಳು ಮತ್ತು ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿರುವ ದೇವೇಂದ್ರ ಫಡ್ನವೀಸ್​ ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ: 8 ನಕ್ಸಲರ ಹತ್ಯೆ, ಓರ್ವ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ - 8 NAXALITES KILLED

ETV Bharat Logo

Copyright © 2024 Ushodaya Enterprises Pvt. Ltd., All Rights Reserved.