ETV Bharat / bharat

ಕುಲ್ವಿಂದರ್ ಕೌರ್ ಬೆಂಗಳೂರಿಗೆ ವರ್ಗಾವಣೆ ಆಗಿಲ್ಲ: ಇನ್ನೂ ಅಮಾನತಿನಲ್ಲಿದ್ದು, ವಿಚಾರಣೆ ನಡೆಯುತ್ತಿದೆ: CISF​ ಸ್ಪಷ್ಟನೆ - Kulwinder Kaur is still suspended

author img

By ETV Bharat Karnataka Team

Published : Jul 3, 2024, 7:53 PM IST

ಸಾಮಾಜಿಕ ಜಾಲತಾಣಗಳಲ್ಲಿ ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್​ ಕುಲ್ವಿಂದರ್​ ಕೌರ್​ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ, ಮರು ನೇಮಕ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಮಧ್ಯೆ ಈಟಿವಿ ಭಾರತ್​ಗೆ ಸಿಐಎಸ್​ಎಫ್​ ಅಧಿಕಾರಿಯೊಬ್ಬರು, ಅದು ಸುಳ್ಳು ಸುದ್ದಿ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

Kangana Ranaut and Kulwinder Kaur
ಕಂಗನಾ ರಣಾವತ್​ ಹಾಗೂ ಕುಲ್ವಿಂದರ್​ ಕೌರ್​ (X@KanganaTeam File Photo)

ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್​ ಕುಲ್ವಿಂದರ್​ ಕೌರ್​ ಅವರು ಇನ್ನೂ ಅಮಾನತಿನಲ್ಲಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್​ಎಫ್​ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್​ ಕುಲ್ವಿಂದರ್​ ಕೌರ್​ ಅವರನ್ನು ಬೆಂಗಳೂರಿನ ಮೀಸಲು ಬೆಟಾಲಿಯನ್​ಗೆ ವರ್ಗಾವಣೆ ಮಾಡಿ, ಹೊಸ ಹುದ್ದೆಗೆ ಮರುನೇಮಕ ಮಾಡಲಾಗಿದೆ ಎನ್ನುವ ವರದಿಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದು ಸುಳ್ಳು ಸುದ್ದಿ ಎನ್ನುವುದನ್ನು ಸ್ವತಃ ಸಿಐಎಸ್​ಎಸ್​ಎಫ್​ ಅಧಿಕಾರಿಯೊಬ್ಬರು ​ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ.

ನಡೆದಿದ್ದೇನು?: ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ಜೂನ್​ 6ರಂದು ನಟಿ ಕಂಗನಾ ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದರು. ಆಗ ಅಲ್ಲಿ ಕರ್ತವ್ಯ ನಿರತ ಸಿಐಎಸ್​ಎಫ್ ಮಹಿಳಾ ಕಾನ್​ಸ್ಟೇಬಲ್​ ಕುಲ್ವಿಂದರ್​ ಕೌರ್​ ಅವರು ಬಿಜೆಪಿ ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ನಟಿಗೆ ಕಪಾಳಮೋಕ್ಷ ಮಾಡಿದ ಬೆನ್ನಲ್ಲೇ, "ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಆಂದೋಲನದ ಸಮಯದಲ್ಲಿ ಪಂಜಾಬ್​ ಮಹಿಳೆಯರ ಬಗ್ಗೆ ಕಂಗನಾ '100 ರೂಪಾಯಿ ಪಡೆದು ರೈತರ ಚಳವಳಿಯಲ್ಲಿ ಭಾಗವಹಿಸಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಆ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಇದ್ದಳು. ಅವರ ಹೇಳಿಕೆ ನನ್ನಲ್ಲಿ ಕೋಪ ತಂದಿತ್ತು" ​ಎಂದು ಕೌರ್ ಸ್ಪಷ್ಟೀಕರಣ ನೀಡಿದ್ದ ವಿಡಿಯೋ ವೈರಲ್​ ಆಗಿತ್ತು.

ಘಟನೆಯ ನಂತರ ತಕ್ಷಣವೇ ಕುಲ್ವಿಂದರ್​ ಕೌರ್​ ಅವರನ್ನು ಅಮಾನತು ಮಾಡಲಾಗಿತ್ತು. ಮಾತ್ರವಲ್ಲದೇ ಅವರ ಮೇಲೆ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.

ಘಟನೆ ಬಳಿಕ ನಟಿ ಕಂಗನಾ ಕೂಡ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು. "ನನಗೆ ಮಾಧ್ಯಮಗಳು, ಹಾಗೂ ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್​ ಕರೆಗಳು ಬರುತ್ತಿವೆ. ನಾನು ಸುರಕ್ಷಿತವಾಗಿದ್ದೇನೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಏನಾಯಿತೆಂದರೆ, ಭದ್ರತಾ ತಪಾಸಣೆ ಮುಗಿಸಿ ಹೊರಡುವಾಗ ಸಿಐಎಸ್​ಎಫ್​ ಸಿಬ್ಬಂದಿ ನನ್ನ ಕಪಾಳಕ್ಕೆ ಹೊಡೆದು, ನನ್ನನ್ನು ನಿಂದಿಸಿದರು. ನಾನು ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದು ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ. ಆದರೆ ಪಂಜಾಬ್​ನಲ್ಲಿ ನಾವು ಭಯೋತ್ಪಾದನೆಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ನನ್ನ ಕಾಳಜಿಯಾಗಿದೆ" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು.

ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಕಂಗನಾ ರಣಾವತ್​​ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಯೋಧೆ ಕುಲ್ವಿಂದರ್ ಕೌರ್ ಯಾರು ಗೊತ್ತಾ? - Slap to Kangana Ranaut

ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್​ ಕುಲ್ವಿಂದರ್​ ಕೌರ್​ ಅವರು ಇನ್ನೂ ಅಮಾನತಿನಲ್ಲಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್​ಎಫ್​ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸಿಐಎಸ್​ಎಫ್​ ಮಹಿಳಾ ಕಾನ್​ಸ್ಟೇಬಲ್​ ಕುಲ್ವಿಂದರ್​ ಕೌರ್​ ಅವರನ್ನು ಬೆಂಗಳೂರಿನ ಮೀಸಲು ಬೆಟಾಲಿಯನ್​ಗೆ ವರ್ಗಾವಣೆ ಮಾಡಿ, ಹೊಸ ಹುದ್ದೆಗೆ ಮರುನೇಮಕ ಮಾಡಲಾಗಿದೆ ಎನ್ನುವ ವರದಿಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದು ಸುಳ್ಳು ಸುದ್ದಿ ಎನ್ನುವುದನ್ನು ಸ್ವತಃ ಸಿಐಎಸ್​ಎಸ್​ಎಫ್​ ಅಧಿಕಾರಿಯೊಬ್ಬರು ​ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ.

ನಡೆದಿದ್ದೇನು?: ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ಜೂನ್​ 6ರಂದು ನಟಿ ಕಂಗನಾ ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದರು. ಆಗ ಅಲ್ಲಿ ಕರ್ತವ್ಯ ನಿರತ ಸಿಐಎಸ್​ಎಫ್ ಮಹಿಳಾ ಕಾನ್​ಸ್ಟೇಬಲ್​ ಕುಲ್ವಿಂದರ್​ ಕೌರ್​ ಅವರು ಬಿಜೆಪಿ ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ನಟಿಗೆ ಕಪಾಳಮೋಕ್ಷ ಮಾಡಿದ ಬೆನ್ನಲ್ಲೇ, "ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಆಂದೋಲನದ ಸಮಯದಲ್ಲಿ ಪಂಜಾಬ್​ ಮಹಿಳೆಯರ ಬಗ್ಗೆ ಕಂಗನಾ '100 ರೂಪಾಯಿ ಪಡೆದು ರೈತರ ಚಳವಳಿಯಲ್ಲಿ ಭಾಗವಹಿಸಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಆ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಇದ್ದಳು. ಅವರ ಹೇಳಿಕೆ ನನ್ನಲ್ಲಿ ಕೋಪ ತಂದಿತ್ತು" ​ಎಂದು ಕೌರ್ ಸ್ಪಷ್ಟೀಕರಣ ನೀಡಿದ್ದ ವಿಡಿಯೋ ವೈರಲ್​ ಆಗಿತ್ತು.

ಘಟನೆಯ ನಂತರ ತಕ್ಷಣವೇ ಕುಲ್ವಿಂದರ್​ ಕೌರ್​ ಅವರನ್ನು ಅಮಾನತು ಮಾಡಲಾಗಿತ್ತು. ಮಾತ್ರವಲ್ಲದೇ ಅವರ ಮೇಲೆ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.

ಘಟನೆ ಬಳಿಕ ನಟಿ ಕಂಗನಾ ಕೂಡ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು. "ನನಗೆ ಮಾಧ್ಯಮಗಳು, ಹಾಗೂ ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್​ ಕರೆಗಳು ಬರುತ್ತಿವೆ. ನಾನು ಸುರಕ್ಷಿತವಾಗಿದ್ದೇನೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಏನಾಯಿತೆಂದರೆ, ಭದ್ರತಾ ತಪಾಸಣೆ ಮುಗಿಸಿ ಹೊರಡುವಾಗ ಸಿಐಎಸ್​ಎಫ್​ ಸಿಬ್ಬಂದಿ ನನ್ನ ಕಪಾಳಕ್ಕೆ ಹೊಡೆದು, ನನ್ನನ್ನು ನಿಂದಿಸಿದರು. ನಾನು ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದು ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ. ಆದರೆ ಪಂಜಾಬ್​ನಲ್ಲಿ ನಾವು ಭಯೋತ್ಪಾದನೆಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ನನ್ನ ಕಾಳಜಿಯಾಗಿದೆ" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು.

ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಕಂಗನಾ ರಣಾವತ್​​ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಯೋಧೆ ಕುಲ್ವಿಂದರ್ ಕೌರ್ ಯಾರು ಗೊತ್ತಾ? - Slap to Kangana Ranaut

ETV Bharat Logo

Copyright © 2024 Ushodaya Enterprises Pvt. Ltd., All Rights Reserved.